/newsfirstlive-kannada/media/post_attachments/wp-content/uploads/2025/04/Rajat-1.jpg)
ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮತ್ತೆ ಆರ್ಸಿಬಿ ಸೋತಿದೆ. ಸತತ ಮೂರು ಪಂದ್ಯಗಳನ್ನು ತವರಿನಲ್ಲೇ ಸೋತು ಸುಣ್ಣವಾಗಿರುವ ಆರ್ಸಿಬಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಆರ್ಸಿಬಿ ಸೋಲಿಗೆ 6 ಕಾರಣಗಳು..!
- ಕಾರಣ 1, ಮಳೆ: ಮೊದಲ ಕಾರಣ ಮಳೆ. ಪಂದ್ಯ ಆರಂಭವಾಗುವ ಹೊತ್ತಿಗೆ ಚಿನ್ನಸ್ವಾಮಿ ಸುತ್ತಮತ್ತ ಮಳೆ ಬಂದಿತ್ತು. ಪರಿಣಾಮ ಪಂದ್ಯ ಆರಂಭವಾಗೋದು ತುಂಬಾ ಲೇಟ್ ಆಯಿತು. ಅಲ್ಲದೇ ಪಂದ್ಯದ ಓವರ್ಗಳು ಕೂಡ ಕಡಿತ ಮಾಡಲಾಯಿತು. ಜೊತೆಗೆ ಮಳೆಯಿಂದ ಮೈದಾನದ ಪರಿಸ್ಥಿತಿಯೂ ಉತ್ತಮ ಆಗಿರಲಿಲ್ಲ.
- ಕಾರಣ 2, ಟಾಸ್: ಟಾಸ್ ಗೆದ್ದ ಪಂಜಾಬ್ ಕ್ಯಾಪ್ಟನ್, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಒಂದು ವೇಳೆ ರಜತ್ ಟಾಸ್ ಗೆದ್ದಿದ್ದರೆ, ಆರ್ಸಿಬಿ ಆಯ್ಕೆ ಕೂಡ ಇದೇ ಆಗಿರುತ್ತಿತ್ತು. ಚಿನ್ನಸ್ವಾಮಿಯಲ್ಲಿ ಟಾಸ್ ಗೆದ್ದವನೇ ಬಾಸು ಅನ್ನೋ ಮಾತಿದೆ.
- ಕಾರಣ 3, ಕೊಹ್ಲಿ: ಚಿನ್ನಸ್ವಾಮಿಯಲ್ಲಿ ಕೊಹ್ಲಿಯ ಕಳಪೆ ಫಾರ್ಮ್ ಮುಂದುವರಿದಿದೆ. ನಿನ್ನೆಯ ದಿನ 3 ಬಾಲ್ ಎದುರಿಸಿ ಒಂದು ರನ್ ಗಳಿಸಿರೋದು ತಂಡಕ್ಕೆ ಪ್ರಮುಖ ಹಿನ್ನಡೆ ಆಯಿತು. ಕೊಹ್ಲಿ ಕಡೆಯಿಂದ ಬಿಗ್ ಸ್ಕೋರ್ ಬಂದಿದ್ದರೆ, ಆರ್ಸಿಬಿ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿರುತ್ತಿತ್ತು.
- ಕಾರಣ 4, ಪಾಂಡ್ಯ: ಕೃನಾಲ್ ಪಾಂಡ್ಯ ತಮ್ಮ ಕಳಪೆ ಫಾರ್ಮ್ ಚಿನ್ನಸ್ವಾಮಿಯಲ್ಲೂ ಮುಂದುವರಿಸಿದರು. ಇಲ್ಲಿಯವರೆಗೆ 7 ಪಂದ್ಯ ಆಡಿರುವ ಕೃನಾಲ್, ಬ್ಯಾಟ್ನಿಂದ ರನ್ ಬಂದೇ ಇಲ್ಲ. ಇನ್ನು, ನಿನ್ನೆಯ ದಿನ ಬೌಲಿಂಗ್ನಲ್ಲೂ ದುಬಾರಿಯಾದರು. ಒಂದು ಓವರ್ ಮಾಡಿ 10 ರನ್ ನೀಡಿದರು.
- ಕಾರಣ 5, ಲಿವಿಂಗ್ಸ್ಟೋನ್: ಆರ್ಸಿಬಿ ಭರವಸೆಯ ಬ್ಯಾಟ್ಸಮನ್ ಆಗಿದ್ದ ಲಿವಿಂಗ್ ಸ್ಟೋನ್ ನಿನ್ನೆಯ ದಿನ ಫೇಲ್ ಆದರು. 6 ಬಾಲ್ ಎದುರಿಸಿ ಕೇವಲ 4 ರನ್ಗಳಿಗೆ ಶರಣಾದರು. ಇದು ತಂಡಕ್ಕೆ ದೊಡ್ಡ ಹಿನ್ನಡೆ ಆಯಿತು.
- ಕಾರಣ 6, ದಯಾಳ್: ಆರ್ಸಿಬಿ ಬೌಲಿಂಗ್ ವಿಭಾಗ ತುಂಬಾನೇ ಸ್ಟ್ರಾಂಗ್ ಇದೆ, ನಿಜ. ಆದರೆ ನಿನ್ನೆಯ ದಿನ ದಯಾಳ್ ಅವರ ಕೊಡುಗೆ ಏನೂ ಇಲ್ಲ. ಒಂದು ಕ್ಯಾಚ್ ಕೈಚೆಲ್ಲಿದರು. ಜೊತೆಗೆ 2.1 ಓವರ್ ಎಸೆದು ಯಾವುದೇ ವಿಕೆಟ್ ಪಡೆಯದೇ 18 ರನ್ಗಳನ್ನು ಬಿಟ್ಟುಕೊಟ್ಟರು.
- ಕಾರಣ 7, ಜಿತೇಶ್ ಶರ್ಮಾ: ವಿಕೆಟ್ ಕೀಪರ್ ಆಗಿರುವ ಜಿತೇಶ್ ಶರ್ಮಾ, ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರು. ಆದರೆ, ಕೇವಲ 2 ರನ್ಗಳಿಸಿ ನಿರಾಸೆ ಮೂಡಿಸಿದರು.
ಕಾರಣ 8, ಸಾಲ್ಟ್:ಪ್ರತಿ ಪಂದ್ಯದಲ್ಲೂ ಸಿಹಿ ಆಗಿರುತ್ತಿದ್ದ ಸಾಲ್ಟ್ ನಿನ್ನೆ ಆರ್ಸಿಬಿ ಪಾಲಿಗೆ ಕಹಿ ಆದರು. ನಾಲ್ಕು ಬಾಲ್ ಎದುರಿಸಿ ನಾಲ್ಕು ರನ್ಗಳಿಸಿ ಬೇಗ ಔಟ್ ಆದರು.
ಇದನ್ನೂ ಓದಿ: ಕೊಹ್ಲಿ ಔಟ್ ಆಗಿರುವ ಹಿಂದೆ ಕಾಕತಾಳಿಯ.. 18 ವರ್ಷದ ಹಿಂದಿನ ಇದೇ ದಿನ ಮತ್ತೆ ರಿಪೀಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್