ಪಂಜಾಬ್​ನ ತ್ರಿಮೂರ್ತಿಗಳಿಗೆ ಆರ್​ಸಿಬಿಯಿಂದ ತ್ರಿವಳಿ ಅಸ್ತ್ರ.. ಇದು ಭಯಂಕರ ಡೇಂಜರ್..!

author-image
Ganesh
Updated On
PBKS ಆರ್​ಸಿಬಿಗೂ ಕಂಟಕ.. ಎಲ್ಲೋ ಇದ್ದ ಪಂಜಾಬ್ ಹಣೆಬರಹ ಬದಲಾಯಿಸಿದ್ದು ಇವರೇ..!
Advertisment
  • ಆರ್​ಸಿಬಿ ಟಾರ್ಗೆಟ್ ಯಾರು..? ಗೆಲುವಿಗೆ ತಂತ್ರವೇನು?
  • ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯ
  • ಆ ಮೂವರು ಬ್ಯಾಟರ್​ಗಳ ಮೇಲೆ ಆರ್​ಸಿಬಿ ಕಣ್ಣೇಕೆ?

ರಾಯಲ್ ಚಾಲೆಂಜರ್ಸ್​ ಬೆಂಗಳೂರು, ಪಂಜಾಬ್ ಕಿಂಗ್ಸ್ ಬ್ಯಾಟಲ್​ಗೆ ಕೌಂಟ್​ಡೌನ್​​ ಶುರುವಾಗಿದೆ. ಚಿನ್ನಸ್ವಾಮಿ ಬ್ಯಾಟಲ್​ ಗ್ರೌಂಡ್​ನಲ್ಲಿ ಮುಖಾಮುಖಿಯಾಗ್ತಿರುವ ಉಭಯ ತಂಡಗಳ ಫೈಟ್​​ ಭಾರೀ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ತವರಿನಲ್ಲಿ ಅಡ್ತಿರೋ 3ನೇ ಪಂದ್ಯವನ್ನಾದರೂ ಗೆಲ್ಲೋಕೆ ಪಣ ತೊಟ್ಟಿರುವ ಆರ್​ಸಿಬಿಗೆ ಪಂಜಾಬ್ ಕಿಂಗ್ಸ್ ಎದುರು ಟಫ್​​ ಟಾಸ್ಕ್​ ಎದುರಾಗಲಿದೆ. ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರೋ ಪಂಜಾಬ್​​ಗೆ ಪಂಚ್​​ ಕೊಡಬೇಕಂದ್ರೆ ಮೊದಲು ಪಂಜಾಬ್​ ಪವರ್​ ಕಟ್​​ ಮಾಡಬೇಕಿದೆ.

ಯಂಗ್​​ ಲೆಫ್ಟಿ ಬ್ಯಾಟರ್ ಪ್ರಿಯಾಂಶ್​, ಮೊದಲ ಬಾಲ್​ನಿಂದಲೇ ಬೌಲರ್​ಗಳ ಮೇಲೆ ದಂಡಯಾತ್ರೆ ನಡೆಸ್ತಾರೆ. ಪ್ರಭು ಸಿಮ್ರನ್ ಸಿಂಗ್ ಪವರ್​ ಪ್ಲೇನಲ್ಲಿ ಡೇಂಜರಸ್ ಬ್ಯಾಟರ್​. ಪೀಲ್ಡರ್ಸ್​​ 30 ಯಾರ್ಡ್​ ಸರ್ಕಲ್​ ಒಳಗಿದ್ದಾಗ ನಿರಾಯಾಸವಾಗಿ ಬೌಂಡರಿ ಬಾರಿಸೋ ಚಾಣಾಕ್ಷ ಇವರಲ್ಲಿದೆ. ಇನ್ನು ಕ್ಯಾಪ್ಟನ್​​ ಶ್ರೇಯಸ್ ಅಯ್ಯರ್ ಪಂಜಾಬ್​ ಕಿಂಗ್ಸ್​ನ ಮಿಡಲ್​​ ಆರ್ಡರ್​​ ಪವರ್​. ಓಪನರ್ಸ್ ಫೇಲಾದ್ರೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯೋ ಶ್ರೇಯಸ್​ ತಂಡಕ್ಕೆ ಆಸರೆಯಾಗ್ತಿದ್ದಾರೆ. ಹೀಗಾಗಿ ಆರ್​ಸಿಬಿ ಪ್ಲೇಯರ್​, ಈ ಮೂವರು ಬ್ಯಾಟರ್​​ಗಳ ಮೇಲೆ ಕಣ್ಣಿಟ್ಟಿದ್ದಾರೆ.

ಇದನ್ನೂ ಓದಿ: ಅಂಪೈರ್​​ಗಳಿಗೆ ಡೌಟ್ ಬಂದ್ರೆ ದಿಢೀರ್ ತಪಾಸಣೆ.. ಐಪಿಎಲ್​ನಲ್ಲಿ ಯಾಕೆ ಬ್ಯಾಟ್​ ಚೆಕ್ ಮಾಡ್ತಿದ್ದಾರೆ?

publive-image

ತ್ರಿಮೂರ್ತಿಗಳಿಗೆ ಬ್ರೇಕ್​ ಹಾಕಲು ತ್ರಿವಳಿ ಅಸ್ತ್ರ ರೆಡಿ..!

ಈ ತ್ರಿಮೂರ್ತಿಗಳೇ ಪಂಜಾಬ್ ತಂಡದ ಬ್ಯಾಟಿಂಗ್​ ಶಕ್ತಿಗಳು ಅನ್ನೋದು ಓಪನ್ ಸಿಕ್ರೇಟ್. ಈ ತ್ರಿಮೂರ್ತಿಗಳ ಆಟಕ್ಕೆ ಬ್ರೇಕ್ ಹಾಕೋ ಜವಾಬ್ದಾರಿ ಇದೀಗ ಆರ್​ಸಿಬಿಯ ತ್ರಿವಳಿಗಳ ಮುಂದಿದೆ. ಪವರ್​ ಪ್ಲೇನಲ್ಲೇ ಆಸಿಸ್ ಗನ್ ಜೋಶ್ ಹೇಜಲ್​​ವುಡ್, ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್​, ಯಶ್​ ದಯಾಳ್​ ಮಾಸ್ಟರ್ ಪ್ಲಾನ್ ರೂಪಿಸಿ ಖೆಡ್ಡಾಗೆ ಬೀಳಿಸಬೇಕಿದೆ.

ಭುವನೇಶ್ವರ್​ ಪರ್ಫೆಕ್ಟ್​ ಆಗಿ ಸ್ವಿಂಗ್​ ಅಸ್ತ್ರ ಪ್ರಯೋಗಿಸಿದ್ರೆ ಆರಂಭಿಕರ ವಿಕೆಟ್​ ಎಗರಿಸಬಹುದು. ಜೋಶ್ ಹೇಜಲ್​ವುಡ್ ಬೌನ್ಸರ್​​ ಟ್ರೈ ಮಾಡಿದ್ರೆ, ಶಾರ್ಟ್​ ಪಿಚ್ ಎಸೆತಗಳಿಗೆ ತಡಕಾಡುವ ಶ್ರೇಯಸ್​​ನ ಪೆವಿಲಿಯನ್​​ಗೆ ಕಳಿಸಬಹುದು. ಲೆಫ್ಟ್​ ಆರ್ಮ್​ ಪೇಸರ್ ಯಶ್​​ ದಯಾಳ್​ ಸ್ಲೋ ಕಟರ್​​ ಅಸ್ತ್ರವನ್ನ ಸರಿಯಾಗಿ ಪ್ರಯೋಗಿಸಿದ್ರೆ ವಿಕೆಟ್​​ ಬೇಟೆ ಕಷ್ಟವೇನಿಲ್ಲ.

ಇದನ್ನೂ ಓದಿ: ಅಂಪೈರ್​​ಗಳಿಗೆ ಡೌಟ್ ಬಂದ್ರೆ ದಿಢೀರ್ ತಪಾಸಣೆ.. ಐಪಿಎಲ್​ನಲ್ಲಿ ಯಾಕೆ ಬ್ಯಾಟ್​ ಚೆಕ್ ಮಾಡ್ತಿದ್ದಾರೆ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment