/newsfirstlive-kannada/media/post_attachments/wp-content/uploads/2024/12/Team-India-9.jpg)
ಸಿಡ್ನಿ ಸಮರದಲ್ಲೂ ಟೀಮ್ ಇಂಡಿಯಾ ಹೀನಾಯ ಮುಖಭಂಗ ಅನುಭವಿಸಿದೆ. ಅಂತಿಮ ಟೆಸ್ಟ್ನಲ್ಲಿ ಸೋಲುಂಡ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಸರಣಿಯನ್ನ ಕೈ ಚೆಲ್ಲಿದೆ. ಇದ್ರೊಂದಿಗೆ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಎಂಟ್ರಿಯ ಕನಸು ನುಚ್ಚುನೂರಾಗಿದೆ.
ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ ಫ್ಲಾಪ್ ಆದ್ರೂ ಬೌಲಿಂಗ್ನಲ್ಲಿ ಟೀಮ್ ಇಂಡಿಯಾ ದರ್ಬಾರ್ ನಡೆಸಿತ್ತು. ಆಸಿಸ್ ಪಡೆಯನ್ನ ಕೇವಲ 181 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಬೌಲರ್ಸ್ ಯಶಸ್ವಿಯಾಗಿದ್ರು. ಅಲ್ಪ ಮೊತ್ತಗಳಿಸಿದ್ರೂ 4 ರನ್ಗಳ ಲೀಡ್ ಸಿಕ್ಕಿತ್ತು. 2ನೇ ಇನ್ನಿಂಗ್ಸ್ನಲ್ಲೂ ಟೀಮ್ ಇಂಡಿಯಾ ಬ್ಯಾಟರ್ಸ್ ಸಿಡಿದೇಳಲಿಲ್ಲ. ಕಾಂಗರೂಗಳ ಆರ್ಭಟದ ಮುಂದೆ ಮಂಡಿಯೂರಿಬಿಟ್ರು.
ಕಾರಣಗಳು:
ಸಿಗಲಿಲ್ಲ ಗುಡ್ ಸ್ಟಾರ್ಟ್: ಸಿಡ್ನಿ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಸೋಲಿಗೆ ಮೊದಲ ಮುನ್ನುಡಿ ಬರೆದಿದ್ದೇ ಓಪನರ್ಸ್. ಮೊದಲ ಇನ್ನಿಂಗ್ಸ್ನಲ್ಲೂ ಗುಡ್ ಸ್ಟಾರ್ಟ್ ಸಿಗಲಿಲ್ಲ. ಅಟ್ಲೀಸ್ಟ್ 2ನೇ ಇನ್ನಿಂಗ್ಸ್ನಲ್ಲಾದ್ರೂ ಒಂದೊಳ್ಳೆ ಆರಂಭ ಸಿಕ್ಕಿದ್ರೆ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾರಮ್ಯ ಮೆರೆಯಬಹುದಿತ್ತು. ಎರಡನೇ ಇನ್ನಿಂಗ್ಸ್ನಲ್ಲೂ ಅದೇ ರಾಗ ಅದೇ ಹಾಡು. ಮೊದಲ ಇನ್ನಿಂಗ್ಸ್ನಲ್ಲಿ 11, 2ನೇ ಇನ್ನಿಂಗ್ಸ್ನಲ್ಲಿ 42 ರನ್. ಗುಡ್ ಸ್ಟಾರ್ಟ್ ಸಿಗದೇ ಇದ್ದಿದ್ದೇ ದೊಡ್ಡ ಹಿನ್ನಡೆಯಾಯ್ತು.
ಇದನ್ನೂ ಓದಿ:ವಿರಾಟ್ ಕೊಹ್ಲಿ ವಿರುದ್ಧ ಹರಿಹಾಯ್ದ ಇರ್ಫಾನ್ ಪಠಾಣ್; ಅಷ್ಟಕ್ಕೂ ಆಗಿದ್ದೇನು?
ಶೈನ್ ಆಗದ ಗಿಲ್: ರನ್ಗಳಿಕೆಗೆ ಪರದಾಟ ನಡೆಸ್ತಿದ್ದ ರೋಹಿತ್ ಶರ್ಮಾ ಮುನ್ನ ಬಿಗ್ ಡಿಸಿಷನ್ ತೆಗೆದುಕೊಂಡು ಅಂತಿಮ ಟೆಸ್ಟ್ನಿಂದ ಹೊರಗುಳಿದಿದ್ದರು. ನನ್ನ ಬ್ಯಾಟಿಂದ ರನ್ ಬರ್ತಿಲ್ಲ. ನೀನು ಆಡು ಅಂತಾ ಗಿಲ್ಗೆ ಚಾನ್ಸ್ ನೀಡಿದ್ರು. ಪ್ಲೇಯಿಂಗ್ ಇಲೆವೆನ್ಗೆ ಎಂಟ್ರಿ ಕೊಟ್ಟ ಗಿಲ್ ಶೈನ್ ಆಗಲೇ ಇಲ್ಲ.
ಕೊಹ್ಲಿ ಕೆರಳಲಿಲ್ಲ: ಕೊಹ್ಲಿ ಬ್ಯಾಟಿಂಗ್ ಮರೆತು ಬಿಟ್ಟಂತಿದೆ. ಸೀನಿಯರ್ ಆಟಗಾರನಾಗಿ ಮುಂದೆ ನಿಂತು ಹೋರಾಡಬೇಕಿದ್ದ ಕೊಹ್ಲಿ, ಮೊದಲ ಇನ್ನಿಂಗ್ಸ್ನಲ್ಲಿ 17, 2ನೇ ಇನ್ನಿಂಗ್ಸ್ನಲ್ಲಿ 6 ರನ್ಗಳಿಸಿ ಔಟಾದರು.
ಇದನ್ನೂ ಓದಿ:ಹಿಮ್ಮಡಿಗಳು ಬಿರುಕು ಬಿಡುತ್ತಿವೆಯೇ..? ನಿಮ್ಮ ಪಾದಗಳ ಸಮಸ್ಯೆಗೆ ಪರಿಹಾರ ಏನು?
ಪರದಾಡಿದ ಆಲ್ರೌಂಡರ್ಸ್: ಮೆಲ್ಬೋರ್ನ್ನಂತೆ ಸಿಡ್ನಿಯಲ್ಲೂ ಮೂವರು ಆಲ್ರೌಂಡರ್ಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿದಿತ್ತು. ಆಲ್ರೌಂಡರ್ಸ್ ಬ್ಯಾಟಿಂಗ್ನಲ್ಲೂ ಮಿಂಚಲಿಲ್ಲ. ಬೌಲಿಂಗ್ನಲ್ಲೂ ಸೌಂಡ್ ಮಾಡ್ಲಿಲ್ಲ. ನಿತೀಶ್ ಕುಮಾರ್ ರೆಡ್ಡಿ 2 ವಿಕೆಟ್ ಕಬಳಿಸಿದ್ದು ಬಿಟ್ರೆ, ವಾಷಿಂಗ್ಟನ್ ಸುಂದರ್, ರವಿಂದ್ರ ಜಡೇಜಾ ಸಿಡ್ನಿ ಟ್ರ್ಯಾಕ್ನಲ್ಲಿ ಪರದಾಡಿದರು.
ಬುಮ್ರಾ ಇಲ್ಲದೇ ಧಮ್ ಇಲ್ಲ: ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್ನಲ್ಲಿ ಧಮ್ ಇಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಯ್ತು. ಬುಮ್ರಾ ಬಲದೊಂದಿಗೆ ಆಸ್ಟ್ರೇಲಿಯಾ ತಂಡವನ್ನು ಫಸ್ಟ್ ಇನ್ನಿಂಗ್ಸ್ನಲ್ಲಿ 181 ರನ್ಗಳಿಗೆ ಭಾರತ ತಂಡ ಕಟ್ಟಿ ಹಾಕಿತ್ತು. ಗಾಯಗೊಂಡಿದ್ದ ಬುಮ್ರಾ 2ನೇ ಇನ್ನಿಂಗ್ಸ್ನಲ್ಲಿ ಕಣಕ್ಕಿಳಿಯಲಿಲ್ಲ. ಬುಮ್ರಾ ಇಲ್ಲದ ಬೌಲಿಂಗ್ ದುರ್ಬಲವಾಗಿ ಬಿಡ್ತು. 162 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆಸ್ಟ್ರೇಲಿಯಾ ಮೊದಲ 3 ಓವರ್ಗಳಲ್ಲೇ 30 ಚಚ್ಚಿರೋದು ಬೆಸ್ಟ್ ಎಕ್ಸಾಂಪಲ್.
ಇದನ್ನೂ ಓದಿ:ರಾಜಕೀಯ ಸಂಕ್ರಾಂತಿ; ಇಂದು ದೆಹಲಿಗೆ ಡಿ.ಕೆ ಶಿವಕುಮಾರ್ ಭೇಟಿ.. ಕಾರಣ ಇದೆನಾ?
ಕನ್ನಡಿಗ ಪ್ರಸಿದ್ಧ್ ಕೃಷ್ಣ ಹೊರತುಪಡಿಸಿದ್ರೆ, 2ನೇ ಇನ್ನಿಂಗ್ಸ್ನಲ್ಲಿ ಉಳಿದ್ಯಾವ ಬೌಲರ್ ಕೂಡ ಎಫೆಕ್ಟಿವ್ ಅನ್ನಿಸಲಿಲ್ಲ. ಸಿರಾಜ್, ನಿತೀಶ್ ಕುಮಾರ್ ರೆಡ್ಡಿ ಟಿ20ಯಂತೆ 5ಕ್ಕೂ ಹೆಚ್ಚಿನ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟರು. ಆನ್ಫೀಲ್ಡ್ನಲ್ಲಿ ಮಾಡಿದ ಸಾಲು ಸಾಲು ಮಿಸ್ಟೇಕ್ಗಳು ಟೀಮ್ ಇಂಡಿಯಾವನ್ನ ಸಿಡ್ನಿ ಟೆಸ್ಟ್ನಲ್ಲಿ ಮುಗ್ಗರಿಸುವಂತೆ ಮಾಡಿವೆ. 6 ವಿಕೆಟ್ಗಳ ಸೋಲಿನೊಂದಿಗೆ ಸರಣಿಯೂ ಆಸ್ಟ್ರೇಲಿಯಾ ಪಾಲಾಗಿದೆ. ಈ ಸರಣಿ ಸೋಲು ಟೀಮ್ ಇಂಡಿಯಾಗೊಂದು ಪಾಠ.
ಇದನ್ನೂ ಓದಿ:ರಾಜಕೀಯ ಸಂಕ್ರಾಂತಿ; ಇಂದು ದೆಹಲಿಗೆ ಡಿ.ಕೆ ಶಿವಕುಮಾರ್ ಭೇಟಿ.. ಕಾರಣ ಇದೆನಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್