RCB ಫ್ಯಾನ್ಸ್​​ಗೆ ಗುಡ್​ನ್ಯೂಸ್,​ ಭಯ ಬೇಡ.. ಮಳೆ ಬಂದ್ರು ಚಿನ್ನಸ್ವಾಮಿಯಲ್ಲಿದೆ ಈ ಅತ್ಯುನ್ನತ ತಂತ್ರಜ್ಞಾನ; ಏನದು?

author-image
Bheemappa
Updated On
ರಿಟೈನ್​ ಬೆನ್ನಲ್ಲೇ ವಿರಾಟ್ ಭರವಸೆಯ ಮಾತು! ಅಭಿಮಾನಿಗಳ ಅಭಿಮಾನ ಹೆಜ್ಜಿಸಿದ ಕೊಹ್ಲಿ ನುಡಿ
Advertisment
  • ಚಿನ್ನಸ್ವಾಮಿ ಮೈದಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಟ ಮೈದಾನ ಎನ್ನಲಾಗಿದೆ
  • ಬೆಂಗಳೂರಿನಲ್ಲಿ ನಡೆಯುವಂಥ ಪಂದ್ಯಕ್ಕೆ ಮಳೆಯ ಕಾಟದ ಮುನ್ಸೂಚನೆ
  • ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ-ಸಿಎಸ್​ಕೆ ಐಪಿಎಲ್ ಪಂದ್ಯ

ಆರ್​ಸಿಬಿ ಪ್ಲೇ ಆಫ್​ಗೆ ಹೋಗಬೇಕು ಅಂದರೆ ಚೆನ್ನೈ ವಿರುದ್ಧದ ಪಂದ್ಯ ನಿರ್ಣಾಯಕವಾಗಿದೆ. ಸದ್ಯ ಆರ್​​ಸಿಬಿ 13 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 12 ಅಂಕ ಪಡೆದು 6ನೇ ಸ್ಥಾನದಲ್ಲಿದೆ. ಸತತ 5 ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಪ್ಲೇಆಫ್ ರೇಸ್​ನಲ್ಲಿದೆ. ಆರ್​ಸಿಬಿ ಮತ್ತು ಚೆನ್ನೈ ನಡುವೆ ಪ್ಲೇ ಆಫ್​ ಡಿಸೈಡರ್ ಪಂದ್ಯ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಈ ಮೈದಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಮೈದಾನವಾಗಿದೆ ಎನ್ನಲಾಗಿದೆ.

publive-image

ಬೆಂಗಳೂರು ಮತ್ತು ಚೆನ್ನೈ ಈ ಎರಡರಲ್ಲಿ ಯಾರು ಪ್ಲೇ ಆಫ್​ಗೆ ಹೋಗ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದ್ದು ಅಭಿಮಾನಿಗಳಂತೂ ಈ ಪಂದ್ಯಕ್ಕಾಗಿ ಕಾದು ಕುಳಿತ್ತಿದ್ದಾರೆ. ಒಂದು ವೇಳೆ ಪಂದ್ಯ ನಡೆಯುವಾಗ ಮಳೆ ಬಂದರೆ ಹೇಗೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆದರೆ ಎಂಥಾ ಮಳೆ ಬಂದರೂ ಎಂ.ಚಿನ್ನಸ್ವಾಮಿ ಸ್ಟೇಡಿಯಂ ತಡೆದುಕೊಳ್ಳುವಂತ ಮೈದಾನವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯುತ್ತಮವಾದ ಒಳಚರಂಡಿ ವ್ಯವಸ್ಥೆ ಇದೆ.

ನಾಳೆ ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮಳೆ ಬರುವ ಮುನ್ಸೂಚನೆ ಇದೆ ಎಂದು ಹೇಳಲಾಗುತ್ತಿದೆ. ಆದ್ರೆ ಧಾರಾಕಾರ ಮಳೆ ಬಂದರೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಬ್ ಏರ್ ಡ್ರೈನೇಜ್ ವ್ಯವಸ್ಥೆ ಇದೆ. ಇನ್ನು ಮಳೆ ಸುರಿದರು ಮೈದಾನ ಬೇಗ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಮಳೆಯಿಂದ ಪ್ಲೇ ಆಫ್ ಪಂದ್ಯಕ್ಕೆ ಆದಷ್ಟು ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ. ಬಂದ ನೀರು ಬಂದಾಗೆ ಸಬ್ ಏರ್ ಡ್ರೈನೇಜ್ ವ್ಯವಸ್ಥೆ ಮೂಲಕ ಹೊರ ಹೋದರೆ ಮ್ಯಾಚ್​ಗೆ ಯಾವುದೇ ಅಡ್ಡಿಯಾಗಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment