CSK ಕೋಟೆ ಛಿದ್ರ; ಆರ್​ಸಿಬಿ ಪರಾಕ್ರಮದ ಮುಂದೆ ಚೆನ್ನೈ ಬ್ಯಾಟರ್ಸ್​ ವಿಲ ವಿಲ.. ಹೀನಾಯ ಸೋಲು

author-image
Bheemappa
Updated On
CSK ಕೋಟೆ ಛಿದ್ರ; ಆರ್​ಸಿಬಿ ಪರಾಕ್ರಮದ ಮುಂದೆ ಚೆನ್ನೈ ಬ್ಯಾಟರ್ಸ್​ ವಿಲ ವಿಲ.. ಹೀನಾಯ ಸೋಲು
Advertisment
  • ಕ್ಷಣಾರ್ಧದಲ್ಲಿ ಫಿಲಿಪ್​ ಸಾಲ್ಟ್​​ ಸ್ಟಂಪ್ ಔಟ್ ಮಾಡಿದ ಎಂ.ಎಸ್ ಧೋನಿ
  • ಚೆನ್ನೈ ಬೌಲರ್​ಗಳಿಗೆ ಮನಬಂದಂತೆ ಚಚ್ಚಿದ ಆರ್​ಸಿಬಿ ನಾಯಕ ರಜತ್
  • ಆರ್​ಸಿಬಿ ನೀಡಿದ ಟಾರ್ಗೆಟ್ ಅನ್ನ​ ಮುಟ್ಟಲಾಗದೇ ಕುಸಿದು ಬಿದ್ದ ಸಿಎಸ್​ಕೆ

ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 50 ರನ್​ಗಳ ಅಮೋಘವಾದ ಗೆಲುವು ಪಡೆದಿದೆ. ಆರ್​ಸಿಬಿ ನೀಡಿದ್ದ 197 ರನ್​ಗಳ ಟಾರ್ಗೆಟ್ ತಲುಪಲಾಗದೇ ಚೆನ್ನೈ ಹೀನಾಯವಾಗಿ ಸೋತಿದೆ. 2008ರ ಬಳಿಕ ಚೆನ್ನೈ ವಿರುದ್ಧ ಆರ್​ಸಿಬಿ ಗೆಲವು ಪಡೆದು ಅಭಿಮಾನಿಗಳಿಗೆ ಗಿಫ್ಟ್ ನೀಡಿದೆ.

ಚೇಪಕ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರ್​​ಸಿಬಿ ಮೊದಲ ಬ್ಯಾಟಿಂಗ್ ಮಾಡಿತು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ ಒಳ್ಳೆಯ ಆರಂಭ ಪಡೆದರು. ಫಿಲಿಪ್​ ಸಾಲ್ಟ್​​ ಕೇವಲ 16 ಬಾಲ್​ನಲ್ಲಿ 5 ಬೌಂಡರಿ​​, 1 ಸಿಕ್ಸರ್​ ಸಮೇತ 32 ರನ್​ ಗಳಿಸಿ ಆಡುವಾಗ ಧೋನಿಯಿಂದ ಸ್ಟಂಪ್ ಔಟ್ ಆದರು.

publive-image

ಕೊಹ್ಲಿ ರನ್​ ಗಳಿಸಲು ಪರದಾಡಿದರೂ 30 ಎಸೆತಗಳಲ್ಲಿ 2 ಫೋರ್, 1 ಸಿಕ್ಸರ್​​ ಸಮೇತ 31 ರನ್​ ಗಳಿಸಿ ವಿಕೆಟ್ ಒಪ್ಪಿಸದರು. ರಜತ್​ ಪಾಟಿದಾರ್​ ಮೂರು ಜೀವದಾನ ಪಡೆದುಕೊಂಡು ಕೊನೆಯವರೆಗೂ ಕ್ರೀಸ್​ನಲ್ಲೇ ಬ್ಯಾಟ್ ಬೀಸಿ ಸ್ಫೋಟಕ ಹಾಫ್​ಸೆಂಚುರಿ ಬಾರಿಸಿದರು. 32 ಬಾಲ್​ಗಳನ್ನು ಎದುರಿಸಿದ ನಾಯಕ ರಜತ್, 4 ಬೌಂಡರಿ, 3 ಅತ್ಯದ್ಭುತವಾದ ಸಿಕ್ಸರ್ ಸಮೇತ 51 ರನ್​ ಗಳಿಸಿದರು. ಇನ್ನು ಪಡಿಕ್ಕಲ್ 27, ಟಿಮ್ ಡೇವಿಡ್ 22 ರನ್​ಗಳಿಂದ 20 ಓವರ್​ಗಳಲ್ಲಿ 7 ವಿಕೆಟ್​ಗೆ ಆರ್​ಸಿಬಿ 197 ರನ್​ಗಳ ಗುರಿ ನೀಡಿತ್ತು.

ಈ ಗುರಿ ಬೆನ್ನು ಹತ್ತಿದ್ದ ಚೆನ್ನೈಗೆ ಆರಂಭದಲ್ಲಿ ಹ್ಯಾಜಲ್​ವುಡ್​ ಬಿಗ್ ಕೊಟ್ಟರು. ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್​ ಕಬಳಿಸಿ ಚೆನ್ನೈ ಸದ್ದನ್ನು ಸೈಲೆಂಟ್ ಮಾಡಿದರು. ನಾಯಕ ಗಾಯಕ್ವಾಡ್ ಡಕೌಡ್ ಆದ್ರು. ಹೂಡ, ದುಬೈ ಬಂದಷ್ಟೇ ವೇಗವಾಗಿ ಕ್ರೀಸ್ ಖಾಲಿ ಮಾಡಿದರು. ಎಂಎಸ್​ ಧೋನಿ 16 ಬಾಲ್​ಗಳಲ್ಲಿ 30 ರನ್​ ಗಳಿಸಿ ಅಜೇಯರಾಗಿ ಉಳಿದರು. ರಚಿನ್ ರವೀಂದ್ರ 41 ರನ್​ ಬಿಟ್ಟರೇ ಉಳಿದವರು ಯಾರು ಉತ್ತಮ ಬ್ಯಾಟಿಂಗ್ ಮಾಡಲಿಲ್ಲ.

ಇದನ್ನೂ ಓದಿ: ಕೈ ಕೊಟ್ಟ ಕೊಹ್ಲಿ; ಯುವ ಬ್ಯಾಟರ್​ಗಳ ಆರ್ಭಟ.. ಚೆನ್ನೈಗೆ RCB ಬಿಗ್​ ಟಾರ್ಗೆಟ್​

publive-image

ಹೀಗಾಗಿ ಚೆನ್ನೈ 20 ಓವರ್​ಗಳಲ್ಲಿ 8 ವಿಕೆಟ್​ಗೆ 146 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಕೊರೊಳೊಡ್ಡಿತು. 50 ರನ್​ಗಳ ಅಂತರದಿಂದ ಬೆಂಗಳೂರು ವಿನ್ ಆಯಿತು. ಈ ಟೂರ್ನಿಯಲ್ಲಿ ಸತತ 2ನೇ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಸಾಧಿಸಿ ಸಂಭ್ರಮಿಸಿದೆ. ಚೆನ್ನೈ ಅನ್ನು ಬಗ್ಗು ಬಡಿದು ಫ್ಯಾನ್ಸ್​ ಖುಷಿಯನ್ನು ಆರ್​ಸಿಬಿ ದುಪ್ಪಟ್ಟು ಮಾಡಿದೆ.

ಆರ್​ಸಿಬಿ ಪರ ಬಿರುಸಿನ ಬೌಲಿಂಗ್ ಮಾಡಿದ ಹ್ಯಾಜಲ್​ವುಡ್​, ಯಶ್​ ದಯಾಳ್ ಹಾಗೂ ಲೀವಿಂಗ್​ಸ್ಟನ್​ ಚೆನ್ನೈ ಬ್ಯಾಟಿಂಗ್ ಬೆನ್ನು ಎಲಬನ್ನು ಮುರಿದರು. ಈ ಪಂದ್ಯದಲ್ಲಿ ಹ್ಯಾಜಲ್​ವುಡ್ 3 ವಿಕೆಟ್ ಪಡೆದ್ರೆ, ಯಶ್​ ದಯಾಳ್ ಲಿವಿಂಗ್​ಸ್ಟನ್ ತಲಾ 2 ವಿಕೆಟ್ ಪಡೆದು ತಂಡಕ್ಕೆ ನೆರವಾದರು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment