/newsfirstlive-kannada/media/post_attachments/wp-content/uploads/2024/08/Rishab-Shetty-3.jpg)
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಒಂದಲ್ಲಾ, ಎರಡಲ್ಲಾ ಮೂರು ಪ್ರಶಸ್ತಿಗಳು ಬಂದಿವೆ. ಅದರಲ್ಲಿ ಎರಡು ಪ್ರಶಸ್ತಿಗಳು ಕಾಂತಾರ ತಂಡದ ಪಾಲಾಗಿದೆ. ಮತ್ತೊಂದು ಪ್ರಶಸ್ತಿ ಕೆಜಿಎಫ್ ತಂಡಕ್ಕೆ ಸಿಕ್ಕಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದ್ದು, ಕಾಂತಾರ ಸಿನಿಮಾಗೆ ಮನರಂಜನಾ ಸಿನಿಮಾ ಪ್ರಶಸ್ತಿಗೆ ದೊರೆತಿದೆ.
ರಾಷ್ಟ್ರೀಯ ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ರಿಷಬ್ ಶೆಟ್ಟಿ ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಕಾಂತಾರ ಸಿನಿಮಾವನ್ನು ನಟ ಪುನೀತ್ ರಾಜ್ಕುಮಾರ್ಗೆ ಅರ್ಪಿಸಿರುವ ಬಗ್ಗೆ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ಕನ್ನಡದ ಕಾಂತಾರ, ಕೆಜಿಎಫ್-2 ಕಮಾಲ್.. ಪ್ರಶಸ್ತಿಗಳ ಪಟ್ಟಿ ಇಲ್ಲಿದೆ!
ನ್ಯೂಸ್ ಫಸ್ಟ್ ಜೊತೆಗೆ ಮಾತನಾಡಿದ ಡಿವೈನ್ ಸ್ಟಾರ್, ನಾನು ನಟನಾಗಿರಬಹುದು, ನಿರ್ದೇಶಕನಾಗಿರಬಹುದು. ಈ ಎಲ್ಲಾ ಯಶಸ್ಸು ನನ್ನ ತಂಡಕ್ಕೆ ಸಲ್ಲುತ್ತೆ. ಕಾಂತಾರದ ಸಕಸ್ಸನ್ನು ಅಪ್ಪು ಸರ್ಗೆ, ದೈವ ನರ್ತಕರು ಮತ್ತು ಅವರು ಕುಟುಂಬ, ದೈವಕ್ಕೆ ನಾನು ಅರ್ಪಿಸಿದ್ದೆ. ಇದರ ಜೊತೆಗೆ ಕನ್ನಡ ಜನತೆಗೆ ಇಲ್ಲಿಯವರೆಗೆ ಬರಲು ಸಪೋರ್ಟ್ ಕೊಟ್ಟಿದ್ದಾರೆ. ಇಡೀ ತಂಡದ ಶ್ರಮ, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿಕೊಂಡು ಬಂದು ಇವತ್ತು ಕೂಡ ನಾನು ಅದೇ ಟೀಂ ಜೊತೆಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ