ರೇಣುಕಾಸ್ವಾಮಿಯನ್ನು ಶೆಡ್​​ಗೇ ಯಾಕೆ ಕರ್ಕೊಂಡು ಬಂದಿದ್ರು..? ದರ್ಶನ್​​​​​​ ಈ ಸೂಚನೆ ನೀಡಲು ಇತ್ತು 6 ಕಾರಣ..!

author-image
Ganesh
Updated On
ಮೃತದೇಹ ವಿಲೇವಾರಿಗೆ 30 ಲಕ್ಷ ರೂ ಡೀಲ್..? ರಾತ್ರಿ ಇಡೀ ದರ್ಶನ್​ಗೆ ಫೋನ್ ಕರೆ.. ನಟ ಸಿಕ್ಕಿಬಿದ್ದಿದ್ದು ಹೀಗೆ..!
Advertisment
  • ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್
  • ಕೊಲೆಗೂ ಮೊದಲು ಪಟ್ಟಣಗೆರೆ ಶೆಡ್​​ನಲ್ಲಿ ಕೂಡಿಟ್ಟ ಆರೋಪ
  • ಪ್ರಕರಣದಲ್ಲಿ ಪವಿತ್ರಗೌಡ ಸೇರಿ 13 ಆರೋಪಿಗಳು ಅರೆಸ್ಟ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣ ತನಿಖೆಯನ್ನು ಬೆಂಗಳೂರು ಪೊಲೀಸರು ತೀವ್ರಗೊಳಿಸಿದ್ದಾರೆ. ಒಟ್ಟು 13 ಆರೋಪಿಗಳನ್ನು ಕೋರ್ಟ್​ ಮೂಲಕ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು, ಸ್ಥಳ ಮಹಜರು ಕೆಲಸ ಮಾಡುತ್ತಿದ್ದಾರೆ.

ಕೊಲೆ ಮಾಡುವ ಮೊದಲು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿಗೆ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬರಲಾಗಿತ್ತು ಎಂಬ ಮಾಹಿತಿ ಇದೆ. ಬೆಂಗಳೂರಿಗೆ ಬಂದ ಬಳಿಕ ಆರ್.ಆರ್.ನಗರದ ಪಟ್ಟಣಗೆರೆ ಶೆಡ್​​ನಲ್ಲಿ ಕೂಡಿ ಹಾಕಿದ್ದರು. ಇದೇ ಶೆಡ್​ಗೆ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬರಲು ಕಾರಣ ಕೂಡ ಇದೆ.

ಇದನ್ನೂ ಓದಿ:ಕಿವಿನಲ್ಲೇ ರಕ್ತ ಬರ್ತಿದೆ.. ಆ ಭಗವಂತ ದರ್ಶನ್​ ಸರ್​ನನ್ನು ಇದ್ರಿಂದ ಆಚೆಗೆ ಕರ್ಕೊಂಡು ಬನ್ನಿ -ಸಂಜನಾ ಕಣ್ಣೀರು

publive-image

ರೇಣುಕಾಸ್ವಾಮಿಯನ್ನು ಅದೇ ಶೆಡ್ ಗೆ ತರಲು ಕಾರಣವಾದ್ರೂ ಏನು..?

  • ಕಾರಣ 1: ಹತ್ಯೆ ನಡೆದ ಶೆಡ್ ದರ್ಶನ್ ಸ್ನೇಹಿತ ವಿನಯ್ ಮಾವ ಜಯಣ್ಣ ಎಂಬುವರಿಗೆ ಸೇರಿದ್ದು
  • ಕಾರಣ 2: ಸಿಟಿಯಲ್ಲಿದ್ರೂ ಜನರ ಹೆಚ್ಚಾಗಿ ಓಡಾಡದ ಜಾಗವಾಗಿತ್ತು ಈ ಶೆಡ್
  • ಕಾರಣ 3: ದರ್ಶನ್ ಸ್ನೇಹಿತ ವಿನಯ್​​ಗೆ ಸಂಬಂಧಿಸಿದ ಶೆಡ್, ಹೀಗಾಗಿ ಸೇಫ್ ಎಂಬ ಕಾರಣ
  • ಕಾರಣ 4: ದರ್ಶನ್ ನಿವಾಸಕ್ಕೆ ಸ್ವಲ್ಪ ದೂರದಲ್ಲೇ ಶೆಡ್ ಇತ್ತು
  • ಕಾರಣ 5: ಒಂದು ವೇಳೆ ಶೆಡ್ ಸಿಸಿಟಿವಿಯಲ್ಲಿ ರೆಕಾರ್ಡ್ ಆದ್ರೂ ಡಿಲೀಟ್ ಮಾಡಿಸಬಹುದು ಎಂಬ ಕಾರಣ
  • ಕಾರಣ 6: ಹಲ್ಲೆ ವೇಳೆ ಎಷ್ಟೇ ಕಿರುಚಿಡಿದ್ರೂ ಯಾರಿಗೂ ಧ್ವನಿ ಕೇಳಲ್ಲ ಅನ್ನೋದು, ಈ ಎಲ್ಲಾ ಕಾರಣಗಳಿಂದ ದರ್ಶನ್ ಗ್ಯಾಂಗ್ ಅದೇ ಶೆಡ್ ಆಯ್ಕೆ ಮಾಡಿಕೊಂಡಿತ್ತು ಎನ್ನಲಾಗಿದೆ.

ಇದನ್ನೂ ಓದಿ:ರೇಣುಕಾಸ್ವಾಮಿಗೆ ಪವಿತ್ರಗೌಡ ಚಪ್ಪಲಿ ಏಟು..? ಶೆಡ್​ಗೆ ಕರ್ಕೊಂಡು ಬಂದ ಮೇಲೆ ದರ್ಶನ್ ಮಾಡಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment