/newsfirstlive-kannada/media/post_attachments/wp-content/uploads/2025/03/Rohit-sharma-5.jpg)
ಟೀಮ್​ ಇಂಡಿಯಾ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿಯ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ನ್ಯೂಜಿಲೆಂಡ್​ ವಿರುದ್ಧ ಭರ್ಜರಿ ಗೆಲುವು ಸಾಧಿಸೋ ಮೂಲಕ ಭಾರತ ತಂಡ ದಾಖಲೆ ಬರೆದಿದೆ. ಭಾರತ ತಂಡದ ಗೆಲುವಿನಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಪ್ರಮುಖ ಪಾತ್ರವಹಿಸಿದ್ರು.
ಗೆಲುವಿನ ಬಗ್ಗೆ ಏನಂದ್ರು ರೋಹಿತ್​?
ಭಾರತ ತಂಡ ಗೆಲುವಿನ ಬಗ್ಗೆ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಾಡಿದ್ದಾರೆ. ಟೂರ್ನಿಯುದ್ದಕ್ಕೂ ನಮ್ಮನ್ನು ಬೆಂಬಲಿಸಿ ಎಲ್ಲರಿಗೂ ಧನ್ಯವಾದಗಳು. ಇದು ನಮ್ಮ ದೇಶ ಅಲ್ಲ, ನಮ್ಮ ಹೋಮ್​ ಗ್ರೌಂಡ್​ ಅಲ್ಲ. ಆದ್ರೂ ಜನ ನಮ್ಮ ಹೋಮ್​ ಗ್ರೌಂಡ್​ ಎಂಬಂತೆ ಫೀಲ್​ ಮಾಡಿಸಿದರು. ಭಾರತ ತಂಡವನ್ನು ಬೆಂಬಲಿಸಿ ಲಕ್ಷಾಂತರ ಜನ ನೆರೆದಿದ್ದರು ಎಂದರು.
ಇಡೀ ತಂಡ ಗೆಲುವಿಗಾಗಿ ಶ್ರಮಿಸಿದೆ. ನಮ್ಮ ಸ್ಪಿನ್ನರ್ಸ್​ ಅಂತೂ ಅದ್ಭುತ ಆಟ ಆಡಿದ್ರು. ನಮ್ಮ ಮೇಲೆ ಬಹಳ ನಿರೀಕ್ಷೆಗಳಿದ್ದವು. ನಮ್ಮ ಸ್ಟ್ರೆಂಥ್​ ಮತ್ತು ವೀಕ್ನೇಸ್​ ಎಲ್ಲಾ ಗೊತ್ತಿತ್ತು. ಕೆ.ಎಲ್​ ರಾಹುಲ್​ ಅದ್ಭುತ ಬ್ಯಾಟಿಂಗ್​ ಮಾಡಿದರು. ಇದೇ ಕಾರಣಕ್ಕೆ ನಾವು ಕೆ.ಎಲ್​ ರಾಹುಲ್​ ಮಿಡಲ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ಮಾಡಲಿ ಎಂದು ಒತ್ತಡ ಹಾಕಿದ್ದು ಎಂದರು.
ಮಿಡಲ್​ ಆರ್ಡರ್​ ಬ್ಯಾಟ್​ ಮಾಡಲು ಕೆ.ಎಲ್​ ರಾಹುಲ್​ ಅವರಿಂದ ಮಾತ್ರ ಸಾಧ್ಯ. ಆ ಕಾಮ್​ನೆಸ್​ ಮತ್ತು ಡೀಸೆಂಟ್​ ಬ್ಯಾಟಿಂಗ್​​ ಎಲ್ಲರಿಗೂ ಇಷ್ಟ ಆಗುತ್ತೆ. ಅವರೊಂದಿಗೆ ಬ್ಯಾಟಿಂಗ್​ ಮಾಡುವ ಎಲ್ಲರಿಗೂ ಕೆ.ಎಲ್​ ರಾಹುಲ್​ ಫ್ರೀಡಮ್​ ಕೊಡುತ್ತಾರೆ ಎಂದರು. ಭಾರತದ ಗೆಲುವಿಗೆ ಎಲ್ಲರೂ ಕಾರಣ ಎಂದರು.
ಇದನ್ನೂ ಓದಿ: 6,6,6,4,4,4,4,4,4; ಸ್ಫೋಟಕ ಅರ್ಧ ಶತಕ ಸಿಡಿಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us