ಕ್ರೌರ್ಯದ ಲೋಕದಲ್ಲಿ ನಟ ದರ್ಶನ್ಗೆ ಸೆರೆವಾಸ
ಎರಡ್ಮೂರು ತಿಂಗಳಲ್ಲಿ ರಿಲೀಸ್ ಆಗ್ತಾರಾ ದಾಸ..?
‘ಕಾಟೇರ’ನ ಬಗ್ಗೆ ರೇಣುಕಾಸ್ವಾಮಿ ತಂದೆ ಮಾತು
ಚಿತ್ರದುರ್ಗ: ಕರ್ಮದ ಕಲ್ಲನ್ನ ಎಡವಿರೋ ದರ್ಶನ್ ಪರಪ್ಪನ ಅಗ್ರಹಾರದ ವಾಸದಲ್ಲಿದ್ದಾರೆ. ಹತ್ಯೆಯ ಪಾಪವನ್ನ ಹೊತ್ತು ಮನೆಯೂಟವೂ ಸಿಗದೇ ಜೈಲಿನ ಸರಳಿನ ಹಿಂದೆ ಸೊರಗುತ್ತಿದ್ದಾರೆ. ಆದ್ರೀಗ ಹಗೆಯಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟಿದ್ದ ದಾಸ ಕೆಲ ತಿಂಗಳಲ್ಲೇ ರಿಲೀಸ್ ಆಗ್ತಾರೆ ಎಂಬ ಭವಿಷ್ಯ ವಾಣಿಯೊಂದು ನುಡಿದಿದೆ. ಈ ಮಧ್ಯೆ ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಸಹಾಯಹಸ್ತದ ಮಾತಿಗೆ ಮೃತನ ತಂದೆ ಉದಾರದ ಮಾತುಗಳನ್ನ ಆಡಿದ್ದಾರೆ.
ಕ್ರೌರ್ಯದ ಲೋಕದಲ್ಲಿ ಇಳಿದು ಕಾಟೇರ ಹೀರೋ ಕಾರಾಗೃಹ ಸೇರಿದ್ದಾರೆ. ಸಿನಿಮಾ ನಟನೆಯನ್ನೇ ನಿಜ ಜೀವನದಲ್ಲಿ ಅನುಸರಿಸಿ ನರವಧೆ ಮಾಡಿ ಕರ್ಮವನ್ನ ಹೊತ್ತು ಜೈಲು ಸೇರಿದ್ದಾರೆ. ಆದ್ರೆ, ಪರಪ್ಪನ ಅಗ್ರಹಾರದಲ್ಲಿರೋ ದಾಸ ಇದುವರೆಗೂ ಬೇಲ್ಗೆ ಅರ್ಜಿಯನ್ನೇ ಸಲ್ಲಿಸಲ್ಲ. ಆದ್ರೆ, ದೇವರ ವಾಣಿಯೊಂದು ದಾಸನ ಭವಿಷ್ಯದ ಬಗ್ಗೆ ನುಡಿದಿದೆ.
‘ಎರಡ್ಮೂರು ತಿಂಗಳಲ್ಲಿ ರಿಲೀಸ್ ಆಗಲಿದ್ದಾರೆ ದರ್ಶನ್’
ಕೌಡೆಪೀರ ಲಾಲ್ಸಾಬ್. ಮೊಹರಂ ಆಚರಣೆ ವೇಳೆ ಕೊಪ್ಪಳ ಭಾಗದ ಜನರು ಆರಾಧಿಸೋ ದೇವರು. ಈ ಕೌಡೇಪೀರ್ ಹೇಳಿದ್ದು ನಿಜವಾಗುತ್ತೆ ಅನ್ನೋದು ಈ ಭಾಗದ ಭಕ್ತರ ನಂಬಿಕೆ. ಅಲ್ಲದೇ ಕೆಲವೊಂದು ವಾಣಿಗಳು ನಿಜವಾಗಿವೆ. ಇದೀಗ ಇದೇ ಕೌಡೆಪೀರ ಲಾಲ್ಸಾಬ್, ಕೊಲೆ ಆರೋಪಿ ದರ್ಶನ್ರ ಜೈಲಿನ ಭವಿಷ್ಯದ ಬಗ್ಗೆ ನುಡಿದಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು ಬೆಳಗ್ಗೆ ಕೌಡೆಪೀರ್ ಲಾಲ್ ಸಾಬ್ಗೆ ದರ್ಶನ್ ಯಾವಾಗ ರಿಲೀಸ್ ಆಗ್ತಾರೆ ಅಂತ ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿರೋ ಕೌಡೆಪೀರ ಲಾಲ್ಸಾಭ್, ಎರಡ್ಮೂರು ತಿಂಗಳಲ್ಲಿ ರಿಲೀಸ್ ಆಗ್ತಾರೆ ಭವಿಷ್ಯ ವಾಣಿ ಹೇಳಿದೆ.
ಅಂದ್ಹಾಗೆ 2019ರಲ್ಲಿ ತಿಹಾರ್ ಜೈಲು ಸೇರಿದ್ದ ಈಗಿನ ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆಯೂ ಕೌಡೆಪೀರ್ ದೇವರು ಆಗ ಭವಿಷ್ಯ ವಾಣಿ ನುಡಿದಿತ್ತು. ಕೌಡೆಪೀರ ಹೇಳಿದಂತೆ ಆದು ಕೆಲ ದಿನಗಳಲ್ಲೇ ನಿಜ ಕೂಡಾ ಆಗಿತ್ತು. ಇದೀಗ ದರ್ಶನ್ ಬಗ್ಗೆ ಅಲಾಹಿ ದೇವರು ನುಡಿದಿರೋ ಭವಿಷ್ಯ ನಿಜವಾಗುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ.
‘ದರ್ಶನ್ ರಿಲೀಸ್ ಆದ್ಮೇಲೆ ಮನೆಗೆ ಬಂದ್ರೆ ಬೇಡ ಅನ್ನಲ್ಲ’
ಜೈಲಿನಲ್ಲಿರೋ ದರ್ಶನ್ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಹಸ್ತ ಚಾಚುತ್ತಾರೆ ಎಂಬ ಮಾತು ಕೇಳಿಬರ್ತಿದೆ. ಈ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಮಾತನಾಡಿದ್ದು, ದರ್ಶನ್ ರಿಲೀಸ್ ಆದ್ಮೇಲೆ ಮನೆಗೆ ಬಂದ್ರೆ ಬೇಡ ಅನ್ನಲ್ಲ. ನಾವು ಜಂಗಮರು ಮನೆಗೆ ಯಾರೇ ಬಂದರೂ ಊಟ ಹಾಕ್ತೀವಿ ಎಂದು ಉದಾರದ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ದರ್ಶನ್ ಪತ್ನಿ.. ಗಂಡನಿಗಾಗಿ ನವ ಚಂಡಿಕಾಯಾಗ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕ್ರೌರ್ಯದ ಲೋಕದಲ್ಲಿ ನಟ ದರ್ಶನ್ಗೆ ಸೆರೆವಾಸ
ಎರಡ್ಮೂರು ತಿಂಗಳಲ್ಲಿ ರಿಲೀಸ್ ಆಗ್ತಾರಾ ದಾಸ..?
‘ಕಾಟೇರ’ನ ಬಗ್ಗೆ ರೇಣುಕಾಸ್ವಾಮಿ ತಂದೆ ಮಾತು
ಚಿತ್ರದುರ್ಗ: ಕರ್ಮದ ಕಲ್ಲನ್ನ ಎಡವಿರೋ ದರ್ಶನ್ ಪರಪ್ಪನ ಅಗ್ರಹಾರದ ವಾಸದಲ್ಲಿದ್ದಾರೆ. ಹತ್ಯೆಯ ಪಾಪವನ್ನ ಹೊತ್ತು ಮನೆಯೂಟವೂ ಸಿಗದೇ ಜೈಲಿನ ಸರಳಿನ ಹಿಂದೆ ಸೊರಗುತ್ತಿದ್ದಾರೆ. ಆದ್ರೀಗ ಹಗೆಯಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟಿದ್ದ ದಾಸ ಕೆಲ ತಿಂಗಳಲ್ಲೇ ರಿಲೀಸ್ ಆಗ್ತಾರೆ ಎಂಬ ಭವಿಷ್ಯ ವಾಣಿಯೊಂದು ನುಡಿದಿದೆ. ಈ ಮಧ್ಯೆ ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್ ಸಹಾಯಹಸ್ತದ ಮಾತಿಗೆ ಮೃತನ ತಂದೆ ಉದಾರದ ಮಾತುಗಳನ್ನ ಆಡಿದ್ದಾರೆ.
ಕ್ರೌರ್ಯದ ಲೋಕದಲ್ಲಿ ಇಳಿದು ಕಾಟೇರ ಹೀರೋ ಕಾರಾಗೃಹ ಸೇರಿದ್ದಾರೆ. ಸಿನಿಮಾ ನಟನೆಯನ್ನೇ ನಿಜ ಜೀವನದಲ್ಲಿ ಅನುಸರಿಸಿ ನರವಧೆ ಮಾಡಿ ಕರ್ಮವನ್ನ ಹೊತ್ತು ಜೈಲು ಸೇರಿದ್ದಾರೆ. ಆದ್ರೆ, ಪರಪ್ಪನ ಅಗ್ರಹಾರದಲ್ಲಿರೋ ದಾಸ ಇದುವರೆಗೂ ಬೇಲ್ಗೆ ಅರ್ಜಿಯನ್ನೇ ಸಲ್ಲಿಸಲ್ಲ. ಆದ್ರೆ, ದೇವರ ವಾಣಿಯೊಂದು ದಾಸನ ಭವಿಷ್ಯದ ಬಗ್ಗೆ ನುಡಿದಿದೆ.
‘ಎರಡ್ಮೂರು ತಿಂಗಳಲ್ಲಿ ರಿಲೀಸ್ ಆಗಲಿದ್ದಾರೆ ದರ್ಶನ್’
ಕೌಡೆಪೀರ ಲಾಲ್ಸಾಬ್. ಮೊಹರಂ ಆಚರಣೆ ವೇಳೆ ಕೊಪ್ಪಳ ಭಾಗದ ಜನರು ಆರಾಧಿಸೋ ದೇವರು. ಈ ಕೌಡೇಪೀರ್ ಹೇಳಿದ್ದು ನಿಜವಾಗುತ್ತೆ ಅನ್ನೋದು ಈ ಭಾಗದ ಭಕ್ತರ ನಂಬಿಕೆ. ಅಲ್ಲದೇ ಕೆಲವೊಂದು ವಾಣಿಗಳು ನಿಜವಾಗಿವೆ. ಇದೀಗ ಇದೇ ಕೌಡೆಪೀರ ಲಾಲ್ಸಾಬ್, ಕೊಲೆ ಆರೋಪಿ ದರ್ಶನ್ರ ಜೈಲಿನ ಭವಿಷ್ಯದ ಬಗ್ಗೆ ನುಡಿದಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು ಬೆಳಗ್ಗೆ ಕೌಡೆಪೀರ್ ಲಾಲ್ ಸಾಬ್ಗೆ ದರ್ಶನ್ ಯಾವಾಗ ರಿಲೀಸ್ ಆಗ್ತಾರೆ ಅಂತ ಅಭಿಮಾನಿಯೊಬ್ಬ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿರೋ ಕೌಡೆಪೀರ ಲಾಲ್ಸಾಭ್, ಎರಡ್ಮೂರು ತಿಂಗಳಲ್ಲಿ ರಿಲೀಸ್ ಆಗ್ತಾರೆ ಭವಿಷ್ಯ ವಾಣಿ ಹೇಳಿದೆ.
ಅಂದ್ಹಾಗೆ 2019ರಲ್ಲಿ ತಿಹಾರ್ ಜೈಲು ಸೇರಿದ್ದ ಈಗಿನ ಡಿಸಿಎಂ ಡಿ.ಕೆ. ಶಿವಕುಮಾರ್ ಬಗ್ಗೆಯೂ ಕೌಡೆಪೀರ್ ದೇವರು ಆಗ ಭವಿಷ್ಯ ವಾಣಿ ನುಡಿದಿತ್ತು. ಕೌಡೆಪೀರ ಹೇಳಿದಂತೆ ಆದು ಕೆಲ ದಿನಗಳಲ್ಲೇ ನಿಜ ಕೂಡಾ ಆಗಿತ್ತು. ಇದೀಗ ದರ್ಶನ್ ಬಗ್ಗೆ ಅಲಾಹಿ ದೇವರು ನುಡಿದಿರೋ ಭವಿಷ್ಯ ನಿಜವಾಗುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ.
‘ದರ್ಶನ್ ರಿಲೀಸ್ ಆದ್ಮೇಲೆ ಮನೆಗೆ ಬಂದ್ರೆ ಬೇಡ ಅನ್ನಲ್ಲ’
ಜೈಲಿನಲ್ಲಿರೋ ದರ್ಶನ್ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಹಸ್ತ ಚಾಚುತ್ತಾರೆ ಎಂಬ ಮಾತು ಕೇಳಿಬರ್ತಿದೆ. ಈ ಬಗ್ಗೆ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಮಾತನಾಡಿದ್ದು, ದರ್ಶನ್ ರಿಲೀಸ್ ಆದ್ಮೇಲೆ ಮನೆಗೆ ಬಂದ್ರೆ ಬೇಡ ಅನ್ನಲ್ಲ. ನಾವು ಜಂಗಮರು ಮನೆಗೆ ಯಾರೇ ಬಂದರೂ ಊಟ ಹಾಕ್ತೀವಿ ಎಂದು ಉದಾರದ ಮಾತುಗಳನ್ನಾಡಿದ್ದಾರೆ.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ದರ್ಶನ್ ಪತ್ನಿ.. ಗಂಡನಿಗಾಗಿ ನವ ಚಂಡಿಕಾಯಾಗ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ