/newsfirstlive-kannada/media/post_attachments/wp-content/uploads/2024/10/TEAM-INDIA-1.jpg)
ಬರೋಬ್ಬರಿ 12 ವರ್ಷಗಳ ನಂತರ ತವರಿನಲ್ಲೇ ಟೀಮ್​ ಇಂಡಿಯಾ ನ್ಯೂಜಿಲೆಂಡ್​​ ವಿರುದ್ಧ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿದೆ. ಟೀಮ್​ ಇಂಡಿಯಾದ ಹೀನಾಯ ಸೋಲಿಗೆ ಅಸಲಿ ಕಾರಣ ಏನು? ಎಂದು ಮಾಜಿ ಕ್ರಿಕೆಟರ್​ ಸಂಜಯ್ ಮಾಂಜ್ರೇಕರ್ ಬಿಚ್ಚಿಟ್ಟಿದ್ದಾರೆ.
ಟೀಮ್​ ಇಂಡಿಯಾ ಸೋಲಿಗೆ ಇವರೇ ಕಾರಣ ಎಂದ ಸಂಜಯ್​​
ಭಾರತ ತಂಡದಲ್ಲಿ ಸರ್ಫರಾಜ್ ಖಾನ್ ಇದ್ದರು. ಅವರಿಗಿಂತಲೂ ಮೊದಲು ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಿದ್ದು ತಪ್ಪು. ಟೀಮ್ ಇಂಡಿಯಾ ಈ ಟೆಸ್ಟ್ನಲ್ಲಿ ಕೊಂಚ ಡಿಫೆನ್ಸ್ ಚೆನ್ನಾಗಿ ಆಡಬೇಕಿತ್ತು. ನಮ್ಮ ಬ್ಯಾಟರ್​​ಗಳು ಜವಾಬ್ದಾರಿ ಮರೆತರು. ಬ್ಯಾಟರ್​ಗಳು ಸರಿಯಾಗಿ ಆಡಿದ್ರೆ, ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದಿತ್ತು ಎಂದರು.
ಸ್ಪಿನ್​​ರಗಳ ವಿರುದ್ಧ ಅಬ್ಬರಿಸದ ಟೀಮ್​ ಇಂಡಿಯಾ
ಮಿಡಲ್​ ಆರ್ಡರ್​ ಬ್ಯಾಟರ್​ ಶುಭ್ಮನ್​ ಗಿಲ್ ಮತ್ತು ಓಪನರ್​ ಯಶಸ್ವಿ ಜೈಸ್ವಾಲ್ ಭಾರತವನ್ನು ಗೆಲ್ಲಿಸಬಹುದು ಎಂದು ಎಲ್ಲರೂ ಭಾವಿಸಿದ್ದರು. ಭಾರತದ ಪರ ಪಂದ್ಯ ತಿರುಗಿಸಬಹುದು ಎಂದು ಅಂದಾಜಿಸಿದ್ರು. ಕೊನೆಗೂ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿ ಹೋಯ್ತು. ಗಿಲ್​​, ಜೈಸ್ವಾಲ್​​ ಸ್ಪಿನ್​​ ಬೌಲರ್​ಗಳ ವಿರುದ್ಧ ಎಡವಿದ್ರು ಎಂದರು.
ಕೊಹ್ಲಿ ಬಗ್ಗೆ ಏನಂದ್ರು ಸಂಜಯ್​​?
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ. ಮಿಚೆಲ್ ಸ್ಯಾಂಟ್ನರ್ ಲೆಂಥ್ ಜಡ್ಜ್​​ ಮಾಡಲು ಕೊಹ್ಲಿ ಎಡವಿದ್ರು. ಸ್ಪಿನ್ ಬೌಲರ್ಗಳ ವಿರುದ್ಧ ಆಡಲು ಟೀಮ್​ ಇಂಡಿಯಾದ ಆಟಗಾರರ ಬಳಿ ಯಾವುದೇ ಶಾಟ್​ಗಳು ಇರಲಿಲ್ಲ. ಭಯ ಬಿದ್ದು ಬ್ಯಾಟ್​ ಮಾಡಿದ್ದಕ್ಕೆ ಸೋತರು ಎಂದರು.
113 ರನ್​ಗಳಿಂದ ಸೋಲು
ನ್ಯೂಜಿಲೆಂಡ್​ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್ ಗಳಿಂದ ಸೋಲು ಕಂಡಿದೆ. ಈ ಮೂಲಕ ಭಾರತ ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ. ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಫಸ್ಟ್​ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್​​ 259 ರನ್​ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ತಂಡ ಕೇವಲ 156 ರನ್​ಗಳಿಗೆ ಆಲೌಟ್ ಆಗುವ ಮೂಲಕ 103 ರನ್ ಗಳ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲೆಂಡ್​ 255 ರನ್​​ ಕಲೆ ಹಾಕಿ ಆಲೌಟ್​ ಆಗಿತ್ತು. ಇದರೊಂದಿಗೆ ಭಾರತಕ್ಕೆ ಗೆಲ್ಲಲು 359 ರನ್ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಭಾರತ 245 ರನ್​ಗಳಿಗೆ ಆಲೌಟ್ ಆಗುವ ಮೂಲಕ 113 ರನ್ ಗಳಿಂದ ಪಂದ್ಯ ಸೋತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us