ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ ಪೊಲೀಸ್ ಕಸ್ಟಡಿ!
ನನಗೆ ನ್ಯಾಯ ಕೊಡಿಸಿ ಎಂದು ಮೃತ ಯುವಕ ರೇಣುಕಾ ಸ್ವಾಮಿ ಹೆಂಡತಿ ಕಣ್ಣೀರು
‘ಮದುವೆ ಆಗಿ 1 ವರ್ಷ ಆಗಿದೆ, ಮಗುವಿನ ಜವಾಬ್ದಾರಿ ಯಾರದು’ ಎಂದು ಪ್ರಶ್ನೆ
ಬೆಂಗಳೂರು: ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಯುವಕನ ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ 24ನೇ ಎಸಿಎಂಎಂ ಕೋರ್ಟ್ ಬಿಗ್ ಶಾಕ್ ನೀಡಿದೆ. ದರ್ಶನ್ ಮತ್ತು ಗ್ಯಾಂಗ್ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಇನ್ನು, ಈ ಮಧ್ಯೆ ಮೃತ ರೇಣುಕಾ ಸ್ವಾಮಿ ಎಂಬ ಪತ್ನಿ ಸಹನಾ ಮಾತಾಡಿದ್ದಾರೆ. ನನ್ನ ಮನೆಯವರನ್ನು ಕೊಂದು ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ. ನಾನು ಒಂದು ಮನೆ ಗೃಹಿಣಿ ಆಗಿದ್ದೀನಿ, ಗಂಡನನ್ನು ಕಳೆದುಕೊಂಡಿದ್ದೀನಿ. ಹೀಗೆ ಆಗಬಾರದಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ಮದುವೆ ಆಗಿ ಕೇವಲ 1 ವರ್ಷ ಆಗಿದೆ. ತಾಯಿ ಬೇರೆ ಆಗ್ತೀದಿನಿ, ನನ್ನ ಗಂಡ ಇಲ್ಲ. ನಾನು ಈಗ ಏನು ಮಾಡಲಿ. ಮೊನೆಯಷ್ಟೇ ಕರೆ ಮಾಡಿ ಮಾತಾಡಿದ್ದು ಕೊನೆ. ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ. ನಾನು ಮುಂದೆ ಜೀವನ ಮಾಡೋದು ಹೇಗೆ? ಎಂದು ತಮ್ಮ ಅಳಲು ತೋಡಿಕೊಂಡರು.
ದರ್ಶನ್ ಮೇಲೆ ಆರೋಪ ಕೇಳಿ ಬಂದಿದೆ. ಅವರಿಗೆ ನ್ಯಾಯ ಕೊಡಿಸಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. ನನ್ನ ಮಗುವಿಗೆ ಯಾರು ಸಹಾಯ ಮಾಡುತ್ತಾರೆ. ನಮಗೆ ನ್ಯಾಯ ಕೊಡಿಸಿ ಎಂದರು.
ಇದನ್ನೂ ಓದಿ: ನಟ ದರ್ಶನ್ ಮತ್ತು ಗ್ಯಾಂಗ್ಗೆ ಎಷ್ಟು ದಿನ ಕಸ್ಟಡಿ? ಪೊಲೀಸ್ರಿಗೆ ಕೋರ್ಟ್ ಕೊಟ್ಟ ಸೂಚನೆಯೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ ಪೊಲೀಸ್ ಕಸ್ಟಡಿ!
ನನಗೆ ನ್ಯಾಯ ಕೊಡಿಸಿ ಎಂದು ಮೃತ ಯುವಕ ರೇಣುಕಾ ಸ್ವಾಮಿ ಹೆಂಡತಿ ಕಣ್ಣೀರು
‘ಮದುವೆ ಆಗಿ 1 ವರ್ಷ ಆಗಿದೆ, ಮಗುವಿನ ಜವಾಬ್ದಾರಿ ಯಾರದು’ ಎಂದು ಪ್ರಶ್ನೆ
ಬೆಂಗಳೂರು: ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಯುವಕನ ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ 24ನೇ ಎಸಿಎಂಎಂ ಕೋರ್ಟ್ ಬಿಗ್ ಶಾಕ್ ನೀಡಿದೆ. ದರ್ಶನ್ ಮತ್ತು ಗ್ಯಾಂಗ್ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಇನ್ನು, ಈ ಮಧ್ಯೆ ಮೃತ ರೇಣುಕಾ ಸ್ವಾಮಿ ಎಂಬ ಪತ್ನಿ ಸಹನಾ ಮಾತಾಡಿದ್ದಾರೆ. ನನ್ನ ಮನೆಯವರನ್ನು ಕೊಂದು ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ. ನಾನು ಒಂದು ಮನೆ ಗೃಹಿಣಿ ಆಗಿದ್ದೀನಿ, ಗಂಡನನ್ನು ಕಳೆದುಕೊಂಡಿದ್ದೀನಿ. ಹೀಗೆ ಆಗಬಾರದಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ಮದುವೆ ಆಗಿ ಕೇವಲ 1 ವರ್ಷ ಆಗಿದೆ. ತಾಯಿ ಬೇರೆ ಆಗ್ತೀದಿನಿ, ನನ್ನ ಗಂಡ ಇಲ್ಲ. ನಾನು ಈಗ ಏನು ಮಾಡಲಿ. ಮೊನೆಯಷ್ಟೇ ಕರೆ ಮಾಡಿ ಮಾತಾಡಿದ್ದು ಕೊನೆ. ನನ್ನ ಗಂಡ ದರ್ಶನ್ ಅಭಿಮಾನಿ ಅಲ್ಲ. ನಾನು ಮುಂದೆ ಜೀವನ ಮಾಡೋದು ಹೇಗೆ? ಎಂದು ತಮ್ಮ ಅಳಲು ತೋಡಿಕೊಂಡರು.
ದರ್ಶನ್ ಮೇಲೆ ಆರೋಪ ಕೇಳಿ ಬಂದಿದೆ. ಅವರಿಗೆ ನ್ಯಾಯ ಕೊಡಿಸಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. ನನ್ನ ಮಗುವಿಗೆ ಯಾರು ಸಹಾಯ ಮಾಡುತ್ತಾರೆ. ನಮಗೆ ನ್ಯಾಯ ಕೊಡಿಸಿ ಎಂದರು.
ಇದನ್ನೂ ಓದಿ: ನಟ ದರ್ಶನ್ ಮತ್ತು ಗ್ಯಾಂಗ್ಗೆ ಎಷ್ಟು ದಿನ ಕಸ್ಟಡಿ? ಪೊಲೀಸ್ರಿಗೆ ಕೋರ್ಟ್ ಕೊಟ್ಟ ಸೂಚನೆಯೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ