/newsfirstlive-kannada/media/post_attachments/wp-content/uploads/2025/04/DHONI_JADEJA.jpg)
ಇಂಡಿಯನ್ ಪ್ರೀಮಿಯರ್ ಲೀಗ್ ದಿನೇ ದಿನೇ ರಂಗೇರುತ್ತಿದೆ. ಆದ್ರೆ, ಚಾಂಪಿಯನ್ ಟೀಮ್ ಚೆನ್ನೈ ಸೂಪರ್ ಕಿಂಗ್ಸ್ನ ಆಟ ಪಂದ್ಯದಿಂದ ಪಂದ್ಯಕ್ಕೆ ಹೀನಾಯ ಸ್ಥಿತಿಗೆ ತಲುಪಿದೆ. ಸತತ ಸೋಲುಗಳಿಂದ ಇಡೀ ತಂಡ ಕಂಗೆಟ್ಟಿದೆ. ಅಭಿಮಾನಿಗಳನ್ನ ನೋವು, ಬೇಸರ, ಹತಾಶೆ ಆವರಿಸಿದೆ. ಇದ್ರ ನಡುವೆ ಚೆನ್ನೈ ಕ್ಯಾಂಪ್ನಲ್ಲಿ ಬಿರುಕು ಮೂಡಿರೋ ಸುದ್ದಿ ಹೊರಬಿದ್ದಿದೆ.
ಸೀಸನ್-18ರ ಐಪಿಎಲ್ ಭರದಿಂದ ಸಾಗಿದೆ. ರೋಚಕ ಪಂದ್ಯಗಳ ಹಣಾಹಣಿ ಸಖತ್ ಕಿಕ್ ನೀಡ್ತಿದೆ. ಆದ್ರೆ, ಫೈವ್ ಟೈಮ್ಸ್ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾತ್ರ ದುಸ್ಥಿತಿಗೆ ತಲುಪಿದೆ. ಸತತ ಸೋಲುಗಳಿಂದ ಕಂಗ್ಗೆಟ್ಟಿರುವ ಚೆನ್ನೈ, ಗೆಲುವಿನ ಹುಡುಕಾಟದಲ್ಲಿದೆ. ಸತತ ಸೋಲಿನ ನೋವು ಅಭಿಮಾನಿಗಳನ್ನ ಕಾಡ್ತಿದೆ. ಇದ್ರ ನಡುವೆ ಮತ್ತೊಂದು ಬೇಸರದ ಸುದ್ದಿ ಚೆನ್ನೈ ಕ್ಯಾಂಪ್ನಿಂದ ಹೊರಬಿದ್ದಿದೆ.
ಸೀಸನ್ ಮಧ್ಯೆದಲ್ಲಿ ನಾಯಕತ್ವದ ಬದಲಾವಣೆಯಾದ ಬೆನ್ನಲ್ಲೇ ಚೆನ್ನೈ ತಂಡದಲ್ಲಿ ಎಲ್ಲವೂ ಸರಿ ಇದೆಯಾ ಎಂಬ ಪ್ರಶ್ನೆ ಉದ್ಬವಿಸಿದೆ. ಋತುರಾಜ್ ಗಾಯಕ್ವಾಡ್ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಧೋನಿ ಸೀಸನ್ನ ಉಳಿದ ಪಂದ್ಯಗಳಲ್ಲಿ ತಂಡವನ್ನ ಮುನ್ನಡೆಸ್ತಾರೆ ಅನ್ನೋ ಅಧಿಕೃತ ಪ್ರಕಟಣೆಯನ್ನ ಸಿಎಸ್ಕೆ ಫ್ರಾಂಚೈಸಿ ಹೊರಡಿಸಿದೆ. ಹಾಗಿದ್ರೂ, ಚೆನ್ನೈ ತಂಡದಲ್ಲಿ ಆಂತರಿಕ ಬಿಕ್ಕಟ್ಟು ಶುರುವಾಗಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
ಎಮ್.ಎಸ್.ಧೋನಿ, ಋತುರಾಜ್ ನಡುವೆ ಶೀತಲ ಸಮರ..?
ಇಂಜುರಿ ಕಾರಣಕ್ಕೆ ಋತುರಾಜ್ ಗಾಯಕ್ವಾಡ್, ಟೂರ್ನಿಯಿಂದ ಔಟ್ ಆಗಿದ್ರೂ ಋತುರಾಜ್ ತಂಡದಲ್ಲೇ ಉಳಿದಿದ್ದಾರೆ. ತಂಡದೊಂದಿಗೆ ಟ್ರಾವೆಲ್ ಮಾಡ್ತಿರೋ ಋತುರಾಜ್ ಗಾಯಕ್ವಾಡ್ ಮೈದಾನಕ್ಕೂ ಬರ್ತಿದ್ದಾರೆ. ಆದ್ರೆ, ಧೋನಿ ಜೊತೆಗಿನ ಸಂಬಂಧ ಮೊದಲಿನಂತಿಲ್ಲ ಎನ್ನಲಾಗ್ತಿದೆ. ಇದು ಡ್ರೆಸ್ಸಿಂಗ್ ರೂಮ್ ಗುಸುಗುಸು ಆದ್ರೆ, ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲೂ ಧೋನಿಯನ್ನ ಋತುರಾಜ್ ಅನ್ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ.
ಇನ್ಸ್ಸ್ಟಾಗ್ರಾಂನಲ್ಲಿ ಋತುರಾತ್ ಧೋನಿ ಅಕೌಂಟ್ನ ಫಾಲೋ ಮಾಡ್ತಿಲ್ಲ. ಸದ್ಯ ಧೋನಿಯನ್ನ ಋತುರಾಜ್ ಅನ್ಫಾಲೋ ಮಾಡಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿದೆ. ಇದು ಶೀತಲಸಮರದ ಗಾಸಿಪ್ಗೆ ಕಿಡಿ ಹಚ್ಚಿದೆ. ಆದ್ರೆ, ಕೆಲ ಫ್ಯಾನ್ಸ್ ಮಾತ್ರ ಇನ್ಸ್ಟಾದಲ್ಲಿ ಈ ಹಿಂದೆಯೂ ಋತುರಾಜ್ ಗಾಯಕ್ವಾಡ್, ಧೋನಿನ ಫಾಲೋ ಮಾಡ್ತಿರಲಿಲ್ಲ ಎಂಬ ವಾದ ಮಾಡ್ತಿದ್ದಾರೆ. ಈ ವಾದ-ಪ್ರತಿವಾದದ ಹೊರತಾಗಿಯೂ ಚೆನ್ನೈ ಕ್ಯಾಂಪ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ನಡೀತಿದೆ.
ಗಾಯಕ್ವಾಡ್ ಇಂಜುರಿ ಮಾರ್ಚ್ 30ಕ್ಕೆ, ಮತ್ತೆರೆಡು ಮ್ಯಾಚ್ ಆಡಿದ್ದೇಕೆ?
ಸದ್ಯ ಸ್ವತಃ ಗಾಯಕ್ವಾಡ್ ಇಂಜುರಿಯಾಗಿದೆ ಎಂದು ಹೇಳಿದ್ರೂ, ಬಹುತೇಕರು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಯಾಕಂದ್ರೆ, ಋತುರಾಜ್ಗೆ ಇಂಜುರಿಯಾಗಿದ್ದು ಮಾರ್ಚ್ 30ಕ್ಕೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಫ್ರಾ ಆರ್ಚರ್ ಎಸೆದ ಚೆಂಡು ಋತುರಾಜ್ ಗಾಯಕ್ವಾಡ್ಗೆ ತಗಲಿತ್ತು. ಆದ್ರೆ, ಈ ಇಂಜುರಿಯಾದ ಬಳಿಕವೂ ಋತುರಾಜ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಎದುರು ಕಣಕ್ಕಿಳಿದಿದ್ದರು. ಇಂಜುರಿ ಆದ ಬಳಿಕ 2 ಪಂದ್ಯಗಳಲ್ಲಿ ಆಡಿದ ಋತುರಾಜ್ ಇದೀಗ ಇದಕ್ಕಿದ್ದಂತೆ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ, ಧೊನಿಗೆ ಪಟ್ಟ ಕಟ್ಟುವ ಸಲುವಾಗಿ ಋತುರಾಜ್ನ ಫ್ರಾಂಚೈಸಿ ಬಲಿಪಶು ಮಾಡಿತಾ ಎಂಬ ಅನುಮಾನ ಕ್ರಿಕೆಟ್ ವಲಯದಲ್ಲಿ ಹುಟ್ಟಿಕೊಂಡಿದೆ.
ಇದನ್ನೂ ಓದಿ:7 ವರ್ಷದ ಬಳಿಕ IPLನಲ್ಲಿ ಅರ್ಧಶತಕ ಸಿಡಿಸಿದ ಕನ್ನಡಿಗ.. ಡೆಲ್ಲಿ ಕರುಣ್ಗೆ ಕೊಟ್ಟ ಹಣವೆಷ್ಟು?
ಮೊನ್ನೆ ನಡೆದ ಕೊಲ್ಕತ್ತಾ ವಿರುದ್ಧ ಪಂದ್ಯಕ್ಕೂ ಮುನ್ನ ಋತುರಾಜ್ ಗ್ರೌಂಡ್ನಲ್ಲಿ ಕಾಣಿಸಿಕೊಂಡಿದ್ರು. ವಾರ್ಮ್ಅಪ್ ಮಾಡ್ತಿದ್ದ ಋತುರಾಜ್ ಸಹ ಆಟಗಾರರ ಜೊತೆ ಕಿಕ್ ವಾಲಿಬಾಲ್ ಕೂಡ ಆಡಿದ್ರು. ಫುಲ್ ಫಿಟ್ ಇದ್ದಂತೆಯೂ ಕಂಡಿದ್ರು. ಇದು ಕೂಡ ಚೆನ್ನೈ ಕ್ಯಾಂಪ್ನ ಬಿರುಕಿನ ಗಾಸಿಪ್ಗೆ ಆಹಾರವಾಗಿದೆ.
ಈ ಹಿಂದೆ ಜಡೇಜಾ ನಾಯಕನಾಗಿದ್ದಾಗಲೂ ಚೆನ್ನೈ ಸತತ ಸೋಲು ಕಂಡಿತ್ತು. ಆಗ ಫ್ರಾಂಚೈಸಿ ದಿಢೀರ್ ಧೋನಿಗೆ ಮತ್ತೆ ಪಟ್ಟಾಭಿಶೇಕ ಮಾಡಿತ್ತು. ಆಗ ಜಡೇಜಾ-ಧೋನಿ ನಡುವೆ ಬಿರುಕು ಮೂಡಿದ್ದ ಸುದ್ದಿ ಹೊರಬಿದ್ದಿತ್ತು. ಇದೀಗ ಋತುರಾಜ್ ವಿಚಾರದಲ್ಲೂ ಇದೇ ಅಸಮಾಧಾನದ ಸುದ್ದಿ ಸೌಂಡ್ ಮಾಡ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ