ಸಿಕ್ಸರ್ ಸಿಡಿಸೋ ಬರದಲ್ಲಿ ವಿಕೆಟ್ ಒಪ್ಪಿಸಿದ ಎಂ.ಎಸ್ ಧೋನಿ
5 ಎಸೆತಗಳಲ್ಲಿ ಸಿಎಸ್ಕೆ ಕ್ವಾಲಿಫೈ ಆಗಲು 11 ರನ್ ಅಗತ್ಯವಿತ್ತು
ಪಂದ್ಯದಲ್ಲಿ ಜಡೇಜಾರ ವಿರೋಚಿತ ಹೋರಾಟ ವ್ಯರ್ಥ ಆಯಿತು
ಬ್ಯಾಟಿಂಗ್ ಮಾತ್ರವಲ್ಲ.. ಬೌಲಿಂಗ್ನಲ್ಲೂ ಆರ್ಸಿಬಿ ರಾಯಲ್ ಆಟವಾಡಿತು. ಬಲಿಷ್ಠ ಚೆನ್ನೈ ತಂಡವನ್ನ ತವರಿನಂಗಳದಲ್ಲಿ ಯಶಸ್ವಿಯಾಗಿ ಕಟ್ಟಿಹಾಕ್ತು. ರಣರೋಚಕ ಹಂತದಲ್ಲಿ ಜಿದ್ದಿಗೆ ಬಿದ್ದು ಹೋರಾಡಿ ಗೆದ್ದು ಬೀಗಿತು. ಆರ್ಸಿಬಿ ಬೌಲರ್ಸ್ VS CSK ಬ್ಯಾಟರ್ಸ್ ನಡುವಿನ ಕಾದಾಟ ಹೇಗಿತ್ತು?.
ಸವಾಲಿನ ಟಾರ್ಗೆಟ್ ನೀಡಿ ಡಿಫೆಂಡ್ ಮಾಡಿಕೊಳ್ಳಲು ಕಣಕ್ಕಿಳಿದ ಆರ್ಸಿಬಿ ಮೊದಲ ಎಸೆತದಿಂದಲೇ ದರ್ಬಾರ್ ನಡೆಸ್ತು. ಹೋಮ್ಗ್ರೌಂಡ್ನಲ್ಲಿ ಚೆನ್ನೈ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನ ಪುಡಿಗಟ್ಟಿತು. ಆರ್ಸಿಬಿಯ ಶಿಸ್ತಿನ ದಾಳಿಯ ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಮಕಾಡೆ ಮಲಗ್ತು.
ಇದನ್ನೂ ಓದಿ: ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?
ಮೊದಲ ಎಸೆತದಲ್ಲೇ ಕಮಾಲ್.. ಬಲೆಗೆ ಬಿದ್ದ ಋತುರಾಜ್.!
ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಎಡವಿತು. ಮೊದಲ ಎಸೆತದಲ್ಲೇ ಆರ್ಸಿಬಿ ಸಕ್ಸಸ್ನ ರುಚಿ ನೋಡಿತು. ಸಿಎಸ್ಕೆ ನಾಯಕ ಋತುರಾಜ್, ಮೊದಲ ಎಸೆತದಲ್ಲೇ ಮ್ಯಾಕ್ಸ್ವೆಲ್ ಸ್ಪಿನ್ ಮೋಡಿಗೆ ಬಲಿಯಾದ್ರು. ಋತುರಾಜ್ ಬೆನ್ನಲ್ಲೇ ಡ್ಯಾರಿಲ್ ಮಿಚೆಲ್ ಕೂಡ ಪೆವಿಲಿಯನ್ ಸೇರಿದ್ರು.
ಕುಸಿದ ಸಿಎಸ್ಕೆಗೆ ಬಲ ತುಂಬಿದ ರಹಾನೆ – ರವೀಂದ್ರ.!
19 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲೇ ಆಘಾತ ಎದುರಿಸಿತ್ತು. ಈ ವೇಳೆ ಕ್ರಿಸ್ನಲ್ಲಿ ಜೊತೆಯಾದ ರಚಿನ್ ರವೀಂದ್ರ, ಅಜಿಂಕ್ಯಾ ರಹಾನೆ ಸಾಲಿಡ್ ಜೊತೆಯಾಟವಾಡಿದ್ರು. 41 ಎಸೆತಗಳಲ್ಲಿ ಈ ಜೋಡಿ 66 ರನ್ ಕಲೆಹಾಕಿತು.
ರಹಾನೆ ಓಟಕ್ಕೆ ಬ್ರೇಕ್ ಹಾಕಿದ ಲಾಕಿ ಫರ್ಗ್ಯುಸನ್.!
ಸಾಲಿಡ್ ಫಾರ್ಮ್ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದ ಅಜಿಂಕ್ಯಾ ರಹಾನೆ ಆಟಕ್ಕೆ ಲಾಕಿ ಫರ್ಗ್ಯುಸನ್ ಬ್ರೇಕ್ ಹಾಕಿದ್ರು. ರಹಾನೆ ಬೆನ್ನಲ್ಲೇ ರಚಿನ್ ರವೀಂದ್ರ, ರನೌಟ್ಗೆ ಬಲಿಯಾದ್ರು. ಇವರಿಬ್ಬರ ಪತನದೊಂದಿಗೆ ಚೆನ್ನೈನ ರನ್ಗಳಿಕೆಯ ವೇಗಕ್ಕೆ ಬ್ರೇಕ್ ಬಿತ್ತು. ಆರ್ಸಿಬಿ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.
ಚಿನ್ನಸ್ವಾಮಿಯಲ್ಲಿ ನಡೆಯದ ದುಬೆ ದರ್ಬಾರ್.!
ಚಿನ್ನಸ್ವಾಮಿ ಅಂಗಳದಲ್ಲಿ ಶಿವಂ ದುಬೆ ದರ್ಬಾರ್ ನಡೆಯಲೇ ಇಲ್ಲ. ಸ್ಪೋಟಕ ಬ್ಯಾಟರ್ ಆರ್ಸಿಬಿ ಬೌಲರ್ಸ್ ಅಬ್ಬರದ ಮುಂದೆ ಮಂಕಾದ್ರು. 15 ಎಸೆತಗಳಲ್ಲಿ 7 ರನ್ಗಳಿಸಿ ಔಟಾದ್ರು. ಇದೇ ಗೇಮ್ ಟರ್ನಿಂಗ್ ಪಾಯಿಂಟ್ ಆಯ್ತು. ದುಬೆ ಬೆನ್ನಲ್ಲೇ ಮಿಚೆಲ್ ಸ್ನಾಂಟ್ನೆರ್, ಕ್ಯಾಪ್ಟನ್ ಫಾಫ್ ಡುಪ್ಲೆಸಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದ್ರು.
ಧೋನಿ- ಜಡೇಜಾ ಜಬರ್ದಸ್ತ್ ಜುಗಲ್ಬಂದಿ.!
7ನೇ ವಿಕೆಟ್ಗೆ ಜೊತೆಯಾದ ಎಮ್.ಎಸ್ ಧೋನಿ, ರವೀಂದ್ರ ಜಡೇಜಾ ಸಂಕಷ್ಟದಲ್ಲಿದ್ದ ಸಿಎಸ್ಕೆ ತಂಡಕ್ಕೆ ನೆರವಾದ್ರು. ಆರ್ಸಿಬಿ ಬೌಲರ್ಸ್ಗಳ ಮೇಲೆ ಸವಾರಿ ನಡೆಸಿದ ಈ ಜೋಡಿ 27 ಎಸೆತಗಳಲ್ಲಿ 61 ರನ್ ಕಲೆ ಹಾಕಿದ್ರು. ಸಾಲಿಡ್ ಆಟವಾಡಿದ ಧೋನಿ 3 ಬೌಂಡರಿ, 1 ಸಿಕ್ಸರ್ ಸಿಡಿಸಿದ್ರು.
ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್
ರಣರೋಚಕ ಹಂತದಲ್ಲಿ ಎಡವಿದ ಧೋನಿ..!
ಕೊನೆಯ ಓವರ್ನಲ್ಲಿ ಪಂದ್ಯ ರಣರೋಚಕ ಘಟ್ಟ ತಲುಪಿತ್ತು. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಧೋನಿ ಘರ್ಜಿಸಿದ್ರು. 5 ಎಸೆತಗಳಲ್ಲಿ ಸಿಎಸ್ಕೆ ಕ್ವಾಲಿಫೈ ಆಗಲು 11 ರನ್ ಅಗತ್ಯವಿತ್ತು. ಈ ವೇಳೆ ಸಿಕ್ಸರ್ ಸಿಡಿಸೋ ಭರದಲ್ಲಿ ಧೋನಿ ಔಟಾದ್ರು. ಧೋನಿಯ ವಿಕೆಟ್ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಆಯ್ತು.
ರವೀಂದ್ರ ಜಡೇಜಾ ವಿರೋಚಿತ ಹೋರಾಟ ವ್ಯರ್ಥ.!
ಅಂತಿಮ ಓವರ್ನ ಕೊನೆಯ 4 ಎಸೆತಗಳಲ್ಲಿ ಕೇವಲ ಒಂದು ರನ್ ಮಾತ್ರಗಳಿಸಿದ ಸಿಎಸ್ಕೆ, ಪ್ಲೇ ಆಫ್ ರೇಸ್ನಿಂದ ಹೊರಬಿತ್ತು. 7 ವಿಕೆಟ್ ನಷ್ಟಕ್ಕೆ 191 ರನ್ಗಳಿಗೆ ಸಿಎಸ್ಕೆ ಆಟ ಅಂತ್ಯವಾಯ್ತು. ಅಜೇಯ 42 ರನ್ ಸಿಡಿಸಿದ ಜಡೇಜಾರ ವಿರೋಚಿತ ಹೋರಾಟ ವ್ಯರ್ಥವಾಯ್ತು. 27 ರನ್ಗಳ ಭರ್ಜರಿ ಗೆಲುವು ಸಾಧಿಸಿದ RCB ಪ್ಲೇ ಆಫ್ಗೆ ರಾಯಲ್ ಎಂಟ್ರಿ ಕೊಡ್ತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಸಿಕ್ಸರ್ ಸಿಡಿಸೋ ಬರದಲ್ಲಿ ವಿಕೆಟ್ ಒಪ್ಪಿಸಿದ ಎಂ.ಎಸ್ ಧೋನಿ
5 ಎಸೆತಗಳಲ್ಲಿ ಸಿಎಸ್ಕೆ ಕ್ವಾಲಿಫೈ ಆಗಲು 11 ರನ್ ಅಗತ್ಯವಿತ್ತು
ಪಂದ್ಯದಲ್ಲಿ ಜಡೇಜಾರ ವಿರೋಚಿತ ಹೋರಾಟ ವ್ಯರ್ಥ ಆಯಿತು
ಬ್ಯಾಟಿಂಗ್ ಮಾತ್ರವಲ್ಲ.. ಬೌಲಿಂಗ್ನಲ್ಲೂ ಆರ್ಸಿಬಿ ರಾಯಲ್ ಆಟವಾಡಿತು. ಬಲಿಷ್ಠ ಚೆನ್ನೈ ತಂಡವನ್ನ ತವರಿನಂಗಳದಲ್ಲಿ ಯಶಸ್ವಿಯಾಗಿ ಕಟ್ಟಿಹಾಕ್ತು. ರಣರೋಚಕ ಹಂತದಲ್ಲಿ ಜಿದ್ದಿಗೆ ಬಿದ್ದು ಹೋರಾಡಿ ಗೆದ್ದು ಬೀಗಿತು. ಆರ್ಸಿಬಿ ಬೌಲರ್ಸ್ VS CSK ಬ್ಯಾಟರ್ಸ್ ನಡುವಿನ ಕಾದಾಟ ಹೇಗಿತ್ತು?.
ಸವಾಲಿನ ಟಾರ್ಗೆಟ್ ನೀಡಿ ಡಿಫೆಂಡ್ ಮಾಡಿಕೊಳ್ಳಲು ಕಣಕ್ಕಿಳಿದ ಆರ್ಸಿಬಿ ಮೊದಲ ಎಸೆತದಿಂದಲೇ ದರ್ಬಾರ್ ನಡೆಸ್ತು. ಹೋಮ್ಗ್ರೌಂಡ್ನಲ್ಲಿ ಚೆನ್ನೈ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನ ಪುಡಿಗಟ್ಟಿತು. ಆರ್ಸಿಬಿಯ ಶಿಸ್ತಿನ ದಾಳಿಯ ಮುಂದೆ ಚೆನ್ನೈ ಸೂಪರ್ ಕಿಂಗ್ಸ್ ಪಡೆ ಮಕಾಡೆ ಮಲಗ್ತು.
ಇದನ್ನೂ ಓದಿ: ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?
ಮೊದಲ ಎಸೆತದಲ್ಲೇ ಕಮಾಲ್.. ಬಲೆಗೆ ಬಿದ್ದ ಋತುರಾಜ್.!
ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಎಡವಿತು. ಮೊದಲ ಎಸೆತದಲ್ಲೇ ಆರ್ಸಿಬಿ ಸಕ್ಸಸ್ನ ರುಚಿ ನೋಡಿತು. ಸಿಎಸ್ಕೆ ನಾಯಕ ಋತುರಾಜ್, ಮೊದಲ ಎಸೆತದಲ್ಲೇ ಮ್ಯಾಕ್ಸ್ವೆಲ್ ಸ್ಪಿನ್ ಮೋಡಿಗೆ ಬಲಿಯಾದ್ರು. ಋತುರಾಜ್ ಬೆನ್ನಲ್ಲೇ ಡ್ಯಾರಿಲ್ ಮಿಚೆಲ್ ಕೂಡ ಪೆವಿಲಿಯನ್ ಸೇರಿದ್ರು.
ಕುಸಿದ ಸಿಎಸ್ಕೆಗೆ ಬಲ ತುಂಬಿದ ರಹಾನೆ – ರವೀಂದ್ರ.!
19 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲೇ ಆಘಾತ ಎದುರಿಸಿತ್ತು. ಈ ವೇಳೆ ಕ್ರಿಸ್ನಲ್ಲಿ ಜೊತೆಯಾದ ರಚಿನ್ ರವೀಂದ್ರ, ಅಜಿಂಕ್ಯಾ ರಹಾನೆ ಸಾಲಿಡ್ ಜೊತೆಯಾಟವಾಡಿದ್ರು. 41 ಎಸೆತಗಳಲ್ಲಿ ಈ ಜೋಡಿ 66 ರನ್ ಕಲೆಹಾಕಿತು.
ರಹಾನೆ ಓಟಕ್ಕೆ ಬ್ರೇಕ್ ಹಾಕಿದ ಲಾಕಿ ಫರ್ಗ್ಯುಸನ್.!
ಸಾಲಿಡ್ ಫಾರ್ಮ್ನಲ್ಲಿ ಬ್ಯಾಟಿಂಗ್ ನಡೆಸ್ತಿದ್ದ ಅಜಿಂಕ್ಯಾ ರಹಾನೆ ಆಟಕ್ಕೆ ಲಾಕಿ ಫರ್ಗ್ಯುಸನ್ ಬ್ರೇಕ್ ಹಾಕಿದ್ರು. ರಹಾನೆ ಬೆನ್ನಲ್ಲೇ ರಚಿನ್ ರವೀಂದ್ರ, ರನೌಟ್ಗೆ ಬಲಿಯಾದ್ರು. ಇವರಿಬ್ಬರ ಪತನದೊಂದಿಗೆ ಚೆನ್ನೈನ ರನ್ಗಳಿಕೆಯ ವೇಗಕ್ಕೆ ಬ್ರೇಕ್ ಬಿತ್ತು. ಆರ್ಸಿಬಿ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.
ಚಿನ್ನಸ್ವಾಮಿಯಲ್ಲಿ ನಡೆಯದ ದುಬೆ ದರ್ಬಾರ್.!
ಚಿನ್ನಸ್ವಾಮಿ ಅಂಗಳದಲ್ಲಿ ಶಿವಂ ದುಬೆ ದರ್ಬಾರ್ ನಡೆಯಲೇ ಇಲ್ಲ. ಸ್ಪೋಟಕ ಬ್ಯಾಟರ್ ಆರ್ಸಿಬಿ ಬೌಲರ್ಸ್ ಅಬ್ಬರದ ಮುಂದೆ ಮಂಕಾದ್ರು. 15 ಎಸೆತಗಳಲ್ಲಿ 7 ರನ್ಗಳಿಸಿ ಔಟಾದ್ರು. ಇದೇ ಗೇಮ್ ಟರ್ನಿಂಗ್ ಪಾಯಿಂಟ್ ಆಯ್ತು. ದುಬೆ ಬೆನ್ನಲ್ಲೇ ಮಿಚೆಲ್ ಸ್ನಾಂಟ್ನೆರ್, ಕ್ಯಾಪ್ಟನ್ ಫಾಫ್ ಡುಪ್ಲೆಸಿ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದ್ರು.
ಧೋನಿ- ಜಡೇಜಾ ಜಬರ್ದಸ್ತ್ ಜುಗಲ್ಬಂದಿ.!
7ನೇ ವಿಕೆಟ್ಗೆ ಜೊತೆಯಾದ ಎಮ್.ಎಸ್ ಧೋನಿ, ರವೀಂದ್ರ ಜಡೇಜಾ ಸಂಕಷ್ಟದಲ್ಲಿದ್ದ ಸಿಎಸ್ಕೆ ತಂಡಕ್ಕೆ ನೆರವಾದ್ರು. ಆರ್ಸಿಬಿ ಬೌಲರ್ಸ್ಗಳ ಮೇಲೆ ಸವಾರಿ ನಡೆಸಿದ ಈ ಜೋಡಿ 27 ಎಸೆತಗಳಲ್ಲಿ 61 ರನ್ ಕಲೆ ಹಾಕಿದ್ರು. ಸಾಲಿಡ್ ಆಟವಾಡಿದ ಧೋನಿ 3 ಬೌಂಡರಿ, 1 ಸಿಕ್ಸರ್ ಸಿಡಿಸಿದ್ರು.
ಇದನ್ನೂ ಓದಿ: ವಿರುಷ್ಕಾ ದಂಪತಿ ಜೊತೆ ಫೋಟೋಗೆ ಪೋಸ್ ಕೊಟ್ಟ ಕನ್ನಡತಿ ಕ್ಯೂಟ್ ಶ್ರೇಯಾಂಕ ಪಾಟೀಲ್
ರಣರೋಚಕ ಹಂತದಲ್ಲಿ ಎಡವಿದ ಧೋನಿ..!
ಕೊನೆಯ ಓವರ್ನಲ್ಲಿ ಪಂದ್ಯ ರಣರೋಚಕ ಘಟ್ಟ ತಲುಪಿತ್ತು. ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಧೋನಿ ಘರ್ಜಿಸಿದ್ರು. 5 ಎಸೆತಗಳಲ್ಲಿ ಸಿಎಸ್ಕೆ ಕ್ವಾಲಿಫೈ ಆಗಲು 11 ರನ್ ಅಗತ್ಯವಿತ್ತು. ಈ ವೇಳೆ ಸಿಕ್ಸರ್ ಸಿಡಿಸೋ ಭರದಲ್ಲಿ ಧೋನಿ ಔಟಾದ್ರು. ಧೋನಿಯ ವಿಕೆಟ್ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಆಯ್ತು.
ರವೀಂದ್ರ ಜಡೇಜಾ ವಿರೋಚಿತ ಹೋರಾಟ ವ್ಯರ್ಥ.!
ಅಂತಿಮ ಓವರ್ನ ಕೊನೆಯ 4 ಎಸೆತಗಳಲ್ಲಿ ಕೇವಲ ಒಂದು ರನ್ ಮಾತ್ರಗಳಿಸಿದ ಸಿಎಸ್ಕೆ, ಪ್ಲೇ ಆಫ್ ರೇಸ್ನಿಂದ ಹೊರಬಿತ್ತು. 7 ವಿಕೆಟ್ ನಷ್ಟಕ್ಕೆ 191 ರನ್ಗಳಿಗೆ ಸಿಎಸ್ಕೆ ಆಟ ಅಂತ್ಯವಾಯ್ತು. ಅಜೇಯ 42 ರನ್ ಸಿಡಿಸಿದ ಜಡೇಜಾರ ವಿರೋಚಿತ ಹೋರಾಟ ವ್ಯರ್ಥವಾಯ್ತು. 27 ರನ್ಗಳ ಭರ್ಜರಿ ಗೆಲುವು ಸಾಧಿಸಿದ RCB ಪ್ಲೇ ಆಫ್ಗೆ ರಾಯಲ್ ಎಂಟ್ರಿ ಕೊಡ್ತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ