Advertisment

ಕೊರಗಜ್ಜನ ಸನ್ನಿಧಿಯಲ್ಲಿ ರಿಷಬ್​ ಶೆಟ್ಟಿ.. ಅಜ್ಜನಿಗೆ ಮದ್ಯ, ಚಕ್ಕುಲಿ, ಬೀಡವಿಟ್ಟು ಪ್ರಾರ್ಥಿಸಿದ ಡಿವೈನ್​ ಸ್ಟಾರ್​

author-image
AS Harshith
Updated On
ಕೊರಗಜ್ಜನ ಸನ್ನಿಧಿಯಲ್ಲಿ ರಿಷಬ್​ ಶೆಟ್ಟಿ.. ಅಜ್ಜನಿಗೆ ಮದ್ಯ, ಚಕ್ಕುಲಿ, ಬೀಡವಿಟ್ಟು ಪ್ರಾರ್ಥಿಸಿದ ಡಿವೈನ್​ ಸ್ಟಾರ್​
Advertisment
  • ದೊಡ್ಡ ಮಟ್ಟದಲ್ಲಿ ಸಕ್ಸಸ್​ ಕಂಡ ಕನ್ನಡದ ಕಾಂತಾರ ಸಿನಿಮಾ
  • ಕೊರಗಜ್ಜ ದೈವಸ್ಥಾನಕ್ಕೆ ಭೆಟಿ ನೀಡಿದ ಡಿವೈನ್​ ಸ್ಟಾರ್​
  • ರಿಷಬ್​ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಹೋಗಲು ಕಾರಣವೇನು ಗೊತ್ತಾ?

ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ದೊಡ್ಡ ಮಟ್ಟದ ಯಶಸ್ಸಿನ ಹಿಂದೆ ಇರುವ ಉಡುಪಿಯ ಬೈಲೂರು ಭಾಗದ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಸನ್ನಿಧಾನದಲ್ಲಿರುವ ಕೊರಗಜ್ಜನಿಗೆ ಮದ್ಯ, ಚಕ್ಕುಲಿ, ಬೀಡ ಇಟ್ಟು ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Advertisment

publive-image

ಇದನ್ನೂ ಓದಿ: ಗುಟ್ಕಾ ತಂದುಕೊಟ್ಟಿಲ್ಲ ಎಂದು ಬಾಲಕಿಯ ಭೀಕರ ಹತ್ಯೆ.. ಗೋಣಿ ಚೀಲದಲ್ಲಿ ಸುತ್ತಿ ಪಾಳುಬಿದ್ದ ಮನೆಯಲ್ಲೆಸೆದ ಮೆಕ್ಯಾನಿಕ್

ಕೊರಗಜ್ಜನಿಗೆ ಪ್ರಾರ್ಥನೆ

ಸನ್ನಿಧಾನದಲ್ಲಿರುವ ಬಬ್ಬುಸ್ವಾಮಿ ಕೊರಗಜ್ಜ ಬಳಿ ಪ್ರಾರ್ಥನೆ ಮಾಡಿದ ವೇಳೆ ಪಂಜುರ್ಲಿ ದೈವದ ಮೇಲೆ ಕಥೆ ನಿರ್ಮಿಸಿ ಎನ್ನುವ ನುಡಿ ಕೇಳಿ ಬಂದಿತ್ತಂತೆ. ಕಾಂತಾರ ಯಶಸ್ಸಿನ ಬಳಿಕ ಮತ್ತೆ ರಿಶಬ್ ಶೆಟ್ಟಿ ಪತ್ನಿ ಹಾಗೂ ಮಕ್ಕಳ ಜೊತೆ ಆಗಮಿಸಿ ಕೊರಗಜ್ಜ, ಬಬ್ಬುಸ್ವಾಮಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿದ್ರು.

publive-image

ಇದನ್ನೂ ಓದಿ: ಭಾವಿ ಪತಿ ಜೊತೆ ಮಿರಮಿರ ಮಿಂಚಿದ ಬಿಗ್​ಬಾಸ್​ ಬೆಡಗಿ; ದಿವ್ಯಾ ಉರುಡುಗ ಫುಲ್​ ಖುಷ್​

Advertisment

ಸದ್ಯ ಕಾಂತಾರ-2 ಸಿನಿಮಾ ಬರಲು ಬಾಕಿ ಇದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. ಅಂದಹಾಗೆಯೇ ಕಾಂತಾರ-2 ಯಾವಾಗ ಬರುತ್ತೆ ಎಂಬುದನ್ನು ರಿಷಬ್​ ಶೆಟ್ಟಿಯವರೇ ಹೇಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment