CSK ವಿರುದ್ಧ ಭರ್ಜರಿ ಗೆಲುವು; ಕ್ಯಾಪ್ಟನ್ ಪಾಟೀದಾರ್​ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ..?

author-image
Ganesh
Updated On
CSK ವಿರುದ್ಧ ಭರ್ಜರಿ ಗೆಲುವು; ಕ್ಯಾಪ್ಟನ್ ಪಾಟೀದಾರ್​ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ..?
Advertisment
  • ಪಂದ್ಯ ಮುಗಿದ ಬೆನ್ನಲ್ಲೇ ಗೇಮ್ ಪ್ಲಾನ್ ರಿವೀಲ್
  • ರಜತ್ ಅಂದುಕೊಂಡಿದ್ದ ಟಾರ್ಗೆಟ್ ಎಷ್ಟು ರನ್ ಆಗಿತ್ತು?
  • ಸಿಎಸ್​ಕೆ ವಿರುದ್ಧ ಆರ್​ಸಿಬಿಗೆ 50 ರನ್​ಗಳ ಗೆಲುವು

ಆರ್​ಸಿಬಿ ವಿರುದ್ಧ ಸಿಎಸ್​ಕೆ 50 ರನ್​ಗಳ ಹೀನಾಯ ಸೋಲನ್ನು ಕಂಡಿದೆ. ಗೆಲುವಿನ ದೊಡ್ಡ ನಿರೀಕ್ಷೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಅಭಿಮಾನಿಗಳಿಗೆ ಭಾರೀ ಬೇಸರ ಆಗಿದೆ. ಸೋಲಿನ ನೋವಿನಲ್ಲೂ ಧೋನಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ಪಂದ್ಯ ಮುಗಿದ ಬೆನ್ನಲ್ಲೇ ಮಾತನಾಡಿದ ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟೀದಾರ್.. ನಾವು ನೀಡಿದ ಟಾರ್ಗೆಟ್​ ಉತ್ತಮವಾಗಿತ್ತು. ಇಲ್ಲಿ ಬಾಲ್ ತುಂಬಾ ನಿಧಾನವಾಗಿ ಬರುತ್ತಿತ್ತು, ಇದರಿಂದ ಬ್ಯಾಟರ್​ಗಳು ರನ್ ಗಳಿಸೋದು ಸುಲಭ ಇರಲಿಲ್ಲ. ಚೆಪಾಕ್ (Chepauk)ನಲ್ಲಿ ಚೆನ್ನೈ ವಿರುದ್ಧ ಆಡೋದು ಯಾವಾಗಲು ವಿಶೇಷವಾಗಿರುತ್ತದೆ. ಯಾಕೆಂದರೆ ಇಲ್ಲಿನ ಅಭಿಮಾನಿಗಳು.

ಕೇವಲ ಚೆನ್ನೈ ಸೂಪರ್ ಕಿಂಗ್ಸ್ ಮಾತ್ರವಲ್ಲ, ಅವರವರ ಹೋಮ್​ಗ್ರೌಂಡ್​ನಲ್ಲಿ ಆಡೋದು ತುಂಬಾನೇ ವಿಶೇಷವಾಗಿರುತ್ತೆ. ​​ನಮ್ಮ ಟಾರ್ಗೆಟ್​ ಸುಮಾರು 200 ರನ್​​ಗಳಾಗಿತ್ತು. ಅಷ್ಟು ರನ್ ಚೇಸ್ ಮಾಡೋದು ಸುಲಭ ಇಲ್ಲವೆಂದು ನಮಗೆ ಗೊತ್ತಿತ್ತು. ಅದಕ್ಕೆ ಪ್ರತಿಬಾಲ್​​ಗೂ ಹೊಡೆಯಬೇಕು ಅನ್ನೋದು ನನ್ನ ಗುರಿಯಾಗಿತ್ತು.

ಇದನ್ನೂ ಓದಿ: CSK ಅಭಿಮಾನಿಗಳ ಹೃದಯವನ್ನೂ ಗೆದ್ದ RCB ಕ್ಯಾಪ್ಟನ್; ‘ನೀವು ಇಷ್ಟವಾದ್ರಿ’ ಅಂತಾ ಬಹುಪರಾಕ್..! ವಿಡಿಯೋ

publive-image

ನಾವು ಬ್ಯಾಟಿಂಗ್ ಲೈನ್​ಅಪ್​​ನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಕಳೆದ ಬಾರಿಯ ಪಂದ್ಯದಲ್ಲಿದ್ದ ಲೈನ್​ಅಪ್​​ ಅನ್ನೇ ಮುಂದುವರಿಸಿದೇವು. ಟ್ರ್ಯಾಕ್, ಸ್ಪಿನ್ನರ್​​ಗಳಿಗೆ ಸ್ನೇಹಿಯಾಗಿತ್ತು. ಅದಕ್ಕೆ ನಾವು ಸ್ಪಿನ್ನರ್​​ಗಳನ್ನು ಬೇಗ ತರೋದಕ್ಕೆ ನಿರ್ಧರಿಸಿದೇವು. ಲಿಯಾಮ್ ಲಿವಿಂಗ್​ಸ್ಟೋನ್​​ ಅದ್ಭುತವಾಗಿ ಬೌಲಂಗ್ ಮಾಡಿದರು. ಅದೊಂದು ಗೇಮ್​ ಚೆಂಜಿಂಗ್ ಮೂಮೆಂಟ್. ಹೇಜಲ್​ವುಡ್​ ಅವರ ಮೊದಲ ಓವರ್​ನಲ್ಲಿ ಗೇಮ್​ ಚೆಂಜಿಂಗ್ ಪ್ರದರ್ಶನ ನೀಡಿದರು. ಇನ್ನಿಂಗ್ಸ್​ನ ಪವರ್​ಪ್ಲೇನ್​​ನಲ್ಲಿ 2 ರಿಂದ ಮೂರು ವಿಕೆಟ್ ಪಡೆದುಕೊಂಡಿದ್ದೇವೆ ಎಂದು ಭಾವಿಸುತ್ತೇನೆ. ಇದು ನಿಜಕ್ಕೂ ಅದ್ಭುತ ಎಂದರು. ಆ ಮೂಲಕ ಬೌಲರ್​​ಗಳಿಗೆ ಪಾಟೀದಾರ್ ಗೆಲುವಿನ ಕ್ರೆಡಿಟ್ ನೀಡಿದರು.

ಇದನ್ನೂ ಓದಿ: CSK ಸೋಲಿಸಿದ್ದು ಆಯ್ತು.. ಆರ್​ಸಿಬಿ ಮುಂದಿನ ಟಾರ್ಗೆಟ್​ ಯಾರು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment