newsfirstkannada.com

ಅಂದು ದ್ವಾರಕೀಶ್​​ ಕನಸಿನ ಮನೆ ಖರೀದಿಸಿದ್ದ ರಿಷಬ್​! ಇದುವರೆಗೂ ಅಲ್ಲಿಗೆ ಕಾಲಿಟ್ಟಿಲ್ಲವಂತೆ​! ಯಾಕೆ?

Share :

Published August 13, 2024 at 12:55pm

Update August 13, 2024 at 12:56pm

    4 ವರ್ಷದ ಹಿಂದೆ ದ್ವಾರಕೀಶ್​ ಮನೆ ಖರೀದಿಸಿದ ರಿಷಬ್

    ರಿಷಬ್​ ಆ ಮನೆಯಲ್ಲಿ ಇದುವರೆಗೂ ವಾಸಿಸಿಲ್ಲವಂತೆ

    ರಿಷಬ್​ ಶೆಟ್ಟಿ ಆಪ್ತ ಸ್ನೇಹಿತನೇ ಈ ಬಗ್ಗೆ ಬಿಚ್ಚಿಟ್ರು ಮಾಹಿತಿ

ಸ್ಯಾಂಡಲ್​ವುಡ್​ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ನಾಲ್ಕು ವರ್ಷದ ಹಿಂದೆ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್​ ಅವರ ಮನೆಯನ್ನು ಖರೀದಿಸಿದ್ದರು. ಎಚ್​ಎಸ್​​ಆರ್​ ಲೇಔಟಿನಲ್ಲಿರುವ ಮನೆಯನ್ನು ಬರೋಬ್ಬರಿ ಹತ್ತೂವರೆ ಕೋಟಿಗೆ ಖರೀದಿಸಿದ್ದರು ಎಂಬ ಮಾತುಗಳು ಜೋರಾಗಿ ಕೇಳಿಬಂದಿತ್ತು. ಆದರೆ ಅಷ್ಟೊಂದು ಹಣ ನೀಡಿ ಖರೀದಿಸಿದ ಮನೆಯಲ್ಲಿ ರಿಷಬ್​​ ಒಂದು ದಿನ ಕೂಡ ವಾಸ ಮಾಡಿಲ್ಲ ಎಂಬ ಸಂಗತಿ ಹೊರಬಿದ್ದಿದೆ.

ದ್ವಾರಕೀಶ್​​ ಅವರ ಬಳಿಯಿಂದ ಖರೀದಿಸಿದ್ದ ಮನೆಗೆ ರಿಷಬ್​ ಕಾಲು ಕೂಡ ಇರಿಸಿಲ್ಲವಂತೆ. ಮಾತ್ರವಲ್ಲದೆ ಒಂದು ದಿನ ಕೂಡ ಆ ಮನೆಯಲ್ಲಿ ವಾಸ ಮಾಡಿಲ್ಲವಂತೆ. ಅಂದಹಾಗೆಯೇ ಈ ಸುದ್ದಿಯನ್ನು ರಿಷಬ್​ ಅಪ್ತ ಸ್ನೇಹಿತ ಪ್ರಮೋದ್​​ ಶೆಟ್ಟಿಯವರು ರಿವೀಲ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ಸಂಗತಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ‘ಬೃಂದಾವನ’ ನಟನಿಗೆ ಒಲಿದ ಲಕ್; ಅಭಿಮಾನಿಗಳಿಗೆ ಬಿಗ್​ ಅಪ್​​ಡೇಟ್ಸ್​ ಕೊಟ್ಟ ವರುಣ್​ ಆರಾಧ್ಯ..!

ರಿಷಬ್​ ಶೆಟ್ಟಿ ಬೆಂಗಳೂರಿನಲ್ಲಿ ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾನೆ. ಆದರೆ ಅವನು ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ದುಡ್ಡು ಇಲ್ಲ ಅಂತಲ್ಲ. ನಮಗೆ ನಾವೇನು ಗಳಿಸುತ್ತೇವೆಯೋ ಅದನ್ನು ವಾಪಸ್ಸು ಅದಕ್ಕೆ ಹಾಕುತ್ತೇವೆ. ಅದರಿಂದಲೇ ವಾಪಸ್ಸು ತೆಗೆಯಬೇಕು. ಬಂದ ದುಡ್ಡನ್ನು ಸಿನಿಮಾಗೆ ಹಾಕಿದ್ದಾನೆ ಎಂದು ಪ್ರವೋದ್​​ ಶೆಟ್ಟಿ ಹೇಳಿದ್ದಾರೆ.

ಮನೆಯನ್ನು ಕಳೆದುಕೊಂಡಾಗ ಅದು ಸ್ವಂತದ್ದು ಆಗೋದಿಲ್ಲ. ಬೇರೆಯವರು ಇದ್ದ ಮನೆಯದು. ಅಲ್ಲಿ ಉಳಿದುಕೊಳ್ಳಬೇಕು ಎಂದು ತೆಗೆದುಕೊಂಡದ್ದಲ್ಲ. ಅನಿವಾರ್ಯ ಕಾರಣದಿಂದ ಆ ಮನೆಯನ್ನು ತೆಗೆದುಕೊಂಡಿದ್ದಾನೆ. ಆ ಸಮಯದಲ್ಲಿ ಒಂದಷ್ಟು ಗೆಳೆತನ ಅದರಲ್ಲಿ ಯಾರಿಗೋ ಅನಿವಾರ್ಯತೆ. ಕಮಿಟ್​ಮೆಂಟ್​​ಗೋಸ್ಕರ ತೆಗೆದುಕೊಂಡ ಮನೆಯದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 2ನೇ ಮದ್ವೆ ವದಂತಿ ನಡುವೆ ಸಾನಿಯಾ ಮಿರ್ಜಾರಿಂದ ಮಹತ್ವದ ಘೋಷಣೆ! ವಾಟ್ಸ್​ಆ್ಯಪ್​ ನಂಬರ್​​ ಹಂಚಿಕೊಂಡ್ರು ನೋಡಿ

ಬಳಿಕ ಮಾತನಾಡಿದ ಅವರು, ರಿಷಬ್​ ಇವತ್ತಿನವರೆಗೆ ಆ ಮನೆಗೆ ಹೋಗಿಲ್ಲ. ಅಲ್ಲಿ ಒಂದು ರಾತ್ರಿನೂ ಉಳಿದುಕೊಂಡಿಲ್ಲ. ಆ ಮನೆ ಇಂದಿಗೂ ಹಾಗೆಯೇ ಇದೆ. ಬೆಂಗಳೂರಿನಲ್ಲಿ ಇಂದಿಗೂ ಜಾಗ ತೆಗೆದುಕೊಂಡಿಲ್ಲ. ಮನೆಯಲ್ಲೂ ಕಟ್ಟಿಲ್ಲ. ಸದ್ಯ ಬಾಡಿಗೆ ಮನೆಯಲ್ಲಿ ಇದ್ದಾನೆ. ಇಷ್ಟು ವರ್ಷ ಬಾಡಿಗೆಯಲ್ಲಿಯೇ ಇದ್ದ. ಕಾಂತಾರ ಸಿನಿಮಾ ಶೂಟಿಂಗ್​ ಆಗುತ್ತಿರುವ ಕಾರಣ ಸದ್ಯ ಕುಂದಾಪುರಕ್ಕೆ ಆತ ಫ್ಯಾಮಿಲಿ ಜೊತೆಗೆ ಶಿಫ್ಟ್​ ಆಗಿದ್ದಾನೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಟಾಟಾ ಸುಮೋ.. 6 ಮಂದಿ ಸಾವು, ಇಬ್ಬರು ಗಂಭೀರ

ಅವನಿಗೆ ಯಾವ ಚಟವಿಲ್ಲ. ಖರ್ಚುಗಳಿಲ್ಲ. ಸಿನಿಮಾದಿಂದ ಬಂದ ಹಣವನ್ನು ಅದಕ್ಕೆ ಹಾಕಿದ್ದಾನೆ. 4 ಸಿನಿಮಾಗಳು ಈಗಾಗಲೇ ರೆಡಿ ಇದೆ. ಬೇರೆ ನಿರ್ಮಾಪಕರನ್ನು ಹುಡುಕಿಕೊಂಡು ಹೋಗಿ ಅವರಿಗೆ ಕಥೆ ಹೇಳಿ ಒಪ್ಪಿಸಿ ಹಣ ಹಾಕಿಸೋದಕ್ಕಿಂತ ಕತೆ ತುಂಬಾ ಚೆನ್ನಾಗಿದೆ ನಾನೇ ಮಾಡತ್ತೇನೆ ಬಾ ಎಂದು ಸಿನಿಮಾಗೆ ದುಡ್ಡು ಹಾಕುತ್ತಾನೆ. ಅದು ಮುಂದೆ ವಾಪಸ್ಸು ಬರುತ್ತದೆ ಎಂದು ಪ್ರವೋದ್​ ಶೆಟ್ಟಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ದ್ವಾರಕೀಶ್​​ ಕನಸಿನ ಮನೆ ಖರೀದಿಸಿದ್ದ ರಿಷಬ್​! ಇದುವರೆಗೂ ಅಲ್ಲಿಗೆ ಕಾಲಿಟ್ಟಿಲ್ಲವಂತೆ​! ಯಾಕೆ?

https://newsfirstlive.com/wp-content/uploads/2024/08/Rishab-Shetty.jpg

    4 ವರ್ಷದ ಹಿಂದೆ ದ್ವಾರಕೀಶ್​ ಮನೆ ಖರೀದಿಸಿದ ರಿಷಬ್

    ರಿಷಬ್​ ಆ ಮನೆಯಲ್ಲಿ ಇದುವರೆಗೂ ವಾಸಿಸಿಲ್ಲವಂತೆ

    ರಿಷಬ್​ ಶೆಟ್ಟಿ ಆಪ್ತ ಸ್ನೇಹಿತನೇ ಈ ಬಗ್ಗೆ ಬಿಚ್ಚಿಟ್ರು ಮಾಹಿತಿ

ಸ್ಯಾಂಡಲ್​ವುಡ್​ ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ನಾಲ್ಕು ವರ್ಷದ ಹಿಂದೆ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್​ ಅವರ ಮನೆಯನ್ನು ಖರೀದಿಸಿದ್ದರು. ಎಚ್​ಎಸ್​​ಆರ್​ ಲೇಔಟಿನಲ್ಲಿರುವ ಮನೆಯನ್ನು ಬರೋಬ್ಬರಿ ಹತ್ತೂವರೆ ಕೋಟಿಗೆ ಖರೀದಿಸಿದ್ದರು ಎಂಬ ಮಾತುಗಳು ಜೋರಾಗಿ ಕೇಳಿಬಂದಿತ್ತು. ಆದರೆ ಅಷ್ಟೊಂದು ಹಣ ನೀಡಿ ಖರೀದಿಸಿದ ಮನೆಯಲ್ಲಿ ರಿಷಬ್​​ ಒಂದು ದಿನ ಕೂಡ ವಾಸ ಮಾಡಿಲ್ಲ ಎಂಬ ಸಂಗತಿ ಹೊರಬಿದ್ದಿದೆ.

ದ್ವಾರಕೀಶ್​​ ಅವರ ಬಳಿಯಿಂದ ಖರೀದಿಸಿದ್ದ ಮನೆಗೆ ರಿಷಬ್​ ಕಾಲು ಕೂಡ ಇರಿಸಿಲ್ಲವಂತೆ. ಮಾತ್ರವಲ್ಲದೆ ಒಂದು ದಿನ ಕೂಡ ಆ ಮನೆಯಲ್ಲಿ ವಾಸ ಮಾಡಿಲ್ಲವಂತೆ. ಅಂದಹಾಗೆಯೇ ಈ ಸುದ್ದಿಯನ್ನು ರಿಷಬ್​ ಅಪ್ತ ಸ್ನೇಹಿತ ಪ್ರಮೋದ್​​ ಶೆಟ್ಟಿಯವರು ರಿವೀಲ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ಸಂಗತಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ‘ಬೃಂದಾವನ’ ನಟನಿಗೆ ಒಲಿದ ಲಕ್; ಅಭಿಮಾನಿಗಳಿಗೆ ಬಿಗ್​ ಅಪ್​​ಡೇಟ್ಸ್​ ಕೊಟ್ಟ ವರುಣ್​ ಆರಾಧ್ಯ..!

ರಿಷಬ್​ ಶೆಟ್ಟಿ ಬೆಂಗಳೂರಿನಲ್ಲಿ ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾನೆ. ಆದರೆ ಅವನು ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ದುಡ್ಡು ಇಲ್ಲ ಅಂತಲ್ಲ. ನಮಗೆ ನಾವೇನು ಗಳಿಸುತ್ತೇವೆಯೋ ಅದನ್ನು ವಾಪಸ್ಸು ಅದಕ್ಕೆ ಹಾಕುತ್ತೇವೆ. ಅದರಿಂದಲೇ ವಾಪಸ್ಸು ತೆಗೆಯಬೇಕು. ಬಂದ ದುಡ್ಡನ್ನು ಸಿನಿಮಾಗೆ ಹಾಕಿದ್ದಾನೆ ಎಂದು ಪ್ರವೋದ್​​ ಶೆಟ್ಟಿ ಹೇಳಿದ್ದಾರೆ.

ಮನೆಯನ್ನು ಕಳೆದುಕೊಂಡಾಗ ಅದು ಸ್ವಂತದ್ದು ಆಗೋದಿಲ್ಲ. ಬೇರೆಯವರು ಇದ್ದ ಮನೆಯದು. ಅಲ್ಲಿ ಉಳಿದುಕೊಳ್ಳಬೇಕು ಎಂದು ತೆಗೆದುಕೊಂಡದ್ದಲ್ಲ. ಅನಿವಾರ್ಯ ಕಾರಣದಿಂದ ಆ ಮನೆಯನ್ನು ತೆಗೆದುಕೊಂಡಿದ್ದಾನೆ. ಆ ಸಮಯದಲ್ಲಿ ಒಂದಷ್ಟು ಗೆಳೆತನ ಅದರಲ್ಲಿ ಯಾರಿಗೋ ಅನಿವಾರ್ಯತೆ. ಕಮಿಟ್​ಮೆಂಟ್​​ಗೋಸ್ಕರ ತೆಗೆದುಕೊಂಡ ಮನೆಯದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 2ನೇ ಮದ್ವೆ ವದಂತಿ ನಡುವೆ ಸಾನಿಯಾ ಮಿರ್ಜಾರಿಂದ ಮಹತ್ವದ ಘೋಷಣೆ! ವಾಟ್ಸ್​ಆ್ಯಪ್​ ನಂಬರ್​​ ಹಂಚಿಕೊಂಡ್ರು ನೋಡಿ

ಬಳಿಕ ಮಾತನಾಡಿದ ಅವರು, ರಿಷಬ್​ ಇವತ್ತಿನವರೆಗೆ ಆ ಮನೆಗೆ ಹೋಗಿಲ್ಲ. ಅಲ್ಲಿ ಒಂದು ರಾತ್ರಿನೂ ಉಳಿದುಕೊಂಡಿಲ್ಲ. ಆ ಮನೆ ಇಂದಿಗೂ ಹಾಗೆಯೇ ಇದೆ. ಬೆಂಗಳೂರಿನಲ್ಲಿ ಇಂದಿಗೂ ಜಾಗ ತೆಗೆದುಕೊಂಡಿಲ್ಲ. ಮನೆಯಲ್ಲೂ ಕಟ್ಟಿಲ್ಲ. ಸದ್ಯ ಬಾಡಿಗೆ ಮನೆಯಲ್ಲಿ ಇದ್ದಾನೆ. ಇಷ್ಟು ವರ್ಷ ಬಾಡಿಗೆಯಲ್ಲಿಯೇ ಇದ್ದ. ಕಾಂತಾರ ಸಿನಿಮಾ ಶೂಟಿಂಗ್​ ಆಗುತ್ತಿರುವ ಕಾರಣ ಸದ್ಯ ಕುಂದಾಪುರಕ್ಕೆ ಆತ ಫ್ಯಾಮಿಲಿ ಜೊತೆಗೆ ಶಿಫ್ಟ್​ ಆಗಿದ್ದಾನೆ.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತದಲ್ಲಿ ನಜ್ಜುಗುಜ್ಜಾದ ಟಾಟಾ ಸುಮೋ.. 6 ಮಂದಿ ಸಾವು, ಇಬ್ಬರು ಗಂಭೀರ

ಅವನಿಗೆ ಯಾವ ಚಟವಿಲ್ಲ. ಖರ್ಚುಗಳಿಲ್ಲ. ಸಿನಿಮಾದಿಂದ ಬಂದ ಹಣವನ್ನು ಅದಕ್ಕೆ ಹಾಕಿದ್ದಾನೆ. 4 ಸಿನಿಮಾಗಳು ಈಗಾಗಲೇ ರೆಡಿ ಇದೆ. ಬೇರೆ ನಿರ್ಮಾಪಕರನ್ನು ಹುಡುಕಿಕೊಂಡು ಹೋಗಿ ಅವರಿಗೆ ಕಥೆ ಹೇಳಿ ಒಪ್ಪಿಸಿ ಹಣ ಹಾಕಿಸೋದಕ್ಕಿಂತ ಕತೆ ತುಂಬಾ ಚೆನ್ನಾಗಿದೆ ನಾನೇ ಮಾಡತ್ತೇನೆ ಬಾ ಎಂದು ಸಿನಿಮಾಗೆ ದುಡ್ಡು ಹಾಕುತ್ತಾನೆ. ಅದು ಮುಂದೆ ವಾಪಸ್ಸು ಬರುತ್ತದೆ ಎಂದು ಪ್ರವೋದ್​ ಶೆಟ್ಟಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More