/newsfirstlive-kannada/media/post_attachments/wp-content/uploads/2024/11/Manoj.jpg)
ಐಪಿಎಲ್ನಲ್ಲಿ ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವೆ ಫೈಟ್ ನಡೆಯಲಿದೆ. ವಿಶೇಷ ಅಂದರೆ ನಾಳಿನ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ.
ಸಂಜೆ 7.30ಕ್ಕೆ ಆರಂಭವಾಗುವ ಹೈ-ವೋಲ್ಟೇಜ್ ಪಂದ್ಯದ ಮೇಲೆ ಆರ್ಸಿಬಿ ಅಭಿಮಾನಿಗಳು ದೊಡ್ಡ ನಿರೀಕ್ಷೆಗಳನ್ನು ಇಟ್ಕೊಂಡಿದ್ದಾರೆ. ಕನ್ನಡಿಗ ಮನೋಜ್ ಭಾಂಡಗೆ ಫ್ರಾಂಚೈಸಿ ಪ್ಲೇಯಿಂಗ್-11ನಲ್ಲಿ ಚಾನ್ಸ್ ನೀಡುತ್ತಾ ಎಂಬ ಕುತೂಹಲದಲ್ಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಾಳೆಯೇ RCB ಪಂದ್ಯ; ಟಿಕೆಟ್ ಬೇಕು ಅಂದ್ರೆ ಏನು ಮಾಡಬೇಕು..?
ಮನೋಜ್ ಭಾಂಡಗೆ ಕರ್ನಾಟಕದ ಪ್ರತಿಭಾನ್ವಿತ ಆಲ್ರೌಂಡರ್. ಮಹಾರಾಜ ಟ್ರೋಫಿಯಲ್ಲಿ ಇವರು ನೀಡಿದ ಅಮೋಘ ಪ್ರದರ್ಶನ ಆರ್ಸಿಬಿ ಗಮನ ಸೆಳೆದಿತ್ತು. ಮೆಗಾ ಹರಾಜಿನಲ್ಲಿ ಬೇಸ್ ಪ್ರೈಸ್ 30 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದೆ.
2024ರ ಮಹಾರಾಜ ಟ್ರೋಫಿಯಲ್ಲಿ Mysuru Warriors ಪರ ಆಡಿದ್ದಾರೆ. ಮಿಡಲ್ ಆರ್ಡರ್ನಲ್ಲಿ ಬ್ಯಾಟಿಂಗ್ಗೆ ಇಳಿದಿದ್ದ ಇವರು ಉತ್ತಮ ಸ್ಕೋರ್ ಮಾಡಿದ್ದರು. ಜೊತೆಗೆ ಕಠಿಣ ಪರಿಸ್ಥಿತಿಯಲ್ಲೂ ವಿಕೆಟ್ ಕೀಳುವಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಕೇವಲ 13 ಬಾಲ್ನಲ್ಲಿ 44 ರನ್ ಚಚ್ಚವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. 2024ರ ಮಹಾರಾಜ ಟ್ರೋಫಿಯಲ್ಲಿ 213 ಸ್ಟ್ರೈಕ್ರೇಟ್ನಲ್ಲಿ ಆಡಿರುವ ಅವರು 292 ರನ್ ಗಳಿಸಿದ್ದರು. ಅಲ್ಲದೇ 8 ವಿಕೆಟ್ ಪಡೆದುಕೊಂಡಿದ್ದರು. ಆ ಮೂಲಕವೇ ಆರ್ಸಿಬಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ನಾಳೆ ನಡೆಯುವ ಪಂದ್ಯದಲ್ಲಿ ರಾಯಚೂರಿನ ಹುಡುಗನಿಗೆ ಚಾನ್ಸ್ ಸಿಕ್ಕರೂ ಸಿಗಬಹುದು.
ಸದ್ಯ ಆರ್ಸಿಬಿ ಗೆಲುವಿನ ಓಟದಲ್ಲಿದೆ. ಯಾವುದೇ ಆಟಗಾರರಿಂದ ಲೋಪಗಳು ಕಂಡುಬಂದಿಲ್ಲ. ಪ್ರತಿಯೊಬ್ಬರೂ ಉತ್ತಮವಾಗಿ ಆಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ತಂಡದ ಮ್ಯಾನೇಜ್ಮೆಂಟ್ ಪ್ಲೇಯಿಂಗ್-11ನಲ್ಲಿ ಯಾವುದೇ ಬದಲಾವಣೆಗಳನ್ನ ಮಾಡಿ ರಿಸ್ಕ್ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿ ಇದ್ದಂತೆ ಕಾಣ್ತಿಲ್ಲ.
ಇದನ್ನೂ ಓದಿ: ಮತ್ತೆ CSK ಸೋಲಿಸಿದ ಆರ್ಸಿಬಿ.. ಆಫ್ ದಿ ಫೀಲ್ಡ್ನಲ್ಲೂ ಬೆಂಗಳೂರೇ ನಂಬರ್ ಒನ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್