ಗುರುದ್ವಾರದಲ್ಲಿ ಎಷ್ಟೋ ರಾತ್ರಿಗಳನ್ನ ಕಳೆದಿರುವ ರಿಷಬ್ ಪಂತ್!
ಇಂದು ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಯುವ ಪ್ಲೇಯರ್ಗೆ ಸ್ಥಾನ
ಯುವ ಪ್ಲೇಯರ್ ಪಂತ್ ಖಜಾನೆ ಸೇರಿದ ಕೋಟಿ ಕೋಟಿ ಹಣ
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ಇದೀಗ ಭಾರತೀಯ ಕ್ರಿಕೆಟ್ನ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿದ್ದಾರೆ. ಇಂದು ಕೋಟಿ, ಕೋಟಿಗೆ ಬೆಲೆಬಾಳುತ್ತಿರುವ ಪಂತ್, ಅಂದು ಒಂದು ಹೊತ್ತಿನ ಊಟ, ಉಳಿಯಲು ಜಾಗವಿಲ್ಲದೇ ಪರದಾಡಿದ್ದರು. ಏನೂ ಇಲ್ಲದ ಪಂತ್, ಕೋಟಿ ವೀರ ಆಗಿದ್ದು ಹೇಗೆ?.
ರಿಷಭ್ ಪಂತ್.. ಭಾರತೀಯ ಕ್ರಿಕೆಟ್ನ ಭವಿಷ್ಯ. ಈ ಪಂತ್ ಮೋಡಿಗೆ ಮರುಳಾಗದವರಿಲ್ಲ. ರಣಭಯಂಕರ ಬ್ಯಾಟಿಂಗ್, ಚಾಣಾಕ್ಷ ಕೀಪಿಂಗ್ಗೆ ಫಿದಾ ಆಗದ ಫ್ಯಾನ್ಸ್ ಇಲ್ಲ. ಆನ್ಫೀಲ್ಡ್ನಲ್ಲಿ ಎಲ್ರೂ ಸೀರಿಯಸ್ಸಾಗಿದ್ರೆ, ತರ್ಲೆ-ತಮಾಷೆ ಮನೋಭಾವದಿಂದ ಗಮನಸೆಳೆಯೋ ಕ್ರಿಕೆಟಿಗ. ಅಂಡರ್-19 ವಿಶ್ವಕಪ್ ಮುಗಿಸಿ, ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ ರಿಷಭ್ ಪಂತ್, ಈಗ 3 ಫಾರ್ಮೆಟ್ಗಳಲ್ಲಿ ತಂಡದ ಖಾಯಂ ಪ್ಲೇಯರ್. ಐಪಿಎಲ್ನಲ್ಲೂ ಸ್ಟಾರ್ ಆಟಗಾರರ ಸಾಲು ಸೇರಿದ್ದಾರೆ ವಿಶ್ವದ್ಯಾಂತ ಪಂತ್ಗೆ ಸಪರೇಟ್ ಫ್ಯಾನ್ ಬೇಸ್ ಕೂಡ ಸೃಷ್ಟಿಯಾಗಿದೆ. ಇದರ ಜೊತೆಗೆ ಕೋಟಿ ಕೋಟಿ ಹಣವೂ ಪಂತ್ ಖಜಾನೆ ಸೇರಿದೆ. ಸದ್ಯ ಕೋಟ್ಯಧಿಪತಿ ಕ್ರಿಕೆಟರ್ ಆಗಿರೋ ಪಂತ್, ಅಂದು ಒಂದು ತತ್ತು ಅನ್ನಕ್ಕಾಗಿ, ಉಳಿಯಲು ಚಿಕ್ಕ ಜಾಗಕ್ಕಾಗಿ ಪರದಾಡಿದ್ರು.
ಇದನ್ನೂ ಓದಿ: 2, 0, 0 ಇದು ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಗಳಿಸಿದ ಸ್ಕೋರ್; ಟೀಂ ಇಂಡಿಯಾಗೆ ದೊಡ್ಡ ಆಘಾತ..!
ಕ್ರಿಕೆಟರ್ ಆಗಬೇಕು ಅನ್ನೋ ದೊಡ್ಡ ಕನಸನ್ನ ಹೊತ್ತ ರಿಷಭ್ ಪಂತ್ ಚಿಕ್ಕ ವಯಸ್ಸಿನಲ್ಲೇ ಉತ್ತರಾಖಾಂಡ್ನಿಂದ ದೆಹಲಿಗೆ ವಲಸೆ ಬಂದಿದ್ರು. ದೆಹಲಿಗೆ ಬಂದು ಕ್ರಿಕೆಟ್ ಅಕಾಡೆಮಿಯೊಂದನ್ನ ಸೇರಿದ ಪಂತ್ ಬಳಿ ದೆಹಲಿಯಲ್ಲಿ ಜೀವನ ನಡೆಸಲು ಬೇಕಾದ ಹಣವಿರಲಿಲ್ಲ. ಪ್ರತಿದಿನ ಮನೆಯಿಂದ ಓಡಾಡೋದು ಅಸಾಧ್ಯದ ಮಾತಾಗಿತ್ತು. ಈ ವೇಳೆ ಹಣದ ಸಮಸ್ಯೆ ಎದುರಿಸಿದ್ದ ಪಂತ್, ಎಷ್ಟೋ ದಿನ ಮಲಗುತ್ತಿದ್ದದ್ದು ಗುರದ್ವಾರದಲ್ಲಿ. ಗುರುದ್ವಾರದಲ್ಲಿ ರಾತ್ರಿ ಕಳೆಯುತ್ತಿದ್ದ ಪಂತ್ಗೆ ಅಲ್ಲಿ ನೀಡುತ್ತಿದ್ದ ಪ್ರಸಾದವೇ ಊಟವಾಗಿತ್ತು. ಆ ಕಷ್ಟದ ನಡುವೆ ಕ್ರಿಕೆಟ್ ಮೇಲಿನ ಪ್ರೀತಿ ಬಿಡದೇ, ಕಠಿಣ ಪರಿಶ್ರಮ, ಛಲದಿಂದ ಹೋರಾಡಿದ ಪಂತ್, ಈಗೇನಾಗಿದ್ದಾರೆ ಅನ್ನೋದು ಇತಿಹಾಸ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಗುರುದ್ವಾರದಲ್ಲಿ ಎಷ್ಟೋ ರಾತ್ರಿಗಳನ್ನ ಕಳೆದಿರುವ ರಿಷಬ್ ಪಂತ್!
ಇಂದು ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿ ಯುವ ಪ್ಲೇಯರ್ಗೆ ಸ್ಥಾನ
ಯುವ ಪ್ಲೇಯರ್ ಪಂತ್ ಖಜಾನೆ ಸೇರಿದ ಕೋಟಿ ಕೋಟಿ ಹಣ
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್, ಇದೀಗ ಭಾರತೀಯ ಕ್ರಿಕೆಟ್ನ ಶ್ರೀಮಂತ ಕ್ರಿಕೆಟಿಗರ ಪಟ್ಟಿಯಲ್ಲಿದ್ದಾರೆ. ಇಂದು ಕೋಟಿ, ಕೋಟಿಗೆ ಬೆಲೆಬಾಳುತ್ತಿರುವ ಪಂತ್, ಅಂದು ಒಂದು ಹೊತ್ತಿನ ಊಟ, ಉಳಿಯಲು ಜಾಗವಿಲ್ಲದೇ ಪರದಾಡಿದ್ದರು. ಏನೂ ಇಲ್ಲದ ಪಂತ್, ಕೋಟಿ ವೀರ ಆಗಿದ್ದು ಹೇಗೆ?.
ರಿಷಭ್ ಪಂತ್.. ಭಾರತೀಯ ಕ್ರಿಕೆಟ್ನ ಭವಿಷ್ಯ. ಈ ಪಂತ್ ಮೋಡಿಗೆ ಮರುಳಾಗದವರಿಲ್ಲ. ರಣಭಯಂಕರ ಬ್ಯಾಟಿಂಗ್, ಚಾಣಾಕ್ಷ ಕೀಪಿಂಗ್ಗೆ ಫಿದಾ ಆಗದ ಫ್ಯಾನ್ಸ್ ಇಲ್ಲ. ಆನ್ಫೀಲ್ಡ್ನಲ್ಲಿ ಎಲ್ರೂ ಸೀರಿಯಸ್ಸಾಗಿದ್ರೆ, ತರ್ಲೆ-ತಮಾಷೆ ಮನೋಭಾವದಿಂದ ಗಮನಸೆಳೆಯೋ ಕ್ರಿಕೆಟಿಗ. ಅಂಡರ್-19 ವಿಶ್ವಕಪ್ ಮುಗಿಸಿ, ಟೀಮ್ ಇಂಡಿಯಾಗೆ ಡೆಬ್ಯೂ ಮಾಡಿದ ರಿಷಭ್ ಪಂತ್, ಈಗ 3 ಫಾರ್ಮೆಟ್ಗಳಲ್ಲಿ ತಂಡದ ಖಾಯಂ ಪ್ಲೇಯರ್. ಐಪಿಎಲ್ನಲ್ಲೂ ಸ್ಟಾರ್ ಆಟಗಾರರ ಸಾಲು ಸೇರಿದ್ದಾರೆ ವಿಶ್ವದ್ಯಾಂತ ಪಂತ್ಗೆ ಸಪರೇಟ್ ಫ್ಯಾನ್ ಬೇಸ್ ಕೂಡ ಸೃಷ್ಟಿಯಾಗಿದೆ. ಇದರ ಜೊತೆಗೆ ಕೋಟಿ ಕೋಟಿ ಹಣವೂ ಪಂತ್ ಖಜಾನೆ ಸೇರಿದೆ. ಸದ್ಯ ಕೋಟ್ಯಧಿಪತಿ ಕ್ರಿಕೆಟರ್ ಆಗಿರೋ ಪಂತ್, ಅಂದು ಒಂದು ತತ್ತು ಅನ್ನಕ್ಕಾಗಿ, ಉಳಿಯಲು ಚಿಕ್ಕ ಜಾಗಕ್ಕಾಗಿ ಪರದಾಡಿದ್ರು.
ಇದನ್ನೂ ಓದಿ: 2, 0, 0 ಇದು ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ಗಳಿಸಿದ ಸ್ಕೋರ್; ಟೀಂ ಇಂಡಿಯಾಗೆ ದೊಡ್ಡ ಆಘಾತ..!
ಕ್ರಿಕೆಟರ್ ಆಗಬೇಕು ಅನ್ನೋ ದೊಡ್ಡ ಕನಸನ್ನ ಹೊತ್ತ ರಿಷಭ್ ಪಂತ್ ಚಿಕ್ಕ ವಯಸ್ಸಿನಲ್ಲೇ ಉತ್ತರಾಖಾಂಡ್ನಿಂದ ದೆಹಲಿಗೆ ವಲಸೆ ಬಂದಿದ್ರು. ದೆಹಲಿಗೆ ಬಂದು ಕ್ರಿಕೆಟ್ ಅಕಾಡೆಮಿಯೊಂದನ್ನ ಸೇರಿದ ಪಂತ್ ಬಳಿ ದೆಹಲಿಯಲ್ಲಿ ಜೀವನ ನಡೆಸಲು ಬೇಕಾದ ಹಣವಿರಲಿಲ್ಲ. ಪ್ರತಿದಿನ ಮನೆಯಿಂದ ಓಡಾಡೋದು ಅಸಾಧ್ಯದ ಮಾತಾಗಿತ್ತು. ಈ ವೇಳೆ ಹಣದ ಸಮಸ್ಯೆ ಎದುರಿಸಿದ್ದ ಪಂತ್, ಎಷ್ಟೋ ದಿನ ಮಲಗುತ್ತಿದ್ದದ್ದು ಗುರದ್ವಾರದಲ್ಲಿ. ಗುರುದ್ವಾರದಲ್ಲಿ ರಾತ್ರಿ ಕಳೆಯುತ್ತಿದ್ದ ಪಂತ್ಗೆ ಅಲ್ಲಿ ನೀಡುತ್ತಿದ್ದ ಪ್ರಸಾದವೇ ಊಟವಾಗಿತ್ತು. ಆ ಕಷ್ಟದ ನಡುವೆ ಕ್ರಿಕೆಟ್ ಮೇಲಿನ ಪ್ರೀತಿ ಬಿಡದೇ, ಕಠಿಣ ಪರಿಶ್ರಮ, ಛಲದಿಂದ ಹೋರಾಡಿದ ಪಂತ್, ಈಗೇನಾಗಿದ್ದಾರೆ ಅನ್ನೋದು ಇತಿಹಾಸ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ