/newsfirstlive-kannada/media/post_attachments/wp-content/uploads/2025/04/RCB_KOHLI.jpg)
ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ 2ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯ ಮಾಲೆ ಧರಿಸಿಕೊಂಡಿದೆ. ಹ್ಯಾಟ್ರಿಕ್ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿರುವ ಆರ್ಸಿಬಿ ಇಂದು ಬಲಿಷ್ಠ ಗುಜರಾತ್ ಟೈಟನ್ಸ್ ಜೊತೆ ಅಖಾಡಕ್ಕೆ ಇಳಿಯುತ್ತಿದೆ. ಆದರೆ ಎದುರಾಳಿ ತಂಡದಲ್ಲಿರುವ ಸ್ಪಿನ್ನರ್ಗಳಿಂದ ಆರ್ಸಿಬಿಗೆ ಕೊಂಚ ನಡುಕ ಶುರುವಾದಂತೆ ಆಗಿದೆ.
ತವರಿನ ಅಂಗಳದಲ್ಲಿ ಐಪಿಎಲ್ ಪಂದ್ಯ ಆಡುತ್ತಿರುವುದರಿಂದ ಆರ್ಸಿಬಿ ತಂಡ ಗೆದ್ದು ತನ್ನ ಲಾಯಲ್ ಫ್ಯಾನ್ಸ್ಗೆ ಗಿಫ್ಟ್ ನೀಡಬೇಕಿದೆ. ಬೇರೆ ಮೈದಾನಗಳಲ್ಲಿ ಗೆಲ್ಲುವುದಕ್ಕಿಂತ ಅಭಿಮಾನಿಗಳ ಎದುರು ತವರಿನ ಅಂಗಳದಲ್ಲಿ ಗೆದ್ದು ಕಾಲರ್ ಎಗರಿಸಿದ್ರೆ ಆರ್ಸಿಬಿಯ ಆ ಖದರ್ ಬೇರೆ ಲೆವೆಲ್ ಇರುತ್ತದೆ. ಗುಜರಾತ್ ಟೈಟನ್ಸ್ ಸ್ಪಿನ್ನರ್ಗಳಿಂದ ಬಲಷ್ಠವಾಗಿದ್ದು ಪಂದ್ಯವನ್ನು ತಮ್ಮ ಕಡೆಗೆ ತಿರುಗಿಸಿಕೊಳ್ಳುವ ಛಲದಂಕರಿದ್ದಾರೆ. ಸ್ಪಿನ್ನರ್ಗಳಾದ ರವಿಶ್ರೀನಿವಾಸನ್ ಸಾಯಿ ಕಿಶೋರ್ ಹಾಗೂ ರಶೀದ್ ಖಾನ್ ಆರ್ಸಿಬಿಗೆ ಕಾಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಮ್ಯಾಚ್ ಸೋಲು, ರಿಷಭ್ ಪಂತ್ ಹಿಂದೆ ಬಿದ್ದ ಓನರ್ ಸಂಜೀವ್ ಗೋಯೆಂಕಾ.. ಮೈದಾನದಲ್ಲೇ ಫುಲ್ ಕ್ಲಾಸ್?
ಸಾಯಿ ಕಿಶೋರ್ ಅಥವಾ ರಶೀದ್ ಖಾನ್ ಒಬ್ಬರಲ್ಲ, ಒಬ್ಬರು ತಂಡಕ್ಕೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸಾಯಿ ಕಿಶೋರ್ 1 ವಿಕೆಟ್ ಪಡೆದ್ರೆ, ರಶೀದ್ ಯಾವುದೇ ವಿಕೆಟ್ ಪಡೆದಿರಲಿಲ್ಲ. ಪಂಜಾಬ್ ಕಿಂಗ್ಸ್ ಜೊತೆ ಆಡುವಾಗ ಸಾಯಿ ಕಿಶೋರ್ ಪ್ರಮುಖ ಪಾತ್ರ ವಹಿಸಿದ್ದರು. 4 ಓವರ್ ಮಾಡಿದ್ದ ಕಿಶೋರ್ ಕೇವಲ 30 ರನ್ ಮಾತ್ರ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದ್ದರು. ಎಂ ಚಿನ್ನಸ್ವಾಮಿ ಸ್ಟೇಡಿಯಂ ಸ್ಪಿನ್ನರ್ ಸ್ನೇಹಿ ಆಗಿದ್ದರಿಂದ ಇದರ ಲಾಭ ಪಡೆಯಬಹುದು.
ಹೀಗಾಗಿ ಆರ್ಸಿಬಿಯಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಉಳಿದ ಬ್ಯಾಟ್ಸ್ಮನ್ಗಳಿಗೆ ಸ್ಪಿನ್ ಬೌಲಿಂಗ್ ಎದುರಿಸುವುದು ಅಷ್ಟಕ್ಕೆ ಅಷ್ಟೇ. ಕಳೆದ ಪಂದ್ಯಗಳಂತೆ ಈ ಪಂದ್ಯದಲ್ಲೂ ಗುಜರಾತ್ ನಾಯಕ ಗಿಲ್, ಸಾಯಿ ಕಿಶೋರ್ ಅಥವಾ ರಶೀದ್ ಖಾನ್ ಅವರನ್ನು ಕಣಕ್ಕೆ ಇಳಿಸಿದ್ರೆ ಆರ್ಸಿಬಿ ಬ್ಯಾಟರ್ಗಳಿಗೆ ಥ್ರೆಟ್ ಇದ್ದೇ ಇರುತ್ತದೆ. ಪ್ರಮುಖ ವಿಕೆಟ್ ಉರುಳಿಸಿಲ್ಲ ಎಂದರೂ ಹರಿದು ಬರೋ ರನ್ಗೆ ಕಡಿವಾಣ ಹಾಕುವುದಂತೂ ಪಕ್ಕಾ. ಈ ಸ್ಪಿನ್ನರ್ಗಳನ್ನ ಎದುರಿಸೋದೇ ರಾಯಲ್ ಚಾಲೆಂಜರ್ಸ್ಗೆ ಚಾಲೆಂಜ್ ಆಗಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ