ಚೆನ್ನೈ ಗೆಲುವು, RCBಗೆ ದೊಡ್ಡ ವರದಾನ.. ಈ ಚಾನ್ಸ್​ ಆದರೂ ಉಪಯೋಗ ಮಾಡಿಕೊಳ್ಳುತ್ತಾ ಬೆಂಗಳೂರು?

author-image
Bheemappa
ಚೆನ್ನೈ ಗೆಲುವು, RCBಗೆ ದೊಡ್ಡ ವರದಾನ.. ಈ ಚಾನ್ಸ್​ ಆದರೂ ಉಪಯೋಗ ಮಾಡಿಕೊಳ್ಳುತ್ತಾ ಬೆಂಗಳೂರು?
Advertisment
  • ಸಿಎಸ್​ಕೆ ಈ ಗೆಲುವು ಆರ್​ಸಿಬಿಗೆ ಹೇಗೆ ವರದಾನ ಆಗಲಿದೆ.?
  • ಬಲಿಷ್ಠ ಗುಜರಾತ್ ಟೈಟನ್ಸ್​ ಅನ್ನು ಮಣಿಸಿರುವ ಚೆನ್ನೈ ಟೀಮ್
  • ಗೆಲ್ಲುವ ಮೂಲಕ ಐಪಿಎಲ್​ಗೆ ವಿದಾಯ ಹೇಳಿದ ಧೋನಿ ತಂಡ

ಹೈದ್ರಾಬಾದ್​ ವಿರುದ್ಧ ಐಪಿಎಲ್​ ಪಂದ್ಯ ಸೋತಿರುವುದು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಇದರಿಂದ ಟಾಪ್​- 2 ಸ್ಥಾನ ಕಳೆದುಕೊಳ್ಳುವ ಭೀತಿ ಆರ್​ಸಿಬಿ ಪಡೆಯಲ್ಲಿ ಇದೆ. ಆದರೆ ಈಗ ಈ ಸ್ಥಾನ ಪಡೆಯಲು ಮತ್ತೊಂದು ಸುವರ್ಣಾವಕಾಶ ಬೆಂಗಳೂರು ತಂಡಕ್ಕೆ ಒದಗಿ ಬಂದಿದೆ. ಇದರಲ್ಲಿ ಯಶಸ್ಸು ಕಾಣುತ್ತಾ ಎಂದು ಕಾದು ನೋಡಬೇಕಿದೆ. ಏಕೆಂದರೆ ಆರ್​ಸಿಬಿ ಮುಂದಿನ ಪಂದ್ಯದಲ್ಲಿ ಜಯ ಸಾಧಿಸಲೇಬೇಕಿದೆ.

ಆರ್​ಸಿಬಿ ಅಭಿಮಾನಿಗಳು ಪಾರ್ಥಿಸಿದಂತೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಪಡೆದಿದೆ. 83 ರನ್​ಗಳ ಅಂತರದಿಂದ ಗೆಲುವು ಪಡೆದು ಚೆನ್ನೈ ಈ ಸೀಸನ್​ಗೆ ವಿದಾಯ ಹೇಳಿದೆ. ಇದರ ಜೊತೆಗೆ ಲೀಗ್​​ನಲ್ಲಿ ಗುಜರಾತ್​ ಕೂಡ 14 ಪಂದ್ಯಗಳನ್ನು ಮುಗಿಸಿದ್ದು 18 ಅಂಕಗಳನ್ನು ಮಾತ್ರ ಗಳಿಸಲು ಶಕ್ತವಾಗಿದೆ.

ಇದನ್ನೂ ಓದಿ: ಅಂತಿಮ ಪಂದ್ಯದಲ್ಲಿ ಚೆನ್ನೈಗೆ ಜಯ.. ಸೀಸನ್- 18ಕ್ಕೆ ಗೆಲುವಿನೊಂದಿಗೆ ವಿದಾಯ ಹೇಳಿದ ಧೋನಿ ಪಡೆ!

publive-image

ಸದ್ಯ ಈ ಸೀಸನ್​ನಲ್ಲಿ ಆರ್​ಸಿಬಿ 13 ಪಂದ್ಯಗಳಿಂದ 17 ಅಂಕಗಳನ್ನು ಗಳಿಸಿದ್ದು ಎಲ್​​ಎಸ್​ಜಿ ವಿರುದ್ಧದ ಇನ್ನೊಂದು ಪಂದ್ಯ ಬಾಕಿ ಇದೆ. ಈ ಪಂದ್ಯದಲ್ಲಿ ಆರ್​ಸಿಬಿ ಜಯ ಸಾಧಿಸಿದರೆ ಒಟ್ಟು 19 ಅಂಕಗಳಿಂದ ಟಾಪ್​-2 ಅವಕಾಶ ಇದೆ. ಹೀಗಾಗಿ ಲೀಗ್​ನ ಕೊನೆ ಪದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಒಂದು ವೇಳೆ ಸೋತರೆ ಐಪಿಎಲ್​ನ ಫೈನಲ್​ ಪಂದ್ಯಕ್ಕೆ ಹೋರಾಡಬೇಕಾಗುತ್ತದೆ. ಈ ಹೋರಾಟದದಲ್ಲಿ ಒಂದು ಪಂದ್ಯ ಸೋತರೇ ಟ್ರೋಫಿ ಕನಸು ಮತ್ತೆ ಮುಂದಕ್ಕೆ ಹೋಗಲಿದೆ.

ಐಪಿಎಲ್​ನ ಪಾಯಿಂಟ್​​ ಟೇಬಲ್​ನಲ್ಲಿ ಗುಜರಾತ್​ ಒಟ್ಟು 14 ಪಂದ್ಯಳಿಂದ 18 ಅಂಕಗಳಿಂದ ಟಾಪ್​ನಲ್ಲಿದೆ. ಗುಜರಾತ್​ನ ಲೀಗ್ ಮ್ಯಾಚ್​ಗಳು ಮುಗಿದ ಕಾರಣ 18 ಅಂಕಗಳೇ ಅಂತಿಮವಾಗಲಿವೆ. ಆದರೆ ಆರ್​ಸಿಬಿ ಬಳಿ 17 ಅಂಕಗಳಿಸಿದ್ದು ಇನ್ನೊಂದು ಪಂದ್ಯ ಗೆದ್ದರೇ 19 ಅಂಕದಿಂದ ಟೇಬಲ್​ನಲ್ಲಿ ಟಾಪರ್ ಆಗಲಿದೆ. ಫೈನಲ್​ ಸುಲಭವಾಗಲಿದೆ. ಇನ್ನು ಪಂಜಾಬ್ ಕಿಂಗ್ಸ್​ಗೂ ಒಂದು ಪಂದ್ಯ ಬಾಕಿ ಇದ್ದರೂ ರನ್​ ರೇಟ್​ ಇಲ್ಲಿ ಗಣನೆಗೆ ಬರುತ್ತದೆ. ಹಾಗಾದರೆ ಆರ್​ಸಿಬಿ ಎಲ್ಲ ಅದೃಷ್ಟವೂ ಕೊನೆ ಪಂದ್ಯದ ಮೇಲೆ ನಿಂತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment