ಮ್ಯಾಂಚೆಸ್ಟರ್​ ಟೆಸ್ಟ್​ನ ಮೊದಲ ದಿನವೇ ಆಘಾತ.. ರಿಷಬ್ ಪಂತ್​​ಗೆ ಅಸಲಿಗೆ ಆಗಿದ್ದೇನು..?

author-image
Ganesh
Updated On
ಬೆರಳು ಮುರಿದಿದೆ, 6 ವಾರ ಆಡಂಗಿಲ್ಲ ಅಂದರೂ ಪಂತ್ ಸುಮ್ಮನಿರಲಿಲ್ಲ.. ಆ ಮೊದಲ ಎರಡು ದಿನ..!
Advertisment
  • 67.4ನೇ ಓವರ್​ನಲ್ಲಿ ಭಾರತಕ್ಕೆ ಕಾದಿತ್ತು ಆಘಾತ
  • ಬಾಲ್​ ಬಡಿದ ರಭಸಕ್ಕೆ ಪಾದದಿಂದ ಬಸಿದ ರಕ್ತ
  • ಕೆಲವೇ ನಿಮಿಷಗಳಲ್ಲೇ ಊದಿದ ಪಂತ್​​ ಕಾಲು

ಇಂಗ್ಲೆಂಡ್ ಎದುರಿನ​​ ಮ್ಯಾಂಚೆಸ್ಟರ್​​ ಟೆಸ್ಟ್​ನ ಮೊದಲ ದಿನವೇ ಟೀಮ್​ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಟೀಮ್​ ಇಂಡಿಯಾ ವಿಕೆಟ್​ ಕೀಪರ್​​ ರಿಷಭ್​ ಪಂತ್​ ದೊಡ್ಡ ಇಂಜುರಿಗೆ ತುತ್ತಾಗಿದ್ದಾರೆ. ಕಾಲಲ್ಲಿ ರಕ್ತ ಬಸಿದಿದೆ, ನಡೆಯಲಾರದೆ ಪಂತ್​ ನರಳಾಡಿದ್ದಾರೆ. ಅಷ್ಟಕ್ಕೂ ಮೈದಾನದಲ್ಲಿ ಆಗಿದ್ದೇನು ಅನ್ನೋ ವಿವರ ಇಲ್ಲಿದೆ.

ಮ್ಯಾಂಚೆಸ್ಟರ್​​ ಟೆಸ್ಟ್​ನ ಮೊದಲ ದಿನದಾಟದಲ್ಲೇ ಟೀಮ್​ ಇಂಡಿಯಾಗೆ ದೊಡ್ಡ ಆಘಾತ ಎದುರಾಯ್ತು. ಬೌಲಿಂಗ್​ ಫ್ರೆಂಡ್ಲಿ ಪಿಚ್​​ ಟೀಮ್​ ಇಂಡಿಯಾ ಮೊದಲ ದಿನದ ಅಂತ್ಯಕ್ಕೆ ಉತ್ತಮ ಸ್ಕೋರ್​​ಗಳಿಸಿದೆ ನಿಜ. ರಿಷಭ್​ ಪಂತ್​ಗಾದ ಇಂಜುರಿ ಇಡೀ ತಂಡದಲ್ಲಿ ಆತಂಕ ಸೃಷ್ಟಿಸಿದೆ.

ನಾಯಕ ಶುಭ್​​​​ಮನ್​ ಗಿಲ್​ ನಿರ್ಗಮನದ ಬಳಿಕ ಕ್ರಿಸ್​​ನಲ್ಲಿ ಜೊತೆಯಾದ ಸಾಯಿ ಸುದರ್ಶನ್​ - ರಿಷಭ್​ ಪಂತ್​ ಜೋಡಿ ಹೊಸ ಭರವಸೆ ಮೂಡಿಸಿದ್ರು. ಬೊಂಬಾಟ್​​ ಆಟದೊಂದಿಗೆ ಇಂಗ್ಲೆಂಡ್​​ ಬೌಲರ್​​ಗಳನ್ನ ಬೆಂಡೆತ್ತಿದ್ರು. ಸಾಯಿ ಸುದರ್ಶನ್​ ಕೂಲ್​ ಅಂಡ್ ಕಾಮ್​ ಆಟ, ರಿಷಭ್​ ಪಂತ್​ ಅಬ್ಬರಕ್ಕೆ ಆಂಗ್ಲರು ಕಂಗಾಲ್​ ಆದರು.

ಇದನ್ನೂ ಓದಿ: ಹಲಸಿನ‌ ಹಣ್ಣು ತಿಂದು ವಾಹನ ಚಾಲನೆ ಮಾಡಿದ್ರೆ ಹುಷಾರ್.. ಡ್ರೈವರ್​​ಗಳಿಗೆ ಶಾಕಿಂಗ್ ನ್ಯೂಸ್..!

publive-image

67.4ನೇ ಓವರ್​ನಲ್ಲಿ ಕಾದಿತ್ತು ಆಘಾತ

ಸುದರ್ಶನ್​​, ಪಂತ್​ ಜೋಡಿ ಫೆಂಟಾಸ್ಟಿಕ್​ ಆಟದೊಂದಿಗೆ ಭರವಸೆ ಮೂಡಿಸಿದ ಬೆನ್ನಲ್ಲೇ ಆಘಾತ ಎದುರಾಯ್ತು. 67.4ನೇ ಓವರ್​ನಲ್ಲಿ ಕ್ರಿಸ್ ವೋಕ್ಸ್​ ಎಸೆದ ಬಾಲು ಪಂತ್​ ಪಾದಕ್ಕೆ ಬಂದು ಬಡಿಯಿತು. ಇಂಗ್ಲೆಂಡ್​ ತಂಡ ಎಲ್​ಬಿಗೆ ಮನವಿ ಮಾಡಿ ಡಿಆರ್​​ಎಸ್​ ತೆಗೆದುಕೊಳ್ತು. ರಿವ್ಯೂನಲ್ಲಿ ಬಾಲ್​ ಬ್ಯಾಟ್​​ಗೆ ತಾಗಿದ್ದು ನೋಡಿ ಎಲ್ಲರೂ ನಿಟ್ಟುಸಿರು ಬಿಟ್ರು. ಥರ್ಡ್​​ ಅಂಪೈರ್​ ನಾಟ್​​​ಔಟ್​ ಅನ್ನೋದನ್ನ ಕನ್​​ಫರ್ಮ್​ ಮಾಡಿದ್ರೂ ಪಂತ್​ ಪೆವಿಲಿಯನ್​ಗೆ ವಾಪಾಸ್ಸಾಗುವಂತಾಯ್ತು.

ಬಾಲ್​ ಬಡಿದ ರಭಸಕ್ಕೆ ಬಸಿದ ರಕ್ತ

ಕ್ರಿಸ್​​ ವೋಕ್ಸ್​ ಎಸೆದ ಎಸೆತ ಬ್ಯಾಟ್​​ ತಾಗಿ ಪಂತ್​ ಕಾಲಿಗೆ ತಾಗಿತ್ತು. ಬಾಲ್​ ಬಡಿದ ರಭಸಕ್ಕೆ ಪಂತ್​ ಕಾಲಿನಿಂದ ರಕ್ತ ಬಸಿಯಿತು. ಕ್ಷಣ ಮಾತ್ರದಲ್ಲೇ ಕಾಲು ಉದಿ ಬಿಡ್ತು.

ನಡೆಯಲಾಗದೇ ಪರದಾಡಿದ ಪಂತ್!

ಕಾಲು ಊತ ಬಂದ ಕಾರಣ ಪಂತ್ ಪರಿಣಾಮ ಪಂತ್​ಗೆ ನಿಲ್ಲಲೂ ಆಗದೇ ಪರದಾಡಿದ್ರು. ಕಾಲು ಉರಲಾಗದೇ ನರಳಾಡಿದ ಪಂತ್​, ಅಂತಿಮವಾಗಿ ಮೈದಾನದ ಆ್ಯಂಬುಲೆನ್ಸ್ ಅಂದ್ರೆ, ಗಾಲ್ಫ್​ ಕಾರ್ಟ್​​ನಲ್ಲಿ ಪೆವಿಲಿಯನ್​ಗೆ ವಾಪಾಸ್ಸಾದ್ರು.

ಮೈದಾನದಿಂದ ನೇರವಾಗಿ ಸ್ಕ್ಯಾನಿಂಗ್​ಗೆ ಪಂತ್​

ಮೈದಾನದಿಂದ ಪೆವಿಲಿಯನ್​ಗೆ ವಾಪಾಸ್ಸಾದ ಪಂತ್​ ನೇರವಾಗಿ ಸ್ಕ್ಯಾನಿಂಗ್​ಗೆ ತೆರಳಿದ್ದಾರೆ. ಕ್ಯಾಪ್ಟನ್​ ಶುಭ್​ಮನ್​ ಗಿಲ್​, ಪಂತ್​ ಬೆನ್ನಲ್ಲೇ ಆಸ್ಪತ್ರೆಗೆ ಧೌಡಾಯಿಸಿದ್ದಾರೆ.

ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದ ಪೋಸ್ಟರ್ ವಿರುದ್ಧ ಕೆರಳಿದ ಕನ್ನಡಿಗರು.. ಬೆಂಗಳೂರಿನ ಥಿಯೇಟರ್​​ನಲ್ಲಿ ಫ್ಯಾನ್ಸ್ ಹುಚ್ಚಾಟ..!

ಇಂದಿನ ದಿನದಾಟದಲ್ಲಿ ಆಡ್ತಾರಾ? ಇಲ್ವಾ?

ಸ್ಕ್ಯಾನ್​ ರಿಪೋರ್ಟ್​​ಗಾಗಿ ಇಂಡಿಯನ್​ ಟೀಮ್​ ಮ್ಯಾನೇಜ್​ಮೆಂಟ್​ ಕಾಯ್ತಿದೆ. ರಿಪೋರ್ಟ್​ನಲ್ಲಿ ಬರೋ ಇಂಜುರಿ ಪ್ರಮಾಣದ ಆಧಾರದಲ್ಲಿ ಪಂತ್​ ಮೈದಾನಕ್ಕೆ ವಾಪಾಸ್ಸಾಗ್ತಾರಾ.? ಇಲ್ವಾ.? ಅನ್ನೋದು ನಿರ್ಧಾರವಾಗಲಿದೆ. ತಂಡದ ಮೂಲಗಳ ಪ್ರಕಾರ ಪಂತ್​ ಇಂಜುರಿ ಮೇಜರ್​ ಎನ್ನಲಾಗ್ತಿದೆ. 4ನೇ ಟೆಸ್ಟ್​ನಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳೋದು ಅನುಮಾನವೇ. ಪಂತ್​ ಬೇಕೆ ಬೇಕು ಎಂಬ ಅನಿವಾರ್ಯತೆ ಸೃಷ್ಟಿಯಾದ್ರೆ, ಇಂಜೆಕ್ಷನ್​ ತೆಗೆದುಕೊಂಡು 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ಗೆ ಮಾತ್ರ ಬರೋ ಸಾಧ್ಯತೆಯಿದೆ.

ಇದನ್ನೂ ಓದಿ: ರಾಧಾ, ಕೃಷ್ಣನ ಗೆಟಪ್​ನಲ್ಲಿ ಭವ್ಯಾ ಗೌಡ, ಕಿರಣ್​ ರಾಜ್​… ಕರ್ಣನ ಒಂದೊಂದು ಸೀನ್​ಗೂ ವೀಕ್ಷಕರು ಫಿದಾ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment