ಬಯಲಾಯ್ತು ಆರ್​​​ಸಿಬಿ ವೀಕ್ನೆಸ್​.. ಗುಜರಾತ್ ವಿರುದ್ಧ ಸೋಲಿಗೆ 5 ಕಾರಣಗಳು..

author-image
Ganesh
Updated On
GT ವಿರುದ್ಧ ಆರ್​ಸಿಬಿಗೆ ಬಿಗ್​ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!
Advertisment
  • ಚಿನ್ನಸ್ವಾಮಿಯಲ್ಲಿ ಸೋಲು, ಫ್ಯಾನ್ಸ್​ಗೆ ಆತಂಕ
  • ಕೈಕೊಟ್ಟ ಟಾಪ್ ಆರ್ಡರ್​, ಮಿಡಲ್ ಆರ್ಡರ್ ಫೇಲ್​
  • ಒನ್​​ ಮ್ಯಾಚ್ ಕಾ ಹೀರೋ ಆದ್ರಾ ಕೃನಾಲ್ ಪಾಂಡ್ಯ?

ಕೊಲ್ಕತ್ತಾದಲ್ಲಿ ಕಮಾಲ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ನ ಚಿಂದಿ ಉಡಾಯಿಸಿತ್ತು. ಬ್ಯಾಕ್ ಟು ಬ್ಯಾಕ್ ಗೆಲುವಿನೊಂದಿಗೆ ತವರಿಗೆ ಆಗಮಿಸಿದ ರಾಯಲ್ ಚಾಲೆಂಜರ್ಸ್, ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿತ್ತು. ಆರ್​ಸಿಬಿ ಲಾಯಲ್​ ಫ್ಯಾನ್ಸ್​ ಕೂಡ ಗುಜರಾತ್​ಗೆ ಗುನ್ನಾ ನೀಡುತ್ತೆ ಅಂತಾನೇ ಭರವಸೆ ಇಟ್ಟಿದ್ದರು. ಆ ಭರವಸೆ ಚಿನ್ನಸ್ವಾಮಿಯಲ್ಲಿ ಹುಸಿಯಾಗಿದೆ. ಆರ್​ಸಿಬಿಯ ವೀಕ್ನೆಸ್ ಕೂಡ ಬಟಾಬಯಲಾಗಿದೆ.

ಕೈ ಕೊಟ್ಟ ಟಾಪ್ ಆರ್ಡರ್​..

ಮೊದಲ ಎರಡು ಪಂದ್ಯಗಳಲ್ಲಿ ಆರ್​ಸಿಬಿಗೆ ಸಾಲಿಡ್ ಸ್ಟಾರ್ಟ್ ಸಿಕ್ಕಿತ್ತು. ಗುಜರಾತ್ ಎದುರಿನ ಪಂದ್ಯದಲ್ಲಿ ಇದೆಲ್ಲವೂ ಉಲ್ಟಾ ಆಯ್ತು. 2ನೇ ಓವರ್​ನಲ್ಲಿ ವಿರಾಟ್​ ಕೊಹ್ಲಿ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ, ದೇವದತ್ತ್​​ ಪಡಿಕ್ಕಲ್​, ಫಿಲ್ ಸಾಲ್ಟ್ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಸೇರಿದ್ರು.

ಆಗ ನಾಯಕ ರಜತ್ ಪಾಟಿದಾರ್​, ಸಂಕಷ್ಟದಲ್ಲಿದ್ದ ತಂಡದ ಕೈಹಿಡಿಯಬೇಕಿತ್ತು. ಠುಸ್ ಪಟಾಕಿಯಾಗಿ ಪೆವಿಲಿಯನ್ ಸೇರಿದರು. ನಯಾ ಫಿನಿಷರ್ ಅಂತಾನೇ ಗುರುತಿಸಿಕೊಂಡಿದ್ದ ಜಿತೇಶ್​​ ಶರ್ಮಾ ಕೆಲ ಕಾಲ ಹೋರಾಡಿದ್ರು. ಬೇಜಾಬ್ದಾರಿಯುತ ಶಾಟ್​ ಬಾರಿಸಿ ಔಟಾದ್ರು. ಆ ಸಂದರ್ಭದಲ್ಲಿ ಬಿಗ್​ ಹಿಟ್​ ಬಾರಿಸೋದಕ್ಕಿಂತ ವಿಕೆಟ್​ ಕಾಯ್ದುಕೊಳ್ಳೋದೇ ಮುಖ್ಯವಾಗಿತ್ತು.

ಒಂದೇ ನಾಣ್ಯ.. ಎರಡು ಮುಖ!

ಕಳೆದ 3 ಪಂದ್ಯಗಳಲ್ಲಿ ಇವರಿಬ್ಬರ ಆಟ ಮೂರಕ್ಕೇರಿಲ್ಲ. ಆರಕ್ಕಿಳಿದಿಲ್ಲ. ದೇವದತ್ ಪಡಿಕ್ಕಲ್ ಆಡಿದ ಮೂರೂ ಪಂದ್ಯಗಳಿಂದಲೂ ಕ್ರೀಸ್​ನಲ್ಲಿ ಹೆಚ್ಚು ಹೊತ್ತು ನಿಂತಿಲ್ಲ. ಜಿತೇಶ್ ಶರ್ಮಾ ಆಟ ಇದಕ್ಕಿಂತ ಹೊರತಾಗಿಲ್ಲ.

ಇದನ್ನೂ ಓದಿ: ಅಬ್​ ಕಿ ಬಾರ್ 300 ಎಂದ ತಂಡಕ್ಕೆ ಹ್ಯಾಟ್ರಿಕ್ ಸೋಲು.. IPL ಇತಿಹಾಸದಲ್ಲಿ ಕೆಟ್ಟ ದಾಖಲೆ..!

publive-image

ಒನ್​​ ಮ್ಯಾಚ್ ಕಾ ಹೀರೋ ಪಾಂಡ್ಯ

ಆಲ್​​ರೌಂಡರ್​ ಕೃನಾಲ್ ಪಾಂಡ್ಯ ಆಟ ಒಂದು ಪಂದ್ಯಕ್ಕೆ ಸೀಮಿತವಾದಂತಿದೆ. ಕೊಲ್ಕತ್ತಾದಲ್ಲಿ 3 ವಿಕೆಟ್ ಪಡೆದು ಮಿಂಚಿದ್ದ ಕೃನಾಲ್​​, ಕಳೆದ ಎರಡೂ ಪಂದ್ಯಗಳಿಂದ ವಿಕೆಟ್ ಲೆಸ್ ಆಗಿದ್ದಾರೆ. ಬೆಂಗಳೂರಲ್ಲಿ ಬರೋಬ್ಬರಿ 11.30ರ ಏಕಾನಮಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. 3 ಪಂದ್ಯಗಳಿಂದ ಬ್ಯಾಟ್​ನಿಂದ ಬಂದಿರೋದು ಜಸ್ಟ್​ ಐದೇ ಐದು ರನ್ ಮಾತ್ರ. ಈ ಆಟಕ್ಕೆ ತಂಡದಲ್ಲಿ ಹೊಸ ಸಮಸ್ಯೆ ಸೃಷ್ಟಿಸಿದೆ.

ಪವರ್​ ಪ್ಲೇನಲ್ಲಿ ಮಾತ್ರ ಬೌಲರ್ಸ್​ ಜೋಶ್​

ಆರ್​ಸಿಬಿ ಬೌಲಿಂಗ್ ಅಟ್ಯಾಕ್​​​​​​​​. ಈ ಹಿಂದಿಗಿಂತ ಬೆಸ್ಟ್​ ಅನ್ನೋದ್ರಲ್ಲಿ ಡೌಟಿಲ್ಲ. ಚಿನ್ನಸ್ವಾಮಿ ಅಂಗಳದಲ್ಲಿ ನ್ಯೂ ಬಾಲ್​ನಲ್ಲಿ ಟ್ರಬಲ್ ಮಾಡಿದ ಜೋಶ್ ಹೇಜಲ್​ವುಡ್, ಭುವನೇಶ್ವರ್ ಕುಮಾರ್ ನಂತರ ಜಾದೂ ಮಾಡಲಿಲ್ಲ. ಚಿನ್ನಸ್ವಾಮಿಯ ಸಣ್ಣ ಗ್ರೌಂಡ್​ನಲ್ಲಿ ಬೌಂಡರಿ ಸೇವ್ ಮಾಡಬೇಕಿದ್ದ ರಸಿಕ್​​ ಸಲಾಂ​, ಬ್ಯಾಟರ್​​ಗಳ ಜೋಶ್ ಹೆಚ್ಚಿಸುವಂತೆ ಬೌಲಿಂಗ್ ಮಾಡಿದ್ರು.

ಶಾರ್ಟ್​ ಬೌಂಡರಿಯ ಚಿನ್ನಸ್ವಾಮಿಯಲ್ಲಿ ಬೌಲರ್​ಗಳ ಪಾತ್ರವೇ ನಿರ್ಣಾಯಕ. ಇದೇ ಪಿಚ್​ನಲ್ಲಿ ಗುಜರಾತ್ ಟೈಟನ್ಸ್​ ಬೌಲರ್​ಗಳು ಟೈಟ್​ ಸ್ಪೆಲ್​ ಹಾಕಿದ್ರು. ಆರ್​ಸಿಬಿ ಬೌಲರ್​ಗಳು ಈ ವಿಚಾರದಲ್ಲಿ ಎಡವಿದ್ರು. ಗುಜರಾತ್​​ ಎದುರಿನ ಸೋಲಿಗೆ ಬೌಲರ್​ಗಳನ್ನ ಬ್ಲೇಮ್​ ಮಾಡೋಕಾಗಲ್ಲ ನಿಜ. ಈ ಸ್ವಲ್ಪ ಎಫರ್ಟ್​ ಹಾಕಬೇಕಿತ್ತು.

ಇದನ್ನೂ ಓದಿ: ಸಿಕ್ಸರ್​ ಮೂಲಕವೇ ಡೀಲ್ ಮಾಡಿದ ಅಯ್ಯರ್, ರಿಂಕು ಸಿಂಗ್.. SRH ಪಡೆಯನ್ನು ಖೆಡ್ಡಾಗೆ ಬೀಳಿಸಿದ್ದು ಹೇಗೆ..?

publive-image

ತಂಡದಲ್ಲಿ ಸ್ಪೆಷಲಿಸ್ಟ್​ ಸ್ಪಿನ್ನರ್ ಬೇಕಿತ್ತು. ಸ್ಪಿನ್ನರ್​ ಇದ್ದಿದ್ರೆ ಅದರ ಇಂಪ್ಯಾಕ್ಟ್ ಏನಾಗಿರೋದು ಅನ್ನೋದು ಗುಜರಾತ್ ಟೈಟನ್ಸ್ ನೋಡಿದ್ರೆ ಅರ್ಥವಾಗುತ್ತೆ. ಆರ್​ಸಿಬಿಗೆ ಮಿಡಲ್ ಓವರ್​ಗಳಲ್ಲಿ ಮೂಗುದಾರ ಹಾಕಿದ್ದೆ ಸ್ಪಿನ್ನರ್​ ಸಾಯಿ ಕಿಶೋರ್​. ಸ್ಪಿನ್ನರ್​ ಆಯ್ಕೆ ವಿಚಾರದಲ್ಲೂ ಆರ್​ಸಿಬಿ ಎಡವಿತು. ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಸ್ಪಿನ್ನರ್​​ಗೆ ಮಣೆ ಹಾಕಬೇಕಿತ್ತು.

ನಿಜವಾದ ಚಿನ್ನಸ್ವಾಮಿ ಕಂಟಕ..!

ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಹೋಮ್ ಫೇವರ್ ಇಲ್ಲ ಅನ್ನೋದು ಮತ್ತೆ ಸಾಬೀತಾಗಿದೆ. ಚಿನ್ನಸ್ವಾಮಿಯ ಹೋಮ್​ ಗ್ರೌಂಡ್​ಗೆ ಹೋಲಿಸಿದ್ರೆ, ಅವೇ ಕಂಡೀಷನ್ಸ್​ನಲ್ಲೇ ಆರ್​ಸಿಬಿ ಹೆಚ್ಚು ವಿನ್ನಿಂಗ್ ಪರ್ಸೆಟೇಜ್ ಹೊಂದಿದೆ. ಇದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಈ ಸೀಸನ್​ನ WPLನಲ್ಲಿ ಆರ್​ಸಿಬಿಯ ವುಮೆನ್ಸ್ ಟೀಮ್, ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ ಗೆದ್ದು ಭಾರೀ ನಿರೀಕ್ಷೆ ಮೂಡಿಸಿತ್ತು. ತವರಿನಂಗಳದಲ್ಲಿ ಕಂಡ ಸತತ ಸೋಲುಗಳು ಪ್ಲೇ ಆಫ್‌ ರೇಸ್‌ನಿಂದಲೇ ಹೊರ ಬೀಳುವಂತೆ ಮಾಡಿತ್ತು. ಇದೀಗ ಆರ್​ಸಿಬಿ ಮೆನ್ಸ್​ ತಂಡವೂ ಇದೇ ರೀತಿ ಆರಂಭ ಪಡೆದಿದೆ. ಹೊಸ ಆತಂಕವೂ ಸೃಷ್ಟಿಯಾಗಿದೆ.

ಇದನ್ನೂ ಓದಿ: ಮತ್ತೆ ಸಿಡಿದೇಳಬೇಕಿದೆ ಸಿಡಿಲಬ್ಬರದ ಬ್ಯಾಟರ್.. ಐಪಿಎಲ್​​ನಲ್ಲಿ ನಿರಂತರ ವಿಫಲತೆ ಕಾಣುತ್ತಿರುವುದೇಕೆ ಹಿಟ್​ಮ್ಯಾನ್​?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment