/newsfirstlive-kannada/media/post_attachments/wp-content/uploads/2025/03/RCB-win.jpg)
ಕೋಲ್ಕತ್ತಾದ ಈಡನ್ ಗಾರ್ಡನ್ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆದ್ದು ಬೀಗಿದೆ. ಈ ಮೂಲಕ ಆರ್​​ಸಿಬಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕೊಡಲಿ ಪೆಟ್ಟು ನೀಡಿದೆ.
ಇನ್ನು, ಆರ್​​ಸಿಬಿ 2025ರ ಐಪಿಎಲ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಪಾಯಿಂಟ್ಸ್​ ಟೇಬಲ್​ನಲ್ಲಿ ಆರ್​ಸಿಬಿ 2ನೇ ಸ್ಥಾನದಲ್ಲಿದೆ. ಆರ್​​ಸಿಬಿ ಗೆಲುವಿನ ಪ್ರಮುಖ ಐದು ಕಾರಣಗಳು ಹೀಗಿವೆ.
ಕೃನಾಲ್​ ಪಾಂಡ್ಯ ಮೋಡಿ
ಐಪಿಎಲ್ ಹರಾಜಿನಲ್ಲಿ ಅನುನವಿ ಕೃನಾಲ್ ಪಾಂಡ್ಯ ಅವರನ್ನು ಆರ್​​ಸಿಬಿ ಖರೀದಿ ಮಾಡಿತ್ತು. ಮೊದಲ ಪಂದ್ಯದಲ್ಲೇ ಕೃನಾಲ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ತಮ್ಮ ನೈಜ ಸ್ಪಿನ್ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಿದ್ರು. ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರಿಗೆ ಖೆಡ್ಡಾ ತೋಡಿ ಆರ್​​ಸಿಬಿಯನ್ನು ಡೇಜರಸ್​ ಜೋನ್​ನಿಂದ ಪಾರು ಮಾಡಿದರು.
ಭರ್ಜರಿ ಕಮ್​ಬ್ಯಾಕ್​​
ಮೊದಲ 10 ಓವರ್ಗಳಲ್ಲಿ ಆರ್ಸಿಬಿ 10.70 ಸರಾಸರಿಯಲ್ಲಿ ರನ್ ನೀಡಿತು. ಬಳಿಕ ಭರ್ಜರಿ ಕಮ್​ಬ್ಯಾಕ್​ ಮಾಡಿದ ಆರ್​​ಸಿಬಿ ಬೌಲರ್​ಗಳು 11 ರಿಂದ 20 ಓವರ್ಗಳಲ್ಲಿ 6.7 ದರದಲ್ಲಿ ರನ್ ನೀಡಿ 6 ವಿಕೆಟ್​ ಕಿತ್ತರು. ಕೊನೆಯ ನಾಲ್ಕು ಓವರ್ಗಳಲ್ಲಿ ಕೇವಲ 23 ರನ್​ ನೀಡಿದ್ದು ಗೆಲುವಿಗೆ ಮತ್ತೊಂದು ಕಾರಣ.
ಸುಯೇಶ್​​ ಶರ್ಮಾ ಇಂಪ್ಯಾಕ್ಟ್​
ಇನ್ನು, ಆರ್​​ಸಿಬಿ ತಂಡದ ಪರ ಸುಯೇಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡರು. ಸುಯೇಶ್​ ತನ್ನ ಬೌಲಿಂಗ್​​ ಮ್ಯಾಜಿಕ್​ ಮಾಡಿದ್ರು. ಸ್ಫೋಟಕ ಬ್ಯಾಟರ್ ಆಂಡ್ರೋ ರಸೆಲ್​ಗೆ ಖೆಡ್ಡಾ ತೋಡಿದರು.
ಭರ್ಜರಿ ಓಪನಿಂಗ್​​
ಆರ್ಸಿಬಿ ತಂಡದ ಪರ ಬ್ಯಾಟರ್​ಗಳು ಅದ್ಭುತ ಬ್ಯಾಟಿಂಗ್​ ಮಾಡಿದರು. ವಿರಾಟ್ ಕೊಹ್ಲಿ ಐಪಿಎಲ್ನಲ್ಲೂ ಅದ್ಭುತ ಫಾರ್ಮ್ ಮುಂದುವರಿಸಿದರು. ವಿರಾಟ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಫಿಲ್ ಸಾಲ್ಟ್ ಆರ್ಸಿಬಿಗೆ ಭರ್ಜರಿ ಓಪನಿಂಗ್ ನೀಡಿದರು. ಈ ಜೋಡಿ ಆಟವೇ ಆರ್​​ಸಿಬಿ ದಿಕ್ಕನ್ನು ಬದಲಾಯಿಸಿತು.
ಸಮರ್ಥ ನಾಯಕತ್ವ
18ನೇ ಸೀಸನ್​ನಲ್ಲಿ ಆರ್​​ಸಿಬಿ ತಂಡವನ್ನು ಕ್ಯಾಪ್ಟನ್​ ರಜತ್​ ಪಾಟಿದಾರ್ ಲೀಡ್ ಮಾಡುತ್ತಿದ್ದಾರೆ. ರಜತ್​ ಪಾಟಿದಾರ್​​ ತಮ್ಮಲ್ಲಿರೋ ನಾಯಕತ್ವದ ಗುಣಗಳನ್ನು ಪ್ರದರ್ಶಿಸಿದರು. ಇವರು ಬೌಲಿಂಗ್​​ನಲ್ಲಿ ಮಾಡಿದ ಮೇಜರ್​ ಚೇಂಜಸ್​ ತಂಡದ ಗೆಲುವಿಗೆ ಕಾರಣವಾಯ್ತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us