ಯಂಗ್ ಪ್ಲೇಯರ್ ಡ್ರಾಮಾ, ಭಾರತ T20 ವಿಶ್ವಕಪ್ ಕಪ್ ಗೆದ್ದಿದ್ದು ಹೇಗೆ.. ರಿಷಭ್‌ ಪಂತ್​ ಹೇಳಿದ ಸತ್ಯವೇನು?

author-image
Bheemappa
Updated On
ಯಂಗ್ ಪ್ಲೇಯರ್ ಡ್ರಾಮಾ, ಭಾರತ T20 ವಿಶ್ವಕಪ್ ಕಪ್ ಗೆದ್ದಿದ್ದು ಹೇಗೆ.. ರಿಷಭ್‌ ಪಂತ್​ ಹೇಳಿದ ಸತ್ಯವೇನು?
Advertisment
  • ಒಂದು ಹಂತದಲ್ಲಿ ಸೋಲೇ ಬಿಡುವ ಹಂತದಲ್ಲಿದ್ದ ಭಾರತ ತಂಡ
  • ಟಿ20 ವಿಶ್ವಕಪ್​ ಟ್ರೋಫಿ ಗೆಲ್ಲಲು ಕಾರಣವಾಗಿದ್ದು ಒಂದು ಡ್ರಾಮಾ!
  • ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ಅಸಲಿಗೆ ಆಗಿದ್ದೇನು?

17 ವರ್ಷಗಳ ಬಳಿಕ ಭಾರತ ತಂಡ ಟಿ20 ವಿಶ್ವಕಪ್​ ಗೆದ್ದಿದ್ರ ಹಿಂದೆ​ ಹಲವರ ಶ್ರಮವಿದೆ. ಆದ್ರೆ, ಮುಖ್ಯವಾಗಿ ಈ ಗೆಲುವಿಗೆ ಕಾರಣವಾಗಿದ್ದು. ಒಂದು ನಾಟಕ. ರಿಷಭ್‌ ಪಂತ್​ ಆಡಿದ ಒಂದು ಡ್ರಾಮಾ ಭಾರತಕ್ಕೆ ಕಪ್​ ಗೆಲ್ಲಿಸಿದ ಇಂಟರೆಸ್ಟಿಂಗ್​ ಕಥೆ ರೋಚಕವಾಗಿದೆ.

ಜೂನ್​ 29, 2024.. ಇಂಡಿಯನ್ಸ್​ ಫ್ಯಾನ್ಸ್​ ಎಂದೆಂದೂ ಮರೆಯಲಾಗದ ದಿನ. ವೆಸ್ಟ್​ ಇಂಡೀಸ್​ನ ಬಾರ್ಬಡೋಸ್​ನಲ್ಲಿ ಟೀಮ್​ ಇಂಡಿಯಾ ಆಟಗಾರರು ಸೌತ್​ ಆಫ್ರಿಕಾವನ್ನ ಮಣಿಸಿ ಟಿ20 ವಿಶ್ವಕಪ್​ ಟ್ರೋಫಿ ಜಯಿಸಿತ್ತು.

ಇದನ್ನೂ ಓದಿ: ‘ಡ್ರೆಸ್ಸಿಂಗ್ ರೂಮ್​ನಿಂದ ಕ್ರೀಸ್​ವರೆಗೆ ಎಮೋಷನ್ಸ್ ಇವೆ’.. ಚಿನ್ನಸ್ವಾಮಿ ಸ್ಟೇಡಿಯಂ ಬಗ್ಗೆ KL ರಾಹುಲ್ ಭಾವುಕ ಆದ್ರಾ? 

ಒಂದು ಹಂತದಲ್ಲಿ ಸೋಲೇ ಬಿಡುವ ಹಂತದಲ್ಲಿದ್ದ ಭಾರತ ಬಳಿಕ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಗೆದ್ದು ಸಂಭ್ರಮಿಸಿತ್ತು. ಈ ಗೆಲುವಿನ ಹಿಂದೆ ಇಡೀ ತಂಡದ ಶ್ರಮ, ಬೆವರಿನ ಫಲವಿದೆ. ಆಟಗಾರರು, ಸಪೋರ್ಟ್​​ ಸ್ಟಾಫ್​ ಎಲ್ಲರೋ ಒಂದಲ್ಲ ಒಂದು ರೀತಿಯಲ್ಲಿ ಕಪ್​ ಗೆಲುವಿಗೆ ಕಾರಣರಾದವರೇ. ಆದ್ರೆ, ಮೈಂಡ್​ಗೇಮ್​ನಿಂದಲೇ ವಿಶ್ವಕಪ್​ ಗೆಲ್ಲಿಸಿದ್ದು ರಿಷಭ್‌ ಪಂತ್​.

ಫೈನಲ್​ ಪಂದ್ಯ ರಣರೋಚಕ ಘಟ್ಟ ತಲುಪಿದ್ದ ಸಂದರ್ಭ ಅದು. ಸೌತ್​ ಆಫ್ರಿಕಾದ ಗೆಲುವಿಗೆ 30 ಎಸೆತಗಳಲ್ಲಿ 30 ರನ್​ ಬೇಕಿತ್ತಷ್ಟೇ. ಆಗ ವಿಕೆಟ್ ಕೀಪರ್ ರಿಷಬ್ ಪಂತ್ ಇಂಜುರಿಗೆ ತುತ್ತಾದ್ರು. ಪರಿಣಾಮ ಕೆಲ ಸಮಯ ಪಂದ್ಯ ನಿಲ್ತು. ಸೌತ್​ ಆಫ್ರಿಕಾ ಬ್ಯಾಟ್ಸ್​ಮನ್​ಗಳ ಮೊಮೆಂಟಮ್​ ಕೂಡ ಕಟ್ಟಾಯ್ತು. ಬಳಿಕ ಭಾರತ ಗೆದ್ದಿದ್ದು ಇತಿಹಾಸ. ಅಸಲಿಗೆ ಪಂತ್ ಇಂಜುರಿಗೆ ತುತ್ತಾಗಿರಲಿಲ್ಲ. ಗೆಲುವಿನತ್ತ ಮುನ್ನುಗ್ಗುತ್ತಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳ ಲಯವನ್ನು ಹಾಳು ಮಾಡಲು ಮಾಡಿದ ನಾಟಕ ಅದು ಎಂದು ಸ್ವತಃ ಪಂತ್​ ಇದೀಗ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment