ಮುಗಿಯದ ಕಾನೂನು ತೊಡಕುಗಳು.. ಕೋರ್ಟ್​ನಲ್ಲಿ ಇಂದು ದರ್ಶನ್, ಪವಿತ್ರಗೌಡ ಮುಖಾಮುಖಿ ಸಾಧ್ಯತೆ

author-image
Veena Gangani
Updated On
ಪವಿತ್ರಾ ಗೌಡ ಭುಜ ತಟ್ಟಿದ ದರ್ಶನ್.. ಬಹಳ ದಿನಗಳ ಬಳಿಕ ಇಬ್ಬರ ಮುಖಾಮುಖಿ; ಏನಾಯ್ತು?
Advertisment
  • ಇಂದು‌ ಕೋರ್ಟ್​ನಲ್ಲಿ ಮತ್ತೆ ಮುಖಿಯಾಗಲಿರುವ ಆರೋಪಿಗಳು
  • 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಬರಲಿರೋ ಆರೋಪಿಗಳು
  • ಕೋರ್ಟ್ ಅನುಮತಿ‌ ಪಡೆದು ಹಲವು ರಾಜ್ಯಗಳು ಸುತ್ತಿದ್ದ ದರ್ಶನ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್‌ ಸೇರಿ ಎಲ್ಲಾ 17 ಆರೋಪಿಗಳು ಇಂದು ನಗರದ 57ನೇ ಸಿಸಿಹೆಚ್ ಕೋರ್ಟ್​ಗೆ ಹಾಜರಾಗಲಿದ್ದಾರೆ.

ಇದನ್ನೂ ಓದಿ: ಸೀರಿಯಲ್​ ಮುಗಿಯುತ್ತಿದ್ದಂತೆ ಸಖತ್​ ಬ್ಯುಸಿಯಾದ ಲಕ್ಷ್ಮೀ; ನಟಿ ಭೂಮಿಕಾ ರಮೇಶ್ ನೆಕ್ಸ್ಟ್ ಪ್ಲಾನ್​ ಏನು?

publive-image

ಈಗಾಗಲೇ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಸಿಕಿತ್ತು. ಹೀಗಾಗಿ ಇಂದು ಎಲ್ಲರೂ ಕೋರ್ಟ್​ಗೆ ಹಾಜರಾಗಲಿದ್ದಾರೆ. ಈಗ ಹಲವು ದಿನಗಳ ನಂತರ ಮತ್ತೆ ದರ್ಶನ್ ಭೇಟಿಯಾಗುವ ಸಾಧ್ಯತೆಯಿದೆ.

publive-image

ಸದ್ಯ ನಟ ದರ್ಶನ್ ಹಾಗೂ ಪವಿತ್ರಾ ಗೌಡ ​ಕೋರ್ಟ್​ನಿಂದ ಅನುಮತಿ‌ ಪಡೆದು ಹಲವು ರಾಜ್ಯಗಳನ್ನು ಸುತ್ತಿ ಬಂದಿದ್ದಾರೆ. ಇಂದು‌ ಕೋರ್ಟ್​ನಲ್ಲಿ‌ ಮತ್ತೆ ಮುಖಾ ಮುಖಿಯಾಗಲಿದ್ದಾರೆ. ಹೈಕೋರ್ಟ್​ನಿಂದ ಜಾಮೀನು ಪಡೆದಿರುವ ದರ್ಶನ್​ಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾಮೀನು ರದ್ದುಗೊಳಿಸುವಂತೆ ಕೋರಿ ಪೊಲೀಸ್ ಅಧಿಕಾರಿಗಳು ಸುಪ್ರೀಂಕೋರ್ಟ್​ಗೆ ಹೋಗಿದ್ದಾರೆ. ಈಗಾಗಲೇ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ, ಮುಂದಿನ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿಕೆ ಮಾಡಿದೆ. ಇದರ ಮಧ್ಯೆ ಇಂದು ನಗರದ 57ನೇ ಸಿಸಿಹೆಚ್ ಕೋರ್ಟ್​ಗೆ ಹಾಜರಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment