/newsfirstlive-kannada/media/post_attachments/wp-content/uploads/2025/05/RCB-26.jpg)
ಕ್ವಾಲಿಫೈಯರ್ ಕದನದಲ್ಲಿ ಆರ್ಸಿಬಿ ಬೌಲರ್ಗಳು ನಿಜಕ್ಕೂ ಬೊಂಬಾಟ್ ಪ್ರದರ್ಶನ ನೀಡಿದ್ರು. ರಣಬೇಟೆಗಾರ ಹೇಜಲ್ವುಡ್ ಎಂಟ್ರಿಯಿಂದಾಗಿ ಇಡೀ ಆರ್ಸಿಬಿ ಬೌಲಿಂಗ್ ಅಟ್ಯಾಕ್ನ ಜೋಷ್ ನೆಕ್ಸ್ಟ್ ಲೆವೆಲ್ನಲ್ಲಿತ್ತು. ಆರ್ಸಿಬಿಯ ರಾಯಲ್ ಬೌಲಿಂಗ್ಗೆ ಪಂಜಾಬ್ ಪಡೆ ಪತರುಗುಟ್ಟಿ ಹೋಯ್ತು.
ಲೀಗ್ಸ್ಟೇಜ್ನಲ್ಲಿ ಕೊನೆಯ ಪಂದ್ಯದಲ್ಲಿ ದುಬಾರಿಯಾಗಿದ್ದ ಆರ್ಸಿಬಿ ಬೌಲರ್ಸ್ ನಿನ್ನೆ ಬೊಂಬಾಟ್ ಪರ್ಫಾಮೆನ್ಸ್ ನೀಡಿದ್ರು, ನಿಜಕ್ಕೂ ಮುಲ್ಲನ್ಪುರದಲ್ಲಿ ಆರ್ಸಿಬಿ ಬೌಲಿಂಗ್ ಅಟ್ಯಾಕ್ ಫುಲ್ ಜೋಷ್ನಲ್ಲಿತ್ತು. ಅದೇನು ಪ್ಲಾನಿಂಗ್, ಅದೇನು ಅಕ್ಯೂರೆಸಿ.. ಆರ್ಸಿಬಿಯ ಘರ್ಜನೆಯ ಮುಂದೆ ಪಂಜಾಬ್ನ ಶೇರ್ಗಳೆಲ್ಲಾ ಬೋನು ಸೇರಿದ್ವು.
ಇದನ್ನೂ ಓದಿ: BREAKING: ಹಿರಿಯ ಸಾಹಿತಿ ಹೆಚ್.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ
RCB ಬೌಲಿಂಗ್ ಅಟ್ಯಾಕ್ಗೆ ‘ಜೋಷ್’ ತಂದ ಹೇಜಲ್‘ಗಾಡ್
ಅಸಂಖ್ಯ ಆರ್ಸಿಬಿ ಅಭಿಮಾನಿಗಳ ಪ್ರಾರ್ಥನೆ ನಿನ್ನೆಯ ಪಂದ್ಯಕ್ಕೂ ಮುನ್ನವೇ ಫಲಿಸಿತು. ಫಿಟ್ನೆಸ್ ಸಮಸ್ಯೆಯಿಂದಾಗಿ ಕಳೆದ ಕೆಲ ಪಂದ್ಯಕ್ಕೆ ಆಸಿಸ್ ವೇಗಿ ಜೋಷ್ ಹೇಜಲ್ವುಡ್ ಅಲಭ್ಯರಾಗಿದ್ರು. ಹೇಜಲ್ವುಡ್ ಅಲಭ್ಯತೆಯಿಂದಾಗಿ ಇಡೀ ಬೌಲಿಂಗ್ ಲೈನ್ಅಪ್ ಹಳಿ ತಪ್ಪಿತ್ತು. ಆದ್ರೆ ನಿನ್ನೆ ಆಸಿಸ್ ವೇಗಿಯ ಕಮ್ಬ್ಯಾಕ್ ಇಡೀ ಬೌಲಿಂಗ್ ಪಡೆಗೇ ಜೋಷ್ ತಂದು ಬಿಡ್ತು.
ಹೇಜಲ್ವುಡ್ ಆರ್ಭಟಕ್ಕೆ ಹೌಹಾರಿದ ಪಂಜಾಬ್
ಕಮ್ಬ್ಯಾಕ್ ಪಂದ್ಯದಲ್ಲೇ ಜೋಷ್ ಹೇಜಲ್ವುಡ್ ಭರ್ಜರಿ ಬೌಲಿಂಗ್ ಮಾಡಿದ್ರು. ಹೇಜಲ್ವುಡ್ ಆರ್ಭಟಕ್ಕೆ ಪಂಜಾಬ್ ಪಡೆ ಹೌಹಾರಿಬಿಡ್ತು. ಫಸ್ಟ್ ಓವರ್ನ 4ನೇ ಎಸೆತದಲ್ಲೇ ಶ್ರೇಯಸ್ ಅಯ್ಯರ್ ವಿಕೆಟ್ ಬೇಟೆಯಾಡಿದ ಹೇಜಲ್ವುಡ್, ನೆಕ್ಸ್ಟ್ ಓವರ್ ಜೋಸ್ ಇಂಗ್ಲಿಸ್ ವಿಕೆಟ್ ಉರುಳಿಸಿದ್ರು. ಸೆಕೆಂಡ್ ಸ್ಪೆಲ್ನ ಫಸ್ಟ್ ಬಾಲ್ನಲ್ಲಿ ಅಝಮತುಲ್ಲಾ ಜಝಾಯಿ ವಿಕೆಟ್ ಉರುಳಿಸಿ ಪಂಜಾಬ್ ಆಟಕ್ಕೆ ಫುಲ್ ಸ್ಟಾಫ್ ಇಟ್ರು. ಜಸ್ಟ್ 21 ರನ್ ಬಿಟ್ಟು ಕೊಟ್ಟ ಹೇಜಲ್ವುಡ್ 3 ವಿಕೆಟ್ ಉರುಳಿಸಿ ಮಿಂಚಿದ್ರು.
ಇದನ್ನೂ ಓದಿ: ಫೈನಲ್ಗೆ 4ನೇ ಬಾರಿ ಎಂಟ್ರಿಕೊಟ್ಟ RCB.. Qualifier-1ರಲ್ಲಿ ಬೆಂಗಳೂರಿಗೆ ಸುಲಭ ಜಯ
ಸುಯಶ್ ಸ್ಪಿನ್ ಬಲೆಗೆ ಬಿದ್ದ ‘ಪಂಜಾಬ್ ಶೇರ್ಸ್’
ಮುಲ್ಲನ್ಪುರದಲ್ಲಿ ಮಿಡಲ್ ಓವರ್ನಲ್ಲಿ ಬೌಲಿಂಗ್ಗೆ ಬಂದ ಸುಯಶ್ ಶರ್ಮಾ ಸ್ಪಿನ್ ಮ್ಯಾಜಿಕ್ ಮಾಡಿದ್ರು. ಸುಯಶ್ ಸ್ಪಿನ್ ಬಲೆಗೆ ಬಿದ್ದ ಪಂಜಾಬ್ನ ಶೇರ್ಗಳು ವಿಲ ವಿಲ ಒದ್ದಾಡಿದ್ರು. ಹಾಕಿದ ಮೊದಲ ಓವರ್ನಲ್ಲೇ ಶಶಾಂಕ್ ಸಿಂಗ್, ಮುಷೀರ್ ಖಾನ್ಗೆ ಸುಯಶ್ ಶರ್ಮಾ ಖೆಡ್ಡಾ ತೋಡಿದ್ರು. ನೆಕ್ಸ್ಟ್ ಓವರ್ನಲ್ಲಿ ಡೇಂಜರಸ್ ಬ್ಯಾಟರ್ ಮಾರ್ಕಸ್ ಸ್ಟೋಯಿನಿಸ್ ಖೇಲ್ ಖತಂ ಮಾಡಿದ್ರು. 3 ಓವರ್ ಬೌಲಿಂಗ್ ಮಾಡಿದ ಸುಯಶ್ ಶರ್ಮಾ 17 ರನ್ ನೀಡಿ 3 ವಿಕೆಟ್ ಬೇಟೆಯಾಡಿದ್ರು.
ಮುಲ್ಲನ್ಪುರದಲ್ಲಿ ದಯಾಳ್ ದರ್ಬಾರ್
ಕಳೆದ ಪಂದ್ಯದಲ್ಲಿ ದುಬಾರಿ ಅನಿಸಿದ್ದ ವೇಗಿ ಯಶ್ ದಯಾಳ್ಗೆ ಮುಲ್ಲನ್ಪುರದಲ್ಲಿ ಯಶಸ್ಸು ಸಿಗ್ತು. ಆರಂಭದಿಂದಲೇ ದರ್ಬಾರ್ ನಡೆಸಿದ ದಯಾಳ್ ಪಂಜಾಬ್ಗೆ ಆರಂಭದಲ್ಲೇ ಪಂಚ್ ಕೊಟ್ರು. ಪಂಜಾಬ್ನ ಕುಸಿತಕ್ಕೆ ಮುನ್ನುಡಿ ಬರೆದಿದ್ದೇ ಈ ದಯಾಳ್. 2ನೇ ಓವರ್ನ 2ನೇ ಎಸೆತದಲ್ಲೇ ಪ್ರಿಯಾಂಶ್ ಆರ್ಯಗೆ ಪೆವಿಲಿಯನ್ ದಾರಿ ತೋರಿಸಿದ್ರು. 7ನೇ ಓವರ್ನಲ್ಲಿ ನೆಹಾಲ್ ವಡೇರಾ ಆಟಕ್ಕೆ ಅಂತ್ಯಹಾಡಿದ್ರು.
ಇದನ್ನೂ ಓದಿ: RCB ಗೆಲುವಿನ ಕ್ರೆಡಿಟ್ ಯಾರಿಗೆ..? ಕ್ಯಾಪ್ಟನ್ ರಜತ್ ಹೇಳಿದ ಹೆಸರು ಹ್ಯಾಜಲ್ವುಡ್ ಅಲ್ಲವೇ ಅಲ್ಲ!
ಸ್ವಿಂಗ್ ಕಿಂಗ್ ಭುವನೇಶ್ವರ್ ಬೊಂಬಾಟ್ ಬೌಲಿಂಗ್
ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ನಿನ್ನೆ ರಿಧಮ್ ಕಂಡು ಕೊಡ್ರು. ಆರಂಭದಿಂದಲೇ ಪಂಜಾಬ್ ಪಡೆಯ ಮೇಲೆ ಪ್ರೆಶರ್ ಹಾಕಿದ್ರು. ಡೇಂಜರಸ್ ಪ್ರಭ್ಸಿಮ್ರನ್ ಸಿಂಗ್ ವಿಕೆಟ್ ಕಬಳಿಸಿ ಮಿಂಚಿದ ಭುವನೇಶ್ವರ್ ಕುಮಾರ್ ಸೂಪರ್ ಸ್ಪೆಲ್ ಹಾಕಿದ್ರು. ಮಧ್ಯದಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ ರೊಮಾರಿಯೋ ಶೆಫರ್ಡ್ ಕೂಡ ವಿಕೆಟ್ ಬೇಟೆಯಾಡಿದ್ರು. 1 ಓವರ್ ಬೌಲಿಂಗ್ ಮಾಡಿ ಕೇವಲ 5 ರನ್ ಬಿಟ್ಟು ಕೊಟ್ಟ ಶೆಫರ್ಡ್ 1 ವಿಕೆಟ್ ಕೂಡ ಉರುಳಿಸಿದ್ರು.
ಒಟ್ಟಿನಲ್ಲಿ ಕ್ವಾಲಿಫೈಯರ್ ಫೈಟ್ನಲ್ಲಿ ಆರ್ಸಿಬಿ ಬೌಲರ್ಗಳಂತೂ ಬೆಂಕಿ ಪರ್ಫಾಮೆನ್ಸ್ ನೀಡಿದ್ರು. ಫೈರಿ ಪರ್ಫಾಮೆನ್ಸ್ ಇದೀಗ ಫೈನಲ್ ಟಿಕೆಟ್ ಸಿಗುವಂತೆ ಮಾಡಿದೆ. 18 ವರ್ಷಗಳ ಸುದೀರ್ಘ ಕನಸು ನನಸಾಗಲು ಇನ್ನೊಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಆ ಪಂದ್ಯದಲ್ಲೂ ಆರ್ಸಿಬಿ ಬೌಲರ್ಸ್ ಪವರ್ಫುಲ್ ಪರ್ಫಾಮೆನ್ಸ್ ನೀಡಿದ್ರೆ ಡೌಟೇ ಬೇಡ ಕಪ್ ನಮ್ದೇ!
ಇದನ್ನೂ ಓದಿ: ಪಂಜಾಬ್ಗೆ ನೀರು ಕುಡಿಸಿದ ಸಾಲ್ಟ್.. ಪವರ್ ಪ್ಲೇನಲ್ಲೇ ಪವರ್ ಕಟ್ ಆಗಿದ್ದು ಹೇಗೆ..?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ