RCB ಹುಡುಗರೇ ಟ್ರೋಫಿ ಗೆದ್ದು, ತವರಿಗೆ ಬನ್ನಿ.. ಜೆರ್ಸಿ ಧರಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಏನಂದ್ರು?

author-image
Bheemappa
Updated On
RCB ಹುಡುಗರೇ ಟ್ರೋಫಿ ಗೆದ್ದು, ತವರಿಗೆ ಬನ್ನಿ.. ಜೆರ್ಸಿ ಧರಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಏನಂದ್ರು?
Advertisment
  • ಬೆಂಗಳೂರು ತಂಡದ ಕುರಿತು ಡಿಸಿಎಂ ಏನೇನು ಹೇಳಿದರು.?
  • ಆರ್​ಸಿಬಿಗೆ ಶುಭ ಹಾರೈಸಿರುವ ಡಿಸಿಎಂ ಡಿ.ಕೆ ಶಿವಕುಮಾರ್
  • 18 ವರ್ಷಗಳಿಂದ ಇಂತಹ ಅದ್ಭುತ ದಿನಕ್ಕಾಗಿ ಕಾಯುತ್ತಿದ್ದೇವೆ

ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್ ನಡುವೆ ಐಪಿಎಲ್​ನ ಫೈನಲ್ ಪಂದ್ಯ ಇಂದು ನಡೆಯಲಿದೆ. ಫೈನಲ್ ಪಂದ್ಯವಾಗಿದ್ದರಿಂದ ಅದರಲ್ಲಿ ಆರ್​ಸಿಬಿ ಫೈನಲ್​ ತಲುಪಿದ್ದರಿಂದ ಟ್ರೋಫಿ ಗೆದ್ದು ಬರುತ್ತೆ ಎನ್ನುವ ಭರವಸೆ ಎಲ್ಲರಲ್ಲೂ ಇದೆ. ಆರ್​ಸಿಬಿ ಹುಡುಗರೇ ಟ್ರೋಫಿ ಗೆದ್ದುಕೊಂಡು ತವರಿಗೆ ಬನ್ನಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಡಿಸಿಎಂ ಡಿ.ಕೆ ಶಿವಕುಮಾರ್​ ಅವರು ಆರ್​ಸಿಬಿ ತಂಡದ ಜೆರ್ಸಿ ಧರಿಸಿ ಮಾತನಾಡಿದ್ದು, ಇಂತಹ ಅದ್ಭುತ ದಿನಕ್ಕಾಗಿ ಕಳೆದ 18 ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದೇವೆ. ಟ್ರೋಫಿಗಾಗಿ ಸಾಕಷ್ಟು ಶ್ರಮ ಪಟ್ಟು ಆರ್​ಸಿಬಿ ಕೊನೆಗೆ ಐಪಿಎಲ್​ನಲ್ಲಿ ಫೈನಲ್​ ತಲುಪಿದೆ. ಇಂದು ಪಂಜಾಬ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಅಖಾಡಕ್ಕೆ ಇಳಿಯುತ್ತಿದೆ. ಇಡೀ ರಾಜ್ಯವೆಲ್ಲಾ ಟ್ರೋಫಿ ಗೆದ್ದು ಬರಲಿ ಎಂದು ಆರ್​ಸಿಬಿ ತಂಡದ ಹಿಂದೆ ನಿಂತಿದೆ. ಆ ಅದ್ಭುತ ಕ್ಷಣವನ್ನು ಸಾಧಿಸಿ ತೋರಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಇದನ್ನೂ ಓದಿ:ಏಕದಿನ ವಿಶ್ವಕಪ್​ ಟೂರ್ನಿ ನಡೆಯುವ ದಿನಾಂಕ, ಸ್ಥಳ ಘೋಷಣೆ.. ಬೆಂಗಳೂರಿಂದಲೇ ಆರಂಭ

publive-image

ಆರ್​ಸಿಬಿ ಕೇವಲ ಜೆರ್ಸಿ ಅಲ್ಲ, ಅದರ ಮೇಲೆ ಮಿಲಿಯನ್, ಮಿಲಿಯನ್ ಡ್ರೀಮ್​ಗಳು ಇವೆ. ನಾವು ನಿಮ್ಮೊಂದಿಗೆ ಇದ್ದೇವೆ. ಕರ್ನಾಟಕ ಹಾಗೂ ಇಲ್ಲಿನ ಸರ್ಕಾರವೆಲ್ಲಾ ನಿಮ್ಮೊಂದಿಗೆ ನಿಂತಿದೆ. ಆರ್​ಸಿಬಿ ಹುಡುಗರೇ ತವರಿಗೆ ಕಪ್​ ಗೆದ್ದುಕೊಂಡು ಬನ್ನಿ. ಟ್ರೋಫಿಗಾಗಿ ಕರ್ನಾಟಕದ ಕೋಟಿ ಕೋಟಿ ಜನರು ಹಾಗೂ ನಾನು ಕಾಯುತ್ತಿದ್ದೇನೆ. ಎಲ್ಲರಿಗೂ ಆಲ್​ ದೀ ಬೆಸ್ಟ್​ ಎಂದು ಡಿ.ಕೆ ಶಿವಕುಮಾರ್ ಅವರು ಶುಭ ಹಾರೈಸಿದ್ದಾರೆ.

ಸುದೀರ್ಘ 18 ವರ್ಷಗಳ ಕಪ್​ ಕೊರಗು ನೀಗೋಕೆ ಒಂದೇ ಒಂದು ಹೆಜ್ಜೆ ಬಾಕಿ ಇದೆ. ಅಹ್ಮದಾಬಾದ್​ನ ನಮೋ ಅಂಗಳದಲ್ಲಿ ನಡೆಯುವ ಫೈನಲ್​ ಫೈಟ್​ನಲ್ಲಿ ಆರ್​​ಸಿಬಿ ದಿಟ್ಟ ಇಜ್ಜೆ ಇಟ್ಟರೇ ಅಸಂಖ್ಯ ಅಭಿಮಾನಿಗಳ ಕನಸು ಇಂದು ನರೆವೇರಲಿದೆ. ಈ ಹಿಂದಿನ 18 ಸೀಸನ್​​ಗಳಲ್ಲಿದ್ದ ಆರ್​​ಸಿಬಿಗೂ ಈ ಸೀಸನ್​ನ ಆರ್​​ಸಿಬಿಗೂ ಹೆಚ್ಚು ಡಿಫರೆನ್ಸ್​ ಇದೆ. ಏಕೆಂದರೆ ಈ ಆಟಗಾರರು ಫೈನಲ್​ ಕಪ್​ ಗೆದ್ದುಕೊಂಡು ಬರೋದು ಪಕ್ಕಾ ಎಂದು ಹೇಳಲಾಗುತ್ತಿದೆ.


">June 3, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment