/newsfirstlive-kannada/media/post_attachments/wp-content/uploads/2025/04/DHONI_KOHLI.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಕಾದಾಟ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಸೋಲಿಸಿದರೆ ಆರ್​​ಸಿಬಿ ಫ್ಯಾನ್ಸ್​ ಹಿರಿ ಹಿರಿ ಹಿಗ್ಗಿ ಬಿಡುತ್ತಾರೆ. ಮರುದಿನ ಪೂರ್ತಿ ಸೋಶಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ವಾರ್​ ಮುಗಿಲು ಮುಟ್ಟಿರುತ್ತೆ. ಇಂತಹ ಹೈವೋಲ್ಟೇಜ್​ ಪಂದ್ಯದ ಮೊದಲ ಹಂತದ ಟಿಕೆಟ್​ ಈಗಾಗಲೇ ಸೋಲ್ಡ್​ಔಟ್ ಆಗಿವೆ ಎಂದು ಹೇಳಲಾಗುತ್ತಿದೆ.
ರಜತ್ ಪಾಟಿದಾರ್ ನೇತೃತ್ವದ ಆರ್​ಸಿಬಿ ಹಾಗೂ ಎಂ.ಎಸ್​ ಧೋನಿ ನಾಯಕತ್ವದ ಚೆನ್ನೈ ತಂಡದ ನಡುವಿನ ರಣರೋಚಕ ಪಂದ್ಯ ಮುಂದಿನ ತಿಂಗಳು ಅಂದರೇ, ಮೇ 3 ರಂದು ನಡೆಯಲಿದೆ. ಈ ಪಂದ್ಯ ಬೇರೆ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇರುವುದರಿಂದ ಆರ್​ಸಿಬಿಗೆ ಪ್ರತಿಷ್ಠೆ ಆಗಿರುತ್ತದೆ. ಏಕೆಂದರೆ ತವರಲ್ಲಿ ಚೆನ್ನೈಯನ್ನು ಸೋಲಿಸಿ ವಾಪಸ್​ ಕಳುಹಿಸಬೇಕು ಎನ್ನುವುದು ಅಭಿಮಾನಿಗಳ ಮಹಾದಾಸೆ. ಇದರಿಂದ ಈ ಪಂದ್ಯ ಆರ್​ಸಿಬಿಗೆ ಪ್ರತಿಷ್ಠೆಯ ಗರಿ ಎಂದು ಹೇಳಬಹುದು.
17 ವರ್ಷದ ಬಳಿಕ ಎಂ.ಎ ಚಿದಂಬರಂ ಪಿಚ್​ನಲ್ಲೇ ಚೆನ್ನೈ ತಂಡವನ್ನು ಆರ್​ಸಿಬಿ 50 ರನ್​ಗಳಿಂದ ಮಣಿಸಿ ವಿಜಯ ಪತಾಕೆ ಹಾರಿಸಿದೆ. ಅದರಂತೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದರೆ ಅಭಿಮಾನಿಗಳಿಗೆ ಆಗುವ ಸಂತಸ ಮತ್ತೊಂದು ಇರುವುದಿಲ್ಲ. ತವರಿನಲ್ಲಿ ಈಗಾಗಲೇ ಎರಡು ಪಂದ್ಯಗಳನ್ನ ಸೋತಿರುವ ಆರ್​ಸಿಬಿ ಗೆಲುವಿನ ಖಾತೆ ತೆರೆಯಬೇಕಿದೆ.
ಇದನ್ನೂ ಓದಿ: ನೀರಜ್ ಚೋಪ್ರಾ ಮತ್ತೆ ಪರಾಕ್ರಮ.. ಭರ್ಜರಿ ಚಿನ್ನದ ಬೇಟೆ! ಈ ಬಾರಿ ಎಷ್ಟು ಮೀಟರ್​ ಜಾವೆಲಿನ್ ಎಸೆದ್ರು?
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಅಂದರೆ ಏಪ್ರಿಲ್ 18 ರಂದು ಪಂಜಾಬ್​ ಜೊತೆ, ಏಪ್ರಿಲ್ 24 ರಂದು ರಾಜಸ್ಥಾನ್​ ಜೊತೆ ಹಾಗೂ ಮೇ 3 ರಂದು ಚೆನ್ನೈ ವಿರುದ್ಧ ಆರ್​ಸಿಬಿ ಕಾದಾಡಲಿದೆ. ಈ ಮೂರು ಪಂದ್ಯಗಳಲ್ಲಿ ಚೆನ್ನೈ ವಿರುದ್ಧದ ಪಂದ್ಯವೇ ಅತ್ಯಂತ ಮುಖ್ಯವಾಗಿದೆ. ಆರ್​ಸಿಬಿ ಜೊತೆ ತವರಿನಲ್ಲಿ ಅವಮಾನಕ್ಕೆ ಒಳಗಾದ ಚೆನ್ನೈ ಆ ಸೇಡನ್ನು ತೀರಿಸುಕೊಳ್ಳಲು ಬರುತ್ತಿದೆ. ಇದಕ್ಕೆ ರಜತ್ ಪಡೆ ಮತ್ತೊಮ್ಮೆ ಸರಿಯಾದ ಉತ್ತರ ಕೊಡಬೇಕಿದೆ.
ಇನ್ನು ಚೆನ್ನೈ ತಂಡದ ಜೊತೆ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಐಪಿಎಲ್ ಟಿಕೆಟ್​ಗಳನ್ನ ನೀಡಲಾಗುತ್ತಿದೆ. ಆದರೆ ಮೊದಲ ಹಂತದ ಟಿಕೆಟ್​ಗಳೆಲ್ಲಾ ಸೋಲ್ಡ್​ ಆಗಿವೆ ಎನ್ನಲಾಗುತ್ತಿದೆ. ಟಿಕೆಟ್​ಗಳನ್ನ ಪಡೆದಿರುವ ಅಭಿಮಾನಿಗಳೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ನನಗೂ ಟಿಕೆಟ್​ ಸಿಕ್ಕಿವೆ ಎಂದು ಕಾಮೆಂಟ್ ಮಾಡುತ್ತಿರುವುದು ಕುತೂಹಲವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ