ತಾಯಿಯನ್ನು ಕಳೆದುಕೊಂಡ A4 ಆರೋಪಿ ರಘು.. ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆಯಿಲ್ಲದೆ ಕಣ್ಣೀರು ಹಾಕುತ್ತಿದೆ ಕುಟುಂಬ

author-image
AS Harshith
Updated On
ತಮ್ಮ ಜೈಲಿಗೆ ಹೋಗಿದ್ದಕ್ಕೆ ಅಮ್ಮ ನರಳಿ ನರಳಿ ಪ್ರಾಣಬಿಟ್ಟರು-ದರ್ಶನ್ ಕೇಸ್​ನ ರಘು ಸಹೋದರಿ ಕಣ್ಣೀರು
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನ A4 ಆರೋಪಿ
  • ಇತ್ತ ಮಗ ಜೈಲು ಸೇರಿದಂತೆ ಅತ್ತ ತಾಯಿಗೆ ಖಿನ್ನತೆ
  • ಪೊಲೀಸರ ಬಳಿ ಕುಟುಂಬಸ್ಥರ ಮನವಿ.. ಏನದು?

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಆರೋಪಿಯಾಗಿರುವ ರಘು ತಾಯಿ ಇಂದು ನಿಧನರಾಗಿದ್ದಾರೆ. ಮಗ ಜೈಲು ಸೇರಿದ ಕೊರಗಲ್ಲೇ ತಾಯಿ ಮಂಜುಳಮ್ಮ‌ (65) ಉಸಿರು ನಿಲ್ಲಿಸಿದ್ದಾರೆ.

ಇದನ್ನೂ ಓದಿ: Breaking: ದರ್ಶನ್ ಕೇಸ್​​ನಲ್ಲಿ ಜೈಲು ಸೇರಿದ ಮಗ.. ಕೊರಗಿನಲ್ಲೇ ಪ್ರಾಣಬಿಟ್ಟ ರಘು ತಾಯಿ

ರೇಣುಕಾಸ್ವಾಮಿ ಕೊಲೆ‌ ಕೇಸಿನಲ್ಲಿ 4ನೇ ಆರೋಪಿಯಾಗಿ ರಘು ಜೈಲು ಸೇರಿದ್ದಾನೆ. ಮಗ ಜೈಲು ಸೇರಿದಂತೆ ತಾಯಿ ಖಿನ್ನತೆಗೆ ಒಳಗಾಗಿದ್ದರು. ಖಿನ್ನತೆಯಿಂದ ನರಳಿ ಮಂಜುಳಮ್ಮ‌ ನಿಧನರಾಗಿದ್ದಾರೆ. ಚಿತ್ರದುರ್ಗದ ಕೋಳಿ ಬುರಜನಹಟ್ಟಿ ಸ್ವಗೃಹದಲ್ಲಿ ಮಂಜುಳಮ್ಮ‌ ಸಾವನ್ನಪ್ಪಿದ್ದಾರೆ.

publive-image

ಇದನ್ನೂ ಓದಿ: ಖೈದಿಗಳ ಹಾಟ್ ಫೇವರೇಟಂತೆ ‘ಕರಿಯ’ನ ಈ ಹಾಡು! ರೌಡಿಗಳ ಆ್ಯಂಥಮ್ ಆಗ್ಬಿಟ್ಟಿದೆ ದರ್ಶನ್​ ಸಿನಿಮಾ ಗೀತೆ!

ರಘು ಜೈಲು ಸೇರಿದ ಬಳಿದ ಮನೆಯಲ್ಲಿ ಅಂತ್ಯ ಸಂಸ್ಕಾರಕ್ಕೂ ಅನುಕೂಲತೆಗಳಿಲ್ಲ. ಅತ್ತ ಕುಟುಂಬಸ್ಥರು ರಘು ಕೊನೆಯ ಬಾರಿಗಾದರೂ ತಾಯಿಯ ಮುಖ‌ ನೋಡಲಿ. ಅಂತ್ಯ ಸಂಸ್ಕಾರಕ್ಕಾದರೂ ರಘುವನ್ನು ಕರೆಸಿ ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment