/newsfirstlive-kannada/media/post_attachments/wp-content/uploads/2025/06/RCB_DK_SHIVAKUMAR.jpg)
ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್ ನಡುವೆ ಐಪಿಎಲ್​ನ ಫೈನಲ್ ಪಂದ್ಯ ಇಂದು ನಡೆಯಲಿದೆ. ಫೈನಲ್ ಪಂದ್ಯವಾಗಿದ್ದರಿಂದ ಅದರಲ್ಲಿ ಆರ್​ಸಿಬಿ ಫೈನಲ್​ ತಲುಪಿದ್ದರಿಂದ ಟ್ರೋಫಿ ಗೆದ್ದು ಬರುತ್ತೆ ಎನ್ನುವ ಭರವಸೆ ಎಲ್ಲರಲ್ಲೂ ಇದೆ. ಆರ್​ಸಿಬಿ ಹುಡುಗರೇ ಟ್ರೋಫಿ ಗೆದ್ದುಕೊಂಡು ತವರಿಗೆ ಬನ್ನಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್​ ಅವರು ಆರ್​ಸಿಬಿ ತಂಡದ ಜೆರ್ಸಿ ಧರಿಸಿ ಮಾತನಾಡಿದ್ದು, ಇಂತಹ ಅದ್ಭುತ ದಿನಕ್ಕಾಗಿ ಕಳೆದ 18 ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದೇವೆ. ಟ್ರೋಫಿಗಾಗಿ ಸಾಕಷ್ಟು ಶ್ರಮ ಪಟ್ಟು ಆರ್​ಸಿಬಿ ಕೊನೆಗೆ ಐಪಿಎಲ್​ನಲ್ಲಿ ಫೈನಲ್​ ತಲುಪಿದೆ. ಇಂದು ಪಂಜಾಬ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಅಖಾಡಕ್ಕೆ ಇಳಿಯುತ್ತಿದೆ. ಇಡೀ ರಾಜ್ಯವೆಲ್ಲಾ ಟ್ರೋಫಿ ಗೆದ್ದು ಬರಲಿ ಎಂದು ಆರ್​ಸಿಬಿ ತಂಡದ ಹಿಂದೆ ನಿಂತಿದೆ. ಆ ಅದ್ಭುತ ಕ್ಷಣವನ್ನು ಸಾಧಿಸಿ ತೋರಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಏಕದಿನ ವಿಶ್ವಕಪ್​ ಟೂರ್ನಿ ನಡೆಯುವ ದಿನಾಂಕ, ಸ್ಥಳ ಘೋಷಣೆ.. ಬೆಂಗಳೂರಿಂದಲೇ ಆರಂಭ
/newsfirstlive-kannada/media/post_attachments/wp-content/uploads/2025/05/RCB_TEAM-4.jpg)
ಆರ್​ಸಿಬಿ ಕೇವಲ ಜೆರ್ಸಿ ಅಲ್ಲ, ಅದರ ಮೇಲೆ ಮಿಲಿಯನ್, ಮಿಲಿಯನ್ ಡ್ರೀಮ್​ಗಳು ಇವೆ. ನಾವು ನಿಮ್ಮೊಂದಿಗೆ ಇದ್ದೇವೆ. ಕರ್ನಾಟಕ ಹಾಗೂ ಇಲ್ಲಿನ ಸರ್ಕಾರವೆಲ್ಲಾ ನಿಮ್ಮೊಂದಿಗೆ ನಿಂತಿದೆ. ಆರ್​ಸಿಬಿ ಹುಡುಗರೇ ತವರಿಗೆ ಕಪ್​ ಗೆದ್ದುಕೊಂಡು ಬನ್ನಿ. ಟ್ರೋಫಿಗಾಗಿ ಕರ್ನಾಟಕದ ಕೋಟಿ ಕೋಟಿ ಜನರು ಹಾಗೂ ನಾನು ಕಾಯುತ್ತಿದ್ದೇನೆ. ಎಲ್ಲರಿಗೂ ಆಲ್​ ದೀ ಬೆಸ್ಟ್​ ಎಂದು ಡಿ.ಕೆ ಶಿವಕುಮಾರ್ ಅವರು ಶುಭ ಹಾರೈಸಿದ್ದಾರೆ.
ಸುದೀರ್ಘ 18 ವರ್ಷಗಳ ಕಪ್​ ಕೊರಗು ನೀಗೋಕೆ ಒಂದೇ ಒಂದು ಹೆಜ್ಜೆ ಬಾಕಿ ಇದೆ. ಅಹ್ಮದಾಬಾದ್​ನ ನಮೋ ಅಂಗಳದಲ್ಲಿ ನಡೆಯುವ ಫೈನಲ್​ ಫೈಟ್​ನಲ್ಲಿ ಆರ್​​ಸಿಬಿ ದಿಟ್ಟ ಇಜ್ಜೆ ಇಟ್ಟರೇ ಅಸಂಖ್ಯ ಅಭಿಮಾನಿಗಳ ಕನಸು ಇಂದು ನರೆವೇರಲಿದೆ. ಈ ಹಿಂದಿನ 18 ಸೀಸನ್​​ಗಳಲ್ಲಿದ್ದ ಆರ್​​ಸಿಬಿಗೂ ಈ ಸೀಸನ್​ನ ಆರ್​​ಸಿಬಿಗೂ ಹೆಚ್ಚು ಡಿಫರೆನ್ಸ್​ ಇದೆ. ಏಕೆಂದರೆ ಈ ಆಟಗಾರರು ಫೈನಲ್​ ಕಪ್​ ಗೆದ್ದುಕೊಂಡು ಬರೋದು ಪಕ್ಕಾ ಎಂದು ಹೇಳಲಾಗುತ್ತಿದೆ.
Ee Sala Cup Namde! ♥️🏆
18 years of grit.
Every prayer, every cheer, every heartbreak - it all leads to today.
This is more than a match.
Our moment. Our Cup.
Wishing @RCBTweets the very best - Karnataka is with you!#PlayBold#ನಮ್ಮRCB#IPL2025pic.twitter.com/cTmRhjgjts— DK Shivakumar (@DKShivakumar)
Ee Sala Cup Namde! ♥️🏆
18 years of grit.
Every prayer, every cheer, every heartbreak - it all leads to today.
This is more than a match.
Our moment. Our Cup.
Wishing @RCBTweets the very best - Karnataka is with you!#PlayBold#ನಮ್ಮRCB#IPL2025pic.twitter.com/cTmRhjgjts— DK Shivakumar (@DKShivakumar) June 3, 2025
">June 3, 2025
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us