/newsfirstlive-kannada/media/post_attachments/wp-content/uploads/2025/04/PANT-4.jpg)
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರಲ್ಲಿ ರನ್ ಹೊಳೆ ಜೋರಾಗಿ ಹರೀತಾ ಇದೆ. ಬ್ಯಾಟ್ಸ್ಮನ್ಗಳ ಆರ್ಭಟದ ಮುಂದೆ ಬೌಲರ್ಗಳು ಕಕ್ಕಾಬಿಕ್ಕಿಯಾಗಿ ಹೋಗಿದ್ದಾರೆ. ಬೌಂಡರಿ-ಸಿಕ್ಸರ್ಗಳ ಮೇಳ ಫ್ಯಾನ್ಸ್ಗೆ ಸಖತ್ ಎಂಟರ್ಟೈನ್ಮೆಂಟ್ ನೀಡ್ತಿದೆ. ಒಂದೆಡೆ ಅಬ್ಬರದ ಆಟ ನಡೀತಿದ್ರೆ, ಇನ್ನೊಂದೆಡೆ ಡೇರ್ಡೆವಿಲ್ ರಿಷಭ್ ಪಂತ್ ಸೈಲೆಂಟ್ ಆಗಿದ್ದಾರೆ. ತನ್ನ ಅಸಲಿ ಆಟವನ್ನೇ ಮರೆತು ಬಿಟ್ಟಿದ್ದಾರೆ.
ಎಲ್ಲಾ ಒಕೆ.. ಐಪಿಎಲ್ ಆರಂಭಕ್ಕೂ ಮುನ್ನ ಕ್ರಿಕೆಟ್ ವಲಯ ಏನೆಲ್ಲಾ ನಿರೀಕ್ಷೆ ಮಾಡಿತ್ತೋ ಅದೆಲ್ಲವೂ ಬಹುತೇಕ ಅಂದುಕೊಂಡಂತೆ ಆಗ್ತಿದೆ. ಆದ್ರೆ, ಒಂದನ್ನ ಬಿಟ್ಟು, ಈ ಸೀಸನ್ ಐಪಿಎಲ್ ಆರಂಭಕ್ಕೂ ಲಕ್ನೋ ಸೂಪರ್ ಜೈಂಟ್ಸ್ ಕ್ಯಾಪ್ಟನ್ ರಿಷಭ್ ಪಂತ್ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಪಂತ್ ಫೆಂಟಾಸ್ಟಿಕ್ ಬ್ಯಾಟಿಂಗ್ ಕಣ್ತುಂಬಿಕೊಳ್ಳೋ ಕಾತುರತೆ ಅಭಿಮಾನಿಗಳಲ್ಲಿತ್ತು. ಆದ್ರೆ, ಆಗಿರೋದು ನಿರಾಸೆ..
ಡೆಲ್ಲಿ ಬ್ಯಾಟಲ್ ವಿರುದ್ಧ ಪಂತ್ ಡಕೌಟ್
ಲಕ್ನೋ ತಂಡ ಸೀಸನ್ನ ಮೊದಲ ಪಂದ್ಯದಲ್ಲೇ ಡೆಲ್ಲಿ ಸವಾಲು ಎದುರಿಸಿತು. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಅಕೌಂಟ್ ಓಪನ್ ಮಾಡದೇ ನಿರಾಸೆ ಮೂಡಿಸಿದ್ರು. ಇನ್ನು, ಹೈದ್ರಾಬಾದ್ ಎದುರಿನ 2ನೇ ಪಂದ್ಯದಲ್ಲೂ ಪಂತ್ ಫ್ಲಾಪ್ ಆದ್ರು. ಜಸ್ಟ್ 15 ರನ್ಗೆ ಆಟ ಮುಗಿಸಿದರು.
ಫಸ್ಟ್ ಮ್ಯಾಚ್ನಲ್ಲಿ 6 ಎಸೆತ ಎದುರಿಸಿ ಡಕೌಟ್ ಆದ ಪಂತ್ಗೆ ಹೈದ್ರಾಬಾದ್ ಎದುರು ಉತ್ತಮ ಅಟವಾಡೋ ಅವಕಾಶ ಇತ್ತು. ಮಿಚೆಲ್ ಮಾರ್ಷ್-ನಿಕೋಲಸ್ ಪೂರನ್ ತಂಡವನ್ನ ಅದಾಗಲೇ ಅರ್ಧ ಗೆಲ್ಲಿಸಿದ್ದರು. ಆಗ ಕಣಕ್ಕಿಳಿದ ಪಂತ್ ಆರಾಮವಾಗಿ ಆಡಿದ್ರು ತಂಡವನ್ನ ಗೆಲ್ಲಿಸಬಹುದಿತ್ತು. ಆದ್ರೆ, ಪಂತ್ ಮತ್ತೆ ಫ್ಲಾಪ್ ಆದ್ರು.
ಮಾನಸಿಕ ಒತ್ತಡ.. ಪಂತ್ ಖದರ್ ಮಾಯ.!
ಈ 2 ಇನ್ನಿಂಗ್ಸ್ಗಳ ವೈಫಲ್ಯ ಅಭಿಮಾನಿಗಳಲ್ಲಿ ತೀವ್ರ ನಿರಾಸೆಗೆ ದೂಡಿದೆ. ಯಾಕಂದ್ರೆ, ಈ ಹಿಂದಿದ್ದ ರಿಷಭ್ ಪಂತ್ ಈಗ ಕಾಣಿಸ್ತಿಲ್ಲ. ನಿಜ ಹೇಳಬೇಕಂದ್ರೆ ಪಂತ್ನ ಯಾವತ್ತೂ ಹೀಗೆ ನೋಡೇ ಇರಲಿಲ್ಲ. ಹಿಂದಿದ್ದ ಆ ಅಗ್ರೆಸ್ಸಿವ್ ಇಂಟೆಂಟ್, ಆ ಫಿಯರ್ಲೆಸ್ ಆ್ಯಟಿಟ್ಯೂಡ್, ಆ ಕಾನ್ಫಿಡೆನ್ಸ್ ಎಲ್ಲವೂ ಮಾಯವಾಗಿದೆ. ಇದಕ್ಕೆಲ್ಲಾ ಕಾರಣ ಏನು ಗೊತ್ತಾ.? MENTAL PRESSURE..!
27 ಕೋಟಿ ಹಣ.. ನ್ಯಾಯ ಒದಗಿಸೋ ಸವಾಲ್..!
ಈ ಬಾರಿಯ ಮೆಗಾ ಆಕ್ಷನ್ನಲ್ಲಿ ಪಂತ್ ಪಡೆದುಕೊಂಡಿದ್ದು ಬರೋಬ್ಬರಿ 27 ಕೋಟಿ ಹಣ. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಪ್ಲೇಯರ್ ರಿಷಭ್ ಪಂತ್. ಇಷ್ಟು ಬಿಗ್ ಅಮೌಂಟ್ಗೆ ಸೇಲ್ ಆದ ಪಂತ್ ಇದೀಗ ಆ ಹಣಕ್ಕೆ ಪರ್ಫಾಮೆನ್ಸ್ ಮೂಲಕ ನ್ಯಾಯ ಒದಗಿಸಬೇಕಿದೆ. ಮೌಲ್ಯಕ್ಕೆ ತಕ್ಕಂತೆ ಪರ್ಫಾಮ್ ಮಾಡಬೇಕಿರೋದೆ ಪಂತ್ನ ಒತ್ತಡದಲ್ಲಿ ಸಿಲುಕಿಸಿದೆ.
ಓನರ್ ನಿರೀಕ್ಷೆಯೇ ಪಂತ್ಗೆ ಭಾರ.. ಭಾರ..!
ಫ್ಯಾನ್ಸ್ ನಿರೀಕ್ಷೆ ಬಿಡಿ.. ಈ ಲಕ್ನೋ ಸೂಪರ್ ಜೈಂಟ್ಸ್ ಓನರ್ ನಿರೀಕ್ಷೆ ಇದ್ಯಲ್ಲ ಅದು ನೆಕ್ಸ್ಟ್ ಲೆವೆಲ್. ತನ್ನ ಎಕ್ಸ್ಪೆಕ್ಟೇಷನ್ ರೀಚ್ ಆಗಲಿಲ್ಲ ಅನ್ನೋ ಕಾರಣಕ್ಕೆ ಜಗಮೆಚ್ಚಿದ ನಾಯಕ ಧೋನಿಯನ್ನೇ ರಾತ್ರೋ ರಾತ್ರಿ ಗದ್ದುಗೆಯಿಂದ ಕೆಳಗಿಳಿಸಿದವರು ಈ ಸಂಜೀವ್ ಗೋಯೆಂಕಾ. ಕಳೆದ ಸೀಸನ್ನಲ್ಲಿ ನಮ್ಮ ಕನ್ನಡಿಗ ರಾಹುಲ್ಗೂ ಗ್ರೌಂಡ್ನಲ್ಲೇ ಅಪಮಾನ ಮಾಡಿದ್ರು. ಈಗ 27 ಕೋಟಿ ಸುರಿದು ಪಂತ್ನ ನಾಯಕನನ್ನ ಮಾಡಿದ್ದಾರೆ ಅಂದು ಮೇಲೆ ಆ ನಿರೀಕ್ಷೆ ಎಷ್ಟಿರಬೇಕು ಅಂತಾ ನೀವೇ ಅಂದಾಜು ಮಾಡಿ. ಆ ನಿರೀಕ್ಷೆಯನ್ನ ತಲುಪೋದೆ ಸವಾಲಾಗಿದೆ.
ಇದನ್ನೂ ಓದಿ:ಟ್ರಾಫಿಕ್ ಸಿಗ್ನಲ್ನಲ್ಲಿ ಹೆಂಡತಿ ಮಾಡಿದ ರೀಲ್ಸ್ನಿಂದ ಪೊಲೀಸಪ್ಪನ ಉದ್ಯೋಗವೇ ಹೋಯಿತು!
ಸಂಕಷ್ಟದಲ್ಲಿದೆ ವೈಟ್ಬಾಲ್ ಕರಿಯರ್.!
ಟೀಮ್ ಇಂಡಿಯಾದ 3 ಫಾರ್ಮೆಟ್ ಪ್ಲೇಯರ್ ಆಗಿದ್ದ ಪಂತ್, ವೈಟ್ಬಾಲ್ ಕರಿಯರ್ ಸದ್ಯ ಸಂಕಷ್ಟದಲ್ಲಿದೆ. ಆ್ಯಕ್ಸಿಡೆಂಟ್ನಿಂದ ಚೇತರಿಸಿಕೊಂಡು ಫಿಟ್ ಆಗಿ ಕಮ್ಬ್ಯಾಕ್ ಮಾಡಿದ ಬಳಿಕ ಪಂತ್ ಹಳೆ ಖದರ್ ಮಾಯವಾಗಿದೆ. ಏಕದಿನ ಫಾರ್ಮೆಟ್ನಲ್ಲಿ ಪಂತ್ ಬೆಂಚ್ಗೆ ಸೀಮಿತವಾಗಿದ್ದಾರೆ. ಟಿ20 ಫಾರ್ಮೆಟ್ನಲ್ಲೂ ಸ್ಥಾನಕ್ಕೆ ಕುತ್ತು ಬಂದಿದೆ. ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಅಬ್ಬರ ಮುಂದುವರೆಸಿದ್ರೆ, ಪಂತ್ಗೆ ಗೇಟ್ಪಾಸ್ ಪಕ್ಕಾ. ವೈಟ್ಬಾಲ್ ಕರಿಯರ್ ಸಂಕಷ್ಟಕ್ಕೆ ಸಿಲುಕಿರೋದ್ರಿಂದ ಪರ್ಫಾಮ್ ಮಾಡಲೇಬೇಕಾದ ಒತ್ತಡವಿದೆ. ಆ ಒತ್ತಡ ಆಟಕ್ಕೆ ಅಡ್ಡಿಯಾಗ್ತಿದೆ.
ಒತ್ತಡಕ್ಕೆ ಸಿಲುಕಿರೋ ಪಂತ್ ತನ್ನ ರಿಯಲ್ ಖದರ್ ಅನ್ನೇ ಮರೆತು ಬಿಟ್ಟಿದ್ದಾರೆ. ಸದ್ಯ 2 ಪಂದ್ಯಗಳಲ್ಲಿ ಫ್ಲಾಫ್ ಆಗಿದ್ದರು ಕಮ್ಬ್ಯಾಕ್ ಮಾಡೋಕೆ ಇನ್ನೂ 12 ಪಂದ್ಯಗಳಲ್ಲಿ ಅವಕಾಶವಿದೆ. ಸಾವನ್ನ ಗೆದ್ದು ಮಿರಾಕಲ್ ರೀತಿ ಕ್ರಿಕೆಟ್ ಫೀಲ್ಡ್ಗೆ ವಾಪಾಸ್ಸಾದ ಬಂದ ವೀರ ಪಂತ್ಗೆ ಒತ್ತಡವನ್ನ ಹಿಮ್ಮೆಟ್ಟಿಸೋದು ದೊಡ್ಡ ವಿಚಾರವೇನಲ್ಲ. ಪಂತ್ ತನ್ನ ಅಸಲಿ ಸಾಮರ್ಥ್ಯವನ್ನ ನೆನೆಪು ಮಾಡಿಕೊಳ್ಳಬೇಕಿದೆ ಅಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ