ಸಿಎಸ್​ಕೆ ವಿರುದ್ಧದ ಪಂದ್ಯಕ್ಕೆ ಮಳೆಯ ಆತಂಕ.. ಹವಾಮಾನ ಇಲಾಖೆ ಏನು ಹೇಳಿದೆ..?

author-image
Ganesh
Updated On
RCB vs PBKS ಪಂದ್ಯಕ್ಕೆ ಆರಂಭದಲ್ಲೇ ವಿಘ್ನ.. ಬೆಂಗಳೂರು ಮ್ಯಾಚ್ ನಡೆಯಲ್ವಾ​, ಕಾರಣ?
Advertisment
  • ಸೇಡು ತೀರಿಸಿಕೊಳ್ಳಲು ಸಿಎಸ್​ಕೆ ಪ್ಲಾನ್ ಮಾಡಿಕೊಂಡಿದೆ
  • ಆರ್​ಸಿಬಿ ವಿರುದ್ಧ ಸತತವಾಗಿ 2 ಪಂದ್ಯ ಸೋತಿರುವ CSK
  • ಎಂ.ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ಮೆಗಾ ಫೈಟ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಕಾದಾಟ ಎಂದರೆ ಕುತೂಹಲ ಹೆಚ್ಚು. ಫ್ಯಾನ್ಸ್​ ವಾರ್ ಕೂಡ ಇದ್ದೇ ಇರುತ್ತೆ. ಇಂತಹ ಹೈವೋಲ್ಟೇಜ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಆದರೆ ಇದರ ನಡುವೆ ಪಂದ್ಯಕ್ಕೆ ಮಳೆ ಎಂಟ್ರಿ ಆಗುತ್ತಾ ಎನ್ನುವುದು ದೊಡ್ಡ ಪ್ರಶ್ನೆ.

ಆರ್​ಸಿಬಿ ಹಾಗೂ ಚೆನ್ನೈ ನಡುವಿನ ಪಂದ್ಯ ಎಂದರೆ ಐಪಿಎಲ್​ನ ಹೆಚ್ಚು ಹೆಚ್ಚು ಅಭಿಮಾನಿಗಳು ವೀಕ್ಷಣೆ ಮಾಡುತ್ತಾರೆ. ಭದ್ಧವೈರಿಗಳ ಕಾದಾಟದಲ್ಲಿ ಎರಡು ಕಡೆಯ ಆಟಗಾರರು​ ಗೆಲುವನ್ನೇ ಎದುರು ನೋಡುತ್ತಿರುತ್ತಾರೆ. ಈಗಾಗಲೇ ತವರಿನ ಪಿಚ್​ನಲ್ಲಿ ಚೆನ್ನೈ ಅನ್ನು ಆರ್​ಸಿಬಿ ಸೋಲಿಸಿ ಶಕ್ತಿ ಪ್ರದರ್ಶಿಸಿದೆ. ಈ ಸೇಡನ್ನು ಸಿಎಸ್​ಕೆ ತೀರಿಸಿಕೊಳ್ಳುತ್ತಾ ಇಲ್ಲ, ಆರ್​ಸಿಬಿನೇ ಮೇಲುಗೈ ಸಾಧಿಸುತ್ತಾ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:  ಪ್ರಸಿದ್ಧ ಕೃಷ್ಣ ಅದ್ಭುತ ಸ್ಪೆಲ್.. ಗೆಲುವಿನೊಂದಿಗೆ SRH ಮನೆಗೆ ಕಳುಹಿಸಿದ ಗಿಲ್ ಪಡೆ..!

ಇಂತಹ ಹೈವೋಲ್ಟೇಜ್ ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪಂದ್ಯ ಆರಂಭವಾದ ಮೇಲೆ ಶೇಕಡಾ 40 ರಷ್ಟು ಮಳೆ ಬರುವ ಸೂಚನೆ ಇದೆ. ಗಂಟೆಗೆ 13 ಕಿ.ಮೀ ವೇಗದಲ್ಲಿ ನೈಋತ್ಯ ದಿಕ್ಕಿನಿಂದ ಗಾಳಿ ಬೀಸಲಿದೆ. ಶೇಕಡಾ 99 ರಷ್ಟು ಮೋಡ ಕವಿದ ವಾತಾವರಣ ಕೂಡ ಇರಲಿದೆ. ಹೀಗಾಗಿ ಆರ್​ಸಿಬಿ ವರ್ಸಸ್​ ಸಿಎಸ್​ಕೆ ಪಂದ್ಯ ಕೊಂಚ ಮಳೆಯಿಂದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.

ಈ ಟೂರ್ನಿಯ ಆರಂಭದ 2ನೇ ಪಂದ್ಯದಲ್ಲೇ ಸಿಎಸ್​ಕೆ ಅನ್ನು ಆರ್​ಸಿಬಿ ಬಗ್ಗು ಬಡಿದಿದೆ. ಅದು ಬೇರೆ 17 ವರ್ಷದ ಬಳಿಕ ಎಂ.ಎ ಚಿದಂಬರಂ ಪಿಚ್​ನಲ್ಲೇ ಚೆನ್ನೈ ತಂಡವನ್ನು ಆರ್​ಸಿಬಿ 50 ರನ್​ಗಳಿಂದ ಮಣಿಸಿ ವಿಜಯ ಪತಾಕೆ ಹಾರಿಸಿದೆ. ಅದರಂತೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದರೆ ಅಭಿಮಾನಿಗಳ ಪಾಲಿಗೆ ದೊಡ್ಡ ಬಹುಮಾನವೇ ಸರಿ.

ಇದನ್ನೂ ಓದಿ: ಬೆಂಗಳೂರಲ್ಲೇ ಇವತ್ತು RCB ಮ್ಯಾಚ್​.. ಫ್ಯಾನ್ಸ್ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment