/newsfirstlive-kannada/media/post_attachments/wp-content/uploads/2025/07/Pant-6.jpg)
ಇಂಡೋ-ಇಂಗ್ಲೆಂಡ್ ನಡುವಿನ ಮ್ಯಾಂಚೆಸ್ಟರ್ ಟೆಸ್ಟ್ ಮ್ಯಾಚ್ ಭರದಿಂದ ಸಾಗ್ತಿದೆ. ಪಂದ್ಯದ ನಡುವೆ ರಿಷಭ್ ಪಂತ್ ಇಂಜುರಿ ಟೀಮ್ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗಾಯದ ನೋವಿನ ನಡುವೆಯೂ ಪಂತ್ ಬ್ಯಾಟಿಂಗ್ ನಡೆಸಿ ಎಲ್ಲರ ಮನ ಗೆದ್ದಿದ್ದಾರೆ. ತಂಡಕ್ಕಾಗಿ ಬ್ಯಾಟ್ ಹಿಡಿದು ಹೋರಾಡಿದ ಪಂತ್, ಗ್ಲೌಸ್ ತೊಟ್ಟು ಕೀಪಿಂಗ್ ಮಾಡಲಾರರು. ಮುಂದಿನ ಟೆಸ್ಟ್ನಲ್ಲೂ ಆಡಲ್ಲ.
ಮ್ಯಾಂಚೆಸ್ಟರ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನ 67ನೇ ಓವರ್ನ 4ನೇ ಎಸೆತ. ಇದು ಒಂದು ಕೇವಲ ಎಸೆತವಲ್ಲ. ಇಡೀ ಟೀಮ್ ಇಂಡಿಯಾ ಪಾಲಿನ ವಿಲನ್. ರಿಷಭ್ ಪಂತ್ ಎಂಬ ಗೇಮ್ ಚೇಂಜರ್ನ ಗೇಮ್ನಿಂದಲೇ ಹೊರ ಕಳಿಸಿದ ಡೆಡ್ಲಿ ಎಸೆತ. ಈ ಒಂದು ಎಸೆತದಿಂದ ಇಡೀ ಟೀಮ್ ಇಂಡಿಯಾ ಇದೀಗ ಆತಂಕದಲ್ಲಿದೆ.
ಇದನ್ನೂ ಓದಿ: WWE ದಿಗ್ಗಜ ಹಲ್ಕ್ ಹೋಗಾನ್ ಇನ್ನಿಲ್ಲ.. ಹಠಾತ್ ನಿಧನಕ್ಕೆ ಆಗಿದ್ದೇನು..?
ಕ್ರಿಸ್ ವೋಕ್ಸ್ ಎಸೆದ ಚೆಂಡು ಪಂತ್ ಬ್ಯಾಟ್ಗೆ ಸವರಿ ಪಾದಕ್ಕೆ ಬಡಿದಿತ್ತು. ಬ್ಯಾಟ್ಗೆ ತಾಗಿದ್ರಿಂದ ನಾಟ್ ಔಟ್ ಅನ್ನೋ ಖುಷಿ ಗ್ಯಾಲರಿಯಿಂದ ನೋಡ್ತಿದ್ದ ಟೀಮ್ ಇಂಡಿಯಾ ಕ್ಯಾಂಪ್ನಲ್ಲಿತ್ತು. ಅಭಿಮಾನಿಗಳಲ್ಲೂ ಇದೇ ಸಂಭ್ರಮವಿತ್ತು. ಮೈದಾನದಲ್ಲಿದ್ದ ಪಂತ್ ಸಹಿಸಲಸಾಧ್ಯವಾದ ನೋವಿನಲ್ಲಿ ನರಳಾಡುತ್ತಿದ್ದರು. ಕಾಲಲ್ಲಿ ರಕ್ತ ಬಂತು. ಕ್ಷಣಾರ್ದದಲ್ಲಿ ಪಾದ ಉದಿಕೊಳ್ತು. ಗಂಭೀರ ಇಂಜುರಿಯ ಹೊರತಾಗಿಯೂ 2ನೇ ದಿನದಾಟದಲ್ಲಿ ನೋವಿನ ನಡುವೆ ಪಂತ್ ಬ್ಯಾಟಿಂಗ್ ನಡೆಸಿದ್ರು. ಅಷ್ಟಕ್ಕೆ ಸಮಾಧಾನ ಪಟ್ಟುಕೊಳ್ಳುವಂತಿಲ್ಲ. ಯಾಕಂದ್ರೆ ಎಲ್ಲವೂ ಸರಿಯಿಲ್ಲ.
ಟೆಸ್ಟ್ ಸರಣಿಯಿಂದ ರಿಷಭ್ ಪಂತ್ ಔಟ್.!
ಮೊದಲ ದಿನ ಇಂಜುರಿಯಾಗಿದ್ದ ರಿಷಭ್ ಪಂತ್ರನ್ನ ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಸ್ಕ್ಯಾನಿಂಗ್ನಲ್ಲಿ ಇಂಜುರಿ ಪ್ರಮಾಣ ಗಂಭೀರವಾಗಿರೋದು ತಿಳಿದು ಬಂದಿದೆ. ಈ ಕಾರಣಕ್ಕೆ ವೈದ್ಯರ ತಂಡ 6 ವಾರಗಳ ವಿಶ್ರಾಂತಿಗೆ ಸೂಚಿಸಿದೆ. ಇದ್ರ ಹೊರತಾಗಿ ಇಂಜೆಕ್ಷೆನ್ ತೆಗೆದುಕೊಂಡು ಪಂತ್, ಫಸ್ಟ್ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಕೀಪಿಂಗ್ ಮಾಡಲ್ಲ.. ಇನ್ನು ಮುಖ್ಯವಾದ ವಿಚಾರ ಏನಂದ್ರೆ ಈ ಸರಣಿಯಿಂದ ಪಂತ್ ರೋಲ್ಡ್ ಔಟ್ ಆಗಿದ್ದಾರೆ.
ಆಪದ್ಬಾಂಧವ ಇಲ್ದೇ ಟೀಮ್ ಇಂಡಿಯಾಗೆ ಸಂಕಷ್ಟ
ಈ ಪ್ರವಾಸದಲ್ಲಿ ಇಂಗ್ಲೆಂಡ್ ಅಟ್ಯಾಕ್ಗೆ ಕೌಂಟರ್ ಅಟ್ಯಾಕ್ ಮಾಡ್ತಿದ್ದ ಪಂತ್, ಎದುರಾಳಿಯ ಪ್ಲಾನ್ಸ್ಗಳನ್ನು ಉಲ್ಟಾ ಮಾಡ್ತಿದ್ದರು. ಆದ್ರೀಗ ರಿಷಭ್ ಪಂತ್ ಸರಣಿಯಿಂದ ಹೊರಬಿದ್ದಿದ್ದಾರೆ. ಅಗತ್ಯ ಬಿದ್ರೆ ಸೆಕೆಂಡ್ ಇನ್ನಿಂಗ್ಸ್ನಲ್ಲೂ ಪಂತ್, ಬ್ಯಾಟಿಂಗ್ ನಡೆಸಲಿದ್ದಾರೆ. ಮುಂದಿನ ಪಂದ್ಯದಲ್ಲಿ ಆಡಲ್ಲ. ಫೈಟರ್ ಪಂತ್ ಅಲಭ್ಯತೆ ಟೀಮ್ ಇಂಡಿಯಾಗೆ ಸಂಕಷ್ಟ ತಂದಿಟ್ಟಿದೆ.
ಇದನ್ನೂ ಓದಿ: ಪ್ರೇಮಿಗಳಿಗೆ ಶುಭದಿನ, ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ ಎದುರಾಗುತ್ತೆ.. ಇಲ್ಲಿದೆ ಇಂದಿನ ಭವಿಷ್ಯ
ಬ್ಯಾಟಿಂಗ್ಗೆ ಪಂತ್ ಸೀಮಿತ, ಜುರೇಲ್ ಕೀಪಿಂಗ್.!
ಗಂಭೀರ ಇಂಜುರಿಗೆ ತುತ್ತಾಗಿರುವ ರಿಷಭ್ ಪಂತ್ಗೆ ವಿಶ್ರಾಂತಿಗೆ ಸೂಚಿಸಲಾಗಿದೆ. ಬ್ಯಾಟಿಂಗ್ ನಡೆಸಿರೋ ಪಂತ್, ಕೀಪಿಂಗ್ ಮಾಡಲ್ಲ. ಈ ಪಂದ್ಯದಲ್ಲಿ ದೃವ್ ಜುರೇಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸ್ತಾರೆ ಅನ್ನೋದನ್ನ ಬಿಸಿಸಿಐ ಈಗಾಗಲೇ ಕನ್ಫರ್ಮ್ ಮಾಡಿದೆ. ಇದೀಗ ಪಂತ್ ಹೊರ ಬಿದ್ದಿರೋದ್ರಿಂದ ಬದಲಿ ಆಟಗಾರರ ಆಯ್ಕೆಯ ಸರ್ಕಸ್ ಈಗ ಶುರುವಾಗಿದೆ.
ಅಂತಿಮ ಟೆಸ್ಟ್ಗೆ ಪಂತ್ ಅಲಭ್ಯ.. ಯಾರಿಗೆ ಬುಲಾವ್..?
ರಿಷಭ್ ಪಂತ್ ಅಲಭ್ಯತೆಯಲ್ಲಿ ಯಾರಿಗೆ ಮಣೆಹಾಕಬೇಕು ಅನ್ನೋ ಟೆನ್ಶನ್ ಮ್ಯಾನೇಜ್ಮೆಂಟ್ ಹಾಗೂ ಸೆಲೆಕ್ಷನ್ ಕಮಿಟಿಯದ್ದಾಗಿದೆ. ದೃವ್ ಜುರೇಲ್ ಬ್ಯಾಕ್ಅಪ್ ವಿಕೆಟ್ ಕೀಪರ್ ಆಯ್ಕೆಗೆ ಹುಡುಕಾಟ ಸದ್ಯ ನಡೀತಾ ಇದೆ. ತಂಡದಲ್ಲಿರೋ ಕೆ.ಎಲ್ ರಾಹುಲ್ಗೆ ಕೀಪಿಂಗ್ ಮಾಡೋ ಸಾಮರ್ಥ್ಯವಿದೆ. ರಾಹುಲ್ ಹೊರತಾಗಿ ಬೇರೆ ಆಟಗಾರರ ಆಯ್ಕೆಯತ್ತಲೂ ಮ್ಯಾನೇಜ್ಮೆಂಟ್ ಚಿಂತಿಸಿದೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸದ್ಯ ಇಂಗ್ಲೆಂಡ್ನಲ್ಲೇ ಇದ್ದಾರೆ. ಬ್ಯಾಕ್ ಅಪ್ ಕೀಪರ್ ಆಗಿ ಕಿಶನ್ ಕರೆಸುವ ಬಗ್ಗೆ ಮ್ಯಾನೇಜ್ಮೆಂಟ್ ವಲಯದಲ್ಲಿ ಚಿಂತನೆ ನಡೆದಿದೆ. ಮೂಲಗಳ ಪ್ರಕಾರ ಕಿಶನ್ ಕೂಡ ಇಂಜುರಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ಆ್ಯಂಕಲ್ ಇಂಜುರಿಯಿಂದ ಕಿಶನ್ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂಬ ಮಾಹಿತಿಯಿದೆ. ಹೀಗಾಗಿ ಬ್ಯಾಕ್ ಅಪ್ ಆಯ್ಕೆಗೆ ಇನ್ನೆರಡು ಆಟಗಾರರ ಬಗ್ಗೆಯೂ ಚರ್ಚೆ ನಡೆದಿದೆ.
ಇದನ್ನೂ ಓದಿ: ಕೊಹ್ಲಿಯಂತೆ ಕಠಿಣ ಡಯಟ್.. ಕೇವಲ 2 ತಿಂಗಳು, 17 Kg ತೂಕ ಇಳಿಸಿದ ಸರ್ಫರಾಜ್ ಖಾನ್!
ತಮಿಳು ನಾಡಿನ ವಿಕೆಟ್ ಕೀಪರ್ ಎನ್,ಜಗದೀಶನ್, ಬೆಂಗಾಲ್ ತಂಡದ ಅಭಿಷೇಕ್ ಪೊರೆಲ್ಗೆ ಬುಲಾವ್ ನೀಡೋ ಬಗ್ಗೆ ಚರ್ಚೆ ನಡೆದಿದೆ. ಇಶಾನ್ ಕಿಶನ್ ಇಂಜುರಿಯಾಗಿರೋದ್ರಿಂದ ಈ ಇಬ್ಬರಲ್ಲಿ ಒಬ್ಬರಿಗೆ ಇಂಗ್ಲೆಂಡ್ ಫ್ಲೈಟ್ ಟಿಕೆಟ್ ಸಿಗೋ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ರಿಷಭ್ ಪಂತ್ ಇಂಜುರಿ ಯಾವ ಆಟಗಾರನ ಪಾಲಿಗೆ ಅದೃಷ್ಟ ಬಾಗಿಲನ್ನ ತೆರೆಯಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ