/newsfirstlive-kannada/media/post_attachments/wp-content/uploads/2025/07/robbers-enter-jewelry-shop-with-guns-in-bangaluru.jpg)
ಬೆಂಗಳೂರು: ಗನ್ ತೋರಿಸಿ ಜ್ಯುವೆಲ್ಲರಿ ಶಾಪ್ನಲ್ಲಿ ದರೋಡೆ ಮಾಡಿರೋ ಘಟನೆ ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ನಡೆದಿದೆ.
ರಾಮ್ ಜ್ಯುವೆಲ್ಲರಿ ಶಾಪ್ ಕ್ಲೋಸ್ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದೆ. 24ರಂದು 9 ಗಂಟೆ ಸುಮಾರಿಗೆ ಕೈನಲ್ಲಿ ಗನ್ ಹಿಡಿದು ಮುಸುಕುದಾರಿಗಳ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಇದೇ ವೇಳೆ ಕಳ್ಳರ ಕೈಗೆ ಸಿಕ್ಕ ಚಿನ್ನಾಭರಣ ದೋಚಿ ಮೂವರು ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಆಸೆ ಸೀರಿಯಲ್ನಲ್ಲಿ ಏನಾಗ್ತಿದೆ..? ಮೀನ-ಸೂರ್ಯ, ಮನೋಜ-ರೋಹಿನಿ ರೋಮ್ಯಾನ್ಸ್ ವಿಡಿಯೋ ವೈರಲ್!
ಇನ್ನೂ, ಮುಸುಕುದಾರಿಗಳ ಗ್ಯಾಂಗ್ ಬರುತ್ತಿದ್ದಂತೆ ಸಿಬ್ಬಂದಿ ಏಕಾಏಕಿ ಕಾಪಾಡಿ, ಕಾಪಾಡಿ ಅಂತ ಕೂಗಾಡಿದ್ದಾರೆ. ಆಗ ಮುಸುಕುದಾರಿಗಳ ಗ್ಯಾಂಗ್ ಸಿಬ್ಬಂದಿಯನ್ನ ತಳ್ಳಿ ಚಿನ್ನಾಭರಣ ದೋಚಿಕೊಂಡಿದ್ದಾರೆ. ಸಿಬ್ಬಂದಿಯ ಕೂಗಾಟ ಕೇಳಿ ಅಕ್ಕ ಪಕ್ಕದ ಅಂಗಡಿಯವರು ಶಾಪ್ ಬಳಿ ಓಡಿ ಬಂದಿದ್ದಾರೆ. ಅಷ್ಟೋತ್ತಿಗೆ ಅಲ್ಲಿಂದ ಗ್ಯಾಂಗ್ ಪರಾರಿಯಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆ ಗ್ಯಾಂಗ್ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ