/newsfirstlive-kannada/media/post_attachments/wp-content/uploads/2024/05/RCB-Team_Win.jpg)
2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಯಾರನ್ನು ತಂಡದಿಂದ ಕೈ ಬಿಡಬೇಕು? ಯಾರನ್ನು ರಿಲೀಸ್​ ಮಾಡಬೇಕು? ಅನ್ನೋ ಚರ್ಚೆಗಳು ಕೂಡ ಜೋರಾಗಿವೆ. ಆರ್ಸಿಬಿ ಕೂಡ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲಿದೆ ಎಂಬ ಕುತೂಹಲ ಫ್ಯಾನ್ಸ್​ಗೆ ಇದೆ.
ಐಪಿಎಲ್​​ 18ನೇ ಸೀಸನ್​ಗೂ ಮುನ್ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೆ ಮುನ್ನ ಮಾಲೀಕರು ರೀಟೈನ್​ ಮತ್ತು ರಿಲೀಸ್​ ಲಿಸ್ಟ್​​ ರೆಡಿ ಮಾಡಿ ಬಿಸಿಸಿಐಗೆ ಸಲ್ಲಿಸಬೇಕಿದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಫಾಫ್ ಡುಪ್ಲೆಸಿಸ್, ರಿಷಭ್ ಪಂತ್​ ಸೇರಿ ಹಲವರನ್ನು ಐಪಿಎಲ್​ ತಂಡಗಳು ರಿಲೀಸ್​ ಮಾಡಲಿವೆ. ಈಗಿನ ವರದಿಗಳ ಪ್ರಕಾರ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿ ಬಂದಿದೆ.
ಹಾರ್ದಿಕ್​ ಪಾಂಡ್ಯ ಕೈ ಬಿಡಲು ಕಾರಣವೇನು?
ಕಳೆದ ಆವೃತ್ತಿಯ ಹರಾಜಿನ ವೇಳೆ ಗುಜರಾತ್ ಟೈಟನ್ಸ್ನಿಂದ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿಕೊಂಡಿತ್ತು. ಆದರೆ, ಹಾರ್ದಿಕ್ ಅವರ ಪ್ರತಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದಾಗಿ, ತಂಡದ ನಿರ್ವಹಣಾ ಮಂಡಳಿ ಅವರ ಬಗ್ಗೆ ಅಸಮಾಧಾನ ಹೊಂದಿದೆ. ಮುಂಬೈ ಮುಂದಿನ ಆವೃತ್ತಿಗೆ ತನ್ನ ನಾಯಕನನ್ನು ಬದಲಾಯಿಸುವ ನಿರೀಕ್ಷೆಯಲ್ಲಿದೆ.
ಹಾರ್ದಿಕ್​ ಪಾಂಡ್ಯ ಮೇಲೆ ಆರ್​​ಸಿಬಿ ಕಣ್ಣು
ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೇಸಿಸ್ ಅವರನ್ನು ರಿಲೀಸ್​ ಮಾಡಲಿದೆ. ಹೀಗಾಗಿ ಆರ್ಸಿಬಿ ಭವಿಷ್ಯದ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯ ಅವರನ್ನು ಆರ್ಸಿಬಿ ಖರೀದಿ ಮಾಡಬೇಕು ಎಂದು ಪ್ಲಾನ್​ ಮಾಡಿಕೊಂಡಿದೆ. ಹಾರ್ದಿಕ್ ಪಾಂಡ್ಯ ಆರ್ಸಿಬಿ ತಂಡ ಸೇರಿಕೊಂಡರೆ ಮಿಡ್ಲ್ ಆರ್ಡರ್ ಬ್ಯಾಟಿಂಗ್ ಬಲಗೊಳ್ಳಲಿದೆ. ಇವರು ಆಲ್ರೌಂಡರ್ ಆಗಿದ್ದು, ಬೌಲಿಂಗ್​ ಕೂಡ ಮಾಡಬಹುದು. ಜತೆಗೆ ನಾಯಕತ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಬರುವ ಸಾಧ್ಯತೆ ಇದೆ. ಆದಾಗ್ಯೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಲಭ್ಯವಿಲ್ಲ. ಇದು ನಿಜವಾಗದಿದ್ದರೆ, ಅಭಿಮಾನಿಗಳಿಗೆ ಅತಿ ದೊಡ್ಡ ಸಂತೋಷವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us