ಮಾಲೀಕರು, ಗೋಡೌನ್ ಬಾಡಿಗೆಗೆ ಪಡೆದ ಬ್ಯಾಂಕ್ನಿಂದ CCTV ಅಳವಡಿಕೆ
ಆರೋಪಿಗಳನ್ನು ಜೈಲಿಗೆ ಕಳುಹಿಸಲು ಸಾಕ್ಷಿ ನೀಡಿದ ಸಿಸಿಟಿವಿ ದೃಶ್ಯಗಳು
ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ತೀವ್ರ ತನಿಖೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಪವಿತ್ರಾ ಗ್ಯಾಂಗ್ ಬಂಧನಕ್ಕೆ ಒಳಗಾಗಿದೆ. ಡೆಡ್ಲಿ ಮರ್ಡರ್ ಕೇಸ್ನ ತನಿಖೆಯಲ್ಲಿ ಸಾಕಷ್ಟು ಭಯಾನಕ ಸತ್ಯಗಳು ಒಂದೊಂದಾಗಿ ಆಚೆ ಬರುತ್ತಿದೆ. ರೇಣುಕಾಸ್ವಾಮಿ ಅವರ ಕೊಲೆಗೆ ಪವಿತ್ರಾಗೌಡ ಅವರಿಗೆ ಮಾಡಿದ ಕಮೆಂಟ್ ಹಾಗೂ ಅಶ್ಲೀಲ ಮೆಸೇಜ್ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್ ವಿರುದ್ಧ ಸ್ಟೇಟಸ್ ಹಾಕಿದ್ದಕ್ಕೆ ನಿನ್ನನ್ನು ಜೀವಂತ ಸುಡುತ್ತೇವೆ ಎಂದ ಅಭಿಮಾನಿ! ಮುಂದೇನಾಯ್ತು ಗೊತ್ತಾ?
ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ತೀವ್ರ ವಿಚಾರಣೆ ಶುರುವಾಗಿದೆ. ಆರೋಪ ಪ್ರಕರಣದಲ್ಲಿ ನಟ ದರ್ಶನ್ರನ್ನು ಅರೆಸ್ಟ್ ಮಾಡಿದ್ದೇ ಒಂದು ರೋಚಕ ಕತೆಯಾಗಿದೆ. ನ್ಯೂಸ್ ಫಸ್ಟ್ಗೆ ಉನ್ನತ ಮೂಲಗಳಿಂದ ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಗೋಡೌನ್ನಲ್ಲಿದೆ 7 ಸಿಸಿಟಿವಿ ಕ್ಯಾಮರಾಗಳು ಇವೆ. ಆ ಪೈಕಿ 2 ಕ್ಯಾಮರಾದಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ.
ನಟ ದರ್ಶನ್, ಪವಿತ್ರ ಗೌಡ ಮತ್ತು ಯಾರೆಲ್ಲಾ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಸತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಅಂತೆ. ಆದರೆ ಯುವಕನ್ನು ಹೇಗೆ ಕೊಲೆ ಮಾಡಬೇಕು ಅಂತಾ ಆರೋಪಿಗಳು ಸಖತ್ ಪ್ಲಾನ್ ಮಾಡಿಕೊಂಡಿದ್ದರು. ಆದರೆ ಎಣ್ಣೆಯ ಅಮಲಿನಲ್ಲಿದ್ದ ಆರೋಪಿಗಳು ಪಟ್ಟಣಗೆರೆ ಶೆಡ್ನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇರುವುದನ್ನೇ ಮರೆತು ಬಿಟ್ಟಿದ್ದಾರೆ. ಗೋಡೌನ್ ಅನ್ನು ತನ್ನ ಕಂಟ್ರೋಲ್ನಲ್ಲಿ ಇಟ್ಟುಕೊಂಡಿದ್ದ ಆರೋಪಿ ವಿನಯ್ ಕೂಡ ಸಿಸಿಟಿವಿ ಇರುವುದನ್ನು ಮರೆತು ಬಿಟ್ಟಿದ್ದ. ಗೋಡೌನ್ನ ಮಾಲೀಕರು ಮತ್ತು ಬಾಡಿಗೆಗೆ ಪಡೆದ ಬ್ಯಾಂಕ್ನವರು ಸಿಸಿಟಿವಿ ಅಳವಡಿಕೆ ಮಾಡಿದ್ದರು. ಸದ್ಯ ಇದೇ ಸಿಸಿಟಿವಿ ದೃಶ್ಯಗಳು ನಟ ದರ್ಶನ್ ಮತ್ತು ಅವರ ಗ್ಯಾಂಗ್ ಅನ್ನು ಅರೆಸ್ಟ್ ಮಾಡಲು ಮಹತ್ವದ ಸಾಕ್ಷಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಾಲೀಕರು, ಗೋಡೌನ್ ಬಾಡಿಗೆಗೆ ಪಡೆದ ಬ್ಯಾಂಕ್ನಿಂದ CCTV ಅಳವಡಿಕೆ
ಆರೋಪಿಗಳನ್ನು ಜೈಲಿಗೆ ಕಳುಹಿಸಲು ಸಾಕ್ಷಿ ನೀಡಿದ ಸಿಸಿಟಿವಿ ದೃಶ್ಯಗಳು
ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ತೀವ್ರ ತನಿಖೆ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಪವಿತ್ರಾ ಗ್ಯಾಂಗ್ ಬಂಧನಕ್ಕೆ ಒಳಗಾಗಿದೆ. ಡೆಡ್ಲಿ ಮರ್ಡರ್ ಕೇಸ್ನ ತನಿಖೆಯಲ್ಲಿ ಸಾಕಷ್ಟು ಭಯಾನಕ ಸತ್ಯಗಳು ಒಂದೊಂದಾಗಿ ಆಚೆ ಬರುತ್ತಿದೆ. ರೇಣುಕಾಸ್ವಾಮಿ ಅವರ ಕೊಲೆಗೆ ಪವಿತ್ರಾಗೌಡ ಅವರಿಗೆ ಮಾಡಿದ ಕಮೆಂಟ್ ಹಾಗೂ ಅಶ್ಲೀಲ ಮೆಸೇಜ್ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ದರ್ಶನ್ ವಿರುದ್ಧ ಸ್ಟೇಟಸ್ ಹಾಕಿದ್ದಕ್ಕೆ ನಿನ್ನನ್ನು ಜೀವಂತ ಸುಡುತ್ತೇವೆ ಎಂದ ಅಭಿಮಾನಿ! ಮುಂದೇನಾಯ್ತು ಗೊತ್ತಾ?
ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ತೀವ್ರ ವಿಚಾರಣೆ ಶುರುವಾಗಿದೆ. ಆರೋಪ ಪ್ರಕರಣದಲ್ಲಿ ನಟ ದರ್ಶನ್ರನ್ನು ಅರೆಸ್ಟ್ ಮಾಡಿದ್ದೇ ಒಂದು ರೋಚಕ ಕತೆಯಾಗಿದೆ. ನ್ಯೂಸ್ ಫಸ್ಟ್ಗೆ ಉನ್ನತ ಮೂಲಗಳಿಂದ ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಗೋಡೌನ್ನಲ್ಲಿದೆ 7 ಸಿಸಿಟಿವಿ ಕ್ಯಾಮರಾಗಳು ಇವೆ. ಆ ಪೈಕಿ 2 ಕ್ಯಾಮರಾದಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ.
ನಟ ದರ್ಶನ್, ಪವಿತ್ರ ಗೌಡ ಮತ್ತು ಯಾರೆಲ್ಲಾ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಸತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಅಂತೆ. ಆದರೆ ಯುವಕನ್ನು ಹೇಗೆ ಕೊಲೆ ಮಾಡಬೇಕು ಅಂತಾ ಆರೋಪಿಗಳು ಸಖತ್ ಪ್ಲಾನ್ ಮಾಡಿಕೊಂಡಿದ್ದರು. ಆದರೆ ಎಣ್ಣೆಯ ಅಮಲಿನಲ್ಲಿದ್ದ ಆರೋಪಿಗಳು ಪಟ್ಟಣಗೆರೆ ಶೆಡ್ನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇರುವುದನ್ನೇ ಮರೆತು ಬಿಟ್ಟಿದ್ದಾರೆ. ಗೋಡೌನ್ ಅನ್ನು ತನ್ನ ಕಂಟ್ರೋಲ್ನಲ್ಲಿ ಇಟ್ಟುಕೊಂಡಿದ್ದ ಆರೋಪಿ ವಿನಯ್ ಕೂಡ ಸಿಸಿಟಿವಿ ಇರುವುದನ್ನು ಮರೆತು ಬಿಟ್ಟಿದ್ದ. ಗೋಡೌನ್ನ ಮಾಲೀಕರು ಮತ್ತು ಬಾಡಿಗೆಗೆ ಪಡೆದ ಬ್ಯಾಂಕ್ನವರು ಸಿಸಿಟಿವಿ ಅಳವಡಿಕೆ ಮಾಡಿದ್ದರು. ಸದ್ಯ ಇದೇ ಸಿಸಿಟಿವಿ ದೃಶ್ಯಗಳು ನಟ ದರ್ಶನ್ ಮತ್ತು ಅವರ ಗ್ಯಾಂಗ್ ಅನ್ನು ಅರೆಸ್ಟ್ ಮಾಡಲು ಮಹತ್ವದ ಸಾಕ್ಷಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ