/newsfirstlive-kannada/media/post_attachments/wp-content/uploads/2025/03/RCB_TEAM.jpg)
ದೇವನಹಳ್ಳಿ: ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಿ ಕೆಂಪೇಗೌಡ ಏರ್ಪೋರ್ಟ್ಗೆ ಆಗಮಿಸಿರುವ ಆರ್ಸಿಬಿ ಆಟಗಾರರನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಚೆಪಾಕ್ ಸ್ಟೇಡಿಯಂನಲ್ಲಿ 17 ವರ್ಷದ ನಂತರ ಆರ್ಸಿಬಿ ಟೀಮ್ ಇತಿಹಾಸ ಸೃಷ್ಟಿಸಿರುವುದು ಫ್ಯಾನ್ಸ್ ಖುಷಿಯನ್ನ ಡಬಲ್ ಮಾಡಿದೆ.
ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆರ್ಸಿಬಿ ಆಟಗಾರರು ಬರುತ್ತಾರೆಂದು ಸಾವಿರಾರು ಅಭಿಮಾನಿಗಳು ಮೊದಲೇ ಸೇರಿದ್ದರು. ಆಟಗಾರರೆಲ್ಲಾ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳ ಉತ್ಸಾಹ ಹೇಳತೀರದಂತೆ ಆಗಿತ್ತು. ವಿಮಾನ ನಿಲ್ದಾಣದ ಟರ್ಮಿನಲ್- 1ಕ್ಕೆ ಆಗಮಿಸಿದ ರಜತ್ ಪಾಟಿದಾರ್ ಪಡೆಗೆ ಜೈಕಾರಗಳು ಮೊಳಗಿದವರು. ಆರ್ಸಿಬಿ.. ಆರ್ಸಿಬಿ ಚಾಂಟ್ಸ್ ಎಲ್ಲರನ್ನು ಆಕರ್ಷಿಸಿತು. ಶಿಳ್ಳೆ, ಕೇಕೆ ವಿಮಾನ ನಿಲ್ದಾಣದಲ್ಲಿ ಕೇಳಿ ಬಂದವು.
ಇದನ್ನೂ ಓದಿ:ಡೆಲ್ಲಿ ಇಂದ ಕನ್ನಡಿಗನಿಗೆ ಸ್ಪೆಷಲ್ ಟ್ರೀಟ್.. KL ರಾಹುಲ್ಗಾಗಿ ಟ್ರಕ್ನಲ್ಲಿ ಬಂದ ನಂ- 1 ಸ್ಪೆಷಲ್ ಜೆರ್ಸಿ
ಇನ್ನು ಆರ್ಸಿಬಿ ಅಭಿಮಾನಿಗಳ ಸಂತಸ ಕಂಡು ಬೆರಗಾದ ಎಲ್ಲ ಆಟಗಾರರು ಪ್ಯಾನ್ಸ್ ಕಡೆಗೆ ಕೈಬೀಸಿ ಚೀಯರ್ಸ್ ಮಾಡಿದರು. ನಗುವಿನಿಂದಲೇ ಎಲ್ಲರಿಗೂ ಪ್ಲೇಯರ್ಸ್ ಧನ್ಯವಾದ ಅರ್ಪಿಸಿದರು. ಇನ್ನು ಆರ್ಸಿಬಿಯ ಮುಂದಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್ 2 ರಂದು ಗುಜರಾತ್ ಟೈಟನ್ಸ್ ವಿರುದ್ಧ ನಡೆಯಲಿದೆ.
ರಾಯಲ್ ಚಾಲಂಜರ್ಸ್ ಬೆಂಗಳೂರು ಟೀಮ್ 17 ವರ್ಷಗಳ ಬಳಿಕ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ತಂಡಕ್ಕೆ ಟಕ್ಕರ್ ಕೊಟ್ಟಿದೆ. ಬರೋಬ್ಬರಿ 50 ರನ್ಗಳ ಅಂತರದಿಂದ ರಜತ್ ನೇತೃತ್ವದ ರೆಡ್ ಆರ್ಮಿ ದೊಡ್ಡ ಗೆಲುವು ಪಡೆದುಕೊಂಡಿದೆ. ಆರ್ಸಿಬಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಮುಂದೆ ಚೆನ್ನೈ ವಿಲ ವಿಲ ಹೊದ್ದಾಡಿತು. 197 ರನ್ಗಳ ಟಾರ್ಗೆಟ್ ಸಮೀಪಕ್ಕೂ ಬಾರದ ಚೆನ್ನೈ ಕೇವಲ 146 ರನ್ಗೆ ನೆಲ ಕಚ್ಚಿ, ಭಾರೀ ಮುಖಭಂಗಕ್ಕೆ ಒಳಗಾಯಿಯಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ