/newsfirstlive-kannada/media/post_attachments/wp-content/uploads/2025/02/Smriti_Mandhana_1.jpg)
ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯವಾಗಿ ಸೋತಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ಹೊಸ್ತಿನಲ್ಲಿದ್ದ ಆರ್​ಸಿಬಿ ಗರ್ಲ್ಸ್​, ಈಗ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ನಾಯಕಿ ಆಶ್ಲೀ ಗಾರ್ಡ್ನರ್ ಟಾಸ್ ಗೆದ್ದು ಆರ್​ಸಿಬಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿದರು. ಬ್ಯಾಟಿಂಗ್​ಗೆ ಆಗಮಿಸಿದ ಆರ್​ಸಿಬಿ ಓಪನರ್ಸ್, ಬಂದ ದಾರಿಗೆ ಸುಂಕವಿಲ್ಲಂತೆ ಬ್ಯಾಟ್ ಬೀಸಿದರು. 25 ರನ್​ ಒಳಗೆ ನಾಯಕಿ ಸ್ಮೃತಿ ಮಂದಾನ, ವ್ಯಾಟ್-ಹಾಡ್ಜ್, ಪೆರ್ರಿ ಔಟ್ ಆಗಿದ್ದು ತಂಡಕ್ಕೆ ಭಾರೀ ಹಿನ್ನಡೆ ಆಯಿತು. ಮಧ್ಯಮ ಕ್ರಮಾಂಕದಲ್ಲಿ ಹಾಗೂ 7, 8 ಸ್ಥಾನದಲ್ಲಿ ಸುಧಾರಣೆಯ ರನ್ ಬಂದಿದ್ದರಿಂದ ಆರ್​ಸಿಬಿ 20 ಓವರ್​ಗಳಲ್ಲಿ 7 ವಿಕೆಟ್​ಗೆ 125 ರನ್ ಮಾತ್ರ ಗಳಿಸಿತು.
/newsfirstlive-kannada/media/post_attachments/wp-content/uploads/2025/02/Smriti_Mandhana-1.jpg)
ಈ ಟಾರ್ಗೆಟ್ ಚೇಸ್ ಮಾಡಿದ ಗುಜರಾತ್ ಬ್ಯಾಟ್ಸ್​ ವುಮೆನ್ಸ್​ ಆರಂಭದಲ್ಲಿ ಆಘಾತಕ್ಕೆ ಒಳಗಾದರೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ನಾಯಕಿ ಆಶ್ಲೀ ಗಾರ್ಡ್ನರ್ 6 ಬೌಂಡರಿ, 3 ಸಿಕ್ಸರ್ ಸಮೇತ 58 ರನ್​ ಚಚ್ಚಿದರು. ಲಿಚ್ಫೀಲ್ಡ್ 3 ಬೌಂಡರಿ, 1 ಸಿಕ್ಸರಿಂದ 30 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 16.3 ಓವರ್​ನಲ್ಲಿ 4 ವಿಕೆಟ್​ಗೆ 126 ರನ್​ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.
ಇದುವರೆಗೆ ಗುಜರಾತ್ ಡಬ್ಲುಪಿಎಲ್​​ನಲ್ಲಿ ಒಟ್ಟು 6 ಪಂದ್ಯಗಳನ್ನು ಗೆದ್ದಿದ್ದು ಇದರಲ್ಲಿ 3 ಪಂದ್ಯಗಳನ್ನು ಆರ್​ಸಿಬಿ ವಿರುದ್ಧ ಗೆದ್ದಿರುವುದು ಅಚ್ಚರಿ ಮೂಡಿಸಿದೆ. ಈ ಸಲದ ಟೂರ್ನಿಯಲ್ಲಿ ಸತತ 2 ಗೆಲುವು ಕಂಡಿದ್ದ ಆರ್​ಸಿಬಿ ಹ್ಯಾಟ್ರಿಕ್ ಗೆಲುವಿನ ಹೊಸ್ತಿಲಲ್ಲಿತ್ತು. ಆದ್ರೆ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದ ಮೇಲೆ ಸತತ 3 ಪಂದ್ಯಗಳನ್ನು ಸೋತಿರುವುದು ಆರ್​ಸಿಬಿ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us