ರೇಣುಕಾಸ್ವಾಮಿ ಕೊನೆಯ ದಿನ ಬಳಸಿದ್ದ ಬೈಕ್ ಪರಿಶೀಲಿಸಿ, ಮಹಜರ್
ಜೂ.8ರಂದು ಏನೆಲ್ಲಾ ನಡೆದಿತ್ತು ಎಂದು ಪೊಲೀಸ್ ಅಧಿಕಾರಿಗಳಿಂದ ವಿಚಾರಣೆ
ಸಿಎಂ ಸಿದ್ದು ಭೇಟಿ ಮಾಡಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೇಣುಕಾಸ್ವಾಮಿ ಪೋಷಕರು
ರೇಣುಕಾಸ್ವಾಮಿ ಕೊಲೆ ಕೇಸ್ನ ತನಿಖೆ ಚಿತ್ರದುರ್ಗಕ್ಕೂ ವ್ಯಾಪಿಸಿದೆ. ಮೊಬೈಲ್ ಪತ್ತೆಗೆ ಪೊಲೀಸರು ವಿಚಾರಣೆ ಮಾಡ್ತಿದ್ದಾರೆ. ನಿನ್ನೆ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಸ್ಥರಿಂದ ಮಾಹಿತಿ ಪಡೆಯಲಾಗಿದೆ. ಫಾರ್ಮಸಿಯಲ್ಲೂ ವಿಚಾರಣೆ ನಡೆದಿದೆ. ಬೆಂಗಳೂರಿಗೆ ಆಗಮಿಸಿದ್ದ ರೇಣುಕಾಸ್ವಾಮಿ ಹೆತ್ತವರು, ಸಿಎಂ ಬಳಿ ನ್ಯಾಯಕ್ಕಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದನ್ನೂ ಓದಿ: ಕೊಲೆ ಕೇಸ್ಗೆ 10, 20 ಅಲ್ಲ ಬರೋಬ್ಬರಿ 50 ಸಿಸಿಟಿವಿಯಲ್ಲಿ ಸುಳಿವು.. ದರ್ಶನ್ ಗ್ಯಾಂಗ್ಗೆ ಹೊಸ ಆಪತ್ತು!
ಅಂದ್ಹಾಗೆ ಇಡೀ ಪ್ರಕರಣದ ಕೇಂದ್ರ ಬಿಂದುವೇ ಈ ಹತ್ಯೆಯಾದ ರೇಣುಕಾಸ್ವಾಮಿ. ಸದ್ಯ ರೇಣುಕಾಸ್ವಾಮಿ ಕೇಸ್ನ ತನಿಖೆ ಚಿತ್ರದುರ್ಗಕ್ಕೂ ವ್ಯಾಪಿಸಿದೆ. ರೇಣುಕಾಸ್ವಾಮಿ ಮೊಬೈಲ್ ಪತ್ತೆಗೆ ಪೊಲೀಸರಿಂದ ತೀವ್ರ ಹುಡುಕಾಟ ನಡೀತಾನೇ ಇದೆ. ಕೋಟೆನಾಡು ಚಿತ್ರದುರ್ಗದಲ್ಲಿ ಹಲವು ಆಯಾಮಗಳಲ್ಲೂ ಕೊಲೆಯ ತನಿಖೆ ನಡೆಸಲಾಗ್ತಿದೆ. ರೇಣುಕಾಸ್ವಾಮಿ ಮನೆಗೂ ಭೇಟಿ ನೀಡಿ ಮೃತನ ತಂದೆ, ತಾಯಿ ಮತ್ತು ಪತ್ನಿಯಿಂದ ಸೆಕ್ಷನ್ 161 ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮೊದಲಿಗೆ ರೇಣುಕಾಸ್ವಾಮಿ ಕಿಡ್ನಾಪ್ಗೂ ಮುನ್ನ ಬಳಸಿದ್ದ ಬೈಕ್ ಪರಿಶೀಲನೆ ಜೊತೆಗೆ ಬೈಕ್ ನಿಲ್ಲಿಸಿದ್ದ ಸ್ಥಳದ ಮಹಜರು ಮಾಡಲಾಗಿದೆ. ಬಳಿಕ ರೇಣುಕಾಸ್ವಾಮಿ ಕುಟುಂಬದ ವಿಚಾರಣೆ ನಡೆಸಿದ ಪೊಲೀಸರು, ಜೂನ್ 8ರಂದು ಏನೆಲ್ಲಾ ನಡೆದಿತ್ತು ಅಂತ ಕೇಳಿದ್ದಾರೆ. ಕೊನೆಯದಾಗಿ ಫೋನ್ ಮಾಡಿದ್ದು ಯಾವಾಗ? ಏನು ಹೇಳಿದ್ದ ಅಂತ ವಿಚಾರಿಸಿದ್ದಾರೆ.
ನಂತರ ಅಪೋಲೋ ಫಾರ್ಮಸಿಗೆ ತೆರಳಿದ ಪೊಲೀಸರು, ಅಲ್ಲಿ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಪೋಲೋ ಫಾರ್ಮಸಿಯಲ್ಲಿ ಈ ರೇಣುಕಾಸ್ವಾಮಿ ಸ್ಟಾಕ್ ನೋಡಿಕೊಳ್ತಿದ್ನಂತೆ. ಹಾಗಾಗಿ ಆತ ಇಲ್ಲಿಂದ ಎಲ್ಲೆಲ್ಲಿಗೆ ಔಷಧಿ ಡೆಲಿವರಿ ಕೊಡ್ತಿದ್ದ? ಆನ್ಲೈನ್ನಲ್ಲೂ ಡೆಲಿವರಿ ಮಾಡ್ತಿದ್ದನಾ? ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಪಡೆದು 5 ಸಿಬ್ಬಂದಿಗಳ ಫೋನ್ ನಂಬರ್ ಸಂಗ್ರಹಿಸಿ ಪೊಲೀಸರು ತೆರಳಿದ್ದಾರೆ. ಅಲ್ಲದೆ, ರೇಣುಕ ಮೊಬೈಲ್ನ ಡೂಪ್ಲಿಕೇಟ್ ಸಿಮ್ ಸಹ ಪಡೆದು ಬ್ಯಾಕಪ್ ಪಡೆಯಲು ಮುಂದಾಗಿದ್ದಾರೆ. ಇನ್ನು, ವಿಚಾರಣೆ ನಡೆಸಿದ ಬಗ್ಗೆ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದೇ ಮೊದಲ ತಪ್ಪು.. A4 ರಘು ಪತ್ನಿ ಸಹನಾ ಖಡಕ್ ಮಾತು; ಹೇಳಿದ್ದೇನು?
ಸಿಎಂ ಸಿದ್ದು ಭೇಟಿ ಮಾಡಿದ ರೇಣುಕಾಸ್ವಾಮಿ ಹೆತ್ತವರ ಕಣ್ಣೀರ ಕೋಡಿಯೇ ಹರಿದಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ತಂದೆ-ತಾಯಿ ತಮಗೆ ನ್ಯಾಯ ಬೇಕು ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅದೆಷ್ಟೇ ಸಾಂತ್ವನ ಹೇಳಿದ್ರೂ ಹೆತ್ತವರ ಕಣ್ಣೀರಿಗೆ ಬೇಲಿ ಹಾಕಲಾಗಲಿಲ್ಲ. ಮನೆಗೆ ಆಶ್ರಯನಾಗಿದ್ದ ಮಗನೇ ಹೋಗಿದ್ದು, ಸೊಸೆಗೆ ಉದ್ಯೋಗ ಕೊಡಿ ಅಂತ ಮನವಿ ಇಟ್ಟಿದ್ದಾರೆ. ಈ ವೇಳೆ ಸಿಎಂ ಸಹ ಭರವಸೆ ನೀಡಿ ಧೈರ್ಯ ತುಂಬಿದ್ದಾರೆ. ಒಟ್ಟಾರೆ, ಬೆಂಗಳೂರಿನಲ್ಲಿ ಒಂದು ಹಂತದ ತನಿಖೆ ನಡಿತಿದ್ರೆ, ಇತ್ತ ಚಿತ್ರದುರ್ಗದಲ್ಲೂ ಸಾಕ್ಷಿ ಸಂಗ್ರಹ ಶುರುವಾಗಿದೆ. ಪೊಲೀಸರ ತನಿಖೆ ಮೇಲೆ ಇಡೀ ಕೇಸ್ನ ಭವಿಷ್ಯ ನಿಂತಿದ್ದು, ಇಡೀ ರಾಜ್ಯವೇ ಕುತೂಹಲದಿಂದ ನೋಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೇಣುಕಾಸ್ವಾಮಿ ಕೊನೆಯ ದಿನ ಬಳಸಿದ್ದ ಬೈಕ್ ಪರಿಶೀಲಿಸಿ, ಮಹಜರ್
ಜೂ.8ರಂದು ಏನೆಲ್ಲಾ ನಡೆದಿತ್ತು ಎಂದು ಪೊಲೀಸ್ ಅಧಿಕಾರಿಗಳಿಂದ ವಿಚಾರಣೆ
ಸಿಎಂ ಸಿದ್ದು ಭೇಟಿ ಮಾಡಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೇಣುಕಾಸ್ವಾಮಿ ಪೋಷಕರು
ರೇಣುಕಾಸ್ವಾಮಿ ಕೊಲೆ ಕೇಸ್ನ ತನಿಖೆ ಚಿತ್ರದುರ್ಗಕ್ಕೂ ವ್ಯಾಪಿಸಿದೆ. ಮೊಬೈಲ್ ಪತ್ತೆಗೆ ಪೊಲೀಸರು ವಿಚಾರಣೆ ಮಾಡ್ತಿದ್ದಾರೆ. ನಿನ್ನೆ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಸ್ಥರಿಂದ ಮಾಹಿತಿ ಪಡೆಯಲಾಗಿದೆ. ಫಾರ್ಮಸಿಯಲ್ಲೂ ವಿಚಾರಣೆ ನಡೆದಿದೆ. ಬೆಂಗಳೂರಿಗೆ ಆಗಮಿಸಿದ್ದ ರೇಣುಕಾಸ್ವಾಮಿ ಹೆತ್ತವರು, ಸಿಎಂ ಬಳಿ ನ್ಯಾಯಕ್ಕಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದನ್ನೂ ಓದಿ: ಕೊಲೆ ಕೇಸ್ಗೆ 10, 20 ಅಲ್ಲ ಬರೋಬ್ಬರಿ 50 ಸಿಸಿಟಿವಿಯಲ್ಲಿ ಸುಳಿವು.. ದರ್ಶನ್ ಗ್ಯಾಂಗ್ಗೆ ಹೊಸ ಆಪತ್ತು!
ಅಂದ್ಹಾಗೆ ಇಡೀ ಪ್ರಕರಣದ ಕೇಂದ್ರ ಬಿಂದುವೇ ಈ ಹತ್ಯೆಯಾದ ರೇಣುಕಾಸ್ವಾಮಿ. ಸದ್ಯ ರೇಣುಕಾಸ್ವಾಮಿ ಕೇಸ್ನ ತನಿಖೆ ಚಿತ್ರದುರ್ಗಕ್ಕೂ ವ್ಯಾಪಿಸಿದೆ. ರೇಣುಕಾಸ್ವಾಮಿ ಮೊಬೈಲ್ ಪತ್ತೆಗೆ ಪೊಲೀಸರಿಂದ ತೀವ್ರ ಹುಡುಕಾಟ ನಡೀತಾನೇ ಇದೆ. ಕೋಟೆನಾಡು ಚಿತ್ರದುರ್ಗದಲ್ಲಿ ಹಲವು ಆಯಾಮಗಳಲ್ಲೂ ಕೊಲೆಯ ತನಿಖೆ ನಡೆಸಲಾಗ್ತಿದೆ. ರೇಣುಕಾಸ್ವಾಮಿ ಮನೆಗೂ ಭೇಟಿ ನೀಡಿ ಮೃತನ ತಂದೆ, ತಾಯಿ ಮತ್ತು ಪತ್ನಿಯಿಂದ ಸೆಕ್ಷನ್ 161 ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮೊದಲಿಗೆ ರೇಣುಕಾಸ್ವಾಮಿ ಕಿಡ್ನಾಪ್ಗೂ ಮುನ್ನ ಬಳಸಿದ್ದ ಬೈಕ್ ಪರಿಶೀಲನೆ ಜೊತೆಗೆ ಬೈಕ್ ನಿಲ್ಲಿಸಿದ್ದ ಸ್ಥಳದ ಮಹಜರು ಮಾಡಲಾಗಿದೆ. ಬಳಿಕ ರೇಣುಕಾಸ್ವಾಮಿ ಕುಟುಂಬದ ವಿಚಾರಣೆ ನಡೆಸಿದ ಪೊಲೀಸರು, ಜೂನ್ 8ರಂದು ಏನೆಲ್ಲಾ ನಡೆದಿತ್ತು ಅಂತ ಕೇಳಿದ್ದಾರೆ. ಕೊನೆಯದಾಗಿ ಫೋನ್ ಮಾಡಿದ್ದು ಯಾವಾಗ? ಏನು ಹೇಳಿದ್ದ ಅಂತ ವಿಚಾರಿಸಿದ್ದಾರೆ.
ನಂತರ ಅಪೋಲೋ ಫಾರ್ಮಸಿಗೆ ತೆರಳಿದ ಪೊಲೀಸರು, ಅಲ್ಲಿ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಪೋಲೋ ಫಾರ್ಮಸಿಯಲ್ಲಿ ಈ ರೇಣುಕಾಸ್ವಾಮಿ ಸ್ಟಾಕ್ ನೋಡಿಕೊಳ್ತಿದ್ನಂತೆ. ಹಾಗಾಗಿ ಆತ ಇಲ್ಲಿಂದ ಎಲ್ಲೆಲ್ಲಿಗೆ ಔಷಧಿ ಡೆಲಿವರಿ ಕೊಡ್ತಿದ್ದ? ಆನ್ಲೈನ್ನಲ್ಲೂ ಡೆಲಿವರಿ ಮಾಡ್ತಿದ್ದನಾ? ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಪಡೆದು 5 ಸಿಬ್ಬಂದಿಗಳ ಫೋನ್ ನಂಬರ್ ಸಂಗ್ರಹಿಸಿ ಪೊಲೀಸರು ತೆರಳಿದ್ದಾರೆ. ಅಲ್ಲದೆ, ರೇಣುಕ ಮೊಬೈಲ್ನ ಡೂಪ್ಲಿಕೇಟ್ ಸಿಮ್ ಸಹ ಪಡೆದು ಬ್ಯಾಕಪ್ ಪಡೆಯಲು ಮುಂದಾಗಿದ್ದಾರೆ. ಇನ್ನು, ವಿಚಾರಣೆ ನಡೆಸಿದ ಬಗ್ಗೆ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದೇ ಮೊದಲ ತಪ್ಪು.. A4 ರಘು ಪತ್ನಿ ಸಹನಾ ಖಡಕ್ ಮಾತು; ಹೇಳಿದ್ದೇನು?
ಸಿಎಂ ಸಿದ್ದು ಭೇಟಿ ಮಾಡಿದ ರೇಣುಕಾಸ್ವಾಮಿ ಹೆತ್ತವರ ಕಣ್ಣೀರ ಕೋಡಿಯೇ ಹರಿದಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ತಂದೆ-ತಾಯಿ ತಮಗೆ ನ್ಯಾಯ ಬೇಕು ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅದೆಷ್ಟೇ ಸಾಂತ್ವನ ಹೇಳಿದ್ರೂ ಹೆತ್ತವರ ಕಣ್ಣೀರಿಗೆ ಬೇಲಿ ಹಾಕಲಾಗಲಿಲ್ಲ. ಮನೆಗೆ ಆಶ್ರಯನಾಗಿದ್ದ ಮಗನೇ ಹೋಗಿದ್ದು, ಸೊಸೆಗೆ ಉದ್ಯೋಗ ಕೊಡಿ ಅಂತ ಮನವಿ ಇಟ್ಟಿದ್ದಾರೆ. ಈ ವೇಳೆ ಸಿಎಂ ಸಹ ಭರವಸೆ ನೀಡಿ ಧೈರ್ಯ ತುಂಬಿದ್ದಾರೆ. ಒಟ್ಟಾರೆ, ಬೆಂಗಳೂರಿನಲ್ಲಿ ಒಂದು ಹಂತದ ತನಿಖೆ ನಡಿತಿದ್ರೆ, ಇತ್ತ ಚಿತ್ರದುರ್ಗದಲ್ಲೂ ಸಾಕ್ಷಿ ಸಂಗ್ರಹ ಶುರುವಾಗಿದೆ. ಪೊಲೀಸರ ತನಿಖೆ ಮೇಲೆ ಇಡೀ ಕೇಸ್ನ ಭವಿಷ್ಯ ನಿಂತಿದ್ದು, ಇಡೀ ರಾಜ್ಯವೇ ಕುತೂಹಲದಿಂದ ನೋಡ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ