newsfirstkannada.com

‘ನನ್ನ ಗಂಡ ದರ್ಶನ್​ ಅಭಿಮಾನಿ ಅಲ್ಲ, ನ್ಯಾಯ ಕೊಡಿಸಿ’- ಮೃತ ಯುವಕನ ಪತ್ನಿ ಕಣ್ಣೀರು!

Share :

Published June 11, 2024 at 8:33pm

Update June 11, 2024 at 8:34pm

    ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ ಪೊಲೀಸ್​ ಕಸ್ಟಡಿ!

    ನನಗೆ ನ್ಯಾಯ ಕೊಡಿಸಿ ಎಂದು ಮೃತ ಯುವಕ ರೇಣುಕಾ ಸ್ವಾಮಿ ಹೆಂಡತಿ ಕಣ್ಣೀರು

    ‘ಮದುವೆ ಆಗಿ 1 ವರ್ಷ ಆಗಿದೆ, ಮಗುವಿನ ಜವಾಬ್ದಾರಿ ಯಾರದು’ ಎಂದು ಪ್ರಶ್ನೆ

ಬೆಂಗಳೂರು: ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಯುವಕನ ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ 24ನೇ ಎಸಿಎಂಎಂ ಕೋರ್ಟ್​ ಬಿಗ್​ ಶಾಕ್​ ನೀಡಿದೆ. ದರ್ಶನ್​ ಮತ್ತು ಗ್ಯಾಂಗ್​​ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಇನ್ನು, ಈ ಮಧ್ಯೆ ಮೃತ ರೇಣುಕಾ ಸ್ವಾಮಿ ಎಂಬ ಪತ್ನಿ ಸಹನಾ ಮಾತಾಡಿದ್ದಾರೆ. ನನ್ನ ಮನೆಯವರನ್ನು ಕೊಂದು ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ. ನಾನು ಒಂದು ಮನೆ ಗೃಹಿಣಿ ಆಗಿದ್ದೀನಿ, ಗಂಡನನ್ನು ಕಳೆದುಕೊಂಡಿದ್ದೀನಿ. ಹೀಗೆ ಆಗಬಾರದಿತ್ತು ಎಂದು ಕಣ್ಣೀರಿಟ್ಟಿದ್ದಾರೆ.

ಮದುವೆ ಆಗಿ ಕೇವಲ 1 ವರ್ಷ ಆಗಿದೆ. ತಾಯಿ ಬೇರೆ ಆಗ್ತೀದಿನಿ, ನನ್ನ ಗಂಡ ಇಲ್ಲ. ನಾನು ಈಗ ಏನು ಮಾಡಲಿ. ಮೊನೆಯಷ್ಟೇ ಕರೆ ಮಾಡಿ ಮಾತಾಡಿದ್ದು ಕೊನೆ. ನನ್ನ ಗಂಡ ದರ್ಶನ್​ ಅಭಿಮಾನಿ ಅಲ್ಲ. ನಾನು ಮುಂದೆ ಜೀವನ ಮಾಡೋದು ಹೇಗೆ? ಎಂದು ತಮ್ಮ ಅಳಲು ತೋಡಿಕೊಂಡರು.

ದರ್ಶನ್​ ಮೇಲೆ ಆರೋಪ ಕೇಳಿ ಬಂದಿದೆ. ಅವರಿಗೆ ನ್ಯಾಯ ಕೊಡಿಸಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. ನನ್ನ ಮಗುವಿಗೆ ಯಾರು ಸಹಾಯ ಮಾಡುತ್ತಾರೆ. ನಮಗೆ ನ್ಯಾಯ ಕೊಡಿಸಿ ಎಂದರು.

ಇದನ್ನೂ ಓದಿ: ನಟ ದರ್ಶನ್​ ಮತ್ತು ಗ್ಯಾಂಗ್​ಗೆ ಎಷ್ಟು ದಿನ ಕಸ್ಟಡಿ? ಪೊಲೀಸ್ರಿಗೆ ಕೋರ್ಟ್​ ಕೊಟ್ಟ ಸೂಚನೆಯೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಗಂಡ ದರ್ಶನ್​ ಅಭಿಮಾನಿ ಅಲ್ಲ, ನ್ಯಾಯ ಕೊಡಿಸಿ’- ಮೃತ ಯುವಕನ ಪತ್ನಿ ಕಣ್ಣೀರು!

https://newsfirstlive.com/wp-content/uploads/2024/06/Renukaswamy-Wife-crying.jpg

    ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ ಪೊಲೀಸ್​ ಕಸ್ಟಡಿ!

    ನನಗೆ ನ್ಯಾಯ ಕೊಡಿಸಿ ಎಂದು ಮೃತ ಯುವಕ ರೇಣುಕಾ ಸ್ವಾಮಿ ಹೆಂಡತಿ ಕಣ್ಣೀರು

    ‘ಮದುವೆ ಆಗಿ 1 ವರ್ಷ ಆಗಿದೆ, ಮಗುವಿನ ಜವಾಬ್ದಾರಿ ಯಾರದು’ ಎಂದು ಪ್ರಶ್ನೆ

ಬೆಂಗಳೂರು: ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಯುವಕನ ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ 24ನೇ ಎಸಿಎಂಎಂ ಕೋರ್ಟ್​ ಬಿಗ್​ ಶಾಕ್​ ನೀಡಿದೆ. ದರ್ಶನ್​ ಮತ್ತು ಗ್ಯಾಂಗ್​​ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಇನ್ನು, ಈ ಮಧ್ಯೆ ಮೃತ ರೇಣುಕಾ ಸ್ವಾಮಿ ಎಂಬ ಪತ್ನಿ ಸಹನಾ ಮಾತಾಡಿದ್ದಾರೆ. ನನ್ನ ಮನೆಯವರನ್ನು ಕೊಂದು ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ. ನಾನು ಒಂದು ಮನೆ ಗೃಹಿಣಿ ಆಗಿದ್ದೀನಿ, ಗಂಡನನ್ನು ಕಳೆದುಕೊಂಡಿದ್ದೀನಿ. ಹೀಗೆ ಆಗಬಾರದಿತ್ತು ಎಂದು ಕಣ್ಣೀರಿಟ್ಟಿದ್ದಾರೆ.

ಮದುವೆ ಆಗಿ ಕೇವಲ 1 ವರ್ಷ ಆಗಿದೆ. ತಾಯಿ ಬೇರೆ ಆಗ್ತೀದಿನಿ, ನನ್ನ ಗಂಡ ಇಲ್ಲ. ನಾನು ಈಗ ಏನು ಮಾಡಲಿ. ಮೊನೆಯಷ್ಟೇ ಕರೆ ಮಾಡಿ ಮಾತಾಡಿದ್ದು ಕೊನೆ. ನನ್ನ ಗಂಡ ದರ್ಶನ್​ ಅಭಿಮಾನಿ ಅಲ್ಲ. ನಾನು ಮುಂದೆ ಜೀವನ ಮಾಡೋದು ಹೇಗೆ? ಎಂದು ತಮ್ಮ ಅಳಲು ತೋಡಿಕೊಂಡರು.

ದರ್ಶನ್​ ಮೇಲೆ ಆರೋಪ ಕೇಳಿ ಬಂದಿದೆ. ಅವರಿಗೆ ನ್ಯಾಯ ಕೊಡಿಸಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. ನನ್ನ ಮಗುವಿಗೆ ಯಾರು ಸಹಾಯ ಮಾಡುತ್ತಾರೆ. ನಮಗೆ ನ್ಯಾಯ ಕೊಡಿಸಿ ಎಂದರು.

ಇದನ್ನೂ ಓದಿ: ನಟ ದರ್ಶನ್​ ಮತ್ತು ಗ್ಯಾಂಗ್​ಗೆ ಎಷ್ಟು ದಿನ ಕಸ್ಟಡಿ? ಪೊಲೀಸ್ರಿಗೆ ಕೋರ್ಟ್​ ಕೊಟ್ಟ ಸೂಚನೆಯೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More