/newsfirstlive-kannada/media/post_attachments/wp-content/uploads/2024/01/rishab-7.jpg)
ಮಂಗಳೂರು: ನಟ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1 ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ರಿಷಬ್ ಶೆಟ್ಟಿ ಅವರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಜೊತೆಗೆ ಕಾಂತಾರ ಚಾಪ್ಟರ್ 1 ಕೆಲಸಗಳು ಸುಸೂತ್ರವಾಗಿ ನಡೆಯಲು ಮತ್ತೆ ದೈವದ ಮೊರೆ ಹೋಗಿದ್ದಾರೆ.
ನಟ ರಿಷಬ್ ಶೆಟ್ಟಿ ಮಂಗಳೂರಿನ ಗುರುಪುರದಲ್ಲಿರುವ ವಜ್ರದೇಹಿ ಮಠದ ಮೈಸಂದಾಯ ಕೋಲದಲ್ಲಿ ಭಾಗಿಯಾಗಿದ್ದರು. ಕೋಲದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ರಿಷಬ್​​​ ಶೆಟ್ಟಿಗೆ​ ಕಾಂತಾರ ರೀತಿಯಲ್ಲೇ ದೈವ ಅಭಯ ನೀಡಿದೆ. ಕಾಂತಾರ ಗೆಲುವಿಗಾಗಿ ದೈವದ ಮುಂದೆ ತಲೆಬಾಗಿ ರಿಷಬ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಆಗ ರಿಷಬ್ ಶೆಟ್ಟಿಗೆ ‘ಧೈರ್ಯ ಕಳೆದುಕೊಳ್ಳದಂತೆ, ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ಹಿಂದೆ ನಾನಿದ್ದೇನೆ’ ಎಂಬ ಅಭಯ ನೀಡಿದೆ.
ಕಾಂತಾರ ಶಿವ ರಿಷಬ್ ಶೆಟ್ಟಿಗೆ ಭಯಪಡಬೇಡ ನಾನಿದ್ದೇನೆಂದು ದೈವ ಅಭಯ ನೀಡಿದೆ. ಏನೇ ಸಮಸ್ಯೆ ಎದುರಾದ್ರೂ ಕುಗ್ಗಬೇಡ, ಅಂತಾ ದೈವ ನುಡಿದಿದೆ. ಆದ್ರೆ ದೈವ ಕಾಂತಾರ ಸಿನಿಮಾದ ರೀತಿಯಲ್ಲೇ ಆಶೀರ್ವಾದ ಮಾಡಿದ್ದು ಇಲ್ಲಿ ವಿಶೇಷವಾಗಿದೆ.@shetty_rishab#Mangaluru#DaivaKola#Kantara1#karnatak#NewsFirstLive#NewsFirstKannadapic.twitter.com/hhqeodBMvi
— NewsFirst Kannada (@NewsFirstKan) January 6, 2024
ಸದ್ಯ ಕಾಂತಾರ: ಚಾಪ್ಟರ್ 1’ ಚಿತ್ರವನ್ನು ನಟ ರಿಷಬ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಪಂಜಾಬಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ