ಉಳಿದ 3 ಪಂದ್ಯಗಳ ಟೀಮ್ ಸೆಲೆಕ್ಷನ್ಗೆ ಕೌಂಟ್ಡೌನ್.!
ವೈಜಾಗ್ ಗ್ರೌಂಡ್ನಲ್ಲೇ ನಡೀತು ಸೆಲೆಕ್ಷನ್ ಮೀಟಿಂಗ್..!
ಕ್ಯಾಪ್ಟನ್ ರೋಹಿತ್ - ಸೆಲೆಕ್ಟರ್ ಅಗರ್ಕರ್ ಬಿಸಿ ಬಿಸಿ ಚರ್ಚೆ
ಇಂಡೋ – ಇಂಗ್ಲೆಂಡ್ ನಡುವಿನ ಅಂತಿಮ 3ನೇ ಟೆಸ್ಟ್ಗೆ ಟೀಮ್ ಇಂಡಿಯಾ ಪ್ರಕಟ ಯಾವಾಗ? ಕ್ರಿಕೆಟ್ ವಲಯವನ್ನ ಕಾಡ್ತಿರೋ ಪ್ರಶ್ನೆಯಿದು. ಅಸಲಿಗೆ 2ನೇ ಟೆಸ್ಟ್ ಅಂತ್ಯದ ಬೆನ್ನಲ್ಲೇ ಈ ಬಗ್ಗೆ ಜೋರು ಚರ್ಚೆ ನಡೆದಿದೆ. ಆದ್ರೆ, ಫೈನಲ್ ಡಿಸಿಶನ್ಗೆ ಬಂದಿಲ್ಲ.. ಯಾಕಂದ್ರೆ, ಸೆಲೆಕ್ಷನ್ ಕಮಿಟಿ ಹಾಗೂ ಬಿಸಿಸಿಐನ ಲೆಕ್ಕಾಚಾರ ಬೇರೆಯಿದೆ.
ಹೈದ್ರಾಬಾದ್ ಟೆಸ್ಟ್ನಲ್ಲಿ ಸೋಲಿನ ಅವಮಾನ ಎದುರಿಸಿದ್ದ ಟೀಮ್ ಇಂಡಿಯಾ, ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ಪಡೆಯನ್ನ ಬೇಟೆಯಾಡಿದೆ. 2ನೇ ಟೆಸ್ಟ್ನಲ್ಲಿ ಘರ್ಜಿಸಿದ ಟೀಮ್ ಇಂಡಿಯಾ ಕಲಿಗಳು ಸಾಲಿಡ್ ಆಟದಿಂದ ಆಂಗ್ಲರ ಅಹಂಗೆ ತಿರುಗೇಟು ಕೊಟ್ಟಿದ್ದಾರೆ. ಸೋತು ಗೆದ್ದಿರುವ ಟೀಮ್ ಇಂಡಿಯಾ ಇದೀಗ ಸರಣಿ ಗೆಲುವಿನತ್ತ ಚಿತ್ತ ನೆಟ್ಟಿದೆ.
ಕ್ಯಾಪ್ಟನ್ ರೋಹಿತ್ – ಸೆಲೆಕ್ಟರ್ ಅಗರ್ಕರ್ ಬಿಸಿ ಬಿಸಿ ಚರ್ಚೆ.!
ಇಂಡೋ – ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಮುಗಿದ ಬೆನ್ನಲ್ಲೇ ಇಡೀ ತಂಡ ವೈಜಾಗ್ನಲ್ಲಿ ವಿಜಯೋತ್ಸವದ ಸಂಭ್ರಮದಲ್ಲಿತ್ತು. ಆದ್ರೆ, ಅದೇ ಗ್ರೌಂಡ್ನ ಮತ್ತೊಂದು ಮೂಲೆಯಲ್ಲಿ ಟೆಸ್ಟ್ ಸರಣಿಯ ಉಳಿದ ಪಂದ್ಯಗಳ ತಂಡದ ಆಯ್ಕೆಯ ಕಸರತ್ತು ಆರಂಭವಾಗಿತ್ತು. ಕ್ಯಾಪ್ಟನ್ ರೋಹಿತ್ ಶರ್ಮಾ ಆನ್ಫೀಲ್ಡ್ನಲ್ಲೇ, ಚೀಫ್ ಸೆಲೆಕ್ಟರ್ ಅಗರ್ಕರ್ ಜೊತೆ ಬಿಸಿಬಿಸಿ ಚರ್ಚೆ ನಡೆಸಿದ್ರು.
ಬದಲಾದ ಲೆಕ್ಕಾಚಾರ, ಸೀನಿಯರ್ಸ್ ಎದೆಯಲ್ಲಿ ಢವ.. ಢವ..!
ಪಂದ್ಯ ಮುಗಿದ ಬೆನ್ನಲ್ಲೇ ರೋಹಿತ್ ಶರ್ಮಾ, ಸೆಲೆಕ್ಟರ್ ಅಗರ್ಕರ್ ಜೊತೆ ಚರ್ಚೆ ನಡೆಸಿದ್ರೆ, ಮತ್ತೊಂದೆಡೆ ಕೋಚ್ ದ್ರಾವಿಡ್ ಸೀನಿಯರ್ಸ್ಗೆ ಕ್ಲಾಸ್ ತೆಗೆದುಕೊಂಡಿದ್ರು. ಟೆಸ್ಟ್ ಸರಣಿಯಲ್ಲಿ ಫ್ಲಾಪ್ ಶೋ ನೀಡ್ತಿರುವ ಶ್ರೇಯಸ್ ಅಯ್ಯರ್ ಜೊತೆ ದ್ರಾವಿಡ್ ಗಂಭೀರ ಚರ್ಚೆ ನಡೆಸಿದ್ರು. ಈ ಎರಡು ಮೀಟಿಂಗ್ಗಳು ಸೀನಿಯರ್ಸ್ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯಾಕಂದ್ರೆ, ಟೀಮ್ ಇಂಡಿಯಾ ಮೊದಲಿನಂತಿಲ್ಲ.
— Nihari Korma (@NihariVsKorma) February 5, 2024
ಪರ್ಫಾಮ್ ಮಾಡಿ.. ಇಲ್ಲ ಜಾಗ ಖಾಲಿ ಮಾಡಿ..!
ಯೆಸ್.. ಟೀಮ್ ಇಂಡಿಯಾ ಸೆಲೆಕ್ಟರ್ಸ್ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಈಗ ಕಂಪ್ಲೀಟ್ ಬದಲಾಗಿದ್ದಾರೆ. ಈಗಿನ ಯೋಚನೆ ಬೇರೆಯದ್ದೇ ಆಗಿದೆ. ಸ್ಟಾರ್ಗಿರಿಗೆ ಮಣೆ ಹಾಕಲ್ಲ.. ಪರ್ಫಾಮ್ ಮಾಡಿ ಇಲ್ಲದಿದ್ರೆ ಜಾಗ ಕಾಲಿ ಮಾಡಿ ಅನ್ನೋ ಅಜೆಂಡಾ ಸದ್ಯ ಟೀಮ್ ಇಂಡಿಯಾದಲ್ಲಿದೆ. ಹೀಗಾಗಿ ಮೊನ್ನೆ ನಡೆದ ಸೆಲೆಕ್ಷನ್ ಮೀಟಿಂಗ್ ಸೀನಿಯರ್ಸ್ ಎದೆಯಲ್ಲಿ ಢವ..ಢವ ಹುಟ್ಟಿಸಿದೆ.
5 ವರ್ಷದ ಟಾರ್ಗೆಟ್, ಭವಿಷ್ಯದ ತಂಡ ಕಟ್ಟೋ ಚಾಲೆಂಜ್.!
ಸದ್ಯ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಸದ್ಯ ನಡೀತಾ ಇರೋ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್ ಜೊತೆಗೆ ಮುಂಬರುವ 2025ರಿಂದ 28ರವರೆಗಿನ WTC ಸೈಕಲ್ವರೆಗೆ ಆಗುವಂತಾ ಸಮರ್ಥ ತಂಡವನ್ನ ಕಟ್ಟಲು ಬಿಸಿಸಿಐ ಬಾಸ್ಗಳು ಈಗಾಗಲೇ ಟೀಮ್ ಮ್ಯಾನೇಜ್ಮೆಂಟ್ಗೆ ಸೂಚನೆ ಕೊಟ್ಟಿದ್ದಾರೆ. ಸೆಲೆಕ್ಷನ್ ಕಮಿಟಿ ಸದಸ್ಯರು ಕೂಡ ಈ ನಿಟ್ಟಿನಲ್ಲಿ ಖಡಕ್ ನಿರ್ಧಾರ ತೆಗೆದುಕೊಳ್ತಾ ಇದ್ದು, ಯುವ ಹಾಗೂ ಅನುಭವಿ ತಂಡಕ್ಕೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ.
2025ರ ಬಳಿಕ ಬದಲಾಗಲಿದೆ ಟೀಮ್ ಇಂಡಿಯಾ.!
2025ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್ ಮುಗಿದ ಬಳಿಕ ಟೀಮ್ ಇಂಡಿಯಾ ಕಂಪ್ಲೀಟ್ ಬದಲಾಗಲಿದೆ. ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಂಡವನ್ನ ತೊರೆಯಲಿದ್ದಾರೆ. ಸ್ಪಿನ್ನರ್ಗಳಾದ ಅರ್. ಅಶ್ವಿನ್, ರವಿಂದ್ರ ಜಡೇಜಾ ಹಾಗೂ ವೇಗಿ ಮೊಹಮ್ಮದ್ ಶಮಿ ಕೂಡ ಗುಡ್ ಬೈ ಹೇಳೋ ಸಾಧ್ಯತೆ ದಟ್ಟವಾಗಿದೆ. ಇವರೆಲ್ಲರ ಸ್ಥಾನಕ್ಕೆ ಸಮರ್ಥರನ್ನ ಈಗಿನಿಂದಲೇ ಬೆಳೆಸಬೇಕಿದೆ.
ಈ ಹಿಂದೆ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ.. ಕ್ರಿಕೆಟ್ಗೆ ಗುಡ್ ಬೈ ಹೇಳಿದಾಗ ಟೀಮ್ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತು. ಹೀಗಾಗಿ ತಂಡದಲ್ಲಿ TRANSITION ಆದ್ರೂ ಯಾವುದೆ ಹಿನ್ನಡೆಯಾಗಲಿಲ್ಲ. ಈಗಲೂ ಅದೇ ರೀತಿಯಲ್ಲಿ ಟೀಮ್ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಇಲ್ಲದಿದ್ರೆ, transition periodನಲ್ಲಿ ಯಡವಟ್ಟು ಮಾಡಿಕೊಂಡು ಇಂದಿಗೂ ಸುಧಾರಣೆ ಕಾಣಲು ಒದ್ದಾಡುತ್ತಿರೋ ಶ್ರೀಲಂಕಾ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ನಂತೆ ಸಮಸ್ಯೆ ಎದುರಿಸಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಉಳಿದ 3 ಪಂದ್ಯಗಳ ಟೀಮ್ ಸೆಲೆಕ್ಷನ್ಗೆ ಕೌಂಟ್ಡೌನ್.!
ವೈಜಾಗ್ ಗ್ರೌಂಡ್ನಲ್ಲೇ ನಡೀತು ಸೆಲೆಕ್ಷನ್ ಮೀಟಿಂಗ್..!
ಕ್ಯಾಪ್ಟನ್ ರೋಹಿತ್ - ಸೆಲೆಕ್ಟರ್ ಅಗರ್ಕರ್ ಬಿಸಿ ಬಿಸಿ ಚರ್ಚೆ
ಇಂಡೋ – ಇಂಗ್ಲೆಂಡ್ ನಡುವಿನ ಅಂತಿಮ 3ನೇ ಟೆಸ್ಟ್ಗೆ ಟೀಮ್ ಇಂಡಿಯಾ ಪ್ರಕಟ ಯಾವಾಗ? ಕ್ರಿಕೆಟ್ ವಲಯವನ್ನ ಕಾಡ್ತಿರೋ ಪ್ರಶ್ನೆಯಿದು. ಅಸಲಿಗೆ 2ನೇ ಟೆಸ್ಟ್ ಅಂತ್ಯದ ಬೆನ್ನಲ್ಲೇ ಈ ಬಗ್ಗೆ ಜೋರು ಚರ್ಚೆ ನಡೆದಿದೆ. ಆದ್ರೆ, ಫೈನಲ್ ಡಿಸಿಶನ್ಗೆ ಬಂದಿಲ್ಲ.. ಯಾಕಂದ್ರೆ, ಸೆಲೆಕ್ಷನ್ ಕಮಿಟಿ ಹಾಗೂ ಬಿಸಿಸಿಐನ ಲೆಕ್ಕಾಚಾರ ಬೇರೆಯಿದೆ.
ಹೈದ್ರಾಬಾದ್ ಟೆಸ್ಟ್ನಲ್ಲಿ ಸೋಲಿನ ಅವಮಾನ ಎದುರಿಸಿದ್ದ ಟೀಮ್ ಇಂಡಿಯಾ, ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ಪಡೆಯನ್ನ ಬೇಟೆಯಾಡಿದೆ. 2ನೇ ಟೆಸ್ಟ್ನಲ್ಲಿ ಘರ್ಜಿಸಿದ ಟೀಮ್ ಇಂಡಿಯಾ ಕಲಿಗಳು ಸಾಲಿಡ್ ಆಟದಿಂದ ಆಂಗ್ಲರ ಅಹಂಗೆ ತಿರುಗೇಟು ಕೊಟ್ಟಿದ್ದಾರೆ. ಸೋತು ಗೆದ್ದಿರುವ ಟೀಮ್ ಇಂಡಿಯಾ ಇದೀಗ ಸರಣಿ ಗೆಲುವಿನತ್ತ ಚಿತ್ತ ನೆಟ್ಟಿದೆ.
ಕ್ಯಾಪ್ಟನ್ ರೋಹಿತ್ – ಸೆಲೆಕ್ಟರ್ ಅಗರ್ಕರ್ ಬಿಸಿ ಬಿಸಿ ಚರ್ಚೆ.!
ಇಂಡೋ – ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ಮುಗಿದ ಬೆನ್ನಲ್ಲೇ ಇಡೀ ತಂಡ ವೈಜಾಗ್ನಲ್ಲಿ ವಿಜಯೋತ್ಸವದ ಸಂಭ್ರಮದಲ್ಲಿತ್ತು. ಆದ್ರೆ, ಅದೇ ಗ್ರೌಂಡ್ನ ಮತ್ತೊಂದು ಮೂಲೆಯಲ್ಲಿ ಟೆಸ್ಟ್ ಸರಣಿಯ ಉಳಿದ ಪಂದ್ಯಗಳ ತಂಡದ ಆಯ್ಕೆಯ ಕಸರತ್ತು ಆರಂಭವಾಗಿತ್ತು. ಕ್ಯಾಪ್ಟನ್ ರೋಹಿತ್ ಶರ್ಮಾ ಆನ್ಫೀಲ್ಡ್ನಲ್ಲೇ, ಚೀಫ್ ಸೆಲೆಕ್ಟರ್ ಅಗರ್ಕರ್ ಜೊತೆ ಬಿಸಿಬಿಸಿ ಚರ್ಚೆ ನಡೆಸಿದ್ರು.
ಬದಲಾದ ಲೆಕ್ಕಾಚಾರ, ಸೀನಿಯರ್ಸ್ ಎದೆಯಲ್ಲಿ ಢವ.. ಢವ..!
ಪಂದ್ಯ ಮುಗಿದ ಬೆನ್ನಲ್ಲೇ ರೋಹಿತ್ ಶರ್ಮಾ, ಸೆಲೆಕ್ಟರ್ ಅಗರ್ಕರ್ ಜೊತೆ ಚರ್ಚೆ ನಡೆಸಿದ್ರೆ, ಮತ್ತೊಂದೆಡೆ ಕೋಚ್ ದ್ರಾವಿಡ್ ಸೀನಿಯರ್ಸ್ಗೆ ಕ್ಲಾಸ್ ತೆಗೆದುಕೊಂಡಿದ್ರು. ಟೆಸ್ಟ್ ಸರಣಿಯಲ್ಲಿ ಫ್ಲಾಪ್ ಶೋ ನೀಡ್ತಿರುವ ಶ್ರೇಯಸ್ ಅಯ್ಯರ್ ಜೊತೆ ದ್ರಾವಿಡ್ ಗಂಭೀರ ಚರ್ಚೆ ನಡೆಸಿದ್ರು. ಈ ಎರಡು ಮೀಟಿಂಗ್ಗಳು ಸೀನಿಯರ್ಸ್ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯಾಕಂದ್ರೆ, ಟೀಮ್ ಇಂಡಿಯಾ ಮೊದಲಿನಂತಿಲ್ಲ.
— Nihari Korma (@NihariVsKorma) February 5, 2024
ಪರ್ಫಾಮ್ ಮಾಡಿ.. ಇಲ್ಲ ಜಾಗ ಖಾಲಿ ಮಾಡಿ..!
ಯೆಸ್.. ಟೀಮ್ ಇಂಡಿಯಾ ಸೆಲೆಕ್ಟರ್ಸ್ ಹಾಗೂ ಟೀಮ್ ಮ್ಯಾನೇಜ್ಮೆಂಟ್ ಈಗ ಕಂಪ್ಲೀಟ್ ಬದಲಾಗಿದ್ದಾರೆ. ಈಗಿನ ಯೋಚನೆ ಬೇರೆಯದ್ದೇ ಆಗಿದೆ. ಸ್ಟಾರ್ಗಿರಿಗೆ ಮಣೆ ಹಾಕಲ್ಲ.. ಪರ್ಫಾಮ್ ಮಾಡಿ ಇಲ್ಲದಿದ್ರೆ ಜಾಗ ಕಾಲಿ ಮಾಡಿ ಅನ್ನೋ ಅಜೆಂಡಾ ಸದ್ಯ ಟೀಮ್ ಇಂಡಿಯಾದಲ್ಲಿದೆ. ಹೀಗಾಗಿ ಮೊನ್ನೆ ನಡೆದ ಸೆಲೆಕ್ಷನ್ ಮೀಟಿಂಗ್ ಸೀನಿಯರ್ಸ್ ಎದೆಯಲ್ಲಿ ಢವ..ಢವ ಹುಟ್ಟಿಸಿದೆ.
5 ವರ್ಷದ ಟಾರ್ಗೆಟ್, ಭವಿಷ್ಯದ ತಂಡ ಕಟ್ಟೋ ಚಾಲೆಂಜ್.!
ಸದ್ಯ ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಸದ್ಯ ನಡೀತಾ ಇರೋ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್ ಜೊತೆಗೆ ಮುಂಬರುವ 2025ರಿಂದ 28ರವರೆಗಿನ WTC ಸೈಕಲ್ವರೆಗೆ ಆಗುವಂತಾ ಸಮರ್ಥ ತಂಡವನ್ನ ಕಟ್ಟಲು ಬಿಸಿಸಿಐ ಬಾಸ್ಗಳು ಈಗಾಗಲೇ ಟೀಮ್ ಮ್ಯಾನೇಜ್ಮೆಂಟ್ಗೆ ಸೂಚನೆ ಕೊಟ್ಟಿದ್ದಾರೆ. ಸೆಲೆಕ್ಷನ್ ಕಮಿಟಿ ಸದಸ್ಯರು ಕೂಡ ಈ ನಿಟ್ಟಿನಲ್ಲಿ ಖಡಕ್ ನಿರ್ಧಾರ ತೆಗೆದುಕೊಳ್ತಾ ಇದ್ದು, ಯುವ ಹಾಗೂ ಅನುಭವಿ ತಂಡಕ್ಕೆ ಹೆಚ್ಚು ಆದ್ಯತೆ ನೀಡ್ತಿದ್ದಾರೆ.
2025ರ ಬಳಿಕ ಬದಲಾಗಲಿದೆ ಟೀಮ್ ಇಂಡಿಯಾ.!
2025ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸೈಕಲ್ ಮುಗಿದ ಬಳಿಕ ಟೀಮ್ ಇಂಡಿಯಾ ಕಂಪ್ಲೀಟ್ ಬದಲಾಗಲಿದೆ. ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಂಡವನ್ನ ತೊರೆಯಲಿದ್ದಾರೆ. ಸ್ಪಿನ್ನರ್ಗಳಾದ ಅರ್. ಅಶ್ವಿನ್, ರವಿಂದ್ರ ಜಡೇಜಾ ಹಾಗೂ ವೇಗಿ ಮೊಹಮ್ಮದ್ ಶಮಿ ಕೂಡ ಗುಡ್ ಬೈ ಹೇಳೋ ಸಾಧ್ಯತೆ ದಟ್ಟವಾಗಿದೆ. ಇವರೆಲ್ಲರ ಸ್ಥಾನಕ್ಕೆ ಸಮರ್ಥರನ್ನ ಈಗಿನಿಂದಲೇ ಬೆಳೆಸಬೇಕಿದೆ.
ಈ ಹಿಂದೆ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ.. ಕ್ರಿಕೆಟ್ಗೆ ಗುಡ್ ಬೈ ಹೇಳಿದಾಗ ಟೀಮ್ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಟ್ಟಿತ್ತು. ಹೀಗಾಗಿ ತಂಡದಲ್ಲಿ TRANSITION ಆದ್ರೂ ಯಾವುದೆ ಹಿನ್ನಡೆಯಾಗಲಿಲ್ಲ. ಈಗಲೂ ಅದೇ ರೀತಿಯಲ್ಲಿ ಟೀಮ್ ಇಂಡಿಯಾ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಇಲ್ಲದಿದ್ರೆ, transition periodನಲ್ಲಿ ಯಡವಟ್ಟು ಮಾಡಿಕೊಂಡು ಇಂದಿಗೂ ಸುಧಾರಣೆ ಕಾಣಲು ಒದ್ದಾಡುತ್ತಿರೋ ಶ್ರೀಲಂಕಾ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ನಂತೆ ಸಮಸ್ಯೆ ಎದುರಿಸಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ