ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸೋಲು
ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ ಎಡವಿದ್ದೆಲ್ಲಿ..?
‘ಅಜೇಯ’ ಓಟ ನಡೆಸಿದ ತಂಡ ಸೋತಿದ್ದು ಎಲ್ಲಿ..?
ಆಸ್ಟ್ರೇಲಿಯಾ ವಿರುದ್ಧ ಸೋತಾಗಿದೆ. ಅಪಾರ ಅಭಿಮಾನಿಗಳ ಕಪ್ ಕನಸೂ ನುಚ್ಚುನೂರಾಗಿದೆ. ಟೂರ್ನಿಯಲ್ಲಿ ಅಜೇಯ ಓಟ ನಡೆಸಿದ ಟೀಮ್ ಇಂಡಿಯಾ ಫೈನಲ್ ಫೈಟ್ನಲ್ಲಿ ಎಡವಿದ್ದೆಲ್ಲಿ? ಟೀಮ್ ಇಂಡಿಯಾದ ಸೋಲಿಗೆ ಕಾರಣ ಏನು? ನಮೋ ಮೈದಾನದಲ್ಲಿ ರೋಹಿತ್ ಪಡೆ ಮಾಡಿದ ಮಿಸ್ಟೇಕ್ಗಳು ಏನು?
ಅಸಂಖ್ಯ ಅಭಿಮಾನಿಗಳ ಹೃದಯ ಚೂರು ಚೂರಾಗಿದೆ. ಮಾಡಿದ ಪ್ರಾರ್ಥನೆ ಎಲ್ಲಾ ವ್ಯರ್ಥವಾಗಿದೆ. ಕಳೆದ 2 ತಿಂಗಳಿಂದ ಕಟ್ಟಿಕೊಂಡಿದ್ದ ಕನಸು ನುಚ್ಚು ನೂರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಸೋಲು ಇಡೀ ಭಾರತದ ಖುಷಿಯನ್ನ ಕಸಿದಿದೆ.
ಅಜೇಯ ಓಟ ನಡೆಸಿದ ಟೀಮ್ ಇಂಡಿಯಾ ಎಡವಿದ್ದೆಲ್ಲಿ?
ನಮೋ ಅಂಗಳದಲ್ಲಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತ ಮೇಲೆ ಎಲ್ಲರನ್ನೂ ಕಾಡ್ತಿರುವ ಪ್ರಶ್ನೆಯಿದು. ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಸೋಲನ್ನೇ ಕಾಣಲಿಲ್ಲ.. ಸೆಮಿಫೈನಲ್ ಪಂದ್ಯದಲ್ಲೂ ಅದ್ಭುತವಾದ ಜಯ ಸಾಧಿಸಿತು. ಹೀಗಾಗಿ ಫೈನಲ್ ಫೈಟ್ನಲ್ಲಿ ಗೆದ್ದೆ ಗೆಲ್ಲುತ್ತೆ ಅನ್ನೋ ಆಶಾಬಾವ ಎಲ್ಲರದ್ದಾಗಿತ್ತು. ಆದ್ರೆ, ಆಗಿದ್ದೇ ಬೇರೆ. ಇದಕ್ಕೆಲ್ಲಾ ಆನ್ಫೀಲ್ಡ್ ಮಾಡಿದ ತಪ್ಪುಗಳೇ ಕಾರಣ.
ಕಾರಣ ನಂ.1: ಟೀಮ್ ಇಂಡಿಯಾಗೆ ಹಿನ್ನಡೆಯಾದ ಟಾಸ್
ಟೀಮ್ ಇಂಡಿಯಾದ ಸೋಲಿನಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ರೆ ಟೀಮ್ ಇಂಡಿಯಾ ಗೆಲುವಿನ ಅವಕಾಶ ಇತ್ತು. ಪಿಚ್ ಆರಂಭದಲ್ಲಿ ಬೌಲರ್ಗಳಿಗೆ ಸಹಾಯ ಮಾಡಿತು. ಇದ್ರ ಅಡ್ವಾಂಟೇಜ್ ಆಸಿಸ್ ಪಡೆದುಕೊಳ್ತು. ಟೀಮ್ ಇಂಡಿಯಾ ಬೌಲಿಂಗ್ ವೇಳೆ ಬೌಲ್ ಹೆಚ್ಚು ಪುಟಿಯಲೇ ಇಲ್ಲ. ಜೊತೆಗೆ ಡ್ಯೂ ಫ್ಯಾಕ್ಟರ್ ಕೂಡ ತಂಡಕ್ಕೆ ಹಿನ್ನಡೆಯಾಗಿ ಕಾಡಿತು.
ಕಾರಣ ನಂ.2: ಒತ್ತಡ ನಿರ್ವಹಿಸುವಲ್ಲಿ ವಿಫಲರಾದ ಬ್ಯಾಟ್ಸ್ಮನ್ಗಳು
ಲೀಗ್ ಹಂತದಲ್ಲಿ ಡೇರ್ ಡೆವಿಲ್ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಆಟಗಾರರು ಫೈನಲ್ ಪಂದ್ಯದಲ್ಲಿ ತೀರಾ ಡಿಫೆನ್ಸಿವ್ ಆಟವಾಡಿದ್ರು. ವಿಕೆಟ್ಗಳನ್ನ ಕಳೆದುಕೊಂಡಾಗ ಒತ್ತಡಕ್ಕೆ ಸಿಲುಕಿದ್ರು. ವಿಕೆಟ್ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ನಿಧಾನಗತಿಯ ಇನ್ನಿಂಗ್ಸ್ ಕಟ್ಟಿದ್ರು. ಪ್ರೆಶರ್ ಹ್ಯಾಂಡೆಲ್ ಮಾಡುವಲ್ಲಿ ವಿಫಲರಾಗಿ ವಿಕೆಟ್ ಒಪ್ಪಿಸಿದ್ರು.
ಕಾರಣ ನಂ.3: ಶುಭ್ಮನ್, ಶ್ರೇಯಸ್, ಸೂರ್ಯ ಕುಮಾರ್ ವೈಫಲ್ಯ
ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಆರಂಭದಲ್ಲೇ ವಿಕೆಟ್ ಒಪ್ಪಿಸಿದ್ರು. ಫಾರ್ಮ್ನಲ್ಲಿದ್ದ ಶ್ರೇಯಸ್ ಅಯ್ಯರ್, ಕೇವಲ 4 ರನ್ಗಳಿಸಿ ನಿರ್ಗಮಿಸಿದ್ರು. ಅತ್ಯುತ್ತಮ ಇನ್ನಿಂಗ್ಸ್ ಕಟ್ಟಬಹುದಾಗಿದ್ದ ಚಿನ್ನದಂತಾ ಅವಕಾಶವನ್ನ ಸೂರ್ಯಕುಮಾರ್ ಯಾದವ್ ಮಣ್ಣು ಪಾಲು ಮಾಡಿದ್ರು. ಈ ಮೂವರನ್ನ ಟೀಮ್ ಇಂಡಿಯಾ ಅತಿ ಹೆಚ್ಚು ನೆಚ್ಚಿಕೊಂಡಿತ್ತು. ಆದ್ರೆ, ಇವ್ರೆ ಕೈ ಕೊಟ್ಟಿದ್ದು ಹಿನ್ನಡೆಯಾಯ್ತು.
ಕಾರಣ ನಂ.5: ಬಿಗ್ ಟಾರ್ಗೆಟ್ ಸೆಟ್ ಮಾಡುವಲ್ಲಿ ವಿಫಲ
ನಮೋ ಮೈದಾನದ ಪಿಚ್ನಲ್ಲಿ ಟೀಮ್ ಇಂಡಿಯಾದ ಸೆಟ್ ಮಾಡಿದ ಟಾರ್ಗೆಟ್ ಸವಾಲಿನದ್ದೇನಾಗಿರಲಿಲ್ಲ. ಗೆಲುವಿಗೆ ಇನ್ನೂ 30ರಿಂದ 40 ರನ್ಗಳು ಹೆಚ್ಚುವರಿ ಅಗತ್ಯವಿದ್ವು ಅನ್ನೋದನ್ನ ಸ್ವತಃ ಕೋಚ್ ರಾಹುಲ್ ದ್ರಾವಿಡೇ ಒಪ್ಪಿಕೊಂಡಿದ್ದಾರೆ.
ಕಾರಣ ನಂ.6: ಹೆಡ್-ಲಬುಶೇನ್ ಜೊತೆಯಾಟ ಬ್ರೇಕ್ ಮಾಡುವಲ್ಲಿ ಫೇಲ್
241 ರನ್ಗಳ ಸಾದಾರಣ ಟಾರ್ಗೆಟ್ ನೀಡಿದ್ರೂ, ಟೀಮ್ ಇಂಡಿಯಾ ಬೌಲಿಂಗ್ ವೇಳೆ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. 47 ರನ್ಗಳಿಸುವಷ್ಟರಲ್ಲಿ ಆಸಿಸ್ನ ಟಾಪ್ ಆರ್ಡರ್ನ 3 ವಿಕೆಟ್ ಕಬಳಿಸಿದ್ರು. ಆದ್ರೆ, ಆ ಬಳಿಕ ಜೊತೆಯಾದ ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್ ಜೊತೆಯಾಟವನ್ನ ಬ್ರೇಕ್ ಮಾಡಲೇ ಇಲ್ಲ.. ಇವರಿಬ್ಬರ ಆಟ ಟೀಮ್ ಇಂಡಿಯಾವನ್ನ ಸೋಲಿಗೆ ಗುರಿ ಮಾಡಿತು.
ಕಾರಣ ನಂ.7: ಗೆಲ್ಲೋ ಛಲ, ಆತ್ಮವಿಶ್ವಾಸದ ಕೊರತೆ,
ಸಾಧಾರಣ ಟಾರ್ಗೆಟ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಟೀಮ್ ಇಂಡಿಯಾ ಎಡವಲು ಮುಖ್ಯವಾದ ಕಾರಣವೇ ಗೆಲುವಿನ ಛಲ ಹಾಗೂ ಆತ್ಮವಿಶ್ವಾಸದ ಕೊರತೆ. ಬೌಲಿಂಗ್ ಆರಂಭಿಸಿದಾಗಲೇ ವೈಡ್, ಬೈಸ್ ರೂಪದಲ್ಲಿ ಆಸಿಸ್ಗೆ ರನ್ ಗಿಫ್ಟ್ ನೀಡಲಾಯ್ತು. ಆಸಿಸ್ ಬ್ಯಾಟ್ಸ್ಮನ್ ಬೌಂಡರಿಗಳನ್ನ ಸಿಡಿಸಿದಾಗಲೆಲ್ಲಾ ಆಟಗಾರರ ವಿಶ್ವಾಸ ಕುಂದಿದ್ದು ಸ್ಪಷ್ಟವಾಗಿ ತಿಳಿತಿತ್ತು. ಗೆಲ್ಲಬೇಕು ಅನ್ನೋ ಛಲ ಹಾಗೂ ಆತ್ಮವಿಶ್ವಾಸ ಕೊರತೆ ಟೀಮ್ ಇಂಡಿಯಾ ಮ್ಯಾಸಿವ್ ಸೆಟ್ಬ್ಯಾಕ್ ಆಯ್ತು ಅಂದ್ರೆ ತಪ್ಪಿಲ್ಲ.
ವಿಶೇಷ ವರದಿ: ವಸಂತ್ ಮಳವತ್ತಿ
ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಸೋಲು
ಫೈನಲ್ ಪಂದ್ಯದಲ್ಲಿ ರೋಹಿತ್ ಪಡೆ ಎಡವಿದ್ದೆಲ್ಲಿ..?
‘ಅಜೇಯ’ ಓಟ ನಡೆಸಿದ ತಂಡ ಸೋತಿದ್ದು ಎಲ್ಲಿ..?
ಆಸ್ಟ್ರೇಲಿಯಾ ವಿರುದ್ಧ ಸೋತಾಗಿದೆ. ಅಪಾರ ಅಭಿಮಾನಿಗಳ ಕಪ್ ಕನಸೂ ನುಚ್ಚುನೂರಾಗಿದೆ. ಟೂರ್ನಿಯಲ್ಲಿ ಅಜೇಯ ಓಟ ನಡೆಸಿದ ಟೀಮ್ ಇಂಡಿಯಾ ಫೈನಲ್ ಫೈಟ್ನಲ್ಲಿ ಎಡವಿದ್ದೆಲ್ಲಿ? ಟೀಮ್ ಇಂಡಿಯಾದ ಸೋಲಿಗೆ ಕಾರಣ ಏನು? ನಮೋ ಮೈದಾನದಲ್ಲಿ ರೋಹಿತ್ ಪಡೆ ಮಾಡಿದ ಮಿಸ್ಟೇಕ್ಗಳು ಏನು?
ಅಸಂಖ್ಯ ಅಭಿಮಾನಿಗಳ ಹೃದಯ ಚೂರು ಚೂರಾಗಿದೆ. ಮಾಡಿದ ಪ್ರಾರ್ಥನೆ ಎಲ್ಲಾ ವ್ಯರ್ಥವಾಗಿದೆ. ಕಳೆದ 2 ತಿಂಗಳಿಂದ ಕಟ್ಟಿಕೊಂಡಿದ್ದ ಕನಸು ನುಚ್ಚು ನೂರಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಸೋಲು ಇಡೀ ಭಾರತದ ಖುಷಿಯನ್ನ ಕಸಿದಿದೆ.
ಅಜೇಯ ಓಟ ನಡೆಸಿದ ಟೀಮ್ ಇಂಡಿಯಾ ಎಡವಿದ್ದೆಲ್ಲಿ?
ನಮೋ ಅಂಗಳದಲ್ಲಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತ ಮೇಲೆ ಎಲ್ಲರನ್ನೂ ಕಾಡ್ತಿರುವ ಪ್ರಶ್ನೆಯಿದು. ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ಸೋಲನ್ನೇ ಕಾಣಲಿಲ್ಲ.. ಸೆಮಿಫೈನಲ್ ಪಂದ್ಯದಲ್ಲೂ ಅದ್ಭುತವಾದ ಜಯ ಸಾಧಿಸಿತು. ಹೀಗಾಗಿ ಫೈನಲ್ ಫೈಟ್ನಲ್ಲಿ ಗೆದ್ದೆ ಗೆಲ್ಲುತ್ತೆ ಅನ್ನೋ ಆಶಾಬಾವ ಎಲ್ಲರದ್ದಾಗಿತ್ತು. ಆದ್ರೆ, ಆಗಿದ್ದೇ ಬೇರೆ. ಇದಕ್ಕೆಲ್ಲಾ ಆನ್ಫೀಲ್ಡ್ ಮಾಡಿದ ತಪ್ಪುಗಳೇ ಕಾರಣ.
ಕಾರಣ ನಂ.1: ಟೀಮ್ ಇಂಡಿಯಾಗೆ ಹಿನ್ನಡೆಯಾದ ಟಾಸ್
ಟೀಮ್ ಇಂಡಿಯಾದ ಸೋಲಿನಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸಿತು. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ರೆ ಟೀಮ್ ಇಂಡಿಯಾ ಗೆಲುವಿನ ಅವಕಾಶ ಇತ್ತು. ಪಿಚ್ ಆರಂಭದಲ್ಲಿ ಬೌಲರ್ಗಳಿಗೆ ಸಹಾಯ ಮಾಡಿತು. ಇದ್ರ ಅಡ್ವಾಂಟೇಜ್ ಆಸಿಸ್ ಪಡೆದುಕೊಳ್ತು. ಟೀಮ್ ಇಂಡಿಯಾ ಬೌಲಿಂಗ್ ವೇಳೆ ಬೌಲ್ ಹೆಚ್ಚು ಪುಟಿಯಲೇ ಇಲ್ಲ. ಜೊತೆಗೆ ಡ್ಯೂ ಫ್ಯಾಕ್ಟರ್ ಕೂಡ ತಂಡಕ್ಕೆ ಹಿನ್ನಡೆಯಾಗಿ ಕಾಡಿತು.
ಕಾರಣ ನಂ.2: ಒತ್ತಡ ನಿರ್ವಹಿಸುವಲ್ಲಿ ವಿಫಲರಾದ ಬ್ಯಾಟ್ಸ್ಮನ್ಗಳು
ಲೀಗ್ ಹಂತದಲ್ಲಿ ಡೇರ್ ಡೆವಿಲ್ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ ಆಟಗಾರರು ಫೈನಲ್ ಪಂದ್ಯದಲ್ಲಿ ತೀರಾ ಡಿಫೆನ್ಸಿವ್ ಆಟವಾಡಿದ್ರು. ವಿಕೆಟ್ಗಳನ್ನ ಕಳೆದುಕೊಂಡಾಗ ಒತ್ತಡಕ್ಕೆ ಸಿಲುಕಿದ್ರು. ವಿಕೆಟ್ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿ ನಿಧಾನಗತಿಯ ಇನ್ನಿಂಗ್ಸ್ ಕಟ್ಟಿದ್ರು. ಪ್ರೆಶರ್ ಹ್ಯಾಂಡೆಲ್ ಮಾಡುವಲ್ಲಿ ವಿಫಲರಾಗಿ ವಿಕೆಟ್ ಒಪ್ಪಿಸಿದ್ರು.
ಕಾರಣ ನಂ.3: ಶುಭ್ಮನ್, ಶ್ರೇಯಸ್, ಸೂರ್ಯ ಕುಮಾರ್ ವೈಫಲ್ಯ
ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಆರಂಭದಲ್ಲೇ ವಿಕೆಟ್ ಒಪ್ಪಿಸಿದ್ರು. ಫಾರ್ಮ್ನಲ್ಲಿದ್ದ ಶ್ರೇಯಸ್ ಅಯ್ಯರ್, ಕೇವಲ 4 ರನ್ಗಳಿಸಿ ನಿರ್ಗಮಿಸಿದ್ರು. ಅತ್ಯುತ್ತಮ ಇನ್ನಿಂಗ್ಸ್ ಕಟ್ಟಬಹುದಾಗಿದ್ದ ಚಿನ್ನದಂತಾ ಅವಕಾಶವನ್ನ ಸೂರ್ಯಕುಮಾರ್ ಯಾದವ್ ಮಣ್ಣು ಪಾಲು ಮಾಡಿದ್ರು. ಈ ಮೂವರನ್ನ ಟೀಮ್ ಇಂಡಿಯಾ ಅತಿ ಹೆಚ್ಚು ನೆಚ್ಚಿಕೊಂಡಿತ್ತು. ಆದ್ರೆ, ಇವ್ರೆ ಕೈ ಕೊಟ್ಟಿದ್ದು ಹಿನ್ನಡೆಯಾಯ್ತು.
ಕಾರಣ ನಂ.5: ಬಿಗ್ ಟಾರ್ಗೆಟ್ ಸೆಟ್ ಮಾಡುವಲ್ಲಿ ವಿಫಲ
ನಮೋ ಮೈದಾನದ ಪಿಚ್ನಲ್ಲಿ ಟೀಮ್ ಇಂಡಿಯಾದ ಸೆಟ್ ಮಾಡಿದ ಟಾರ್ಗೆಟ್ ಸವಾಲಿನದ್ದೇನಾಗಿರಲಿಲ್ಲ. ಗೆಲುವಿಗೆ ಇನ್ನೂ 30ರಿಂದ 40 ರನ್ಗಳು ಹೆಚ್ಚುವರಿ ಅಗತ್ಯವಿದ್ವು ಅನ್ನೋದನ್ನ ಸ್ವತಃ ಕೋಚ್ ರಾಹುಲ್ ದ್ರಾವಿಡೇ ಒಪ್ಪಿಕೊಂಡಿದ್ದಾರೆ.
ಕಾರಣ ನಂ.6: ಹೆಡ್-ಲಬುಶೇನ್ ಜೊತೆಯಾಟ ಬ್ರೇಕ್ ಮಾಡುವಲ್ಲಿ ಫೇಲ್
241 ರನ್ಗಳ ಸಾದಾರಣ ಟಾರ್ಗೆಟ್ ನೀಡಿದ್ರೂ, ಟೀಮ್ ಇಂಡಿಯಾ ಬೌಲಿಂಗ್ ವೇಳೆ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. 47 ರನ್ಗಳಿಸುವಷ್ಟರಲ್ಲಿ ಆಸಿಸ್ನ ಟಾಪ್ ಆರ್ಡರ್ನ 3 ವಿಕೆಟ್ ಕಬಳಿಸಿದ್ರು. ಆದ್ರೆ, ಆ ಬಳಿಕ ಜೊತೆಯಾದ ಟ್ರಾವಿಸ್ ಹೆಡ್, ಮಾರ್ನಸ್ ಲಬುಶೇನ್ ಜೊತೆಯಾಟವನ್ನ ಬ್ರೇಕ್ ಮಾಡಲೇ ಇಲ್ಲ.. ಇವರಿಬ್ಬರ ಆಟ ಟೀಮ್ ಇಂಡಿಯಾವನ್ನ ಸೋಲಿಗೆ ಗುರಿ ಮಾಡಿತು.
ಕಾರಣ ನಂ.7: ಗೆಲ್ಲೋ ಛಲ, ಆತ್ಮವಿಶ್ವಾಸದ ಕೊರತೆ,
ಸಾಧಾರಣ ಟಾರ್ಗೆಟ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಟೀಮ್ ಇಂಡಿಯಾ ಎಡವಲು ಮುಖ್ಯವಾದ ಕಾರಣವೇ ಗೆಲುವಿನ ಛಲ ಹಾಗೂ ಆತ್ಮವಿಶ್ವಾಸದ ಕೊರತೆ. ಬೌಲಿಂಗ್ ಆರಂಭಿಸಿದಾಗಲೇ ವೈಡ್, ಬೈಸ್ ರೂಪದಲ್ಲಿ ಆಸಿಸ್ಗೆ ರನ್ ಗಿಫ್ಟ್ ನೀಡಲಾಯ್ತು. ಆಸಿಸ್ ಬ್ಯಾಟ್ಸ್ಮನ್ ಬೌಂಡರಿಗಳನ್ನ ಸಿಡಿಸಿದಾಗಲೆಲ್ಲಾ ಆಟಗಾರರ ವಿಶ್ವಾಸ ಕುಂದಿದ್ದು ಸ್ಪಷ್ಟವಾಗಿ ತಿಳಿತಿತ್ತು. ಗೆಲ್ಲಬೇಕು ಅನ್ನೋ ಛಲ ಹಾಗೂ ಆತ್ಮವಿಶ್ವಾಸ ಕೊರತೆ ಟೀಮ್ ಇಂಡಿಯಾ ಮ್ಯಾಸಿವ್ ಸೆಟ್ಬ್ಯಾಕ್ ಆಯ್ತು ಅಂದ್ರೆ ತಪ್ಪಿಲ್ಲ.
ವಿಶೇಷ ವರದಿ: ವಸಂತ್ ಮಳವತ್ತಿ