/newsfirstlive-kannada/media/post_attachments/wp-content/uploads/2025/05/RCB_BATTING.jpg)
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಜಯಭೇರಿ ಬಾರಿಸಿದೆ. ಕೇವಲ 2 ರನ್ಗಳಿಂದ ರಜತ್ ಪಡೆ ಗೆಲುವು ಪಡೆದಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಆರ್ಸಿಬಿ 16 ಅಂಕಗಳಿಂದ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ಸಿಲಿಕಾನ್ ಸಿಟಿಯ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದರು. ಚೆನ್ನೈ ತಂಡ ಫೀಲ್ಡಿಂಗ್ ಮಾಡಿತು. ಆರ್ಸಿಬಿ ಪರವಾಗಿ ಓಪನರ್ಗಳಾಗಿ ವಿರಾಟ್ ಕೊಹ್ಲಿ ಹಾಗೂ ಯಂಗ್ ಬ್ಯಾಟರ್ ಜಾಕೋಬ್ ಬೆಥೆಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪಂದ್ಯದಲ್ಲಿ 28 ಬಾಲ್ ಆಡಿದ ಬೆಥೆಲ್ 8 ಅದ್ಭುತವಾದ ಬೌಂಡರಿಗಳು ಹಾಗೂ 2 ಸಿಕ್ಸರ್ನಿಂದ 53 ರನ್ ಬಾರಿಸಿದರು. 55 ರನ್ಗಳಿಂದ ಬ್ಯಾಟಿಂಗ್ ಮುಂದುವರೆಸಿದ್ದಾಗ ಬ್ರೆವಿಸ್ಗೆ ಕ್ಯಾಚ್ ಕೊಟ್ಟು ಹೊರ ನಡೆದರು.
ಇನ್ನೊಂದೆಡೆ ಕೊಹ್ಲಿ ಉತ್ತಮ ಬ್ಯಾಟಿಂಗ್ ಮಾಡಿ, ಕೇವಲ 29 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್ಗಳಿಂದ ಅರ್ಧಶತಕ ಸಿಡಿಸಿದರು. 5 ಬೌಂಡರಿ, 5 ಸಿಕ್ಸರ್ಗಳಿಂದ 62 ರನ್ ಗಳಿಸಿ ಸ್ಯಾಮ್ ಕರನ್ ಬೌಲಿಂಗ್ನಲ್ಲಿ ಔಟ್ ಆದರು. ಉಳಿದಂತೆ ದೇವದತ್ ಪಡಿಕ್ಕಲ್ 17, ರಜತ್ ಪಾಟಿದಾರ್ 11, ಜಿತೇಶ್ ಶರ್ಮಾ 11 ರನ್ಗೆ ಔಟ್ ಆದರು. ಪಂದ್ಯದ ಕೊನೆಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರೊಮಾರಿಯೋ ಶೆಫರ್ಡ್ ಕೇವಲ 14 ಬಾಲ್ಗಳನ್ನು ಎದುರಿಸಿ 4 ಬೌಂಡರಿ ಹಾಗೂ 6 ಸಿಕ್ಸರ್ಗಳಿಂದ 53 ರನ್ ಚಚ್ಚಿದರು. ಇದರಿಂದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ಗೆ 214 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು.
ಈ ದೊಡ್ಡ ಗುರಿ ಹಿಂದೆ ಬಿದ್ದ ಚೆನ್ನೈ ಆಟಗಾರರು ಆರಂಭದಲ್ಲಿ ಕೊಂಚ ಸಮಸ್ಯೆ ಎದುರಿಸಿದರು. ಓಪನರ್ ಶೇಕ್ ರಶೀದ್ 14 ರನ್ಗೆ ಪೆವಿಲಿಯನ್ ಸೇರಿದರು. ಇವರ ಬಳಿಕ ಕ್ರೀಸ್ಗೆ ಬಂದಿದ್ದ ಸ್ಯಾಮ್ ಕರನ್ 5ಕ್ಕೆ ವಿಕೆಟ್ ಕೀಪರ್ಗೆ ಬಲಿಯಾದರು. ಆದರೆ ಇನ್ನೊಂದೆಡೆ ಓಪನರ್ ಆಯುಷ್ ಮ್ಹಾತ್ರೆ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದರು. ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಆಯುಷ್ ಕೇವಲ 48 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ದೊಡ್ಡ ಸಿಕ್ಸರ್ಗಳಿಂದ 94 ರನ್ ಗಳಿಸಿದರು. ಸೆಂಚುರಿಗೆ ಇನ್ನು ಕೇವಲ 6 ರನ್ಗಳು ಬೇಕಿದ್ದಾಗ ಲುಂಗಿ ಎನ್ಗಿಡಿ ಬೌಲಿಂಗ್ನಲ್ಲಿ ಕೃನಾಲ್ಗೆ ಕ್ಯಾಚ್ ಕೊಟ್ಟು ಬೇಸರದಿಂದ ಹೆಜ್ಜೆ ಹಾಕಿದರು.
ಇದನ್ನೂ ಓದಿ: ಕಿಂಗ್ ಕೊಹ್ಲಿ, ಬೆಥೆಲ್ ಸಿಡಿಲಬ್ಬರ.. ಶೆಫರ್ಡ್ ವೇಗದ ಅರ್ಧಶತಕ; ಚೆನ್ನೈಗೆ ಬಿಗ್ ಟಾರ್ಗೆಟ್ ಕೊಟ್ಟ RCB
ಯುವ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ ಡಕೌಟ್ ಆಗುವ ಮೂಲಕ ಹಾಗೇ ಬಂದು ಹೀಗೆ ಹೋದರು. ಕ್ಯಾಪ್ಟನ್ ಧೋನಿ 12 ರನ್ಗೆ ಔಟ್ ಆಗಿ, ಬ್ಯಾಟಿಂಗ್ನಲ್ಲಿ ಎಂದಿನಂತೆ ವಿಫಲವಾದರು. ಆರ್ಸಿಬಿ ವಿರುದ್ಧ ಘರ್ಜನೆ ಮಾಡಿದ ರವೀಂದ್ರ ಜಡೇಜಾ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೊನೆವರೆಗೂ ತಂಡಕ್ಕಾಗಿ ಹೋರಾಟ ಮಾಡಿದರು. 45 ಎಸೆತಗಳನ್ನು ಎದುರಿಸಿದ ಜಡೇಜಾ 8 ಬೌಂಡರಿ 2 ಸಿಕ್ಸರ್ಗಳಿಂದ 77 ಗಳಿಸಿ ಅಜೇಯರಾಗಿ ಉಳಿದರು. ಕೊನೆಯಲ್ಲಿ ಜಡೇಜಾ ಜೊತೆ ಬ್ಯಾಟಿಂಗ್ ಆರಂಭಿಸಿದ್ದ ಶಿವಂ ದುಬೆ 8 ರನ್ ಗಳಿಸಿ ಆಡಿ ತಂಡವನ್ನು ಗೆಲ್ಲಿಸುವಲ್ಲಿ ಕೈಚೆಲ್ಲಿದರು. ಇದರಿಂದ ರಣರೋಚಕ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್ಸಿಬಿ ಅತ್ಯದ್ಭುತವಾದ ಗೆಲುವು ಪಡೆಯಿತು. ಕೊನೆಗೆ ಚೆನ್ನೈ 20 ಓವರ್ಗಳಲ್ಲಿ 5 ವಿಕೆಟ್ಗೆ 211 ರನ್ ಮಾತ್ರ ಗಳಿಸಿ ಸೋಲು ಒಪ್ಪಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ