ನಂಬೇಡ ನಂಬೇಡ.. 3 ಕೋಟಿ ರೂಪಾಯಿ ಕಳೆದುಕೊಂಡ ನಿವೃತ್ತ IAS ಅಧಿಕಾರಿ..!

author-image
Ganesh
Updated On
AAI Recruitment; ಅರ್ಜಿ ಆಹ್ವಾನ.. ಇವರಿಗೆ ಮಾತ್ರ ಅವಕಾಶ, ಸಂಬಳ ಎಷ್ಟಿದೆ?
Advertisment
  • ನಿವೃತ್ತ ಐಎಎಸ್​ ಅಧಿಕಾರಿಗೇ ಯಾಮಾರಿಸಿದ್ದಾರೆ..
  • ಅಸಲಿ ವಿಚಾರ ತಿಳಿದು ಆಘಾತಕ್ಕೆ ಒಳಗಾದ ಮಾಜಿ ಅಧಿಕಾರಿ
  • ಆ ಅಧಿಕಾರಿ 3.37 ಕೋಟಿ ರೂಪಾಯಿ ಕಳೆದುಕೊಂಡಿದ್ದು ಹೇಗೆ?

ಈ ಡಿಜಿಟಲ್​ ಯುಗ ಹೇಗಿದೆ ಅಂದರೆ ದೊಡ್ಡ ದೊಡ್ಡ ಬುದ್ಧಿವಂತರಿಗೇ ಮಂಕು ಮಾಡುವಷ್ಟು! ಹೈದರಾನಾದ್​​ನ ಸೋಮಾಜಿಗುಡಕ್ಕೆ ಸೇರಿದ 72 ವರ್ಷದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರಿಗೆ ಸೈಬರ್​ ಖದೀಮರು 3.37 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ.

ಈ ಸೈಬರ್​​ ಫ್ರಾಡ್​​​​ಗಳು ಅತ್ಯಾಧುನಿಕ ನಕಲಿ ಸ್ಟಾಕ್ ಟ್ರೇಡಿಂಗ್ ಅಪ್ಲಿಕೇಶನ್ ಮೂಲಕ ನಿವೃತ್ತ ಐಎಎಸ್​​ ಅಧಿಕಾರಿಗೆ ಲಿಂಕ್​ ಕಳಿಸಿ APK ಫೈಲ್ ಇನ್​​ಸ್ಟಾಲ್​ ಮಾಡುವಂತೆ ಹೇಳಿದ್ದಾರೆ. ಅದನ್ನ ಗಮನಿಸಿದ್ದ ಅಧಿಕಾರಿ ಅದೊಂದು ಕಾನೂನುಬದ್ಧ ಬಿಸ್ನೆಸ್​ ವೇದಿಕೆ​ ಎಂದು ನಂಬಿದ್ದರು. ನಂತರ ನನ್ನ ಹೆಸರು ಅರ್ಜುನ್ ರಮೇಶ್ ಮೆಹ್ತಾ, ನಾನು ಕಂಪನಿಯ ಮುಖ್ಯ ಹೂಡಿಕೆ ಅಧಿಕಾರಿ ಎಂದು ಹೇಳಿಕೊಂಡು ಒಬ್ಬ ಕರೆ ಮಾಡಿದ್ದನಂತೆ.

ಇದನ್ನೂ ಓದಿ: ಕಾಂತಾರ ಅವತಾರ ಬಳಿಕ KL ರಾಹುಲ್ ಮತ್ತೊಂದು ಹೊಸ ಅಧ್ಯಾಯ.. ಗುಜರಾತ್ ವಿರುದ್ಧ ಭರ್ಜರಿ ಶತಕ..!

publive-image

ಸೈಬರ್​ ಜಾಲಕ್ಕೆ ಬಿದ್ದಿದ್ದೇಗೆ..?

ತಾನೊಬ್ಬ ಮುಖ್ಯ ಹೂಡಿಕೆ ಅಧಿಕಾರಿ ಎಂದು ಹೇಳಿಕೊಂಡು ಬಂದ ಕರೆ, ಆ ಲಿಂಕ್​ನಲ್ಲಿ ಇದ್ದ ಮಾಹಿತಿಗಳೆಲ್ಲಾ ನಿವೃತ್ತ ಐಎಎಸ್​ ಅಧಿಕಾರಿಗೆ ಕೊಂಚವೂ ಅನುಮಾನ ಬರದಂತೆ ಇದ್ದವು. ಅಷ್ಟೇ ಅಲ್ಲದೇ ಅರ್ಜುನ್ ರಮೇಶ್ ಮೆಹ್ತಾ, ಇತರೇ ಮೆಂಬರ್ಸ್​​ ಬಗ್ಗೆ ಹೇಳ್ತಾ, ಮ್ಯೂಚುವಲ್ ಫಂಡ್‌ಗಳು, ಐಪಿಒಗಳು ಮತ್ತು ಹೂಡಿಕೆಗಳ ಮೇಲೆ ಬರುವ ಲಾಭಗಳ ಬಗ್ಗೆ ವಿವರಿಸುತ್ತಾ, ಹೂಡಿಕೆ ಮೇಲೆ 90% ಲಾಭ ಪಡೆಯಬಹುದು ಎಂದು ಹೇಳಿ ಬಲಿಪಶುವಿಗೆ ಭರವಸೆಗಳನ್ನ ಕೊಟ್ಟಿದ್ದ.

ಇದಾದ ನಂತರ ವಂಚಕರು ಅಧಿಕಾರಿಗೆ ವಾಟ್ಸ್​ಆ್ಯಪ್ ಮೂಲಕ ಮೆಲ್ಲ ಮೆಲ್ಲಗೆ ಸ್ಟಾಕ್​ ಮಾರ್ಕೆಟ್​​ನ ಸಲಹೆಗಳು, ಹೂಡಿಕೆಯ ಪ್ಲಾನ್​ಗಳನ್ನ ಕಳಿಸಿದ್ದರು. ವಿಪರ್ಯಾಸ ಏನಂದ್ರೆ ಇದೆಲ್ಲಾ ಎಐ ಅಂದರೆ ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ನಿಂದ ಬರ್ತಿದ್ದ ಮೆಸೆಜಸ್​ ಅನ್ನೋದು ನಿವೃತ್ತ ಅಧಿಕಾರಿಗೆ ತಿಳಿದಿರಲಿಲ್ಲ.

ಇದನ್ನೂ ಓದಿ: ಪಂಜಾಬ್ ಕಿಂಗ್ಸ್​ ಸ್ಟ್ರಾಂಗ್ ಕಂಬ್ಯಾಕ್.. ಯುವ ಆಟಗಾರನಿಗಾಗಿ ಸ್ಥಾನ ತ್ಯಾಗ ಮಾಡಿದ ಸಂಜು

publive-image

ಇದೇ ಮಾರ್ಚ್ ಮೇ ತಿಂಗಳ ನಡುವೆ, ನಿವೃತ್ತ ಐಎಎಸ್​​ ಅಧಿಕಾರಿ ₹28,568 ರಿಂದ ₹50 ಲಕ್ಷ ಹಣವನ್ನ ವರ್ಗಾವಣೆ ಮಾಡಿದ್ದಾರೆ. ಹಾಗೆ ಮುಂದುವರೆದು ಕೊನೆಗೆ ಒಟ್ಟು ₹3.37 ಕೋಟಿ ಹಣ ಸೈಬರ್​​ ಖದೀಮರ ಬೊಕ್ಕಸಕ್ಕೆ ಸೇರಿಸಿಬಿಟ್ಟಿದ್ದಾರೆ.

ವಂಚನೆ ಬಯಲಾಗಿದ್ದೇಗೆ?

ನಿವೃತ್ತ ಐಎಎಸ್​ ಅಧಿಕಾರಿ ಅಲ್ಲಿವರೆಗೂ ₹3.37 ಕೋಟಿ ಹೂಡಿಕೆ ಮಾಡಿದ್ದರು. ಕೊನೆಗೆ ಆ ಹೂಡಿಕೆಗೆ ಲಾಭ ಸುಮಾರು ₹22 ಕೋಟಿ ಎಂದು ವಂಚಕರ ಕಡೆಯಿಂದ ಹೇಳಲಾಗಿತ್ತು.ಆ ಮೊತ್ತವನ್ನ ಹಿಂಪಡೆಯಲು ಅಧಿಕಾರಿ ಯತ್ನಿಸಿದಾಗ ಈ ಭಯಾನಕ ಹಗರಣ ಬೆಳಕಿಗೆ ಬಂದಿದೆ. ಕೊನೆಗೆ ತಾನೂ ಹೂಡಿದ್ದ ಮೊತ್ತವನ್ನಷ್ಟೇ ಹಿಂತಿರುಗಿಸಿ ಎಂದು ಕೇಳಿದಾಗ ಅದಕ್ಕಾಗಿ ವಂಚಕರು ₹33.5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ತಾನೊಂದು ಫ್ರಾಡ್​ಗಳ ಟ್ರ್ಯಾಪ್​​ಗೆ ಬಿದ್ದಿದ್ದೇನೆ ಎಂದು ಅಧಿಕಾರಿಗೆ ತಿಳಿದಿತ್ತು. ಕೂಡಲೇ ಆ ಬಲಿಪಶು ಟಿಜಿಸಿಎಸ್‌ಬಿ.. ಅಂದರೇ ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋಗೆ ದೂರು ಕೊಟ್ಟಿದ್ದಾರೆ. ಸೈಬರ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬ್ಯಾಂಕ್ ವಹಿವಾಟುಗಳನ್ನ ಪರೀಶಿಲಿಸಿ ಆರೋಪಿಗಳ ಬೇಟೆಗೆ ಇಳಿದಿದ್ದಾರೆ.

ಇದನ್ನೂ ಓದಿ: ಅಂತಿಮ ಹಂತ ತಲುಪಿದ್ದರೂ ಪ್ಲೇ-ಆಫ್​ ಬಗ್ಗೆ ಕ್ಲಾರಿಟಿನೇ ಇಲ್ಲ.. 5 ತಂಡ, 4 ಸ್ಥಾನ..! RCB ಕತೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment