ಅನುಭವಿಸಿದ ನರಕ ಯಾತನೆ ಬಿಚ್ಚಿಟ್ಟ ರಿಷಬ್ ಪಂತ್..!
ಕ್ರಿಕೆಟ್ ಫೀಲ್ಡ್ಗೆ ಮತ್ತೆ ಎಂಟ್ರಿಯಾಗಿದ್ದೇ ರೋಚಕ
ಟಿ20 ವಿಶ್ವಕಪ್ ತಂಡಕ್ಕೆ ರಾಯಲ್ ಎಂಟ್ರಿ ಕೊಟ್ಟಿರುವ ಪಂತ್
ಭೀಕರ ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಂತ್ ಬದುಕಿದ ಕಥೆ ನಿಮಗೆ ಗೊತ್ತು. ಸದ್ಯ ಕ್ರಿಕೆಟ್ ಫೀಲ್ಡ್ಗೆ ಮರಳಿ ಅಬ್ಬರಿಸ್ತಿರೋದನ್ನೂ ನೋಡಿದ್ದೀರಿ. ಕಮ್ಬ್ಯಾಕ್ ಮಾಡಿ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡ್ತಿರೋ ಪಂತ್, ಅನುಭವಿಸಿದ
ನರಕಯಾತನೆ ನಿಮಗೆ ಗೊತ್ತಾ?
ಅಂದು ಭೀಕರ ಅಪಘಾತದಲ್ಲಿ ಅದೃಷ್ಟದ ರೀತಿಯಲ್ಲಿ ಬಚಾವ್ ಆದ ಪಂತ್, ಎಲ್ಲರೂ ಹುಬ್ಬೇರಿಸುವಂತೆ ಕ್ರಿಕೆಟ್ ಫೀಲ್ಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಬರೋಬ್ಬರಿ 453 ದಿನಗಳ ಬಳಿಕ ಕ್ರಿಕೆಟ್ ಅಖಾಡಕ್ಕೆ ಮರಳಿದ ಪಂತ್, ಐಪಿಎಲ್ನಲ್ಲಿ ಬ್ಯಾಟ್ ಹಿಡಿದು ಘರ್ಜಿಸಿದ್ರು. ವಿಕೆಟ್ ಹಿಂದೆಯೂ ಕೂಡ ಮ್ಯಾಜಿಕ್ ಮಾಡಿದ್ರು. ತಮ್ಮ ಸಾಲಿಡ್ ಪರ್ಫಾಮೆನ್ಸ್ನಿಂದ ಗಮನ ಸೆಳೆದಿರೋ ಪಂತ್, ಮುಂಬರೋ ಟಿ20 ವಿಶ್ವಕಪ್ ತಂಡಕ್ಕೂ ರಾಯಲ್ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. ಫೋಟೋ ಹಂಚಿಕೊಂಡು ಬೇಸರ ಹೊರ ಹಾಕಿದ್ರಾ KL ರಾಹುಲ್..?
ವಿಶ್ವಕಪ್ ಆಡಲು ನ್ಯೂಯಾರ್ಕ್ ತಲುಪಿರೋ ಪಂತ್ ತಮ್ಮ ಬದುಕಿನ ಕರಾಳ ದಿನಗಳನ್ನು ನೆನೆದಿದ್ದಾರೆ. ಆಕ್ಸಿಡೆಂಟ್ ಆದ ನಂತರದ ದಿನಗಳ ಬಗ್ಗೆ ಮಾತನಾಡಿರುವ ಪಂತ್, ಆ ದೇವರೇ ನನ್ನ ಕಾಪಾಡಿದ್ದು ಹೇಳಿಕೊಂಡಿದ್ದಾರೆ. ಚೇತರಿಕೆ ಸಮಯದಲ್ಲಿ ನಾನು ಪಡಬಾರದ ಕಷ್ಟ ಪಟ್ಟೇ. ನಿಜ ಹೇಳಬೇಂಕದ್ರೆ 2 ತಿಂಗಳವರೆಗೆ ನಾನು ಹಲ್ಲನ್ನ ಉಜ್ಜಲೇ ಇಲ್ಲ. ಅಷ್ಟು ನೋವಿತ್ತು. 6-7 ತಿಂಗಳ ಕಾಲ ನರಕಯಾತನೆ ಅನುಭವಿಸಿದೆ ಅಂತಾ ಪಂತ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
Ready. Able. Determined! 💪🏻
From adversity to triumph, #RishabhPant's journey to the ICC Men's T20 World Cup is a testament of resilience and determination. Join him as he ignites the spirit of a nation at 7.52 PM during Matchdays! 🇮🇳
Stand Up for #TeamIndia with the… pic.twitter.com/ZnBTnLRju2
— BCCI (@BCCI) May 28, 2024
ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಅನುಭವಿಸಿದ ನರಕ ಯಾತನೆ ಬಿಚ್ಚಿಟ್ಟ ರಿಷಬ್ ಪಂತ್..!
ಕ್ರಿಕೆಟ್ ಫೀಲ್ಡ್ಗೆ ಮತ್ತೆ ಎಂಟ್ರಿಯಾಗಿದ್ದೇ ರೋಚಕ
ಟಿ20 ವಿಶ್ವಕಪ್ ತಂಡಕ್ಕೆ ರಾಯಲ್ ಎಂಟ್ರಿ ಕೊಟ್ಟಿರುವ ಪಂತ್
ಭೀಕರ ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಂತ್ ಬದುಕಿದ ಕಥೆ ನಿಮಗೆ ಗೊತ್ತು. ಸದ್ಯ ಕ್ರಿಕೆಟ್ ಫೀಲ್ಡ್ಗೆ ಮರಳಿ ಅಬ್ಬರಿಸ್ತಿರೋದನ್ನೂ ನೋಡಿದ್ದೀರಿ. ಕಮ್ಬ್ಯಾಕ್ ಮಾಡಿ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡ್ತಿರೋ ಪಂತ್, ಅನುಭವಿಸಿದ
ನರಕಯಾತನೆ ನಿಮಗೆ ಗೊತ್ತಾ?
ಅಂದು ಭೀಕರ ಅಪಘಾತದಲ್ಲಿ ಅದೃಷ್ಟದ ರೀತಿಯಲ್ಲಿ ಬಚಾವ್ ಆದ ಪಂತ್, ಎಲ್ಲರೂ ಹುಬ್ಬೇರಿಸುವಂತೆ ಕ್ರಿಕೆಟ್ ಫೀಲ್ಡ್ಗೆ ಕಮ್ಬ್ಯಾಕ್ ಮಾಡಿದ್ದಾರೆ. ಬರೋಬ್ಬರಿ 453 ದಿನಗಳ ಬಳಿಕ ಕ್ರಿಕೆಟ್ ಅಖಾಡಕ್ಕೆ ಮರಳಿದ ಪಂತ್, ಐಪಿಎಲ್ನಲ್ಲಿ ಬ್ಯಾಟ್ ಹಿಡಿದು ಘರ್ಜಿಸಿದ್ರು. ವಿಕೆಟ್ ಹಿಂದೆಯೂ ಕೂಡ ಮ್ಯಾಜಿಕ್ ಮಾಡಿದ್ರು. ತಮ್ಮ ಸಾಲಿಡ್ ಪರ್ಫಾಮೆನ್ಸ್ನಿಂದ ಗಮನ ಸೆಳೆದಿರೋ ಪಂತ್, ಮುಂಬರೋ ಟಿ20 ವಿಶ್ವಕಪ್ ತಂಡಕ್ಕೂ ರಾಯಲ್ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. ಫೋಟೋ ಹಂಚಿಕೊಂಡು ಬೇಸರ ಹೊರ ಹಾಕಿದ್ರಾ KL ರಾಹುಲ್..?
ವಿಶ್ವಕಪ್ ಆಡಲು ನ್ಯೂಯಾರ್ಕ್ ತಲುಪಿರೋ ಪಂತ್ ತಮ್ಮ ಬದುಕಿನ ಕರಾಳ ದಿನಗಳನ್ನು ನೆನೆದಿದ್ದಾರೆ. ಆಕ್ಸಿಡೆಂಟ್ ಆದ ನಂತರದ ದಿನಗಳ ಬಗ್ಗೆ ಮಾತನಾಡಿರುವ ಪಂತ್, ಆ ದೇವರೇ ನನ್ನ ಕಾಪಾಡಿದ್ದು ಹೇಳಿಕೊಂಡಿದ್ದಾರೆ. ಚೇತರಿಕೆ ಸಮಯದಲ್ಲಿ ನಾನು ಪಡಬಾರದ ಕಷ್ಟ ಪಟ್ಟೇ. ನಿಜ ಹೇಳಬೇಂಕದ್ರೆ 2 ತಿಂಗಳವರೆಗೆ ನಾನು ಹಲ್ಲನ್ನ ಉಜ್ಜಲೇ ಇಲ್ಲ. ಅಷ್ಟು ನೋವಿತ್ತು. 6-7 ತಿಂಗಳ ಕಾಲ ನರಕಯಾತನೆ ಅನುಭವಿಸಿದೆ ಅಂತಾ ಪಂತ್ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
Ready. Able. Determined! 💪🏻
From adversity to triumph, #RishabhPant's journey to the ICC Men's T20 World Cup is a testament of resilience and determination. Join him as he ignites the spirit of a nation at 7.52 PM during Matchdays! 🇮🇳
Stand Up for #TeamIndia with the… pic.twitter.com/ZnBTnLRju2
— BCCI (@BCCI) May 28, 2024
ಇದನ್ನೂ ಓದಿ:ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್