ಪಂತ್ಗೆ ವೈದ್ಯರು ದೇವರಾದ್ರೆ, ಪುನರ್ಜನ್ಮ ನೀಡಿದ್ದು ಬಿಸಿಸಿಐ
IPLನಲ್ಲಿ ಪಂತ್ ಬ್ಯಾಟಿಂಗ್ ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್
NCAನಲ್ಲಿ ಪ್ರತಿಯೊಬ್ಬರು ಸ್ವಾಗತ ಮಾಡಿದ್ದಕ್ಕೆ ಧನ್ಯವಾದಗಳು
ಟೀಮ್ ಇಂಡಿಯಾದ ಪ್ಲೇಯರ್ ರಿಷಬ್ ಪಂತ್ ಪಾಲಿಗೆ ವೈದ್ಯರು ದೇವರಾದ್ರೆ, ಬಿಸಿಸಿಐ ಅತೀವ ಕಾಳಜಿ ವಹಿಸಿ ಪುನರ್ಜನ್ಮ ನೀಡಿದೆ. ಎಂಟರ್ಟೈನ್ಮೆಂಟ್ ಅಂದರೆ ಈ ಡೇರಿಂಗ್ ಬ್ಯಾಟರ್ ಮೊದಲ ಸಾಲಿನಲ್ಲಿ ನಿಲ್ತಾರೆ. ಪವರ್ ಹಿಟ್ಟಿಂಗ್ ಶಾಟ್ಸ್, ಬೌಲರ್ಗಳ ಭಯ ಬೀಳಿಸೋ ರೀತಿ, ಎನಿಟೈಮ್ ಗೇಮ್ ಮೂಮೆಂಟ್ ಬದಲಿಸುವ ಡಿಸ್ಟ್ರಾಕ್ಟಿಬ್ ಬ್ಯಾಟಿಂಗ್, ನಿಜಕ್ಕೂ ಎಲ್ಲವೂ ಕಣ್ಣಿಗೆ ಹಬ್ಬ. ಇಂತಹ ಪಂತ್ ರಣಾರ್ಭಟವನ್ನ ಫ್ಯಾನ್ಸ್ ಕಳೆದ ಐಪಿಎಲ್ನಲ್ಲಿ ತುಂಬಾನೇ ಮಿಸ್ ಮಾಡಿಕೊಂಡಿದ್ರು.
ಆದ್ರೆ ಈ ಬಾರಿ ಪಂತ್ ಐಪಿಎಲ್ ವೈಭವ ಮತ್ತೆ ಮರುಕಳಿಸಲಿದೆ. ಡೆಡ್ಲಿ ಕಾರ್ ಆ್ಯಕ್ಸಿಡೆಂಟ್ ಬಳಿಕ ರಿಷಬ್ ಕಂಪ್ಲೀಟ್ ರಿಕವರಿ ಆಗಿದ್ದಾರೆ. ಫುಲ್ ಫಿಟ್ ಆ್ಯಂಡ್ ಫೈನ್ ಆಗಿದ್ದು ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸ್ತಿದ್ದಾರೆ. ಪಂತ್, ಮುಂಬರೋ ಐಪಿಎಲ್ನಲ್ಲಿ ಅಬ್ಬರಿಸುವುದು ನಿಜ. ಆದರೆ ಅವರು ರಿಕವರಿ ಸಮಯದಲ್ಲಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅದೊಂದು ದೊಡ್ಡ ಯಾತನೆಯ ಪ್ರಯಾಣ.
ಪುನಶ್ಚೇತನ ಶಿಬಿರ ನನಗೆ ತುಂಬಾ ಕಿರಿಕಿರಿ ಅನ್ನಿಸಿತ್ತು. ಯಾಕಂದ್ರೆ ಮಾಡುವುದನ್ನೆ ಮತ್ತೆ ಮತ್ತೆ ಮಾಡಬೇಕು. ಬೇರೆ ಆಯ್ಕೇನೆ ಇರ್ಲಿಲ್ಲ. ಅದೇ ಸ್ಟಾಫ್, ಅದೇ ಜನರನ್ನ ನೋಡಿ ಬೋರಿಂಗ್ ಆಗ್ತಿತ್ತು. ಆದರೆ ಬೋರಿಂಗ್ ಅನ್ನಿಸಿದ್ರೂ ಚೇತರಿಕೆ ಕಾಣಲು ಸಹಾಯವಾಯ್ತು.
ರಿಷಬ್ ಪಂತ್, ಭಾರತದ ಕ್ರಿಕೆಟಿಗ
ಪಂತ್ ಕ್ಷಿಪ್ರ ಸ್ಪಂದನೆ ಕಂಡು ಡಾಕ್ಟರ್ಸ್ ಶಾಕ್..!
ಪಂತ್ ಪುನಶ್ಚೇತನ ಶಿಬಿರದಲ್ಲಿ ಏಕಕಾಲಕ್ಕೆ ಅನೇಕ ಕೆಲಸಗಳನ್ನ ಮಾಡಬೇಕಿತ್ತು. ಇದ್ಯಾವುದಕ್ಕೂ ಪಂತ್ ಬೇಸರಗೊಳ್ಳಲಿಲ್ಲ. ವೈದ್ಯರು ಹೇಳಿದ್ದನ್ನ ಚಾಚು ತಪ್ಪದೇ ಪಾಲಿಸಿ ಬೇಗನೆ ಗುಣಮುಖರಾದ್ರು.
ಬೆಳಗ್ಗೆ ಪುನಶ್ಚೇತನ. ಅದನ್ನ ಯಾವುದೇ ಕಾರಣಕ್ಕೂ ತಪ್ಪಿಸುವಂತಿರಲಿಲ್ಲ. ಬಳಿಕ ಮಸಾಜ್, ಜಿಮ್ ಸೆಷನ್ ಎಲ್ಲವೂ ಇತ್ತು. ಜೊತೆಗೆ ನ್ಯೂಟ್ರಿಷಿಯನ್ ಕೂಡ ಸೇವನೆ ಮಾಡಬೇಕಿತ್ತು. ಅದನ್ನ ಪಾಲನೆ ಮಾಡೋದನ್ನ ಪಂತ್ ನೋಡಿ ಕಲಿಬೇಕು. ಅವರ ಸತತ ಪರಿಶ್ರಮದಿಂದ ಅವರಿಂದ ಇಲ್ಲಿದ್ದಾರೆ.
ಧನಂಜಯ್ ಕೌಶಿಕ್, ಎನ್ಸಿಎ ವೈದ್ಯ
ಎನ್ಸಿಎ ವೈದ್ಯರ ಆರೈಕೆ, ಬೆಂಬಲಕ್ಕೆ ಪಂತ್ ಬಿಗ್ ಸಲಾಂ
ಪಂತ್ ಚೇತರಿಕೆಯಲ್ಲಿ ಡಾಕ್ಟರ್ಸ್ ಪಾತ್ರ ದೊಡ್ಡದಿದೆ. ಅದ್ರಲ್ಲೂ ವಿಶೇಷವಾಗಿ ಬೆಂಗಳೂರಿನ ಎನ್ಸಿಎ ವೈದ್ಯರ ಪಾತ್ರವನ್ನ ಮರೆಯಲು ಸಾಧ್ಯವೇ ಇಲ್ಲ.
ಎನ್ಸಿಎಯಲ್ಲಿ ಪ್ರತಿಯೊಬ್ಬರು ನನ್ನ ಸ್ವಾಗತಿಸುತ್ತಿದ್ದರು. ನಿತೀನ್, ಜೊತೆಗೆ ತುಳಸಿ ಭಾಯ್, ರಚ್ಚು ಹಾಗೂ ಧನಂಜಯ್ ಭಾಯ್ ಚೆನ್ನಾಗಿ ನೋಡಿಕೊಂಡ್ರು. ಅಲ್ಲಿದ್ದರು. ಪ್ರತಿಯೊಬ್ಬರು ನಾನು ಬೇಗನೆ ಗುಣಮುರಾಲೆಂದು ಪ್ರಯತ್ನಿಸಿದ್ರು. ದೊಡ್ಡ ಗಾಯದ ವೇಳೆ ಬಹಳಷ್ಟು ಹತಾಶೆ ಆಗುತ್ತೆ. ಆದ್ರೆ ಆ ವೇಳೆ ವೈದ್ಯರು ನನ್ನ ಜತೆಗಿದ್ರು. ತುಂಬಾ ಸಪೊರ್ಟ್ ಮಾಡಿದ್ರು. ನಾನು ಹೋಟೆಲ್ ಹಾಗೂ ಮನೆಯಲ್ಲಿ ಇರ್ತಿದ್ದೆ. ತಡವಾಗಿ ಏಳುತ್ತಿದ್ದೆ. ಸರಿಯಾದ ಸಮಯಕ್ಕೆ ಬರಲು ಆಗ್ತಿರ್ಲಿಲ್ಲ. ಆಗ ಅವರು ಸ್ವಲ್ಪವೂ ಕೋಪಿಸಿಕೊಳ್ಳದೇ ನನಗೆ ಸಹಕರಿಸಿದ್ರು.
ರಿಷಬ್ ಪಂತ್, ಕ್ರಿಕೆಟಿಗ
ಇನ್ನು ಬರೀ ಡಾಕ್ಟರ್ಸ್ ಅಷ್ಟೆ ಅಲ್ಲ, ಬಿಸಿಸಿಐನ ಸಹಾಯವನ್ನ ರಿಷಬ್ ಪಂತ್ ನೆನೆದಿದ್ದಾರೆ. ಇಂದು ಪಂತ್ ಭೀಕರ ಅಪಘಾತದಿಂದ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ ಅಂದ್ರೆ ಅದಕ್ಕೆ ಬಿಸಿಸಿಐನ ವಿಶೇಷ ಕಾಳಜಿನೇ ಕಾರಣ. ಮತ್ತೆ ಮೊದಲಿನಂತೆ ಫುಲ್ ಫಿಟ್ & ಫೈನ್ ಆಗಿರೋ ಪಂತ್ ಐಪಿಎಲ್ ರಣರಂಗದಲ್ಲಿ ರಣಧೀರನಾಗಿ ಮೆರೆದು, ಫ್ಯಾನ್ಸ್ಗೆ ಫುಲ್ ಎಂಟರ್ಟೈನ್ಮೆಂಟ್ ಟ್ರೀಟ್ ಕೊಡುವಂತಾಗಲಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಪಂತ್ಗೆ ವೈದ್ಯರು ದೇವರಾದ್ರೆ, ಪುನರ್ಜನ್ಮ ನೀಡಿದ್ದು ಬಿಸಿಸಿಐ
IPLನಲ್ಲಿ ಪಂತ್ ಬ್ಯಾಟಿಂಗ್ ಮಿಸ್ ಮಾಡಿಕೊಂಡಿದ್ದ ಫ್ಯಾನ್ಸ್
NCAನಲ್ಲಿ ಪ್ರತಿಯೊಬ್ಬರು ಸ್ವಾಗತ ಮಾಡಿದ್ದಕ್ಕೆ ಧನ್ಯವಾದಗಳು
ಟೀಮ್ ಇಂಡಿಯಾದ ಪ್ಲೇಯರ್ ರಿಷಬ್ ಪಂತ್ ಪಾಲಿಗೆ ವೈದ್ಯರು ದೇವರಾದ್ರೆ, ಬಿಸಿಸಿಐ ಅತೀವ ಕಾಳಜಿ ವಹಿಸಿ ಪುನರ್ಜನ್ಮ ನೀಡಿದೆ. ಎಂಟರ್ಟೈನ್ಮೆಂಟ್ ಅಂದರೆ ಈ ಡೇರಿಂಗ್ ಬ್ಯಾಟರ್ ಮೊದಲ ಸಾಲಿನಲ್ಲಿ ನಿಲ್ತಾರೆ. ಪವರ್ ಹಿಟ್ಟಿಂಗ್ ಶಾಟ್ಸ್, ಬೌಲರ್ಗಳ ಭಯ ಬೀಳಿಸೋ ರೀತಿ, ಎನಿಟೈಮ್ ಗೇಮ್ ಮೂಮೆಂಟ್ ಬದಲಿಸುವ ಡಿಸ್ಟ್ರಾಕ್ಟಿಬ್ ಬ್ಯಾಟಿಂಗ್, ನಿಜಕ್ಕೂ ಎಲ್ಲವೂ ಕಣ್ಣಿಗೆ ಹಬ್ಬ. ಇಂತಹ ಪಂತ್ ರಣಾರ್ಭಟವನ್ನ ಫ್ಯಾನ್ಸ್ ಕಳೆದ ಐಪಿಎಲ್ನಲ್ಲಿ ತುಂಬಾನೇ ಮಿಸ್ ಮಾಡಿಕೊಂಡಿದ್ರು.
ಆದ್ರೆ ಈ ಬಾರಿ ಪಂತ್ ಐಪಿಎಲ್ ವೈಭವ ಮತ್ತೆ ಮರುಕಳಿಸಲಿದೆ. ಡೆಡ್ಲಿ ಕಾರ್ ಆ್ಯಕ್ಸಿಡೆಂಟ್ ಬಳಿಕ ರಿಷಬ್ ಕಂಪ್ಲೀಟ್ ರಿಕವರಿ ಆಗಿದ್ದಾರೆ. ಫುಲ್ ಫಿಟ್ ಆ್ಯಂಡ್ ಫೈನ್ ಆಗಿದ್ದು ನೆಟ್ಸ್ನಲ್ಲಿ ಸಾಕಷ್ಟು ಬೆವರು ಹರಿಸ್ತಿದ್ದಾರೆ. ಪಂತ್, ಮುಂಬರೋ ಐಪಿಎಲ್ನಲ್ಲಿ ಅಬ್ಬರಿಸುವುದು ನಿಜ. ಆದರೆ ಅವರು ರಿಕವರಿ ಸಮಯದಲ್ಲಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅದೊಂದು ದೊಡ್ಡ ಯಾತನೆಯ ಪ್ರಯಾಣ.
ಪುನಶ್ಚೇತನ ಶಿಬಿರ ನನಗೆ ತುಂಬಾ ಕಿರಿಕಿರಿ ಅನ್ನಿಸಿತ್ತು. ಯಾಕಂದ್ರೆ ಮಾಡುವುದನ್ನೆ ಮತ್ತೆ ಮತ್ತೆ ಮಾಡಬೇಕು. ಬೇರೆ ಆಯ್ಕೇನೆ ಇರ್ಲಿಲ್ಲ. ಅದೇ ಸ್ಟಾಫ್, ಅದೇ ಜನರನ್ನ ನೋಡಿ ಬೋರಿಂಗ್ ಆಗ್ತಿತ್ತು. ಆದರೆ ಬೋರಿಂಗ್ ಅನ್ನಿಸಿದ್ರೂ ಚೇತರಿಕೆ ಕಾಣಲು ಸಹಾಯವಾಯ್ತು.
ರಿಷಬ್ ಪಂತ್, ಭಾರತದ ಕ್ರಿಕೆಟಿಗ
ಪಂತ್ ಕ್ಷಿಪ್ರ ಸ್ಪಂದನೆ ಕಂಡು ಡಾಕ್ಟರ್ಸ್ ಶಾಕ್..!
ಪಂತ್ ಪುನಶ್ಚೇತನ ಶಿಬಿರದಲ್ಲಿ ಏಕಕಾಲಕ್ಕೆ ಅನೇಕ ಕೆಲಸಗಳನ್ನ ಮಾಡಬೇಕಿತ್ತು. ಇದ್ಯಾವುದಕ್ಕೂ ಪಂತ್ ಬೇಸರಗೊಳ್ಳಲಿಲ್ಲ. ವೈದ್ಯರು ಹೇಳಿದ್ದನ್ನ ಚಾಚು ತಪ್ಪದೇ ಪಾಲಿಸಿ ಬೇಗನೆ ಗುಣಮುಖರಾದ್ರು.
ಬೆಳಗ್ಗೆ ಪುನಶ್ಚೇತನ. ಅದನ್ನ ಯಾವುದೇ ಕಾರಣಕ್ಕೂ ತಪ್ಪಿಸುವಂತಿರಲಿಲ್ಲ. ಬಳಿಕ ಮಸಾಜ್, ಜಿಮ್ ಸೆಷನ್ ಎಲ್ಲವೂ ಇತ್ತು. ಜೊತೆಗೆ ನ್ಯೂಟ್ರಿಷಿಯನ್ ಕೂಡ ಸೇವನೆ ಮಾಡಬೇಕಿತ್ತು. ಅದನ್ನ ಪಾಲನೆ ಮಾಡೋದನ್ನ ಪಂತ್ ನೋಡಿ ಕಲಿಬೇಕು. ಅವರ ಸತತ ಪರಿಶ್ರಮದಿಂದ ಅವರಿಂದ ಇಲ್ಲಿದ್ದಾರೆ.
ಧನಂಜಯ್ ಕೌಶಿಕ್, ಎನ್ಸಿಎ ವೈದ್ಯ
ಎನ್ಸಿಎ ವೈದ್ಯರ ಆರೈಕೆ, ಬೆಂಬಲಕ್ಕೆ ಪಂತ್ ಬಿಗ್ ಸಲಾಂ
ಪಂತ್ ಚೇತರಿಕೆಯಲ್ಲಿ ಡಾಕ್ಟರ್ಸ್ ಪಾತ್ರ ದೊಡ್ಡದಿದೆ. ಅದ್ರಲ್ಲೂ ವಿಶೇಷವಾಗಿ ಬೆಂಗಳೂರಿನ ಎನ್ಸಿಎ ವೈದ್ಯರ ಪಾತ್ರವನ್ನ ಮರೆಯಲು ಸಾಧ್ಯವೇ ಇಲ್ಲ.
ಎನ್ಸಿಎಯಲ್ಲಿ ಪ್ರತಿಯೊಬ್ಬರು ನನ್ನ ಸ್ವಾಗತಿಸುತ್ತಿದ್ದರು. ನಿತೀನ್, ಜೊತೆಗೆ ತುಳಸಿ ಭಾಯ್, ರಚ್ಚು ಹಾಗೂ ಧನಂಜಯ್ ಭಾಯ್ ಚೆನ್ನಾಗಿ ನೋಡಿಕೊಂಡ್ರು. ಅಲ್ಲಿದ್ದರು. ಪ್ರತಿಯೊಬ್ಬರು ನಾನು ಬೇಗನೆ ಗುಣಮುರಾಲೆಂದು ಪ್ರಯತ್ನಿಸಿದ್ರು. ದೊಡ್ಡ ಗಾಯದ ವೇಳೆ ಬಹಳಷ್ಟು ಹತಾಶೆ ಆಗುತ್ತೆ. ಆದ್ರೆ ಆ ವೇಳೆ ವೈದ್ಯರು ನನ್ನ ಜತೆಗಿದ್ರು. ತುಂಬಾ ಸಪೊರ್ಟ್ ಮಾಡಿದ್ರು. ನಾನು ಹೋಟೆಲ್ ಹಾಗೂ ಮನೆಯಲ್ಲಿ ಇರ್ತಿದ್ದೆ. ತಡವಾಗಿ ಏಳುತ್ತಿದ್ದೆ. ಸರಿಯಾದ ಸಮಯಕ್ಕೆ ಬರಲು ಆಗ್ತಿರ್ಲಿಲ್ಲ. ಆಗ ಅವರು ಸ್ವಲ್ಪವೂ ಕೋಪಿಸಿಕೊಳ್ಳದೇ ನನಗೆ ಸಹಕರಿಸಿದ್ರು.
ರಿಷಬ್ ಪಂತ್, ಕ್ರಿಕೆಟಿಗ
ಇನ್ನು ಬರೀ ಡಾಕ್ಟರ್ಸ್ ಅಷ್ಟೆ ಅಲ್ಲ, ಬಿಸಿಸಿಐನ ಸಹಾಯವನ್ನ ರಿಷಬ್ ಪಂತ್ ನೆನೆದಿದ್ದಾರೆ. ಇಂದು ಪಂತ್ ಭೀಕರ ಅಪಘಾತದಿಂದ ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ ಅಂದ್ರೆ ಅದಕ್ಕೆ ಬಿಸಿಸಿಐನ ವಿಶೇಷ ಕಾಳಜಿನೇ ಕಾರಣ. ಮತ್ತೆ ಮೊದಲಿನಂತೆ ಫುಲ್ ಫಿಟ್ & ಫೈನ್ ಆಗಿರೋ ಪಂತ್ ಐಪಿಎಲ್ ರಣರಂಗದಲ್ಲಿ ರಣಧೀರನಾಗಿ ಮೆರೆದು, ಫ್ಯಾನ್ಸ್ಗೆ ಫುಲ್ ಎಂಟರ್ಟೈನ್ಮೆಂಟ್ ಟ್ರೀಟ್ ಕೊಡುವಂತಾಗಲಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ