ಕಪ್ ಗೆದ್ದು ಹೊಸ ಚರಿತ್ರೆ ಸೃಷ್ಟಿಸುತ್ತಾ ರೆಡ್ ಆರ್ಮಿ?
RCB ಗೆ ಗುಡ್ನ್ಯೂಸ್ ಮತ್ತು ಥ್ರೆಟ್ ಏನು..?
ಬ್ಯಾಟಿಂಗ್ ವಿಭಾಗ ಬಲಿಷ್ಠ, KGF ಗ್ಯಾಂಗ್ ಶಕ್ತಿ
ಇಂಡಿಯನ್ ಕ್ರಿಕೆಟ್ನ ಮೆಗಾ ಫೆಸ್ಟಿವಲ್ ಐಪಿಎಲ್ ಬಂದೇ ಬಿಡ್ತು. ಇಂದಿನಿಂದ ಕಲರ್ಫುಲ್ ಟೂರ್ನಿ ಆರಂಭಗೊಳ್ಳಲಿದ್ದು, ಆರ್ಸಿಬಿ ಅಭಿಮಾನಿಗಳ ಜೋಶ್ ಅಂತೂ ಹೇಳತೀರದು. ಈ ಸಲ ಕಪ್ ನಮ್ದೆ ಅನ್ನೋ ಕನಸು ಕಾಣೋಕೆ ಶುರು ಮಾಡಿದ್ದಾರೆ. ಆದ್ರೆ ಫ್ಯಾನ್ಸ್ ಬಿಗ್ ಡ್ರೀಮ್ ನನಸಾಗುತ್ತಾ?
ಮಾರ್ಚ್ 22! ಅಂದ್ರೆ ಇವತ್ತೇ.. ಫ್ಯಾಂಟಸಿ ಕ್ರಿಕೆಟ್ನ ಹಬ್ಬಗಳ ಹಬ್ಬ ಅಂತ ಕರೆಸಿಕೊಳ್ಳುವ ಐಪಿಎಲ್ ದಂಗಲ್ ಆರಂಭಗೊಳ್ಳಲಿದೆ. 17ನೇ ಐಪಿಎಲ್ ಸೀಸನ್ನಲ್ಲಿ ಚಾಂಪಿಯನ್ ಆಗೋ ಕನವರಿಕೆಯಲ್ಲಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿಯಾಗಿ ಸಜ್ಜಾಗಿದೆ. ಇಲ್ಲಿ ತನಕ ಒಮ್ಮೆಯೂ ಟ್ರೋಫಿ ಗೆಲ್ಲದ ಆರ್ಸಿಬಿ, ಈ ಸಲ ಮತ್ತೆ ನಮ್ದು ಕಪ್ ಮಂತ್ರ ಜಪಿಸ್ತಿದೆ.
ಹ್ಯೂಜ್ ಫ್ಯಾನ್ ಬೇಸ್ ಇರೋ ಆರ್ಸಿಬಿ ತಂಡದಲ್ಲಿ ಸೂಪರ್ ಸ್ಟಾರ್ ಆಟಗಾರರಿದ್ದಾರೆ. ಕಳೆದ 16 ಸೀಸನ್ಗಳಿಗಿಂತ ಈ ಸಲ ತಂಡ ಡಿಫರೆಂಟ್ ಆಗಿ ಕಾಣ್ತಿದೆ. ರೆಡ್ ಆರ್ಮಿ ಪಡೆಯಲ್ಲಿ ಪಾಸಿಟಿವ್ ವೈಬ್ಸ್ ಕಾಣಿಸ್ತಿದ್ದು, ಟ್ರೋಫಿ ಗೆದ್ದು ಹೊಸ ಚರಿತ್ರೆ ಸೃಷ್ಟಿಸುವ ಇರಾದೆಯಲ್ಲಿದೆ. ಹೊಸ ಅಧ್ಯಾಯ ಆರಂಭ ಅಂತಾ ಕೊಹ್ಲಿ ಈಗಾಗ್ಲೇ ಹೇಳಿದ್ದೂ ಆಗಿದೆ.
ಆರ್ಸಿಬಿ ಬಲ ಏನು..?
ಕಳೆದ ಬಾರಿಗೆ ಹೋಲಿಸಿದ್ರೆ ಈ ಸಲ ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದೆ. ಕೊಹ್ಲಿ, ಮ್ಯಾಕ್ಸ್ವೆಲ್ ಹಾಗೂ ಫಾಫ್ ಡು ಪ್ಲೆಸಿ ತಂಡದ ದೊಡ್ಡ ಶಕ್ತಿಯಾಗಿದ್ದಾರೆ. ಉತ್ತಮ ಕೋರ್ ಗ್ರೂಪ್ ಹೊಂದಿರೋದು ಪ್ಲಸ್ ಪಾಯಿಂಟ್. ಇನ್ನು ಕ್ಯಾಮರೂನ್ ಗ್ರೀನ್ ಹಾಗೂ ವಿಲ್ ಜ್ಯಾಕ್ಸ್ರಂತ ಬಿಗ್ ಹಿಟ್ಟರ್ಸ್ಗಳ ದಂಡಿದೆ. ಲಾಕಿ ಫರ್ಗೂಸನ್, ವೈಶಾಕ್ ವಿಜಯ್ಕುಮಾರ್ ಹಾಗೂ ಆಕಾಶ್ ದೀಪ್ ಬೌಲಿಂಗ್ನಲ್ಲಿ ಆರ್ಭಟಿಸಲು ಸಜ್ಜಾಗಿದ್ದಾರೆ. ಜತೆಗೆ ಏಕಕಾಲಕ್ಕೆ ಅನೇಕ ರೋಲ್ ನಿಭಾಯಿಸುವ ಆಟಗಾರರು ತಂಡದಲ್ಲಿರೋದು ವರದಾನ.
ತಂಡ ಮೇಲ್ನೋಟಕ್ಕೆ ಬಲಿಷ್ಟವಾಗಿ ಕಂಡರೂ ವೀಕ್ನೆಸ್ಗಳು ಕೂಡ ತಂಡದಲ್ಲಿವೆ. ಆ ವೀಕ್ನೆಸ್ಗಳ ಮೇಲೆ ವರ್ಕೌಟ್ ಮಾಡದಿದ್ರೆ, 16 ವರ್ಷಗಳ ಕಪ್ ವನವಾಸಕ್ಕೆ ಬ್ರೇಕ್ ಹಾಕೋ ಕನಸು ಕನಸಾಗೇ ಉಳಿಯಲಿದೆ.
ಆರ್ಸಿಬಿ ವೀಕ್ನೆಸ್ ಏನು..?
RCBಗೆ ಗುಡ್ನ್ಯೂಸ್ ಮತ್ತು ಥ್ರೆಟ್ ಏನು..?
ಮಾಜಿ ಕ್ಯಾಪ್ಟನ್ ಕಿಂಗ್ ಕೊಹ್ಲಿ, ಸ್ಪೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್, ವಿಲ್ ಜ್ಯಾಕ್ಸ್ ಹಾಗೂ ಕ್ಯಾಮರೂನ್ ಗ್ರೀನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಸಿಡಿಗುಂಡು ಮೊಹಮ್ಮದ್ ಸಿರಾಜ್, ವಿಜಯ್ಕುಮಾರ್ ವೈಶಾಕ್, ಟಾಪ್ಲೆ ಹಾಗೂ ಲೂಕಿ ಫರ್ಗೂಸನ್ ಕೂಡ ಕಮಾಲ್ ಮಾಡ್ತಿದ್ದಾರೆ. ಹೀಗಾಗಿ ಚೊಚ್ಚಲ ಕಪ್ ಆಸೆ ಚಿಗುರೊಡೆದಿದೆ.
ತಂಡದಲ್ಲಿ ಪಾಸಿಟಿವ್ ವೈಬ್ಸ್ ಇದ್ದರೂ ಕೂಡ 16 ವರ್ಷಗಳ ಹಿನ್ನಡೆ ತಂಡಕ್ಕೆ ಬಿಗ್ ಥ್ರೆಟ್ ಆಗಿದೆ. ಅದನ್ನ ಬದಲಿಸುವ ರಿಯಲ್ ಚಾಲೆಂಜ್, ಈ ಸಲ ಆರ್ಸಿಬಿಗೆ ಎದುರಾಗಿದೆ. ಎಲ್ಲಾ ಅಡೆ-ತಡೆಗಳನ್ನ ಮೀರಿ ಕೊಹ್ಲಿ ಹೇಳಿದಂತೆ ಹೊಸ ಅಧ್ಯಾಯ ಆರಂಭವಾಗಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕಪ್ ಗೆದ್ದು ಹೊಸ ಚರಿತ್ರೆ ಸೃಷ್ಟಿಸುತ್ತಾ ರೆಡ್ ಆರ್ಮಿ?
RCB ಗೆ ಗುಡ್ನ್ಯೂಸ್ ಮತ್ತು ಥ್ರೆಟ್ ಏನು..?
ಬ್ಯಾಟಿಂಗ್ ವಿಭಾಗ ಬಲಿಷ್ಠ, KGF ಗ್ಯಾಂಗ್ ಶಕ್ತಿ
ಇಂಡಿಯನ್ ಕ್ರಿಕೆಟ್ನ ಮೆಗಾ ಫೆಸ್ಟಿವಲ್ ಐಪಿಎಲ್ ಬಂದೇ ಬಿಡ್ತು. ಇಂದಿನಿಂದ ಕಲರ್ಫುಲ್ ಟೂರ್ನಿ ಆರಂಭಗೊಳ್ಳಲಿದ್ದು, ಆರ್ಸಿಬಿ ಅಭಿಮಾನಿಗಳ ಜೋಶ್ ಅಂತೂ ಹೇಳತೀರದು. ಈ ಸಲ ಕಪ್ ನಮ್ದೆ ಅನ್ನೋ ಕನಸು ಕಾಣೋಕೆ ಶುರು ಮಾಡಿದ್ದಾರೆ. ಆದ್ರೆ ಫ್ಯಾನ್ಸ್ ಬಿಗ್ ಡ್ರೀಮ್ ನನಸಾಗುತ್ತಾ?
ಮಾರ್ಚ್ 22! ಅಂದ್ರೆ ಇವತ್ತೇ.. ಫ್ಯಾಂಟಸಿ ಕ್ರಿಕೆಟ್ನ ಹಬ್ಬಗಳ ಹಬ್ಬ ಅಂತ ಕರೆಸಿಕೊಳ್ಳುವ ಐಪಿಎಲ್ ದಂಗಲ್ ಆರಂಭಗೊಳ್ಳಲಿದೆ. 17ನೇ ಐಪಿಎಲ್ ಸೀಸನ್ನಲ್ಲಿ ಚಾಂಪಿಯನ್ ಆಗೋ ಕನವರಿಕೆಯಲ್ಲಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿಯಾಗಿ ಸಜ್ಜಾಗಿದೆ. ಇಲ್ಲಿ ತನಕ ಒಮ್ಮೆಯೂ ಟ್ರೋಫಿ ಗೆಲ್ಲದ ಆರ್ಸಿಬಿ, ಈ ಸಲ ಮತ್ತೆ ನಮ್ದು ಕಪ್ ಮಂತ್ರ ಜಪಿಸ್ತಿದೆ.
ಹ್ಯೂಜ್ ಫ್ಯಾನ್ ಬೇಸ್ ಇರೋ ಆರ್ಸಿಬಿ ತಂಡದಲ್ಲಿ ಸೂಪರ್ ಸ್ಟಾರ್ ಆಟಗಾರರಿದ್ದಾರೆ. ಕಳೆದ 16 ಸೀಸನ್ಗಳಿಗಿಂತ ಈ ಸಲ ತಂಡ ಡಿಫರೆಂಟ್ ಆಗಿ ಕಾಣ್ತಿದೆ. ರೆಡ್ ಆರ್ಮಿ ಪಡೆಯಲ್ಲಿ ಪಾಸಿಟಿವ್ ವೈಬ್ಸ್ ಕಾಣಿಸ್ತಿದ್ದು, ಟ್ರೋಫಿ ಗೆದ್ದು ಹೊಸ ಚರಿತ್ರೆ ಸೃಷ್ಟಿಸುವ ಇರಾದೆಯಲ್ಲಿದೆ. ಹೊಸ ಅಧ್ಯಾಯ ಆರಂಭ ಅಂತಾ ಕೊಹ್ಲಿ ಈಗಾಗ್ಲೇ ಹೇಳಿದ್ದೂ ಆಗಿದೆ.
ಆರ್ಸಿಬಿ ಬಲ ಏನು..?
ಕಳೆದ ಬಾರಿಗೆ ಹೋಲಿಸಿದ್ರೆ ಈ ಸಲ ಆರ್ಸಿಬಿ ತಂಡದ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಿಷ್ಠಗೊಂಡಿದೆ. ಕೊಹ್ಲಿ, ಮ್ಯಾಕ್ಸ್ವೆಲ್ ಹಾಗೂ ಫಾಫ್ ಡು ಪ್ಲೆಸಿ ತಂಡದ ದೊಡ್ಡ ಶಕ್ತಿಯಾಗಿದ್ದಾರೆ. ಉತ್ತಮ ಕೋರ್ ಗ್ರೂಪ್ ಹೊಂದಿರೋದು ಪ್ಲಸ್ ಪಾಯಿಂಟ್. ಇನ್ನು ಕ್ಯಾಮರೂನ್ ಗ್ರೀನ್ ಹಾಗೂ ವಿಲ್ ಜ್ಯಾಕ್ಸ್ರಂತ ಬಿಗ್ ಹಿಟ್ಟರ್ಸ್ಗಳ ದಂಡಿದೆ. ಲಾಕಿ ಫರ್ಗೂಸನ್, ವೈಶಾಕ್ ವಿಜಯ್ಕುಮಾರ್ ಹಾಗೂ ಆಕಾಶ್ ದೀಪ್ ಬೌಲಿಂಗ್ನಲ್ಲಿ ಆರ್ಭಟಿಸಲು ಸಜ್ಜಾಗಿದ್ದಾರೆ. ಜತೆಗೆ ಏಕಕಾಲಕ್ಕೆ ಅನೇಕ ರೋಲ್ ನಿಭಾಯಿಸುವ ಆಟಗಾರರು ತಂಡದಲ್ಲಿರೋದು ವರದಾನ.
ತಂಡ ಮೇಲ್ನೋಟಕ್ಕೆ ಬಲಿಷ್ಟವಾಗಿ ಕಂಡರೂ ವೀಕ್ನೆಸ್ಗಳು ಕೂಡ ತಂಡದಲ್ಲಿವೆ. ಆ ವೀಕ್ನೆಸ್ಗಳ ಮೇಲೆ ವರ್ಕೌಟ್ ಮಾಡದಿದ್ರೆ, 16 ವರ್ಷಗಳ ಕಪ್ ವನವಾಸಕ್ಕೆ ಬ್ರೇಕ್ ಹಾಕೋ ಕನಸು ಕನಸಾಗೇ ಉಳಿಯಲಿದೆ.
ಆರ್ಸಿಬಿ ವೀಕ್ನೆಸ್ ಏನು..?
RCBಗೆ ಗುಡ್ನ್ಯೂಸ್ ಮತ್ತು ಥ್ರೆಟ್ ಏನು..?
ಮಾಜಿ ಕ್ಯಾಪ್ಟನ್ ಕಿಂಗ್ ಕೊಹ್ಲಿ, ಸ್ಪೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್, ವಿಲ್ ಜ್ಯಾಕ್ಸ್ ಹಾಗೂ ಕ್ಯಾಮರೂನ್ ಗ್ರೀನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಸಿಡಿಗುಂಡು ಮೊಹಮ್ಮದ್ ಸಿರಾಜ್, ವಿಜಯ್ಕುಮಾರ್ ವೈಶಾಕ್, ಟಾಪ್ಲೆ ಹಾಗೂ ಲೂಕಿ ಫರ್ಗೂಸನ್ ಕೂಡ ಕಮಾಲ್ ಮಾಡ್ತಿದ್ದಾರೆ. ಹೀಗಾಗಿ ಚೊಚ್ಚಲ ಕಪ್ ಆಸೆ ಚಿಗುರೊಡೆದಿದೆ.
ತಂಡದಲ್ಲಿ ಪಾಸಿಟಿವ್ ವೈಬ್ಸ್ ಇದ್ದರೂ ಕೂಡ 16 ವರ್ಷಗಳ ಹಿನ್ನಡೆ ತಂಡಕ್ಕೆ ಬಿಗ್ ಥ್ರೆಟ್ ಆಗಿದೆ. ಅದನ್ನ ಬದಲಿಸುವ ರಿಯಲ್ ಚಾಲೆಂಜ್, ಈ ಸಲ ಆರ್ಸಿಬಿಗೆ ಎದುರಾಗಿದೆ. ಎಲ್ಲಾ ಅಡೆ-ತಡೆಗಳನ್ನ ಮೀರಿ ಕೊಹ್ಲಿ ಹೇಳಿದಂತೆ ಹೊಸ ಅಧ್ಯಾಯ ಆರಂಭವಾಗಲಿ ಅನ್ನೋದು ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್