ಧೈರ್ಯವಿಲ್ಲದೇ ಮೊದಲ ಟೆಸ್ಟ್ ಸೋತ ಭಾರತ
ಇಂಗ್ಲೆಂಡ್ ತಂಡಕ್ಕಿರೋ ಧೈರ್ಯ ಭಾರತಕ್ಕೆ ಯಾಕಿಲ್ಲ..?
ಹಿಂಜರಿಕೆ ಬಿಟ್ಟು ಪರ್ಫೆಕ್ಟ್ ತಂಡ ಆಡಿಸೋದ್ಯಾವಾಗ..?
ಟೀಮ್ ಇಂಡಿಯಾ ಹೈದ್ರಾಬಾದ್ ಟೆಸ್ಟ್ ಸೋತಿದೆ. ಪರಾಭವದ ಬಳಿಕ ಸೋಲಿಗೆ ನಾನಾ ಕಾರಣಗಳನ್ನು ಹುಡುಕಲಾಗ್ತಿದೆ. ಆದರೆ ರೋಹಿತ್ ಪಡೆಯ ಹಿನ್ನಡೆಗೆ ಅಸಲಿ ಕಾರಣ ಏನು ಗೊತ್ತಾ? ಅದೇ ಹಿಂಜರಿಕೆ. ಭಾರತ ತಂಡದಲ್ಲಿ ಧೈರ್ಯ ಅನ್ನೋದೇ ಮಾಯವಾಗಿದೆ. ಧೈರ್ಯ ಇದ್ದಿದ್ರೆ ತವರಿನಲ್ಲಿ ಇಂಡಿಯನ್ ಕಲಿಗಳಿಗೆ ಇಂತಹ ಪರಿಸ್ಥಿತಿ ಬರ್ತಾನೆ ಇರ್ಲಿಲ್ಲ.
ಹೈದ್ರಾಬಾದ್ ಟೆಸ್ಟ್ನಲ್ಲಿ ಭಾರತೀಯ ಹುಲಿಗಳ ಆಟ ನಡೀಲಿಲ್ಲ. ಇಂಗ್ಲೆಂಡ್ ತಂಡ, ಭಾರತವನ್ನು ಬಡಿದು ಬಾಯಿಗೆ ಹಾಕಿಕೊಳ್ತು. ಆ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡೋ ಓವರ್ ಕಾನ್ಫಿಡೆನ್ಸ್ನಲ್ಲಿದ್ದ ರೋಹಿತ್ ಶರ್ಮಾ ಪಡೆಗೆ ತಕ್ಕ ಶಾಸ್ತಿ ಆಗಿದೆ. ಹಾಗಾದ್ರೆ 2ನೇ ಟೆಸ್ಟ್ ಕಥೆ ಏನು? ವಿಶಾಖಪಟ್ಟಣಂ ಟೆಸ್ಟ್ ಗೆಲ್ಲಬೇಕಾದ್ರೆ ಆದಷ್ಟು ಬೇಗ ಮಿಸ್ಟೇಕ್ಸ್ ತಿದ್ದಿಕೊಳ್ಳಬೇಕಿದೆ. ಆಗ ಮಾತ್ರ ಕಮ್ಬ್ಯಾಕ್ ಸಾಧ್ಯ. ಅದು ಸಾಧ್ಯವಾಗಬೇಕಾದ್ರೆ ರೋಹಿತ್ ಆ್ಯಂಡ್ ಗ್ಯಾಂಗ್ ಮೊದಲು ಧೈರ್ಯದಿಂದ ಮುನ್ನುಗ್ಗಬೇಕು.
ಇಂಗ್ಲೆಂಡ್ ತಂಡಕ್ಕಿರೋ ಧೈರ್ಯ ಭಾರತಕ್ಕೆ ಯಾಕೆ ಇಲ್ಲ..?
ಮೊದಲ ಟೆಸ್ಟ್ನಲ್ಲಿ ಭಾರತ ಮುಗ್ಗರಿಸಲು ಕಾರಣ ಇಂಗ್ಲೆಂಡ್ ತೋರಿದ ಧೈರ್ಯ. ಹೌದು, ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಒಬ್ಬೆ ಒಬ್ಬ ಸ್ಪೆಷಲಿಸ್ಟ್ ಫಾಸ್ಟ್ ಬೌಲರ್ನ ಆಡಿಸಿ ಧೈರ್ಯ ಪ್ರದರ್ಶಿಸಿದ್ರು. ಮೂವರು ಸ್ಪಿನ್ನರ್ಸ್ ಆಡಿಸಿ ಸಕ್ಸಸ್ ಕಂಡರು ಕೂಡ. ಅದೇ ಪ್ರವಾಸಿ ಇಂಗ್ಲೆಂಡ್ ತೋರಿದ ಧೈರ್ಯವನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಯ್ಕೆಯಲ್ಲಿ ತೋರಲಿಲ್ಲ. ಇಬ್ಬರ ಪೈಕಿ ಓರ್ವ ವೇಗಿ ಆಡಿಸಿ ಮತ್ತೊಬ್ಬ ಸ್ಪಿನ್ನರ್ ಆಡಿಸಿದ್ರೆ ಗೆಲುವು ನಮ್ದೆ ಆಗ್ತಿತ್ತು.
ಫ್ಲಾಪ್ ಸ್ಟಾರ್ ಗಿಲ್-ಶ್ರೇಯಸ್ಗೆ ಗೇಟ್ಪಾಸ್ ಯಾಕಿಲ್ಲ..?
ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಸತತ ಫೇಲ್ಯೂರ್ ಕಾಣ್ತಿದ್ದಾರೆ. ಗಿಲ್ ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ 17 ಎವರೇಜ್ನಲ್ಲಿ ಬ್ಯಾಟ್ ಬೀಸಿದ್ರೆ, 2023 ರಲ್ಲಿ ಬರೀ 258 ರನ್ ಬಾರಿಸಿದ್ರು. ಇನ್ನು ಶ್ರೇಯಸ್ ಕಳೆದ 12 ಇನ್ನಿಂಗ್ಸ್ಗಳಿಂದ ಒಂದೂ ಅರ್ಧಶತಕ ಸಿಡಿಸಿಲ್ಲ. ಇಂತಹ ಪರ್ಫಾಮೆನ್ಸ್ ನೀಡ್ತಿರೋ ಇಬ್ಬರನ್ನ ಇನ್ನೂ ತಂಡದಲ್ಲಿ ಇಟ್ಟುಕೊಳ್ಳಲಾಗಿದೆ. ಗಿಲ್-ಶ್ರೇಯಸ್ ಬಿಟ್ರೆ ಬೇರೆ ಯಾರು ಗತಿನೇ ಇಲ್ವಾ ? ಮುಲಾಜಿಲ್ಲದೇ ಈ ಫ್ಲಾಪ್ ಸ್ಟಾರ್ಗಳನ್ನ ತಂಡದಿಂದ ಡ್ರಾಪ್ ಮಾಡಬೇಕಿದೆ.
ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ ಕ್ಯಾಪ್ಟನ್ ರೋಹಿತ್
ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ರೂ ಕ್ಯಾಪ್ಟನ್ ರೋಹಿತ್ ಫೇಲ್ ಆದ ಆಟಗಾರರಿಗೆ ಬ್ಯಾಕ್ ಟು ಬ್ಯಾಕ್ ಚಾನ್ಸ್ ನೀಡ್ತಿದ್ದಾರೆ. ರೋಹಿತ್ ಇದನ್ನ ಮೊದಲು ಬಿಡಬೇಕಿದೆ. ರಿಸಲ್ಟ್ ಏನೇ ಬರಲಿ. ಮೊದಲು ಧೈರ್ಯದಿಂದ ಕಠಿಣ ನಿರ್ಧಾರ ಕೈಗೊಳ್ಳಲಿ. ರಿಂಕು ಸಿಂಗ್ ಹಾಗೂ ಶಿವಂ ದುಬೆ ಡೊಮೆಸ್ಟಿಕ್ ರನ್ ಮಷೀನ್ಸ್. ಇವರಿಗೆ ಗಿಲ್ ಹಾಗೂ ಶ್ರೇಯಸ್ ಸ್ಥಾನವನ್ನ ತುಂಬುವ ಸಾಮರ್ಥ್ಯವಿದೆ. ಕ್ಯಾಪ್ಟನ್ ಹಾಗೂ ಕೋಚ್ ಇವರ ಆಯ್ಕೆ ಬಗ್ಗೆ ಗಮನ ಹರಿಸಬೇಕು.
ಇಂಗ್ಲೆಂಡ್-ಆಸಿಸ್ ಬೋರ್ಡ್ನಿಂದ ಪಾಠ ಕಲಿಯುತ್ತಾ ಬಿಸಿಸಿಐ..?
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ಗಳಿಗೆ ರಿಸಲ್ಟ್ ಮುಖ್ಯ. ಎಂತಹ ದೊಡ್ಡ ಸ್ಟಾರ್ ಇದ್ರೂ ಅವರನ್ನ ಬರೀ ಆಟಗಾರರಾಗಿ ಮಾತ್ರ ನೋಡ್ತಾರೆ. ಕಳಪೆ ಆಟವಾಡಿದ್ರೆ ಮುಲಾಜಿಲ್ಲದೆ ತಂಡದಿಂದ ಕಿತ್ತೆಸೆಯುತ್ತಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡ್ತಾರೆ. ಆದ್ರೆ ನಮ್ಮಲ್ಲಿ ಹಾಗಲ್ಲ. ಸ್ಟಾರ್ಗಿರಿ ಹಿಂದೆ ಬಿದ್ದು ಎಷ್ಟೇ ಕೆಟ್ಟ ಪ್ರದರ್ಶನ ನೀಡಿದ್ರೂ ಪದೇ ಪದೇ ಅವಕಾಶ ನೀಡಲಾಗುತ್ತೆ. ಸದ್ಯ ಶುಭ್ಮನ್ ಗಿಲ್-ಶ್ರೇಯಸ್ ವಿಚಾರದಲ್ಲಿ ಆಗಿರೋದು ಇದೆ.
ಟೀಮ್ ಇಂಡಿಯಾದ ಇನ್ನಾದ್ರು ಎಚ್ಚೆತ್ತುಕೊಳ್ಳಬೇಕಿದೆ. ಎಂತಹ ಸೂಪರ್ಸ್ಟಾರ್ ಆಟಗಾರರಾದ್ರು ಸೈ. ಒಮ್ಮೆ ಬಿಸಿ ಮುಟ್ಟಿಸಿದ್ರೆ ತಾವಾಗಿಯೇ ದಾರಿಗೆ ಬರ್ತಾರೆ. ಇಲ್ಲವಾದ್ರೆ ಕಳಪೆ ಪ್ರದರ್ಶನ ನೀಡಿಯೂ ತಂಡದಲ್ಲಿ ಚಾನ್ಸ್ ಕೊಟ್ರೆ ಅದನ್ನೇ ಅಡ್ವಾಂಟೇಜ್ ಮಾಡಿಕೊಂಡು ಬಿಡ್ತಾರೆ. ಇಂತವರಿಗೆ ಬುದ್ಧಿ ಕಲಿಸಬೇಕಾದ್ರೆ ಟೀಮ್ ಇಂಡಿಯಾ ಆಸಿಸ್ ಹಾಗೂ ಇಂಗ್ಲೆಂಡ್ ಮಂಡಳಿಗಳಿಂದ ಪಾಠ ಕಲಿತು ಹೊಸಬರಿಗೆ ಮಣೆ ಹಾಕಬೇಕಿದೆ. ಹಾಗಾದ್ದಲ್ಲಿ ಮಾತ್ರ 2ನೇ ಟೆಸ್ಟ್ನಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳಲು ಸಾಧ್ಯ. ಇಲ್ಲವಾದ್ರೆ ಟೀಮ್ ಇಂಡಿಯಾಗೆ ವಿಶಾಖಪಟ್ಟಣಂನಲ್ಲಿ ಮತ್ತೊಂದು ಸೋಲು ತಪ್ಪಿದ್ದಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಧೈರ್ಯವಿಲ್ಲದೇ ಮೊದಲ ಟೆಸ್ಟ್ ಸೋತ ಭಾರತ
ಇಂಗ್ಲೆಂಡ್ ತಂಡಕ್ಕಿರೋ ಧೈರ್ಯ ಭಾರತಕ್ಕೆ ಯಾಕಿಲ್ಲ..?
ಹಿಂಜರಿಕೆ ಬಿಟ್ಟು ಪರ್ಫೆಕ್ಟ್ ತಂಡ ಆಡಿಸೋದ್ಯಾವಾಗ..?
ಟೀಮ್ ಇಂಡಿಯಾ ಹೈದ್ರಾಬಾದ್ ಟೆಸ್ಟ್ ಸೋತಿದೆ. ಪರಾಭವದ ಬಳಿಕ ಸೋಲಿಗೆ ನಾನಾ ಕಾರಣಗಳನ್ನು ಹುಡುಕಲಾಗ್ತಿದೆ. ಆದರೆ ರೋಹಿತ್ ಪಡೆಯ ಹಿನ್ನಡೆಗೆ ಅಸಲಿ ಕಾರಣ ಏನು ಗೊತ್ತಾ? ಅದೇ ಹಿಂಜರಿಕೆ. ಭಾರತ ತಂಡದಲ್ಲಿ ಧೈರ್ಯ ಅನ್ನೋದೇ ಮಾಯವಾಗಿದೆ. ಧೈರ್ಯ ಇದ್ದಿದ್ರೆ ತವರಿನಲ್ಲಿ ಇಂಡಿಯನ್ ಕಲಿಗಳಿಗೆ ಇಂತಹ ಪರಿಸ್ಥಿತಿ ಬರ್ತಾನೆ ಇರ್ಲಿಲ್ಲ.
ಹೈದ್ರಾಬಾದ್ ಟೆಸ್ಟ್ನಲ್ಲಿ ಭಾರತೀಯ ಹುಲಿಗಳ ಆಟ ನಡೀಲಿಲ್ಲ. ಇಂಗ್ಲೆಂಡ್ ತಂಡ, ಭಾರತವನ್ನು ಬಡಿದು ಬಾಯಿಗೆ ಹಾಕಿಕೊಳ್ತು. ಆ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡೋ ಓವರ್ ಕಾನ್ಫಿಡೆನ್ಸ್ನಲ್ಲಿದ್ದ ರೋಹಿತ್ ಶರ್ಮಾ ಪಡೆಗೆ ತಕ್ಕ ಶಾಸ್ತಿ ಆಗಿದೆ. ಹಾಗಾದ್ರೆ 2ನೇ ಟೆಸ್ಟ್ ಕಥೆ ಏನು? ವಿಶಾಖಪಟ್ಟಣಂ ಟೆಸ್ಟ್ ಗೆಲ್ಲಬೇಕಾದ್ರೆ ಆದಷ್ಟು ಬೇಗ ಮಿಸ್ಟೇಕ್ಸ್ ತಿದ್ದಿಕೊಳ್ಳಬೇಕಿದೆ. ಆಗ ಮಾತ್ರ ಕಮ್ಬ್ಯಾಕ್ ಸಾಧ್ಯ. ಅದು ಸಾಧ್ಯವಾಗಬೇಕಾದ್ರೆ ರೋಹಿತ್ ಆ್ಯಂಡ್ ಗ್ಯಾಂಗ್ ಮೊದಲು ಧೈರ್ಯದಿಂದ ಮುನ್ನುಗ್ಗಬೇಕು.
ಇಂಗ್ಲೆಂಡ್ ತಂಡಕ್ಕಿರೋ ಧೈರ್ಯ ಭಾರತಕ್ಕೆ ಯಾಕೆ ಇಲ್ಲ..?
ಮೊದಲ ಟೆಸ್ಟ್ನಲ್ಲಿ ಭಾರತ ಮುಗ್ಗರಿಸಲು ಕಾರಣ ಇಂಗ್ಲೆಂಡ್ ತೋರಿದ ಧೈರ್ಯ. ಹೌದು, ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಒಬ್ಬೆ ಒಬ್ಬ ಸ್ಪೆಷಲಿಸ್ಟ್ ಫಾಸ್ಟ್ ಬೌಲರ್ನ ಆಡಿಸಿ ಧೈರ್ಯ ಪ್ರದರ್ಶಿಸಿದ್ರು. ಮೂವರು ಸ್ಪಿನ್ನರ್ಸ್ ಆಡಿಸಿ ಸಕ್ಸಸ್ ಕಂಡರು ಕೂಡ. ಅದೇ ಪ್ರವಾಸಿ ಇಂಗ್ಲೆಂಡ್ ತೋರಿದ ಧೈರ್ಯವನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಯ್ಕೆಯಲ್ಲಿ ತೋರಲಿಲ್ಲ. ಇಬ್ಬರ ಪೈಕಿ ಓರ್ವ ವೇಗಿ ಆಡಿಸಿ ಮತ್ತೊಬ್ಬ ಸ್ಪಿನ್ನರ್ ಆಡಿಸಿದ್ರೆ ಗೆಲುವು ನಮ್ದೆ ಆಗ್ತಿತ್ತು.
ಫ್ಲಾಪ್ ಸ್ಟಾರ್ ಗಿಲ್-ಶ್ರೇಯಸ್ಗೆ ಗೇಟ್ಪಾಸ್ ಯಾಕಿಲ್ಲ..?
ಶುಭ್ಮನ್ ಗಿಲ್ ಹಾಗೂ ಶ್ರೇಯಸ್ ಅಯ್ಯರ್ ಸತತ ಫೇಲ್ಯೂರ್ ಕಾಣ್ತಿದ್ದಾರೆ. ಗಿಲ್ ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ 17 ಎವರೇಜ್ನಲ್ಲಿ ಬ್ಯಾಟ್ ಬೀಸಿದ್ರೆ, 2023 ರಲ್ಲಿ ಬರೀ 258 ರನ್ ಬಾರಿಸಿದ್ರು. ಇನ್ನು ಶ್ರೇಯಸ್ ಕಳೆದ 12 ಇನ್ನಿಂಗ್ಸ್ಗಳಿಂದ ಒಂದೂ ಅರ್ಧಶತಕ ಸಿಡಿಸಿಲ್ಲ. ಇಂತಹ ಪರ್ಫಾಮೆನ್ಸ್ ನೀಡ್ತಿರೋ ಇಬ್ಬರನ್ನ ಇನ್ನೂ ತಂಡದಲ್ಲಿ ಇಟ್ಟುಕೊಳ್ಳಲಾಗಿದೆ. ಗಿಲ್-ಶ್ರೇಯಸ್ ಬಿಟ್ರೆ ಬೇರೆ ಯಾರು ಗತಿನೇ ಇಲ್ವಾ ? ಮುಲಾಜಿಲ್ಲದೇ ಈ ಫ್ಲಾಪ್ ಸ್ಟಾರ್ಗಳನ್ನ ತಂಡದಿಂದ ಡ್ರಾಪ್ ಮಾಡಬೇಕಿದೆ.
ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ ಕ್ಯಾಪ್ಟನ್ ರೋಹಿತ್
ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ರೂ ಕ್ಯಾಪ್ಟನ್ ರೋಹಿತ್ ಫೇಲ್ ಆದ ಆಟಗಾರರಿಗೆ ಬ್ಯಾಕ್ ಟು ಬ್ಯಾಕ್ ಚಾನ್ಸ್ ನೀಡ್ತಿದ್ದಾರೆ. ರೋಹಿತ್ ಇದನ್ನ ಮೊದಲು ಬಿಡಬೇಕಿದೆ. ರಿಸಲ್ಟ್ ಏನೇ ಬರಲಿ. ಮೊದಲು ಧೈರ್ಯದಿಂದ ಕಠಿಣ ನಿರ್ಧಾರ ಕೈಗೊಳ್ಳಲಿ. ರಿಂಕು ಸಿಂಗ್ ಹಾಗೂ ಶಿವಂ ದುಬೆ ಡೊಮೆಸ್ಟಿಕ್ ರನ್ ಮಷೀನ್ಸ್. ಇವರಿಗೆ ಗಿಲ್ ಹಾಗೂ ಶ್ರೇಯಸ್ ಸ್ಥಾನವನ್ನ ತುಂಬುವ ಸಾಮರ್ಥ್ಯವಿದೆ. ಕ್ಯಾಪ್ಟನ್ ಹಾಗೂ ಕೋಚ್ ಇವರ ಆಯ್ಕೆ ಬಗ್ಗೆ ಗಮನ ಹರಿಸಬೇಕು.
ಇಂಗ್ಲೆಂಡ್-ಆಸಿಸ್ ಬೋರ್ಡ್ನಿಂದ ಪಾಠ ಕಲಿಯುತ್ತಾ ಬಿಸಿಸಿಐ..?
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ಗಳಿಗೆ ರಿಸಲ್ಟ್ ಮುಖ್ಯ. ಎಂತಹ ದೊಡ್ಡ ಸ್ಟಾರ್ ಇದ್ರೂ ಅವರನ್ನ ಬರೀ ಆಟಗಾರರಾಗಿ ಮಾತ್ರ ನೋಡ್ತಾರೆ. ಕಳಪೆ ಆಟವಾಡಿದ್ರೆ ಮುಲಾಜಿಲ್ಲದೆ ತಂಡದಿಂದ ಕಿತ್ತೆಸೆಯುತ್ತಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡ್ತಾರೆ. ಆದ್ರೆ ನಮ್ಮಲ್ಲಿ ಹಾಗಲ್ಲ. ಸ್ಟಾರ್ಗಿರಿ ಹಿಂದೆ ಬಿದ್ದು ಎಷ್ಟೇ ಕೆಟ್ಟ ಪ್ರದರ್ಶನ ನೀಡಿದ್ರೂ ಪದೇ ಪದೇ ಅವಕಾಶ ನೀಡಲಾಗುತ್ತೆ. ಸದ್ಯ ಶುಭ್ಮನ್ ಗಿಲ್-ಶ್ರೇಯಸ್ ವಿಚಾರದಲ್ಲಿ ಆಗಿರೋದು ಇದೆ.
ಟೀಮ್ ಇಂಡಿಯಾದ ಇನ್ನಾದ್ರು ಎಚ್ಚೆತ್ತುಕೊಳ್ಳಬೇಕಿದೆ. ಎಂತಹ ಸೂಪರ್ಸ್ಟಾರ್ ಆಟಗಾರರಾದ್ರು ಸೈ. ಒಮ್ಮೆ ಬಿಸಿ ಮುಟ್ಟಿಸಿದ್ರೆ ತಾವಾಗಿಯೇ ದಾರಿಗೆ ಬರ್ತಾರೆ. ಇಲ್ಲವಾದ್ರೆ ಕಳಪೆ ಪ್ರದರ್ಶನ ನೀಡಿಯೂ ತಂಡದಲ್ಲಿ ಚಾನ್ಸ್ ಕೊಟ್ರೆ ಅದನ್ನೇ ಅಡ್ವಾಂಟೇಜ್ ಮಾಡಿಕೊಂಡು ಬಿಡ್ತಾರೆ. ಇಂತವರಿಗೆ ಬುದ್ಧಿ ಕಲಿಸಬೇಕಾದ್ರೆ ಟೀಮ್ ಇಂಡಿಯಾ ಆಸಿಸ್ ಹಾಗೂ ಇಂಗ್ಲೆಂಡ್ ಮಂಡಳಿಗಳಿಂದ ಪಾಠ ಕಲಿತು ಹೊಸಬರಿಗೆ ಮಣೆ ಹಾಕಬೇಕಿದೆ. ಹಾಗಾದ್ದಲ್ಲಿ ಮಾತ್ರ 2ನೇ ಟೆಸ್ಟ್ನಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳಲು ಸಾಧ್ಯ. ಇಲ್ಲವಾದ್ರೆ ಟೀಮ್ ಇಂಡಿಯಾಗೆ ವಿಶಾಖಪಟ್ಟಣಂನಲ್ಲಿ ಮತ್ತೊಂದು ಸೋಲು ತಪ್ಪಿದ್ದಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್