ಜೆಟ್ಲ್ಯಾಗ್ ಪಬ್ನಲ್ಲಿ ಓವರ್ ನೈಟ್ ಪಾರ್ಟಿ
ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ನೋಟಿಸ್
ಪೊಲೀಸರ ನೋಟಿಸ್ಗೆ ಉತ್ತರಿಸಿದ ಸ್ಟಾರ್ಸ್
ಬೆಂಗಳೂರು: ಜೆಟ್ ಲಾಗ್ ಪಬ್ನಲ್ಲಿ 3 ನೇ ತಾರೀಖು ಬೆಳಗಿನ ಜಾವದವರೆಗೆ ಪಾರ್ಟಿ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯವನ್ನಾಧರಿಸಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ಸುಬ್ರಹ್ಮಣ್ಯ ಪೊಲೀಸರು ನೋಟಿಸ್ ಕೊಟ್ಟಿದ್ರು. ಅದ್ರಂತೆ ಇವತ್ತು ಒಂದಷ್ಟು ನಟರು ವಿಚಾರಣೆ ಎದುರಿಸಿದ್ದಾರೆ.
ಪೊಲೀಸರ ನೋಟಿಸ್ಗೆ ಉತ್ತರಿಸಲು ಬಂದ ಸ್ಟಾರ್ಸ್
ಕಾಟೇರಾ ಸಕ್ಸಸ್ ಹಿನ್ನೆಲೆ ಜನವರಿ ಮೂರನೇ ತಾರೀಕು ಚಿತ್ರತಂಡ ಜೆಟ್ ಲಾಗ್ ಪಬ್ನಲ್ಲಿ ಬೆಳಗಿನ ಜಾವ ಮೂರು ಗಂಟೆಯ ವರೆಗೂ ಪಾರ್ಟಿ ಮಾಡಿದ್ರು. ಈ ಸಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ಷರತ್ತುಗಳನ್ನು ಉಲ್ಲಂಘನೆ ಆರೋಪದಡಿ ಜೆಟ್ ಲಾಗ್ ಪಬ್ ಮಾಲೀಕರು ಹಾಗು ಮ್ಯಾನೇಜರ್ ಮೇಲೆ ಎಫ್ಐಆರ್ ದಾಖಲಾಗಿತ್ತು, ಹಾಗೂ ಪಾರ್ಟಿ ಮಾಡಿದ ನಟರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ರು. ಅದ್ರಂತೆ ಇವತ್ತು ಕೆಲ ನಟರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿ ವಾಪಸ್ಸಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿಕ್ಕಣ್ಣ, ಡಾಲಿ ಧನಂಜಯ್ಯ, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್ ಹಾಗು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ಗೆ ಪೊಲೀಸ್ರು ನೋಟಿಸ್ ನೀಡಿದ್ದರು. ಅದ್ರಂತೆ 8 ಮಂದಿ ಠಾಣೆಗೆ ಹಾಜರಾಗಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ.
ದರ್ಶನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ರಾಕ್ಲೈನ್
ಈ ಎಂಟು ಮಂದಿಯನ್ನ ಸುಬ್ರಮಣ್ಯ ನಗರ ಠಾಣೆ ಇನ್ಸ್ಪೆಕ್ಟರ್ ಸುರೇಶ್, ಶ್ರೀರಾಂಪುರ ಇನ್ಸ್ಪೆಕ್ಟರ್ ಬಾಲಕೃಷ್ಣ, ಮಲ್ಲೇಶ್ವರಂ ಇನ್ಸ್ಪೆಕ್ಟರ್ ಜಗದೀಶ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಮಾತನಾಡಿದ ರಾಕ್ಲೈನ್ ವೆಂಕಟೇಶ್ ಇದೇ ಮೊದಲು ಗ್ರಾಹಕರಿಗೆ ನೋಟಿಸ್ ಕೊಟ್ಟಿದ್ದಾರೆ. ಕೆಲವರು ದರ್ಶನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
ಒಟ್ನಲ್ಲಿ ಅವತ್ತು ಹೋಟೆಲ್ನಲ್ಲಿ ಇದ್ದಿದ್ದು ನಿಜ. ಪಾರ್ಟಿ ಲೇಟ್ ಆಯ್ತು ಊಟ ಮಾಡಿಕೊಂಡು ಹೋಗೋಕೆ ಅಂತ ನಾನೇ ಮಾಲೀಕರ ಬಳಿ ರಿಕ್ವೆಸ್ಟ್ ಮಾಡಿ, ಊಟ ಮಾಡಿಕೊಂಡು ಹೋಗುವಷ್ಟರಲ್ಲಿ ಅಷ್ಟೊತ್ತಾಯ್ತು ಅಂತ ರಾಕ್ ಲೈನ್ ಹೇಳಿದ್ದು, ನಮ್ಮ ವಿರುದ್ಧ ಮತ್ತೆ ಸಮರ ಸಾರಿದ್ರೆ ನಾವೂ ಕಾನೂನು ಹೋರಾಟಕ್ಕೆ ಸಿದ್ಧ ಅಂತ ಹೇಳುವ ಮೂಲಕ ರಾಕ್ಲೈನ್ ವೆಂಕಟೇಶ್ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜೆಟ್ಲ್ಯಾಗ್ ಪಬ್ನಲ್ಲಿ ಓವರ್ ನೈಟ್ ಪಾರ್ಟಿ
ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ನೋಟಿಸ್
ಪೊಲೀಸರ ನೋಟಿಸ್ಗೆ ಉತ್ತರಿಸಿದ ಸ್ಟಾರ್ಸ್
ಬೆಂಗಳೂರು: ಜೆಟ್ ಲಾಗ್ ಪಬ್ನಲ್ಲಿ 3 ನೇ ತಾರೀಖು ಬೆಳಗಿನ ಜಾವದವರೆಗೆ ಪಾರ್ಟಿ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯವನ್ನಾಧರಿಸಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ಸುಬ್ರಹ್ಮಣ್ಯ ಪೊಲೀಸರು ನೋಟಿಸ್ ಕೊಟ್ಟಿದ್ರು. ಅದ್ರಂತೆ ಇವತ್ತು ಒಂದಷ್ಟು ನಟರು ವಿಚಾರಣೆ ಎದುರಿಸಿದ್ದಾರೆ.
ಪೊಲೀಸರ ನೋಟಿಸ್ಗೆ ಉತ್ತರಿಸಲು ಬಂದ ಸ್ಟಾರ್ಸ್
ಕಾಟೇರಾ ಸಕ್ಸಸ್ ಹಿನ್ನೆಲೆ ಜನವರಿ ಮೂರನೇ ತಾರೀಕು ಚಿತ್ರತಂಡ ಜೆಟ್ ಲಾಗ್ ಪಬ್ನಲ್ಲಿ ಬೆಳಗಿನ ಜಾವ ಮೂರು ಗಂಟೆಯ ವರೆಗೂ ಪಾರ್ಟಿ ಮಾಡಿದ್ರು. ಈ ಸಬಂಧ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ಷರತ್ತುಗಳನ್ನು ಉಲ್ಲಂಘನೆ ಆರೋಪದಡಿ ಜೆಟ್ ಲಾಗ್ ಪಬ್ ಮಾಲೀಕರು ಹಾಗು ಮ್ಯಾನೇಜರ್ ಮೇಲೆ ಎಫ್ಐಆರ್ ದಾಖಲಾಗಿತ್ತು, ಹಾಗೂ ಪಾರ್ಟಿ ಮಾಡಿದ ನಟರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ರು. ಅದ್ರಂತೆ ಇವತ್ತು ಕೆಲ ನಟರು ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿ ವಾಪಸ್ಸಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿಕ್ಕಣ್ಣ, ಡಾಲಿ ಧನಂಜಯ್ಯ, ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್ ಹಾಗು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ಗೆ ಪೊಲೀಸ್ರು ನೋಟಿಸ್ ನೀಡಿದ್ದರು. ಅದ್ರಂತೆ 8 ಮಂದಿ ಠಾಣೆಗೆ ಹಾಜರಾಗಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ.
ದರ್ಶನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ರಾಕ್ಲೈನ್
ಈ ಎಂಟು ಮಂದಿಯನ್ನ ಸುಬ್ರಮಣ್ಯ ನಗರ ಠಾಣೆ ಇನ್ಸ್ಪೆಕ್ಟರ್ ಸುರೇಶ್, ಶ್ರೀರಾಂಪುರ ಇನ್ಸ್ಪೆಕ್ಟರ್ ಬಾಲಕೃಷ್ಣ, ಮಲ್ಲೇಶ್ವರಂ ಇನ್ಸ್ಪೆಕ್ಟರ್ ಜಗದೀಶ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಮಾತನಾಡಿದ ರಾಕ್ಲೈನ್ ವೆಂಕಟೇಶ್ ಇದೇ ಮೊದಲು ಗ್ರಾಹಕರಿಗೆ ನೋಟಿಸ್ ಕೊಟ್ಟಿದ್ದಾರೆ. ಕೆಲವರು ದರ್ಶನ್ನ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
ಒಟ್ನಲ್ಲಿ ಅವತ್ತು ಹೋಟೆಲ್ನಲ್ಲಿ ಇದ್ದಿದ್ದು ನಿಜ. ಪಾರ್ಟಿ ಲೇಟ್ ಆಯ್ತು ಊಟ ಮಾಡಿಕೊಂಡು ಹೋಗೋಕೆ ಅಂತ ನಾನೇ ಮಾಲೀಕರ ಬಳಿ ರಿಕ್ವೆಸ್ಟ್ ಮಾಡಿ, ಊಟ ಮಾಡಿಕೊಂಡು ಹೋಗುವಷ್ಟರಲ್ಲಿ ಅಷ್ಟೊತ್ತಾಯ್ತು ಅಂತ ರಾಕ್ ಲೈನ್ ಹೇಳಿದ್ದು, ನಮ್ಮ ವಿರುದ್ಧ ಮತ್ತೆ ಸಮರ ಸಾರಿದ್ರೆ ನಾವೂ ಕಾನೂನು ಹೋರಾಟಕ್ಕೆ ಸಿದ್ಧ ಅಂತ ಹೇಳುವ ಮೂಲಕ ರಾಕ್ಲೈನ್ ವೆಂಕಟೇಶ್ ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ