ಶ್ರೇಯಸ್ ಅಯ್ಯರ್ ಹೊರಗಿಟ್ಟರೇ ಇಬ್ಬರಿಗೂ ಅವಕಾಶ ಸಿಗುತ್ತಾ?
ಶ್ರೀಲಂಕಾ-ಭಾರತದ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ
ರಾಹುಲ್- ಪಂತ್ ತಂಡದಲ್ಲಿ ಆಡಿಸಿದ್ರೆ ಕೀಪರ್ ಯಾರು ಮಾಡ್ತಾರೆ?
ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನು ಆಗಸ್ಟ್ 2 ಅಂದರೆ ನಾಳೆಯಿಂದ ಆಡಲಿದೆ. ಈಗಾಗಲೇ ಶ್ರೀಲಂಕಾದಲ್ಲಿ ಬೀಡು ಬಿಟ್ಟಿರುವ ಭಾರತದ ಆಟಗಾರರು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪರ್ ಆಗಿ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ರಿಷಬ್ ಪಂತ್ ಈ ಇಬ್ಬರಲ್ಲಿ ಯಾರನ್ನು ತಂಡದಲ್ಲಿ ಆಡಿಸಬೇಕು ಎಂಬುದು ಕೋಚ್ ಗೌತಮ್ ಗಂಭೀರ್ಗೆ ಬಿಗ್ ಚಾಲೆಂಜ್ ಆಗಿದೆ.
ಇದನ್ನೂ ಓದಿ: IPL 2025; ಶಾರುಕ್ ಖಾನ್- ಪಂಜಾಬ್ ತಂಡದ ಓನರ್ ಮಧ್ಯೆ ಭಾರೀ ಗಲಾಟೆ.. ಯಾಕೆ ಗೊತ್ತಾ?
ಭಾರತ ತಂಡದ ವಿಕೆಟ್ ಕೀಪರ್ ಆಗಿ ಸದ್ಯ ಕೆ.ಎಲ್ ರಾಹುಲ್ ಹಾಗೂ ರಿಷಬ್ ಪಂತ್ ಇಬ್ಬರ ಮಧ್ಯೆಯು ಬಿಗ್ ಫೈಟ್ ಇದೆ. ಕಾರು ಆಕ್ಸಿಡೆಂಟ್ ಬಳಿಕ ವಾಪಸ್ ಆಗಿದ್ದ ರಿಷಬ್ ಪಂತ್ ಐಪಿಎಲ್ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದರು. ಅಲ್ಲದೇ ರಾಹುಲ್ ಕೂಡ ಕ್ಯಾಪ್ಟನ್ ಹುದ್ದೆ ಜೊತೆ ಜೊತೆಗೆ ವಿಕೆಟ್ ಕೀಪರ್, ಬ್ಯಾಟಿಂಗ್ ಎರಡರಲ್ಲೂ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಇಬ್ಬರನ್ನೂ ತಂಡದಲ್ಲಿ ಆಡಿಸಿದರೆ ಶ್ರೇಯಸ್ ಅಯ್ಯರ್ ಬೆಂಚ್ ಕಾಯಿಸಬೇಕಾಗುತ್ತದೆ. ಆದರೆ ಶ್ರೀಲಂಕಾದ ಜೊತೆ ನಡೆಯುವ ಏಕದಿನ ಪಂದ್ಯಕ್ಕೆ ಯಾರಿಗೆ ಅದೃಷ್ಟ ಕುಲಾಯಿಸಿತ್ತೆ ಎಂಬುದು ಕುತೂಹಲವಾಗಿದೆ.
ಇದನ್ನೂ ಓದಿ: ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ
ಕನ್ನಡಿಗ ರಾಹುಲ್ ಅವರು ಕಳೆದ ವರ್ಷ ನಡೆದ 21 ಏಕದಿನ ಪಂದ್ಯಗಳಲ್ಲಿ 834 ರನ್ಗಳನ್ನು ಗಳಿಸಿ 69.50 ಸರಾಸರಿ ಹೊಂದಿದ್ದಾರೆ. ಇದರಲ್ಲಿ 2 ಭರ್ಜರಿ ಶತಕಗಳನ್ನು ರಾಹುಲ್ ಸಿಡಿಸಿದ್ದರು ಎನ್ನುವುದು ವಿಶೇಷ. ಇದೇ ವರ್ಷದ ಆರಂಭದಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಒನ್ಡೇ ಪಂದ್ಯದ ವೇಳೆ ರಾಹುಲ್ ನಾಯಕನಾಗಿಯು ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ ಇಬ್ಬರು ಚರ್ಚೆ ಮಾಡಿ ಯಾವ ನಿರ್ಧಾರ ತೆಗೆದುಕೊಳ್ತಾರೆ ಎಂಬುದು ಪಂದ್ಯದ ವೇಳೆ ಗೊತ್ತಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಶ್ರೇಯಸ್ ಅಯ್ಯರ್ ಹೊರಗಿಟ್ಟರೇ ಇಬ್ಬರಿಗೂ ಅವಕಾಶ ಸಿಗುತ್ತಾ?
ಶ್ರೀಲಂಕಾ-ಭಾರತದ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ
ರಾಹುಲ್- ಪಂತ್ ತಂಡದಲ್ಲಿ ಆಡಿಸಿದ್ರೆ ಕೀಪರ್ ಯಾರು ಮಾಡ್ತಾರೆ?
ಶ್ರೀಲಂಕಾ ವಿರುದ್ಧದ ಟಿ20 ಸರಣಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನು ಆಗಸ್ಟ್ 2 ಅಂದರೆ ನಾಳೆಯಿಂದ ಆಡಲಿದೆ. ಈಗಾಗಲೇ ಶ್ರೀಲಂಕಾದಲ್ಲಿ ಬೀಡು ಬಿಟ್ಟಿರುವ ಭಾರತದ ಆಟಗಾರರು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಇದರ ಜೊತೆಗೆ ವಿಕೆಟ್ ಕೀಪರ್ ಆಗಿ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ರಿಷಬ್ ಪಂತ್ ಈ ಇಬ್ಬರಲ್ಲಿ ಯಾರನ್ನು ತಂಡದಲ್ಲಿ ಆಡಿಸಬೇಕು ಎಂಬುದು ಕೋಚ್ ಗೌತಮ್ ಗಂಭೀರ್ಗೆ ಬಿಗ್ ಚಾಲೆಂಜ್ ಆಗಿದೆ.
ಇದನ್ನೂ ಓದಿ: IPL 2025; ಶಾರುಕ್ ಖಾನ್- ಪಂಜಾಬ್ ತಂಡದ ಓನರ್ ಮಧ್ಯೆ ಭಾರೀ ಗಲಾಟೆ.. ಯಾಕೆ ಗೊತ್ತಾ?
ಭಾರತ ತಂಡದ ವಿಕೆಟ್ ಕೀಪರ್ ಆಗಿ ಸದ್ಯ ಕೆ.ಎಲ್ ರಾಹುಲ್ ಹಾಗೂ ರಿಷಬ್ ಪಂತ್ ಇಬ್ಬರ ಮಧ್ಯೆಯು ಬಿಗ್ ಫೈಟ್ ಇದೆ. ಕಾರು ಆಕ್ಸಿಡೆಂಟ್ ಬಳಿಕ ವಾಪಸ್ ಆಗಿದ್ದ ರಿಷಬ್ ಪಂತ್ ಐಪಿಎಲ್ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದರು. ಅಲ್ಲದೇ ರಾಹುಲ್ ಕೂಡ ಕ್ಯಾಪ್ಟನ್ ಹುದ್ದೆ ಜೊತೆ ಜೊತೆಗೆ ವಿಕೆಟ್ ಕೀಪರ್, ಬ್ಯಾಟಿಂಗ್ ಎರಡರಲ್ಲೂ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಇಬ್ಬರನ್ನೂ ತಂಡದಲ್ಲಿ ಆಡಿಸಿದರೆ ಶ್ರೇಯಸ್ ಅಯ್ಯರ್ ಬೆಂಚ್ ಕಾಯಿಸಬೇಕಾಗುತ್ತದೆ. ಆದರೆ ಶ್ರೀಲಂಕಾದ ಜೊತೆ ನಡೆಯುವ ಏಕದಿನ ಪಂದ್ಯಕ್ಕೆ ಯಾರಿಗೆ ಅದೃಷ್ಟ ಕುಲಾಯಿಸಿತ್ತೆ ಎಂಬುದು ಕುತೂಹಲವಾಗಿದೆ.
ಇದನ್ನೂ ಓದಿ: ಕೇರಳ ಭೂಕುಸಿತ, 300 ಜನ ಸಾವನ್ನಪ್ಪಿದ್ದಾರಾ..? ಬೆಚ್ಚಿ ಬೀಳಿಸೋ ಸತ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ
ಕನ್ನಡಿಗ ರಾಹುಲ್ ಅವರು ಕಳೆದ ವರ್ಷ ನಡೆದ 21 ಏಕದಿನ ಪಂದ್ಯಗಳಲ್ಲಿ 834 ರನ್ಗಳನ್ನು ಗಳಿಸಿ 69.50 ಸರಾಸರಿ ಹೊಂದಿದ್ದಾರೆ. ಇದರಲ್ಲಿ 2 ಭರ್ಜರಿ ಶತಕಗಳನ್ನು ರಾಹುಲ್ ಸಿಡಿಸಿದ್ದರು ಎನ್ನುವುದು ವಿಶೇಷ. ಇದೇ ವರ್ಷದ ಆರಂಭದಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಒನ್ಡೇ ಪಂದ್ಯದ ವೇಳೆ ರಾಹುಲ್ ನಾಯಕನಾಗಿಯು ಭಾರತ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ ಇಬ್ಬರು ಚರ್ಚೆ ಮಾಡಿ ಯಾವ ನಿರ್ಧಾರ ತೆಗೆದುಕೊಳ್ತಾರೆ ಎಂಬುದು ಪಂದ್ಯದ ವೇಳೆ ಗೊತ್ತಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ