/newsfirstlive-kannada/media/post_attachments/wp-content/uploads/2025/02/Virat-Kohli-On-Rcbcaptain-1.jpg)
ಐಪಿಎಲ್ ಫೀವರ್ ಶುರುವಾಗಿದೆ. ಆರ್ಸಿಬಿ ಕಪ್ ಗೆಲ್ಲುವ ಜಪವೂ ಸ್ಟಾರ್ಟ್ ಆಯಿತು. ತೆರೆ ಹಿಂದಿನ ಸ್ಟ್ರಾಟರ್ಜಿ, ಗೆಲುವು ಸೋಲಿನ ಲೆಕ್ಕಾಚಾರವೂ ಜೋರಾಗಿದೆ. ಹಾಗಾದ್ರೆ, ಕಪ್ ಗೆಲುವಿನ ಕನವರಿಕೆಯಲ್ಲಿರುವ ಆರ್ಸಿಬಿ ತಂಡದ ಬಲವೇನು?. ಕಪ್ ಕನಸು ಭಗ್ನಗೊಳಿಸಬಲ್ಲ ಆ ವಿಕ್ನೇಸ್ ಏನು?.
ಕ್ರಿಕೆಟ್ ಲೋಕದ ಮಹಾ ಜಾತ್ರೆ ಕೌಂಟ್ಡೌನ್ ಶುರುವಾಗಿದೆ. ಸೀಸನ್-18ರ ಐಪಿಎಲ್ನ ರಾಯಲ್ ಆಗಿ ಆರಂಭಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಸಿದ್ಧತೆ ನಡೆಸ್ತಿದೆ. ಒಮ್ಮೆಯೂ ಟ್ರೋಫಿ ಗೆಲ್ಲದ ಆರ್ಸಿಬಿ ಹೊಸ ನಾಯಕ ಅಡಿಯಲ್ಲಿ, ಮತ್ತೆ ಕಪ್ ಗೆಲ್ಲುವ ಮಂತ್ರ ಜಪಿಸ್ತಿದೆ.
ಅಷ್ಟೇ ಅಲ್ಲ, ಕಳೆದ 17 ಸೀಸನ್ಗಳಿಗಿಂತ ಡಿಫರೆಂಟ್ ಆಗಿ ಕಾಣಿಸ್ತಿರುವ ಆರ್ಸಿಬಿ, ಹೊಸ ನಾಯಕ ಅಡಿ ಹೊಸ ಚರಿತ್ರೆ ಸೃಷ್ಟಿಸುವ ಇರಾದೆ ಹೊಂದಿದೆ. ಈ ನಿಟ್ಟಿನಲ್ಲಿ ಕೆಲವರು ಡಿಬೇಟ್ಗಳೂ ಜೋರಾಗಿ ನಡೀತಿದೆ. ಹಾಗಾದ್ರೆ, ಟೂರ್ನಿ ಶುರುವಿಗೂ ಮುನ್ನ ಆರ್ಸಿಬಿ ತಂಡದ ಸ್ಟ್ರೆಂಥ್ ಹಾಗೂ ವೀಕ್ನೆಸ್ ಏನು?
ಆರ್ಸಿಬಿ ಸ್ಟ್ರೆಂಥ್ ಏನು..?
- ಬಲಿಷ್ಠ ಬ್ಯಾಟಿಂಗ್ & ಡೇಂಜರಸ್ ಟಾಪ್ ಆರ್ಡರ್
- ಪವರ್ ಪ್ಯಾಕ್ಡ್ ಮಿಡಲ್ ಆರ್ಡರ್ ಬಿಗ್ ಹಿಟ್ಟರ್ಸ್
- ಗೇಮ್ ಫಿನಿಶರ್ಸ್, ದೈತ್ಯ ಆಲ್ರೌಂಡರ್ಗಳ ಬಲ
- ಅನುಭವಿಗಳನ್ನ ಒಳಗೊಂಡ ಬೌಲಿಂಗ್ ಅಟ್ಯಾಕ್
- ಪ್ರತಿಭಾವಂತ ಯುವ ಆಟಗಾರರ ಪಡೆ
- ಸ್ಟ್ರಾಂಗ್ ಆ್ಯಂಡ್ ಬ್ಯಾಲೆನ್ಸಿಂಗ್ ಟೀಮ್
ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವಿಕ್ನೇಸ್ ಕೂಡ ಇದೆ. ಈ ವಿಕ್ನೇಸ್ಗಳೇ ಆರ್ಸಿಬಿಗೆ ಮುಳುವಾಗುವ ಸಾಧ್ಯತೆ ಇದೆ.
ಆರ್ಸಿಬಿ ವೀಕ್ನೆಸ್ ಏನು.?
ದೇಶಿ ಕ್ರಿಕೆಟ್ನಲ್ಲಿ ಯಶಸ್ಸು ಕಂಡಿರುವ ರಜತ್ ಪಾಟಿದಾರ್, ಮೊದಲ ಬಾರಿಗೆ ಐಪಿಎಲ್ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇದು ಬ್ಯಾಕ್ ಫೈರ್ ಆದರೂ ಅಚ್ಚರಿ ಇಲ್ಲ. ಪ್ರತಿ ತಂಡದ ಸಕ್ಸಸ್ನಲ್ಲಿ ಕೋರ್ ಟೀಮ್ ಪ್ರಮುಖ ಪಾತ್ರ ವಹಿಸುತ್ತೆ. ಆದ್ರೆ, ಆರ್ಸಿಬಿ ಕೋರ್ ಟೀಮ್ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇಂಡಿಯನ್ ಆಟಗಾರರ ಬದಲಿಗೆ ವಿದೇಶಿ ಆಟಗಾರರನ್ನೇ ಹೆಚ್ಚು ನೆಚ್ಚಿಕೊಂಡಿದೆ. ಇದಲ್ಲಕ್ಕಿಂತ ಮಿಗಿಲಾಗಿ ಸ್ವಪ್ನಿಲ್ ಸಿಂಗ್, ಸುಯಶ್ ಶರ್ಮಾ ಬಿಟ್ರೆ, ಕ್ವಾಲಿಟಿ ಸ್ಪಿನ್ನರ್ಗಳು ತಂಡದಲ್ಲಿ ಇಲ್ಲ. ಚಿನ್ನಸ್ವಾಮಿ ಅಂಗಳವನ್ನೇ ದೃಷ್ಟಿಯಲ್ಲಿ ಇಟ್ಟುಕೊಂಡೇ ಫಿಲ್ ಸಾಲ್ಟ್, ಟಿಮ್ ಡೇವಿಡ್, ಲಿಯಾಮ್ ಲಿವಿಂಗ್ಸ್ಟೋನ್ರಂಥ ಆಟಗಾರರಿಗೆ ಮಣೆ ಹಾಕಿರುವ ಆರ್ಸಿಬಿಗೆ, ಚಿನ್ನಸ್ವಾಮಿಯ ಹೊರಗಿನ ಸ್ಪಿನ್ ಫ್ರೆಂಡ್ಲಿ ಪಿಚ್ನಲ್ಲಿ ಬಿಗ್ ಚಾಲೆಂಜ್ ಎದುರಾಗಲಿದೆ. ಯಾಕಂದ್ರೆ, ತಂಡದಲ್ಲಿ ಸ್ಪಿನ್ ಫ್ರೆಂಡ್ಲಿ ಬ್ಯಾಟರ್ಗಳು ಇಲ್ಲ.
ಇದನ್ನೂ ಓದಿ:ಹಿಂದಿ ಹೇರಿಕೆ ಸಮರ್ಥಿಸಿದ ಪವನ್ ಕಲ್ಯಾಣ್.. ತಮಿಳು ಸಿನಿಮಾ ತಾರೆಯರ ವಿರುದ್ಧ ಬೊಟ್ಟು ತೋರಿದ DCM
ಆರ್ಸಿಬಿಗೆ ಹೊಸ ನಾಯಕತ್ವವೇ ಥ್ರೆಟ್ ಆಗುತ್ತಾ..?
ಈ ಹಿಂದಿಗಿಂತಲೂ ಆರ್ಸಿಬಿ ಬೆಸ್ಟ್ ಟೀಮ್ನ ಹೊಂದಿದೆ. ಸ್ಟ್ರೆಂಥ್ಗಳ ಜೊತೆಗೆ ವಿಕ್ನೇಸ್ ಕೂಡ ತಂಡದಲ್ಲಿದೆ. ಆದ್ರೆ, ದೇಶಿ ಕ್ರಿಕೆಟ್ನಲ್ಲಿ ಸಕ್ಸಸ್ ಕಂಡಿರುವ ರಜತ್ ಪಾಟಿದಾರ್ಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ. ಇದು ಪರೋಕ್ಷ ರಜತ್ ಪ್ರದರ್ಶನದ ಮೇಲೆಯೂ ಪರಿಣಾಮ ಬೀರಬಹುದು.
ಅಷ್ಟೇ ಅಲ್ಲ, ಸೂಪರ್ ಸ್ಟಾರ್ ಆಟಗಾರರನ್ನು ಡೀಲ್ ಮಾಡೋದ್ರಲ್ಲಿ ಯಡವಟ್ಟಾಗಬಹುದು. 22 ಆಟಗಾರರ ಪಡೆಯಲ್ಲಿ ಕಂಡೀಷನ್ಸ್ಗೆ ತಕ್ಕ ಬೆಸ್ಟ್ ತಂಡ ಸೆಲೆಕ್ಟ್ ಮಾಡುವುದೇ ಟೀಮ್ ಮ್ಯಾನೇಜ್ಮೆಂಟ್ ಮುಂದಿರೋ ಬಿಗ್ಗೆಸ್ಟ್ ಚಾಲೆಂಜ್. ಮೇಲ್ನೋಟಕ್ಕೆ ಆರ್ಸಿಬಿ ಸಖತ್ ಸ್ಟ್ರಾಂಗ್ ಆಗಿ ಕಾಣ್ತಿದೆ ನಿಜ. ಆದ್ರೆ. ಆನ್ಫೀಲ್ಡ್ನಲ್ಲಿ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ್ರೆ. ಕಪ್ ಗೆಲ್ಲೋದ್ರಲ್ಲಿ ಡೌಟೇ ಇಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ